ಮುತ್ತಾತ!
- ಮುತ್ತಾತ! By: ಸಂಗನಗೌಡ (Aug 23 2006 - 10:55am)
- ಶುಭೋದಯ By: ಸಂಗನಗೌಡ (Aug 22 2006 - 1:33pm)
- ಹೋಲಿಸಿ ನೋಡಿ By: ಸಂಗನಗೌಡ (Aug 22 2006 - 5:17pm)
- ಸರಿ By: ಸಂಗನಗೌಡ (Aug 21 2006 - 7:49pm)
- ಸ್ವಲ್ಪ ತಿಳಿಸಿ By: ಸಂಗನಗೌಡ (Aug 21 2006 - 1:11pm)
- ಅತಿರೇಕದ ಮಾತು ಇಲ್ಲಿ ಬೇಡ By: hpn (Aug 21 2006 - 7:33pm)
- ಸಲಿಗೆಯಿಂದಿರಬೇಕು. By: ರಘುನಂದನ (Aug 21 2006 - 11:16pm)
- ನಗು ತಡೆಯಲಾಗುತ್ತಿಲ್ಲ By: Sunil Jayaprakash (Aug 21 2006 - 3:32pm)
- ಅತಿರೇಕದ ಮಾತು ಇಲ್ಲಿ ಬೇಡ By: hpn (Aug 21 2006 - 7:33pm)
- ಕನ್ನಡದ ಬಳಕೆಯ ಬಗೆಗೆ By: ಪ್ರದೀಪ್ ಬೆಳಗಲ್ (Aug 18 2006 - 11:31pm)
- ದಿಟ By: ಸಂಗನಗೌಡ (Aug 23 2006 - 1:25pm)
- ತಂತ್ರಾಂಶ ಮತ್ತು ಲಘುವರ By: pavanaja (Aug 16 2006 - 4:01pm)
- ಸರಕಾರಿ ಕಛೇರಿ, ಕನ್ನಡ ಹಾಗು ಕಂಪ್ಯೂಟರ್ By: adarsh (Aug 21 2006 - 11:48pm)
- ವಿಪರ್ಯಾಸ By: hpn (Aug 16 2006 - 11:58am)
- ಕನ್ನಡ ಭಾಷೆಯ ವಿಕಾಸ.... By: venkatesh (Aug 19 2006 - 3:20pm)

RSS:
ಮುತ್ತಾತ!
ಕನ್ನಡದ ಸಹಜ ಬೆಳವಣಿಗೆಗೆ ತಡೆಒಡ್ಡಿರುವುದು, ಒತ್ತಾಯವಾಗಿ ಸಂಸ್ಕ್ರುತವನ್ನು ತುರುಕಿರುವುದು, ಮತ್ತು ಅದಕ್ಕಾಗಿಯೇ ವ್ಯಾಕರಣವನ್ನೇ ತಿದ್ದಿರುವುದು. ಮನ್ನಿಸಿ, ಈ ಸರಪಳಿಯನ್ನು ಹೀಗೇ ಜೋಡಿಸಿಕೊಂಡು ಹೋಗುವ ಆಸೆ ನನ್ನದಲ್ಲ. ಆದರೆ ಈ ಕೆಳಗಿನ ಸಾಲುಕಟ್ಟನ್ನು ನೋಡಿ, ಇದು ಬೆರಕೆ ಕನ್ನಡಗಳ ಮುತ್ತಾತ!
ಇದು ಬುದವಾರ ೨೩ ಅಗಸ್ಟ್ ದಿನದ ವಾಣಿಜ್ಯ ವಿಜಯದಲ್ಲಿ ಮೂಡಿ ಬಂದ ಬರಹ.
ಬ್ಯಾಂಕ್ಗಳ ತಂತ್ರಾತ್ಮಕ ವಿಲೀನಕ್ಕೆ ಧೋರಣಾತ್ಮಕ ಚೌಕಟ್ಟು.
ಕೇಂದ್ರ ಅರ್ಥ ಸಚಿವ ಪಿ.ಚದಂಬರಮ್ ಜಾಗತಿಕವಾಗಿ ಸ್ಪರ್ದಾತ್ಮಕತೆಯಿರುವ ಬ್ಯಾಂಕಿಂಗ್ ಸಮಸ್ಯೆಗಳ ಸೃಸ್ಟಿಗಾಗಿ ಬ್ಯಾಂಕುಗಳ ವಿಲೀನವನ್ನು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಬ್ಯಾಂಕುಗಳ ವಿಲೀನ ಹೊಸತೇನೂ ಅಲ್ಲ. ಆದರೆ ಸುಧಾರಣೋತ್ತರೆ ಅವಧಿಯಲ್ಲಿ ಈವರೆಗೆ ನಡೆದ ವಿಲೀನಗಳು ಬ್ಯಾಂಕ್ಗಳ ವಿಫಲತೆ ಚಾಲಿತ ಪ್ರಕ್ರೀಯೆಗಳಷ್ಟೇ ಆಗಿವೆ. ಅದರ ಬದಲಾಗಿ ಅರ್ಜನೆ ಮತ್ತು ವಿಲೀನಗಳು ಬ್ಯಾಂಕುಗಳ ಮತ್ತು ಬ್ಯಾಂಕಿಂಗ್ ಉದ್ಯಮದ ತ್ವರಿತ ಹಾಗು ಆರೋಗ್ಯಪೂರ್ಣ ಬೆಳವಣಿಗೆ ಮತ್ತು ಸ್ಪರ್ದಾತ್ಮಕತೆ ವ್ರುದ್ಧಿಗೆ ಒಂದು ತಂತ್ರಾತ್ಮಕ ಹಾದಿಯಾಗಬಹುದು. ಈ ಉದ್ದೇಶದಿಂದ ತಂತ್ರಾತ್ಮಕ ಅರ್ಜನೆ ಮತ್ತು ವಿಲೀನಗಳಿಗೆ ಬೇಕಾದ ಧೋರಣಾತ್ಮಕ ಚೌಕಟ್ಟನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ.
ಚರ್ಚೆ ಭಾಷೆಯ ಸಹಜ ವಿಕಾಸಕ್ಕೆ ತಡೆಯೊಡ್ಡಬೇಕು ಎಂದು ಪ್ರತಿಪಾದಿಸುತ್ತಿದೆಯೇ ಎಂಬ ಅನುಮಾನ ನನ್ನದು.
ನನಗೆ ತಿಳಿದಂತೆ ಕನ್ನಡದ ಸಹಜ ಬೆಳವಣಿಗೆಗೆ(ವಿಕಾಸ) ತಡೆಯೊಡ್ಡಿರುವುದು, ಒಡ್ಡುತ್ತಾ ಬಂದಿರುವುದು ಸಕ್ಕದ. ಕನ್ನಡದ ವ್ಯಾಕರಣ ತಿದ್ದಿರುವುದು. ಸೂರ್ಯ+ಉದಯ=ಸೂರ್ಯೋದಯ ಇದು ಕನ್ನಡದ ಗುಣ ಸಂಧಿ ಅನ್ನುತ್ಟೇವೆ, ಈ ಗುಣ ಸಂಧಿ ಕನ್ನಡದ್ದಲ್ಲವೇ ಅಲ್ಲ. ಕನ್ನಡದ ವ್ಯಾಕರಣವನ್ನು ಸರಿಪಡಿಸಬೇಕಿದೆ.
'ಇವಳ ತೊಡಿಗೆ ಅವಳಿಗಿಟ್ಟು,ಅವಳ ತೊಡಿಗೆ ಇವಳಿಗಿಟ್ಟು ಸಂಭ್ರಮಿಸಿದೆ.....ಹಾಡಿದೆ'...ಅಂತ. ಇದು ಕನ್ನಡ ಮತ್ತು ಸಂಸ್ಕೃತಗಳ ಪದಗಳ ಮಿಲನ ಬೇಡ; ಪೂರ್ತಿ ಕನ್ನಡ ದಲ್ಲಿಯೆ ಬರೆಯಬೇಕು ಎಂದು ಮಾಡಿದ 'ಬೃಹತ್ ಚರ್ಚೆ'ಯಲ್ಲಿ ನುಡಿದ ಅವರ ಮಾತುಗಳು ಎಂದೂ ಮರೆಯಲಾರದಂತಿವೆ ! ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಅವರು, ಕನ್ನಡಕ್ಕಾಗಿ ದುಡಿದರು. ಅವರ ಕೊಡುಗೆ ಅಪಾರ.
ಬರಿ ಸೇರಿಸಬಾರದಲ್ಲ, ಸೇರಿಸಲು ಬಾರದಂತೆ ವ್ಯಾಕರಣವನ್ನು ಬದಲಿಸಬೇಕು, ಕನ್ನಡದಲ್ಲದ ಸಂಧಿಗಳನ್ನು ತೆಗೆಯಬೇಕು, ಮಹಾಪ್ರಾಣಗಳನ್ನು ತೆಗೆಯಬೇಕು. ಋ ವನ್ನು ತೆಗೆದು ಹಾಕಿದ್ದರೂ ಅದರ ಬಳಕೆ ನಡೆದೇ ಇದೆ.
ಕನ್ನಡ ಯಾಕೆ ನಶಿಸುತ್ತಿರುವ ನುಡಿಗಳ ಸಾಲಿಗೆ ಸೇರಿದೆ ಅಂತ ನನಗೀಗ ತಿಳಿಯಿತು, ನಿಮಗೆ ಒಳ್ಳೆಯದಾಗಲಿ.