~
ಪಾಪ್ಯುಲರ್
- ಉ: ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ. By: smurthygr (Aug 3 2007 - 8:14pm)
- ಉ: ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ. By: kannadakanda (Jun 5 2008 - 10:31am)
- ಅದ್ಭುತವಾಗಿದೆ By: shreeharsha4u (Sep 7 2006 - 9:50am)
- ಕನ್ನಡ ದ್ರಾವಿಡ ಭಾಷೆ ಅಲ್ಲ. By: anant (Sep 6 2006 - 4:11pm)
- ವಿವರವಾಗಿ ಬರೆಯಿರಿ By: ismail (Sep 11 2006 - 6:35pm)
- ಪಂಡಿತರೇ By: ಸಂಗನಗೌಡ (Sep 7 2006 - 8:51am)
- ಉ: ಪಂಡಿತರೇ By: kannadakanda (Jun 5 2008 - 10:25am)
- ಉ: ಪಂಡಿತರೇ By: kannadakanda (Jun 5 2008 - 10:27am)
- ಉ: ಪಂಡಿತರೇ By: kannadakanda (Jun 5 2008 - 10:25am)
- ಜನಪ್ರಿಯ ಸಿದ್ಧ ಮಾದರಿಗಳು ಹಾಗೂ ಜ್ಞಾನಶಿಸ್ತುಗಳು By: ಪ್ರದೀಪ್ ಬೆಳಗಲ್ (Sep 1 2006 - 11:16pm)
- ನಿಜವಾಗಿ ಬದಲಾಗಬೇಕಿರುವುದು By: benaka (Aug 30 2006 - 7:03am)
- ಪಾಪ್ಯುಲರ್ By: ismail (Aug 30 2006 - 7:19pm)
- ಡಾ.ಡಿ.ಎ ಶಂಕರಭಟ್ಟರು By: ಸಂಗನಗೌಡ (Sep 10 2006 - 9:19pm)
- ಬಳಸು By: ಸಂಗನಗೌಡ (Sep 12 2006 - 11:08am)
- ಉ: ಬಳಸು By: kannadakanda (Jun 4 2008 - 2:53pm)
- ಅಭಿವ್ಯಕ್ತಿ ಮತ್ತು ಸಂವಹನ By: ismail (Sep 11 2006 - 6:33pm)
- ಬಳಸು By: ಸಂಗನಗೌಡ (Sep 12 2006 - 11:08am)
- ಡಾ.ಡಿ.ಎ ಶಂಕರಭಟ್ಟರು By: ಸಂಗನಗೌಡ (Sep 10 2006 - 9:19pm)
- ಪಾಪ್ಯುಲರ್ By: ismail (Aug 30 2006 - 7:19pm)
- ತಲೆಬರಹದ ಬರಹ By: ಸಂಗನಗೌಡ (Aug 29 2006 - 1:27pm)
- ಕಾಲ್ಡ್ವೆಲ್ ಮಹಾಶಯನ ವರಪ್ರಸಾದ! By: benaka (Aug 29 2006 - 6:38am)
- ಹಿಮಾಲಯದಲ್ಲಿ ಸರವಜ್ಜ By: ಸಂಗನಗೌಡ (Aug 30 2006 - 1:13pm)
- ದ್ವೇಷದಿಂದ ನಾಡನ್ನು ಕಟ್ಟಲು ಅಸಾಧ್ಯ! By: benaka (Aug 30 2006 - 3:13pm)
- ಅಯ್ಯ By: ಸಂಗನಗೌಡ (Aug 30 2006 - 5:32pm)
- ದ್ವೇಷದಿಂದ ನಾಡನ್ನು ಕಟ್ಟಲು ಅಸಾಧ್ಯ! By: benaka (Aug 30 2006 - 3:13pm)
- ಕೀಳರಿಮೆ ಬೇಡ By: ismail (Aug 29 2006 - 8:17pm)
- ಸಕ್ಕದ ಬೇಡ ಅನ್ನುವದಕ್ಕಿಂತ, ಕನ್ನಡ ಬೇಕು By: ಸಂಗನಗೌಡ (Aug 29 2006 - 1:24pm)
- ಸಂಸ್ಕೃತ, "ದ್ರಾವಿಡ" ಭಾಷೆಗಳು By: hpn (Aug 29 2006 - 12:30pm)
- ಹಿಮಾಲಯದಲ್ಲಿ ಸರವಜ್ಜ By: ಸಂಗನಗೌಡ (Aug 30 2006 - 1:13pm)
- ಅಪ್ಪ, ಅಣ್ಣ By: ಸಂಗನಗೌಡ (Aug 28 2006 - 4:07pm)
- ಉ: ಅಪ್ಪ, ಅಣ್ಣ By: kannadakanda (Jun 4 2008 - 2:51pm)
- ನ್ ಸೇರಿಸಿಕೊಂಡರೆ ತಮಿಳಿರವನು :P By: ರಘುನಂದನ (Aug 29 2006 - 5:26pm)
- ಪೇಟ ಸುತ್ತಿದರೆ ಗೌಡ? By: ಸಂಗನಗೌಡ (Sep 7 2006 - 8:35am)
- ;P By: ಸಂಗನಗೌಡ (Aug 30 2006 - 5:24pm)
- :P By: ರಘುನಂದನ (Aug 30 2006 - 10:01pm)
- ಉ: :P By: kannadakanda (Jun 5 2008 - 10:22am)
- ಉ: :P By: kannadakanda (Jun 5 2008 - 10:22am)
- ಉ: :P By: ಸಂಗನಗೌಡ (Jun 5 2008 - 6:01pm)
- :P By: ರಘುನಂದನ (Aug 30 2006 - 10:01pm)
- ರಾಗಣ್ಣವರೇ, By: ಸಂಗನಗೌಡ (Aug 30 2006 - 9:12am)

RSS:
ಪಾಪ್ಯುಲರ್
ಪಾಪ್ಯುಲರ್ ಸ್ಟೀರಿಯೋ ಟೈಪ್ಸ್ ಎಂಬ ಪರಿಕಲ್ಪನೆಯೊಂದನ್ನು ಸಾಮಾಜಿಕ ಮನೋವಿಜ್ಞಾನದಲ್ಲಿ ಬಳಸಲಾಗುತ್ತದೆ. ಜನಪ್ರಿಯ ಸಿದ್ಧ ಮಾದರಿ ಎಂದು ಇದನ್ನು ಕನ್ನಡಕ್ಕೆ ಅನುವಾದಿಸಬಹುದಾದರೂ ಅದು ಮೂಲದ ಧ್ವನಿಯನ್ನು ಹೊರಡಿಸುತ್ತದೆ ಎಂದು ನನಗನ್ನಿಸುವುದಿಲ್ಲ. ಇಂಥ ಅನೇಕ ಸಿದ್ಧ ಮಾದರಿಗಳು ನಮ್ಮ ನಡುವೆ ಇವೆ. ಉದಾಹರಣೆಗೆ 'ಜನಸಂಖ್ಯಾ ಸ್ಫೋಟ' ಎಂಬ ಪರಿಕಲ್ಪನೆ. ಇದೆಷ್ಟು ಅರ್ಥಹೀನ ಪರಕಲ್ಪನೆ ಎಂಬುದನ್ನು ಆಧುನಿಕ ಅರ್ಥಶಾಸ್ತ್ರಜ್ಞರು ಸಾಕಷ್ಟು ಹೇಳಿದ್ದಾರಾದರೂ ನಾವಾರೂ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿಲ್ಲ. ನಾವೀಗಲೂ ಜನಸಂಖ್ಯಾ ಸ್ಫೋಟದಿಂದ ಆಗುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದೇವೆ. ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ವ್ಯಾಪಕಗೊಳಿಸಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಸಮಸ್ಯೆಯ ಮೂಲಕ್ಕೆ ಹೋಗುತ್ತಲೇ ಇಲ್ಲ.
ಆರ್ಯ-ದ್ರಾವಿಡ ಭೇದವೂ ಅಷ್ಟೇ. ದ್ರಾವಿಡ ಭಾಷೆಗಳಿಗೆ ಸಂಸ್ಕೃತ ಸೋಂಕಿಯೇ ಇಲ್ಲ ಎಂದು ವರ್ತಮಾನದ ಯಾವ ಭಾಷಾ ವಿಜ್ಞಾನಿಯೂ ಹೇಳಲಾರ. ಸಂಸ್ಕೃತದಲ್ಲಿ ದ್ರಾವಿಡ ಭಾಷಾ ಪದಗಳು ಇರುವುದನ್ನು ಯಾವ ಸಂಸ್ಕೃತ ಪಂಡಿತನೂ ಅಲ್ಲಗಳೆಯುವುದಿಲ್ಲ. ಈ ವಿಷಯಗಳ ಕುರಿತು ಕಡಿಮೆ ಜ್ಞಾನವಿರುವವರು ಚರ್ಚಿಸುವಾಗ ಮಾತ್ರ ದ್ರಾವಿಡ ಎಂಬ ಪದ ಸಂಸ್ಕೃತಕ್ಕೆ ವಿರುದ್ಧವಾದುದು ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ಈ ಬಗೆಯ ಅಮೆಚೂರಿಷ್ ಚರ್ಚೆಗಳಲ್ಲಿ ನಿಜ ತಿಳಿಯುವ ಆಸಕ್ತಿಗಿಂತಲೂ ಹೆಚ್ಚಾಗಿ ವಾದಿಸುವವರು ನಿಂತಿರುವ ರಾಜಕೀಯ ನೆಲೆಗಟ್ಟೇ ಮುಖ್ಯವಾಗಿಬಿಟ್ಟಿರುತ್ತದೆ. ತಮಿಳು ಮತ್ತು ಕನ್ನಡಗಳು ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಜನ್ಮತಳೆದ ಭಾಷೆಗಳು ಎಂದ ತಕ್ಷಣ ತಮಿಳರಿಗೆ ಸಿಟ್ಟು ಬರುತ್ತದೆ. ಇಲ್ಲವೇ ಕನ್ನಡಿಗರು ನಮ್ಮದು ಇನ್ನೂ ಮೊದಲೇ ಇತ್ತು ಎಂದೋ ಇಲ್ಲವೇ ಕನ್ನಡ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಯೇ ಅಲ್ಲ ಎಂದೆಲ್ಲಾ ವಾದಿಸತೊಡಗುತ್ತಾರೆ. ಈ ವಾದಗಳಿಗೆ ವೈಜ್ಞಾನಿಕ ಆಧಾರಗಳೂ ಇರುವುದಿಲ್ಲ. ವಾದ ಮಂಡನೆಗೆ ಅಗತ್ಯವಿರುವ ಶೈಕ್ಷಣಿಕ ಶಿಸ್ತೂ ಇರುವುದಿಲ್ಲ.
ಈ ಬಗೆಯ ವಾದಗಳ ಮಧ್ಯೆ ನಿಜವಾದ ಸಂಶೋಧನೆಗಳು ಬೆಳಕಿಗೆ ಬರುವುದೇ ಇಲ್ಲ. ಉದಾಹರಣೆಗೆ ಡಾ.ಡಿ.ಎನ್. ಶಂಕರಭಟ್ಟರು ಕನ್ನಡ ವ್ಯಾಕರಣವನ್ನು ಬರೆದವರೆಲ್ಲಾ ಸಂಸ್ಕೃತ ವ್ಯಾಕರಣವನ್ನು ಮಾದರಿಯಾಗಿಟ್ಟುಕೊಂಡು ರಚಿಸಿದ್ದಾರೆ. ಇದು ಸರಿಯಲ್ಲ. ಕನ್ನಡದ್ದೇ ಆದ ವ್ಯಾಕರಣವೊಂದು ಬೇಕು ಎಂದು ಕನ್ನಡದ್ದೇ ಆದ ವ್ಯಾಕರಣವನ್ನು ಮುಂದಿಟ್ಟರು. ಇದು ಅತ್ಯಂತ ವೈಜ್ಞಾನಿಕವಾಗಿ ರಚಿತವಾದ ವ್ಯಾಕರಣ. ಕನ್ನಡದಲ್ಲಿ ಪದಗಳು, ವಾಕ್ಯಗಳು ರೂಪುಗೊಳ್ಳುವ ಕ್ರಿಯೆ ಹೇಗೆ ಸಂಸ್ಕೃತಕ್ಕಿಂತ ಭಿನ್ನವಾಗಿದೆ ಎಂಬುದನ್ನು ಅವರು ಈ ವ್ಯಾಕರಣದಲ್ಲಿ ವಿವರಿಸುತ್ತಾರೆ.
ಈ ವ್ಯಾಕರಣವನ್ನು ಭಟ್ಟರು ಸಂಸ್ಕೃತ ವಿರೋಧಿ ಎಂದು ಟೀಕಿಸುವುದಕ್ಕಾಗಿ ಬಳಸಲಾಯಿತೇ ಹೊರತು ಅವರು ಹೇಳುತ್ತಿರುವುದರಲ್ಲಿ ಇರುವ ಸತ್ಯವನ್ನು ಅರಿಯಲು ಯಾರೂ ಮುಂದಾಗಲಿಲ್ಲ. ಭಟ್ಟರು ಕನ್ನಡ ಸಂಸ್ಕೃತದಿಂದ ಏನೂ ಪಡೆದಿಲ್ಲ ಎಂದು ಅವರ ಪುಸ್ತಕದಲ್ಲಿ ಎಲ್ಲಿಯೂ ಹೇಳಿಲ್ಲ. ಅಥವಾ ಸಂಸ್ಕೃತದಿಂದ ಪಡೆಯುವುದು, ಪಡೆದದ್ದು ತಪ್ಪು ಎಂದಿಲ್ಲ. ಆದರೂ ಅವರು ಸಂಸ್ಕೃತ ವಿರೋಧಿಯಾಗಿಬಿಟ್ಟರು.
ಆರ್ಯರು ಮತ್ತು ದ್ರಾವಿಡರು ಎಂಬ ಭೇದವನ್ನು ಬಹುವಾಗಿ ಒಪ್ಪಿಕೊಳ್ಳುತ್ತಿದ್ದ ಮಾರ್ಕ್ಸವಾದೀ ಇತಿಹಾಸಕಾರರೂ ಈಗ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದಾರೆ. ದಕ್ಷಿಣದಲ್ಲಿರುವವರೆಲ್ಲಾ ದ್ರಾವಿಡರು, ಉತ್ತರದಲ್ಲಿರುವವರೆಲ್ಲಾ ಆರ್ಯರು ಹಾಗೆಯೇ ಆರ್ಯರು ಆಕ್ರಮಣ ಮಾಡಿದರು, ದ್ರಾವಿಡರು ಆಕ್ರಮಣಕ್ಕೆ ಒಳಗಾದರು ಎಂಬ ಸರಳೀಕೃತ ತೀರ್ಮಾನಗಳನ್ನು ಎಲ್ಲರೂ ಕೈಬಿಟ್ಟಿದ್ದಾರೆ. ಹೆಚ್ಚು ತಾರ್ಕಿಕವಾಗಿ ಈ ವಿಷಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಇನ್ನೊಂದು ತಮಾಷೆಯ ವಿಷಯವಿದೆ. ಇದನ್ನು ಪ್ರಸಿದ್ಧ ವಿಧ್ವಾಂಸರೊಬ್ಬರು ಅನೌಪಚಾರಿಕ ಮಾತುಕತೆಯ ವೇಳೆ ಹೇಳಿದ್ದರು. ಬ್ರಿಟಿಷರು ತಾವು ಆರ್ಯ ವಂಶಜರು ಎಂದು ಭಾವಿಸಿದ್ದರು (ಹಿಟ್ಲರ್ ಕೂಡಾ ಹಾಗೆಯೇ ಹೇಳಿಕೊಂಡಿದ್ದ). ಅವರು ತಮ್ಮ ಬಳಿ ಕೆಲಸಕ್ಕಿದ ಭಾರತದ ಮೇಲ್ಜಾತಿಯವರ ಬಳಿ ನೀವು ಆರ್ಯರು ಎಂದಾಗ ಅವರಿಗೆ ಸಂತೋಷವಾಯಿತು. ತಾವೂ ಬ್ರಿಟಿಷರಷ್ಟೇ ಶ್ರೇಷ್ಟರು ಎಂದುಕೊಂಡು ಬೀಗಿದರು. ಇದು ಬರೇ ತಮಾಷೆಯೇ ಆಗಿರಬಹುದು. ಆದರೆ ಭಾರತೀಯರ ಮನಸ್ಥಿತಿಯನ್ನೂ ತಿಳಿಸುತ್ತದೆಯಲ್ಲವೇ?