ನಿಮ್ಮ ಒಳ್ಳೆಯ ಮಾತಿಗೆ ಥ್ಯಾಂಕ್ಸ್. ಸಂತೋಷ ಆಯಿತು ಅನ್ನದಿದ್ದರೆ ಸುಳ್ಳಾಗುತ್ತದೆ. ಆದರೆ ಕೆಲಸ ಮುಖ್ಯವೇ ಹೊರತು ವ್ಯಕ್ತಿಗಳಲ್ಲ ಅನ್ನುವುದನ್ನು ನಾನು ಮರೆಯಬಾರದು ಅನ್ನುವ ಎಚ್ಚರವನ್ನೂ ನಿಮ್ಮ ಹೊಗಳಿಕೆ ಮನಸ್ಸಿಗೆ ತಂದಿದೆ.
ಸಂಪದಕ್ಕೆ ಬರೆಯುತ್ತಿರುವವರು ಕಡಮೆ ಅನ್ನುವ ಕೊರಗು ಬೇಕಿಲ್ಲವೇನೋ. ಬರವಣಿಗೆ ಮಾತಿನಷ್ಟು ಸಹಜವಲ್ಲ. ಆ ಶಿಸ್ತನ್ನು ಹಟ ಹಿಡಿದೇ ಪಡೆಯಬೇಕು. ಜೊತೆಗೆ ಬರೆಯುವವರಿಗೆ ಅಳುಕು ಬೇರೆ, ನಾನು ಹೇಳಿದ್ದು ಜನಕ್ಕೆ ಹಿಡಿಸುವುದೋ ಇಲ್ಲವೋ, ಸರಿಯೋ ತಪ್ಪೋ, ನನಗನಿಸಿದ್ದು ಏನು ಮಹಾ ಇತ್ಯಾದಿ ಅಳುಕು. ಜೊತೆಗೆ ಜನಕ್ಕೆ ಇಷ್ಟವಾಗುವಂಥದ್ದು ಮಾತ್ರ ಕೊಡಬೇಕು ಅನ್ನುವ ಸ್ವಕಲ್ಪಿತ ಒತ್ತಾಯ. ಬರೆಯುವುದನ್ನು ರೂಢಿಸಿಕೊಳ್ಳುವುದೆಂದರೆ ನಮ್ಮ ವ್ಯಕ್ತಿತ್ವವನ್ನು ಅಕ್ಷರದಂತೆಯೇ ತಿದ್ದಿಕೊಳ್ಳುವ ಕೆಲಸ.
ಸಂಪದದ ಮೂಲಕ ಹೊಸ ಲೇಖಕರ ಅಳುಕು ದೂರವಾದರೆ ಎಷ್ಟು ಚೆನ್ನ!
ಥ್ಯಾಂಕ್ಸ್, ಆದರೆ..
ನಿಮ್ಮ ಒಳ್ಳೆಯ ಮಾತಿಗೆ ಥ್ಯಾಂಕ್ಸ್. ಸಂತೋಷ ಆಯಿತು ಅನ್ನದಿದ್ದರೆ ಸುಳ್ಳಾಗುತ್ತದೆ. ಆದರೆ ಕೆಲಸ ಮುಖ್ಯವೇ ಹೊರತು ವ್ಯಕ್ತಿಗಳಲ್ಲ ಅನ್ನುವುದನ್ನು ನಾನು ಮರೆಯಬಾರದು ಅನ್ನುವ ಎಚ್ಚರವನ್ನೂ ನಿಮ್ಮ ಹೊಗಳಿಕೆ ಮನಸ್ಸಿಗೆ ತಂದಿದೆ.
ಸಂಪದಕ್ಕೆ ಬರೆಯುತ್ತಿರುವವರು ಕಡಮೆ ಅನ್ನುವ ಕೊರಗು ಬೇಕಿಲ್ಲವೇನೋ. ಬರವಣಿಗೆ ಮಾತಿನಷ್ಟು ಸಹಜವಲ್ಲ. ಆ ಶಿಸ್ತನ್ನು ಹಟ ಹಿಡಿದೇ ಪಡೆಯಬೇಕು. ಜೊತೆಗೆ ಬರೆಯುವವರಿಗೆ ಅಳುಕು ಬೇರೆ, ನಾನು ಹೇಳಿದ್ದು ಜನಕ್ಕೆ ಹಿಡಿಸುವುದೋ ಇಲ್ಲವೋ, ಸರಿಯೋ ತಪ್ಪೋ, ನನಗನಿಸಿದ್ದು ಏನು ಮಹಾ ಇತ್ಯಾದಿ ಅಳುಕು. ಜೊತೆಗೆ ಜನಕ್ಕೆ ಇಷ್ಟವಾಗುವಂಥದ್ದು ಮಾತ್ರ ಕೊಡಬೇಕು ಅನ್ನುವ ಸ್ವಕಲ್ಪಿತ ಒತ್ತಾಯ. ಬರೆಯುವುದನ್ನು ರೂಢಿಸಿಕೊಳ್ಳುವುದೆಂದರೆ ನಮ್ಮ ವ್ಯಕ್ತಿತ್ವವನ್ನು ಅಕ್ಷರದಂತೆಯೇ ತಿದ್ದಿಕೊಳ್ಳುವ ಕೆಲಸ.
ಸಂಪದದ ಮೂಲಕ ಹೊಸ ಲೇಖಕರ ಅಳುಕು ದೂರವಾದರೆ ಎಷ್ಟು ಚೆನ್ನ!