ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ತುಸು ಆಳಕ್ಕೆ

September 26, 2006 - 10:51pm — ಸಂಗನಗೌಡ

ತುಸು ಆಳಕ್ಕೆ

ಸಂಗನಗೌಡ's picture

ಇನ್ನೂ ತುಸು ಆಳಕ್ಕಿಳಿದು ನೋಡೋಣ.

Quote:

ಅಂದಹಾಗೆ, ಹಳೆಗನ್ನಡದ ಮೇಲೇಕೆ ಹುಸಿ-ಮುನಿಸು ನಿಮಗೆ.

ಹಾಗೇನಿಲ್ಲವಲ್ಲಾ, ಬಹಳಾಗಿ ಇದು ನಿಮಗೇ ಅನುವಹಿಸುತ್ತದೆ. ಹಳೆಗನ್ನಡದಲ್ಲಿ ಪದಗಳನ್ನು ಗಕ್ಕನೆ ಕೊನೆಯಾಗಿಸಿ ಬರೆಯುತ್ತಿದ್ದರು. ಆ ಬಗೆಯ ಬಳಕೆ ಆಡು ಮಾತಿನಲ್ಲಿಯೂ ಇದೆ. ತಾಳ್ಮೆ ಎಂದು ಬರೆದರೆ 'ಳ್ಮೆ' ಒಂದು ಇಡೀ ಅಕ್ಕರವಾಗಿ ಬಿಡುವುದರಿಂದ, 'ತಾಳ್' ಮತ್ತು 'ತಾಳ್ಮೆ' ಗೆ ಹೋಲಿಕೆ ಮಾಡುವುದು ತುಸು ಜಟಿಲವಾಗುತ್ತದೆ. ತಾಳ್ - ತಾಳು ಆಗಿದೆ. ಹೊಸಗನ್ನಡದಲ್ಲಿ ಅದು ಆದ ರೂಪ ಬದಲಾವಣೆಯನ್ನು ಗೌರವದಿಂದ ಕಾಣಬೇಕಲ್ಲವೇ?

ಬರೆಯುವಾಗ ಇಲ್ಲವೇ ಮಾತನಾಡುವಾಗ, ಇದು ಕನ್ನಡದ್ದು, ಇದು ಹೊರಗಿನದು ಎಂದು ಹೆಕ್ಕುತ್ತಾ ಕುಳಿತುಕೊಳ್ಳಲಾಗದು, ಅದರ ಬದಲು ಕನ್ನಡದ್ದೇ ಅನ್ನಬಹುದಾದ ಬರವಣಿಗೆಯ ಬಗೆಯನ್ನು(ನಿಯಮವನ್ನು)ತಿಳಿದುಕೊಂಡು, ಅದನ್ನು ಪಾಲನೆ ಮಾಡಿಕೊಂಡು ಹೋದರೆ ಸಾಕಲ್ಲವೇ?

ತಾಳ್‍ಮೆ ಎಂಬಲ್ಲಿ 'ತಾಳ್' ಎಂಬ ಪದಕ್ಕೆ ತಿಳಿವಿದೆ. ಅದೇ ಪ್ರಯತ್ನ-'ಪ್‍ರಯತ್‍ನ' ಎಂಬಲ್ಲಿ ಪ್ರ-ಪ್+ರ ಮತ್ತು ತ್ನ-ತ್+ನ ಇಲ್ಲಿ ಪ್ ಮತ್ತು ತ್ ಕ್ಕೆ ಯಾವುದೇ ತಿಳಿವು ಬರುವುದಿಲ್ಲ.

ಇನ್ನು ಗಕ್ಕನೆ ಕೊನೆಯಾಗಿಸಿ ಮಾತನಾಡುವುದರ ಬಳಕೆಗೆ ಬೇಕಾದಿನಿತು ಮಾದರಿ ನೀಡಬಹುದು.

"ಕನಸಲ್  ಮನಸಲ್  ನೀನೇ"

"ತಾಳ್, ಬಂದೆ"

"ಏನ್ ಹೇಳು" "ಹೋಗ್ ಆಚೆ"

ದಿನದಿನದ ಮಾತುಗಳನ್ನು ಕಿವಿಗೊಟ್ಟು ಕೇಳಿ, ಈ ಬಗೆಯ ಬಳಕೆ ಹಾಸು ಹೂಕ್ಕಾಗಿರುವುದು ತಿಳಿವುದು. ಹಾಗಿದ್ದರೆ ಅದೆಲ್ಲವೂ ತಮಿಳೇ?

ಗಕ್ಕನೆ ಕೊನೆಯಾಗುವಿಕೆ ಕನ್ನಡದಲ್ಲಿ ಬರುಬರುತ್ತ ಕಡಿಮೆಯಾಗುತ್ತ ಬಂದಿದೆ, ಅದು ಇನ್ನೂ ನಡೆದೇ ಇದೆ. ಆ ಬದಲಾವಣೆಯನ್ನು ಗೌರವದಿಂದ ಕಾಣೋಣ ಮತ್ತು ಮುನ್ನಡೆಸೋಣ.

Quote:

ಕಂಡು - ಅನುಸ್ವಾರ(ಅಂ) ನಿಮಯದ ಪ್ರಕಾರ ಇದು "ಕಣ್ಡು" ಎಂದು. ಇಲ್ಲಿ ಯಾವುದೇ ಸಂಧಿಯಿಲ್ಲ. ಕಣ್ಣು("ಹಳೆಗನ್ನಡದ ಕಣ್" ಅಥವಾ "ಹೊಸಗನ್ನಡದ ಕಣ್ಣು" ಯಾವುದಾಗಿದ್ದರೂ ಪರವಾಗಿಲ್ಲ, ಸಮಾಸದ ಪ್ರಕಾರ ಸರಿಯಾಗಿಯೇ ಹೊಂದುತ್ತದೆ) ಮತ್ತು ನೋಡು ಪದಗಳ ಜೋಡಣೆಯಾಗಿ(ಸಮಾಸವಾಗಿ) ಕಣ್ಡು ವಾಗಿದೆ. ಹಾಗೆಯೇ, ತಂಡ, ಕಂತೆ, ಮುಂತಾದವು.
ಇದಕ್ಕಿಂತಲೂ ಪುರಾವೆ ಬೇಕೆ, ಕನ್ನಡದಲ್ಲಿ ಸಂಸ್ಕೃತದ ಹೊರತಾಗಿಯೂ ಸಮ್ಮಕಕ್ಕರಗಳಿವೆ ಎಂಬುದನ್ನು ಹೇಳಲು.

ಸರಿ ಇನ್ನು ಇವುಗಳ ಇಚಾರಕ್ಕೆ ಬರೋಣ(ಇಚಾರ,ಮಾತು ಬೇರೆ ಬೇರೆ ಅಲ್ಲವೇ?).

ಈ ಪದಗಳನ್ನು ನೋಡಿ. ಇಡೀ ಪದವನ್ನು ನಿಲ್ಲದೇ ಓದಿ.

ಒಙ್‍ಕಿ ,  ಅಙ್‍ಗಿ, ಮಙ್‍ಕೆ

ಕೊಞ್‍ಚ, ಸಞ್‍ಚು, ಅಞ್‍ಜು

ಕಣ್‍ಡು, ಉಣ್‍ಡು, ಕೊಣ್‍ಡು

ಕನ್‍ತೆ, ಅನ್‍ತೆ, ಸನ್‍ತೆ

ಕಮ್‍ಬಣಿ, ತು‍ಮ್‍ಬಾ, ಕೊಮ್‍ಬು

ಮೇಲಿನ ಎಲ್ಲ ಮಾದರಿಗಳಲ್ಲಿ ನಡುವಿನ ಅಕ್ಕರವನ್ನು ತೆಗೆದು '೦' ಸೇರಿಸಿ ಬರೆಯಲಾಗುತ್ತದೆ. 'ಅಂ' ಇದು ಹೇಗೆ ಬಂದಿತೆಂದರೆ,

ಕ, ಇದನ್ನು ಮೂಗಿನಲ್ಲಿ ಹೇಳಬೇಕಾದರೆ 'ಕಂ' (ಇದನ್ನು 'ಕಮ್' ಅನ್ನಬಾರದು 'ಕ'ವನ್ನು ಮೂಗಿನಲ್ಲಿ ಹೇಳಬೇಕು.) ಹೀಗೆ ಒಂದು ಅಕ್ಕರದ ಮೇಲೆ ಚುಕ್ಕೆ ಇಟ್ಟು ಅದನ್ನು ಮೂಗಿನಲ್ಲಿ ಹೇಳುವುದು ಸಕ್ಕದದ ಪದ್ದತಿ.

ಮೇಲಿನ ಮಾದರಿಗಳನ್ನು ತುಸು ಗಮನ ಕೊಟ್ಟು ನೋಡಿ. ಕ,ಗ ಗಳ ಹಿಂದೆ ಙ್ ಬಂದಿದೆ. ಚ,ಜ ಗಳ ಹಿಂದೆ ಞ್ ಬಂದಿದೆ. ಹಾಗೆ ಟ,ಡ ಗಳ ಹಿಂದೆ ಣ್, ತ,ದ ಗಳ ಹಿಂದೆ ನ್ ಮತ್ತು ಪ,ಬ ಗಳ ಹಿಂದೆ ಮ್ ಬಂದಿದೆ. ಕಮ್‍ಬಣಿ ಎಂಬಲ್ಲಿ, 'ಕ'ವನ್ನು ಮೂಗಿನಲ್ಲಿ ಹೇಳಿ 'ಬಣಿ' ಹೇಳಿದರೆ ಅದು 'ಕಮ್‍ಬಣಿ' ಯಂತೆಯೇ ಕೇಳುವುದರಿಂದ ಆ ರೀತಿ ಬರೆಯುಯ ಬಗೆ ಬಳಕೆಗೆ ಬಂದಿರಬೇಕು.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨) By: Sunil Jayaprakash (15 replies) September 25, 2006 - 10:01am
  • ಸರಿ By: ಸಂಗನಗೌಡ (Sep 25 2006 - 8:27pm)
    • ಉ: ಸರಿ By: kannadakanda (May 6 2008 - 7:02pm)
      • ಉ: ಸರಿ By: Sunil Jayaprakash (May 8 2008 - 11:58am)
        • ಉ: ಸರಿ By: kannadakanda (May 12 2008 - 8:24pm)
        • ಉ: ಸರಿ By: mahesha (May 8 2008 - 12:42pm)
      • ಉ: ಸರಿ By: mahesha (May 7 2008 - 7:43am)
      • ಉ: ಸರಿ By: ಸಂಗನಗೌಡ (May 6 2008 - 11:15pm)
    • ತಾಳ್, ತಾಳು ಮತ್ತು ಮೇಲು By: Sunil Jayaprakash (Sep 26 2006 - 3:24pm)
      • ಇನ್ನೊಂದು ಮಾತು By: ಸಂಗನಗೌಡ (Sep 27 2006 - 9:05am)
      • ತುಸು ಆಳಕ್ಕೆ By: ಸಂಗನಗೌಡ (Sep 26 2006 - 10:51pm)
        • ಗಕ್ಕನೆಕೊನೆಗೊಳ್ಳುವ ಪದಗಳು - ಒತ್ತಕ್ಷರಗಳ ಮುಂದುವರಿದ ಕಂತು By: Sunil Jayaprakash (Sep 28 2006 - 9:45am)
          • ನನ್ನ ಆಯಿಕೆ By: ಸಂಗನಗೌಡ (Sep 29 2006 - 2:05pm)
  • ಮತ್ತೊಂದಿಷ್ಟು By: benaka (Sep 25 2006 - 11:16am)
    • ಉ: ಮತ್ತೊಂದಿಷ್ಟು By: kannadakanda (Jun 9 2008 - 4:30pm)
      • ಉ: ಮತ್ತೊಂದಿಷ್ಟು By: hamsanandi (Jun 9 2008 - 9:45pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಇನ್ನಿಷ್ಟು ಸಹನೆ ತೋರಿದ್ದರೆ!
    January 9, 2009 - 7:24am
  • Chamaraj
    ಉ: ಮರೆತು ಹೋದ ಪದಗಳು
    January 9, 2009 - 7:19am
  • Chamaraj
    ಉ: ಗಿಳಿಯು ಪಂಜರದೊಳಿಲ್ಲ
    January 9, 2009 - 7:12am
  • Chamaraj
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 7:01am
  • Chamaraj
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 6:46am
  • Chamaraj
    ಉ: ಹೊಸ ವರ್ಷದ ದಿನದಂದು ನಾ ಮಾಡಿದ ಅವಾಂತರ......................
    January 9, 2009 - 6:38am
  • Chamaraj
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 6:33am
  • Chamaraj
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 6:31am
  • Chamaraj
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 9, 2009 - 6:28am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:27am
ಇನ್ನಷ್ಟು


ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator