ಕಾಕತಾಳೀಯವೋ ಏನೋ, ನೆನ್ನೆ ಹೀಗೊಂದು ಪ್ರಸಂಗ ನಡೆಯಿತು. ನೆನ್ನೆ "ಗೋಖಲೆ ಸಾರ್ವಜನಿಕ ವಿಚಾರಣ ಸಂಕೀರ್ಣದಲ್ಲಿ" ಕಾಯುತ್ತಿದ್ದಾಗ, ಅಲ್ಲಿ, "ರಾಮಾಯಣದ ರಸ್ಯ ರಹಸ್ಯಾರ್ಥಗಳು" ಎಂಬುದರ ವಿಚಾರವಾಗಿ ಪ್ರವಚನ ನಡೆಯುತ್ತಿತ್ತು (ನಿಜಹೇಳಬೇಕೆಂದರೆ ೦೩ ಡಿಸೆಂಬರ್ ೨೦೦೬ರವರೆಗೆ ಈ ಪ್ರವಚನ ಮಾಲೆಯಿದೆ).
ಅಲ್ಲಿ, "ಅಧಿಕಾರ ಎನ್ನುವುದು ಮನುಷ್ಯನನ್ನು ಏನು ಮಾಡಲು ಬೇಕಾದರೂ ಪ್ರಚೋದಿಸುತ್ತದೆ" ಎಂಬುದಕ್ಕೆ ಕೈಕೇಯಿ ದಶರಥನನ್ನು ಉದಾಹರಣೆಯಾಗಿ ನೀಡುತ್ತಾ ಪ್ರವಚನ ಮಾಡುವವರು ನೆರೆದಿದ್ದವರಿಗೆ ಹೇಳುತ್ತಿದ್ದರು. ಕೈಕೇಯಿಗೂ, ದಶರಥನಿಗೂ ೪೦ ವರ್ಷಗಳ ಅಂತರವಂತೆ. ಹೀಗೆ ಮುಂತಾಗಿ ಮಾತನಾಡುವಾಗ, ಮಹಾಭಾರತದಗಾಂಧಾರಿ ಮತ್ತು ಧೃತರಾಷ್ಟ್ರನ ಪ್ರಸ್ತಾಪವೂ ಬಂತು.
ಪರ್ವ ಕಾದಂಬರಿಯಲ್ಲಿ, ಗಾಂಧಾರಿಯು ತಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಕ್ಕೆ ನೀಡುವ ಕಾರಣವನ್ನು, ಪ್ರವಚನಕಾರರು ತಪ್ಪು ಎಂದು ಹೇಳಿದರು. ಮಹಾಭಾರತದಲ್ಲಿ ಗಾಂಧಾರಿಯು ಧೃತರಾಷ್ಟ್ರನನ್ನು ಮದುವೆಯಾಗುವಾಗ ತಾನು ಸ್ವ-ಇಚ್ಚೆಯಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳತ್ತೇನೆ ಅಂತ ನುಡಿಯುವಳಂತೆ. ಆದರೆ ಪರ್ವದಲ್ಲಿ ಗಾಂಧಾರಿಯು ಏನು ಹೇಳುತ್ತಾಳೆ ಎಂಬುದನ್ನು ನೀವೇ ಓದಿನೋಡಿ.
ಕಾಕತಾಳೀಯವೆಂದರೆ ಮೊನ್ನೆಯಷ್ಟೇ ಪರ್ವ ಕಾದಂಬರಿಯನ್ನು ಓದಿ ಮುಗಿಸಿದ್ದೆ. ನೆನ್ನೆ ಪರ್ವವನ್ನು ಉದಾಹರಿಸುತ್ತಾ ಪ್ರವಚನಕಾರರು ಇದನ್ನು ತಪ್ಪು ಎಂದರು
ರಾಮಾಯಣದ ರಸ್ಯರಹಸ್ಯಾರ್ಥಗಳು
ಕಾಕತಾಳೀಯವೋ ಏನೋ, ನೆನ್ನೆ ಹೀಗೊಂದು ಪ್ರಸಂಗ ನಡೆಯಿತು. ನೆನ್ನೆ "ಗೋಖಲೆ ಸಾರ್ವಜನಿಕ ವಿಚಾರಣ ಸಂಕೀರ್ಣದಲ್ಲಿ" ಕಾಯುತ್ತಿದ್ದಾಗ, ಅಲ್ಲಿ, "ರಾಮಾಯಣದ ರಸ್ಯ ರಹಸ್ಯಾರ್ಥಗಳು" ಎಂಬುದರ ವಿಚಾರವಾಗಿ ಪ್ರವಚನ ನಡೆಯುತ್ತಿತ್ತು (ನಿಜಹೇಳಬೇಕೆಂದರೆ ೦೩ ಡಿಸೆಂಬರ್ ೨೦೦೬ರವರೆಗೆ ಈ ಪ್ರವಚನ ಮಾಲೆಯಿದೆ).
ಅಲ್ಲಿ, "ಅಧಿಕಾರ ಎನ್ನುವುದು ಮನುಷ್ಯನನ್ನು ಏನು ಮಾಡಲು ಬೇಕಾದರೂ ಪ್ರಚೋದಿಸುತ್ತದೆ" ಎಂಬುದಕ್ಕೆ ಕೈಕೇಯಿ ದಶರಥನನ್ನು ಉದಾಹರಣೆಯಾಗಿ ನೀಡುತ್ತಾ ಪ್ರವಚನ ಮಾಡುವವರು ನೆರೆದಿದ್ದವರಿಗೆ ಹೇಳುತ್ತಿದ್ದರು. ಕೈಕೇಯಿಗೂ, ದಶರಥನಿಗೂ ೪೦ ವರ್ಷಗಳ ಅಂತರವಂತೆ.
ಹೀಗೆ ಮುಂತಾಗಿ ಮಾತನಾಡುವಾಗ, ಮಹಾಭಾರತದ ಗಾಂಧಾರಿ ಮತ್ತು ಧೃತರಾಷ್ಟ್ರನ ಪ್ರಸ್ತಾಪವೂ ಬಂತು.
ಪರ್ವ ಕಾದಂಬರಿಯಲ್ಲಿ, ಗಾಂಧಾರಿಯು ತಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಕ್ಕೆ ನೀಡುವ ಕಾರಣವನ್ನು, ಪ್ರವಚನಕಾರರು ತಪ್ಪು ಎಂದು ಹೇಳಿದರು. ಮಹಾಭಾರತದಲ್ಲಿ ಗಾಂಧಾರಿಯು ಧೃತರಾಷ್ಟ್ರನನ್ನು ಮದುವೆಯಾಗುವಾಗ ತಾನು ಸ್ವ-ಇಚ್ಚೆಯಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳತ್ತೇನೆ ಅಂತ ನುಡಿಯುವಳಂತೆ. ಆದರೆ ಪರ್ವದಲ್ಲಿ ಗಾಂಧಾರಿಯು ಏನು ಹೇಳುತ್ತಾಳೆ ಎಂಬುದನ್ನು ನೀವೇ ಓದಿನೋಡಿ.
ಕಾಕತಾಳೀಯವೆಂದರೆ ಮೊನ್ನೆಯಷ್ಟೇ ಪರ್ವ ಕಾದಂಬರಿಯನ್ನು ಓದಿ ಮುಗಿಸಿದ್ದೆ. ನೆನ್ನೆ ಪರ್ವವನ್ನು ಉದಾಹರಿಸುತ್ತಾ ಪ್ರವಚನಕಾರರು ಇದನ್ನು ತಪ್ಪು ಎಂದರು