ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಅನುವಾದದ ಬಗ್ಗೆ ಅಭಿಪ್ರಾಯಗಳು

December 8, 2006 - 6:07pm — Sunil Jayaprakash

ಉ: ಅನುವಾದದ ಬಗ್ಗೆ ಅಭಿಪ್ರಾಯಗಳು

Sunil Jayaprakash's picture

ಶಶಾಂಕ wrote:
ತಜುರ್ಮೆ ಮಾಡೋದಿದ್ರೆ, ಆಡು ಭಾಷೆಯಲ್ಲಿರೋ ಪದಗಳನ್ನ ಉಪಯೋಗಿಸಬೇಕೇ ಹೊರತು, ಪ್ರತಿ ಸಲ ಅಂತರ್ಜಾಲಕ್ಕೆ ಹೋದಾಗ ಒಂದು ನಿಘಂಟು ಪಕ್ಕದಲ್ಲಿ ಇಟ್ಕೊಳ್ಳೊ ಹಾಗೆ ಆಗಬಾರದು.

ಈಗ ಆಗಿರೋದೇ ಹೀಗೆ. ಒಬ್ಬ ಕನ್ನಡಿಗ ಇಂದು ಕಂಪ್ಯೂಟರ್ ಬಳಸಬೇಕೆಂದರೆ, ಅವನು ಸಂಸ್ಕೃತ ನಿಘಂಟನ್ನು ಕೈಲಿ ಹಿಡಿದು ಪುಟಗಳನ್ನು ತಿರುವಿಹಾಕಬೇಕು. ಪಾಪ ಅವನಿಗೆ ತಿಳಿದಿರುವುದಿಲ್ಲ, ಅಂತರ್ಜಾಲ, ತಂತ್ರಾಂಶ, ಯಂತ್ರಾಂಶ ಎನ್ನುವುದು ಕನ್ನಡ ಅಲ್ಲವೇ ಅಲ್ಲ ಎಂಬುದು. ಈ ಪದಗಳನ್ನು ಹುಟ್ಟುಹಾಕಿದ ದಿನಕ್ಕೂ, ಇಂದಿನ ದಿನಕ್ಕೂ ತುಂಬಾ ವ್ಯತ್ಯಾಸವಿದೆ. ಅಂತರ್ಜಾಲ (ಅನ್ತರ್ಜಾಲ) ಎನ್ನುವುದಕ್ಕಿಂತ ಇನ್ಟರ್ನೆಟ್ ಎನ್ನುವುದೇ ಹತ್ತಿರವಾಗುತ್ತದೆ. ಯಂತ್ರಾಂಶ(ಯನ್ತ್ರಾಂಶ) ಎನ್ನುವುದಕ್ಕಿಂತ ಹಾರ್ಡವೇರ್ ಎನ್ನುವುದೇ ಸುಲಭ(easy). ಅಲಂಕಾರ, ವ್ಯಾಕರಣಗಳನ್ನು ಗಣನೆಗೆ ತೆಗೆದುಕೊಂಡರೂ ಕೂಡ ಇನ್ಟರ್ನೆಟ್ಟೇ ಸುಲಭ.

ಅಂತರ್ಜಾಲ, ತಂತ್ರಾಂಶ, ಯಂತ್ರಾಂಶ ಎಂಬ ಪಲುಕುಗಳು ಆಡು ನುಡಿಯಲ್ಲಿ ಎಂದೂ ಇರಲಿಲ್ಲ. ಹಾಗಾಗಿ ಹೊಸದಾದ ಒರೆಗಳನ್ನು ಹೆಕ್ಕಿ ತೆಗೆಯಲು, ಕಷ್ಟವಾದರೂ ಪರವಾಗಿಲ್ಲ, ನಾನು Dravidian Etymologyಯನ್ನೇ ಹೆಚ್ಚು ಬಳಸುತ್ತೇನೆ. ಕಷ್ಟವಾದ ಸಂಸ್ಕೃತ ಪದಗಳನ್ನು, ಸಂಸ್ಕೃತವಾಗಿಯೇ ಸ್ವೀಕರಿಸುವುದು ಒಳ್ಳೆಯದು, ಕನ್ನಡವಾಗಿ ಬರಮಾಡಿಕೊಂಡರೆ ಅದನ್ನು ಪಂಡಿತರು ಸ್ವೀಕರಿಸತ್ತಾರೆಯೇ ಹೊರತು ದಿನವೂ ಅವುಗಳನ್ನು ಬಳಸುವ ಜನರು ಅದನ್ನು ಬಳಸುವುದೇ ಇಲ್ಲ. ಜನರು ಯಾವತ್ತಿದ್ದರೂ ಕೂಡ ಯಾವುದು ಸುಲಭವೋ ಅದನ್ನು ಬಳಸುತ್ತಾರೆ. ಆದರೆ ನಾವು ಕನ್ನಡವು ಸಂಸ್ಕೃತಕ್ಕಿಂತ ಅಥವಾ ಇಂಗ್ಲೀಷಿಗಿಂತ ಸರಳ ಎಂದು ತೋರಿಸಿಕೊಡುವ ಪ್ರಯತ್ನವನ್ನೇ ಮಾಡುವುದಿಲ್ಲ. ಒಮ್ಮೆ ಜತುನಗೈದರೆ, ಹೌದು! ಕನ್ನಡವು ಎಷ್ಟು ಸುಲಭ ಎಂದು ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತಾರೆ. ಕನ್ನಡ ಕನ್ನಡ! ಹಾ ಸವಿಗನ್ನಡ ಕನ್ನಡದಲ್ಲಿ ಹರಿ ಬರೆಯುವನು, ಕನ್ನಡದಲಿ ಹರ ತಿರಿಯುವನು, ಕನ್ನಡದಲ್ಲಿಯೇ ಬಿನ್ನಹಗೈದೊಡೆ, ಹರಿ ವರಗಳ ಮಳೆ ತಾ ಕರೆಯುವನ್ನು ಎಂದು ಕುವೆಂಪುರವರು ಹೇಳಿದ್ದರೂ, ಎಷ್ಟೋ ಪಂಡಿತರು ಇಂದಿಗೂ ಕೂಡ, ಕನ್ನಡವು ಗ್ರಾಮ್ಯ ಭಾಷೆ ಎಂದು ಜರಿದು ಬಿಡುತ್ತಾರೆ.

ಸಂಸ್ಕೃತದ ಪದಗಳು ಕಷ್ಟವೆನಿಸಿದಾಗ, ಕಷ್ಟವಾದರೂ ಪರವಾಗಿಲ್ಲ, ಸರಳವಾಗಿರುವ ಕನ್ನಡದ್ದೇ ಪದವನ್ನು ಹುಡುಕಬೇಕು, ಹುಟ್ಟಿಸಬೇಕು. ಇಲ್ಲ, ಅದು ನಮ್ಮ ಕೈಲಿ ಆಗದಿದ್ದರೆ, ಇಂಗ್ಲೀಷನ್ನೇ ಸ್ವೀಕರಿಸಬೇಕು.

ಒಮ್ಮೆ ನಾನು ಶಂಕರಾಚಾರ್ಯರ ವಿವೇಕ ಚೂಡಾಮಣಿ ಎಂಬ ಗ್ರಂಥ ಓದುತ್ತಿದೆ. ಅದರಲ್ಲಿ
"....ಸಮ್ಯಕ್ ದರ್ಶನ ನಿಷ್ಠಯಾ" ಎಂಬ ಶ್ಲೋಕ ಬರುತ್ತದೆ. ಅದರ ಅನುವಾದ ಹೇಗೆ ಮಾಡಿದ್ದರು ಗೊತ್ತೇ, ಸಮ್ಯಕ್ ದರ್ಶನ ನಿಷ್ಠೆಯಿಂದ ........ ಇದನ್ನು ಅನುವಾದ ಎನ್ನುವುದಕ್ಕಾಗುತ್ತದೆಯೇ ?.

ಇಂತಹ ಕಾರಣಗಳಿಂದಾಗಿಯೇ, ಕನ್ನಡದ ಹೆಸರಿನಲ್ಲಿ ಕಷ್ಟವಾದ ಕೆಲವು ಸಂಸ್ಕೃತ ಪದಗಳನ್ನು ಬಲವಂತವಾಗಿ ತುರುಕಿದರೆ ಜನರು ಅದನ್ನು ತಿರಸ್ಕರಿಸಿ ಇಂಗ್ಲೀಷನ್ನೇ ಅಪ್ಪಿಕೊಳ್ಳುತ್ತಾರೆ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (13 replies) December 7, 2006 - 10:44am
  • ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: Sunil Jayaprakash (Dec 8 2006 - 6:23pm)
    • Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (Dec 11 2006 - 11:29am)
  • Re: ಅನುವಾದದ ಬಗ್ಗೆ ಅಭಿಪ್ರಾಯಗಳು By: ಶಶಾಂಕ (Dec 8 2006 - 11:38am)
    • ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: Sunil Jayaprakash (Dec 8 2006 - 6:07pm)
  • Re: ಅನುವಾದದ ಬಗ್ಗೆ ಅಭಿಪ್ರಾಯಗಳು By: hpn (Dec 8 2006 - 1:49am)
    • Re: ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (Dec 12 2006 - 1:47pm)
  • Re: ಅನುವಾದದ ಬಗ್ಗೆ ಅಭಿಪ್ರಾಯಗಳು By: shreekant.mishrikoti (Dec 7 2006 - 11:40am)
    • ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: Sunil Jayaprakash (Dec 7 2006 - 1:14pm)
      • Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಆಯ್ಯೋ ... By: shreekant.mishrikoti (Dec 8 2006 - 7:42pm)
        • ಉ: ಎಲ್ಲರೊಳಗೊಂದಾಗು ಮಂಕುತಿಮ್ಮ. By: Sunil Jayaprakash (Dec 11 2006 - 1:06pm)
        • Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಸದ್ಯದ ಸ್ಥಿತಿ ಹೀಗಿರುವಾಗ ... By: shreekant.mishrikoti (Dec 8 2006 - 7:51pm)
          • Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಸದ್ಯದ ಸ್ಥಿತಿ ಹೀಗಿರುವಾಗ ... By: Sunil Jayaprakash (Dec 9 2006 - 12:19pm)
      • Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (Dec 8 2006 - 11:08am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:18am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:15am
  • hamsanandi
    ಉ: ಹಂಸನಾದ
    January 9, 2009 - 4:27am
  • srivathsajoshi
    ಉ: ಹಂಸನಾದ
    January 9, 2009 - 3:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
ಇನ್ನಷ್ಟು


ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator