ಈ ಜಪಾನೀ ರೈಲುಗಳ ಬಗ್ಗೆ ಎಷ್ಟು ಓದಿದರೂ ಸಾಲದು. ಎಷ್ಟು ಜನರು ಹೊಗಳುತ್ತಾರೆ ಗೊತ್ತೇ, ನಾನು ಕೂಡ ಹೋಗಿ ಬರಲೇಬೇಕು. ಅಂದ ಹಾಗೆ ಒಂದು ವಿಷಯ ಹೇಳಲಿಲ್ಲ ನೀವು. ಅಲ್ಲಿನ ಜನರು ರೈಲನ್ನು ಹೇಗೆ ಬಳಸುತ್ತಾರೆ. ನಮ್ಮ ಹಾಗೆ, ಕಡಲೇಕಾಯಿ ಸಿಪ್ಪೆ, ಸಿಗರೇಟು ಎಲ್ಲಾ ಬಿಸ್ಹಾಕುತ್ತಾರೆಯೇ ?
ರೈಲು ಎಂದೊಡನೆ ನನಗೆ ಒಂದು ಘಟನೆ ನೆನಪಾಗುವುದು(ನೆನಪಾಗುವವರು). ಒಮ್ಮೆ ರೈಲಿನಲ್ಲಿ ಹೋಗುತ್ತಿದ್ದಾಗ, ಕಿಟಕಿ ತೆರಯಬೇಕಿತ್ತು. ಸುಮ್ಮನೆ ಕಿಟಕಿಯನ್ನು ಮುಟ್ಟಿದೆ ಅಷ್ಟೇ ಕಣ್ರೀ, ಧಡಾರನೆ ನನ್ನ ಕೈಯನ್ನೇ ಕೆಳಗೆ ನೂಕಿ, ನನ್ನ ಕೈಯ ಮೇಲೆ ಧೊಪ್ಪನೆ ಬಿತ್ತು. ಏನಾಗಿತ್ತಪ್ಪ ಎಂದರೆ ಹಿಂದೆ ಬಳಸಿದ್ದವರು, ಕಿಟಕಿಯನ್ನು ಎತ್ತರಿಸಿದ್ದರಷ್ಟೇ, ಅದರ ಅಕ್ಕಪಕ್ಕ ಬರುವ ಸಣ್ಣ ಚಿಲಕಗಳನ್ನು ಹಾಕಿಯೇ ಇರಲಿಲ್ಲ. ನನ್ನ ಅಂಕೈ ನೋಡಬೇಕಿತ್ತು ಆಗ. ಹಸಿರು ಚಕ್ಕೋತ(ಹೋಗಲಿ ಬಿಡಿ, ಮೂಸಂಬಿ) ಹಣ್ಣಿನ ಗಾತ್ರದಷ್ಟು ಊದಿತ್ತು. ಅಂದಿನಿಂದ, ಯಾವಾಗಲೇ ರೈಲಿನ ಕಿಟಕಿಯನ್ನು ಬಳಸುವಾಗಲೂ ಸ್ವಲ್ಪ ಎಚ್ಚರಿಕೆಯಿಂದ ಬಳಸುತ್ತೇನೆ.
benaka wrote:
! ರೈಲಿನ ಕಥೆ ಮುಗಿಯುವುದೇ ಇಲ್ಲ ಬಿಡಿ!
ಒಂದು ರೀತಿಯಲ್ಲಿ, ಭಾರತೀಯ ರೈಲಿನ(ಅಥವಾ ಭಾರತೀಯರ ರೈಲುಗಳು ) ಕಥೆಯೂ ಮುಗಿಯುವುದೇ ಇಲ್ಲ. ಒಂದು ಮೆಟ್ರೋ ರೈಲಿಗೇ ಎಷ್ಟು ಪಡಬಾರದ ಫಜೀತಿ ಪಡುತ್ತಿದೆ ಬೆಂಗಳೂರು.
ಎಷ್ಟೋ ವೇಳಿ, ನಮ್ಮ ದೇಶದಲ್ಲಿ ರೈಲುಗಳು ಅದರ ಬಗೆಗಿನ ಸುದ್ಧಿಯಾಗುವುದಕ್ಕಿಂತ, ಅದಕ್ಕೆ ಹೊರತಾದ ವಿಷಯಗಳಿಗೆ ಸುದ್ಧಿಯಾಗುತ್ತವೆ.
೧. ಜೈಲಿಗೆ ಹೋಗಿ ಬಂದ ಲಾಲೂ ರೈಲ್ವೇ ಸಚಿವನಾಗುವುದು.
೨. ರೈಲ್ವೇ ಪ್ಲಾಟಫಾರಂಗಳಲ್ಲಿ ಮಡಕೆಯಲ್ಲಿ ನೀರು ಮಾರುವುದು.
೩. ರೈಲ್ವೆಯವರು ಕನ್ನಡ ವಿರೋಧಿ ನೀತಿ ಕೈಗೊಂಡಿರುವುದು. ಕನ್ನಡ ಫಲಕಗಳನ್ನು ಕಿತ್ತು ಹಾಕುವುದು, ಕನ್ನಡಿಗರನ್ನು ಕೆಲಸದಿಂದ ಹೊರದಬ್ಬುವುದು, ಹೀಗೆ.
ಪ್ರತಿ: ೧೦.ರೈಲಿನ ರಾಜ್ಯ
ಈ ಜಪಾನೀ ರೈಲುಗಳ ಬಗ್ಗೆ ಎಷ್ಟು ಓದಿದರೂ ಸಾಲದು. ಎಷ್ಟು ಜನರು ಹೊಗಳುತ್ತಾರೆ ಗೊತ್ತೇ, ನಾನು ಕೂಡ ಹೋಗಿ ಬರಲೇಬೇಕು. ಅಂದ ಹಾಗೆ ಒಂದು ವಿಷಯ ಹೇಳಲಿಲ್ಲ ನೀವು. ಅಲ್ಲಿನ ಜನರು ರೈಲನ್ನು ಹೇಗೆ ಬಳಸುತ್ತಾರೆ. ನಮ್ಮ ಹಾಗೆ, ಕಡಲೇಕಾಯಿ ಸಿಪ್ಪೆ, ಸಿಗರೇಟು ಎಲ್ಲಾ ಬಿಸ್ಹಾಕುತ್ತಾರೆಯೇ ?
ರೈಲು ಎಂದೊಡನೆ ನನಗೆ ಒಂದು ಘಟನೆ ನೆನಪಾಗುವುದು(ನೆನಪಾಗುವವರು). ಒಮ್ಮೆ ರೈಲಿನಲ್ಲಿ ಹೋಗುತ್ತಿದ್ದಾಗ, ಕಿಟಕಿ ತೆರಯಬೇಕಿತ್ತು. ಸುಮ್ಮನೆ ಕಿಟಕಿಯನ್ನು ಮುಟ್ಟಿದೆ ಅಷ್ಟೇ ಕಣ್ರೀ, ಧಡಾರನೆ ನನ್ನ ಕೈಯನ್ನೇ ಕೆಳಗೆ ನೂಕಿ, ನನ್ನ ಕೈಯ ಮೇಲೆ ಧೊಪ್ಪನೆ ಬಿತ್ತು. ಏನಾಗಿತ್ತಪ್ಪ ಎಂದರೆ ಹಿಂದೆ ಬಳಸಿದ್ದವರು, ಕಿಟಕಿಯನ್ನು ಎತ್ತರಿಸಿದ್ದರಷ್ಟೇ, ಅದರ ಅಕ್ಕಪಕ್ಕ ಬರುವ ಸಣ್ಣ ಚಿಲಕಗಳನ್ನು ಹಾಕಿಯೇ ಇರಲಿಲ್ಲ. ನನ್ನ ಅಂಕೈ ನೋಡಬೇಕಿತ್ತು ಆಗ. ಹಸಿರು ಚಕ್ಕೋತ(ಹೋಗಲಿ ಬಿಡಿ, ಮೂಸಂಬಿ) ಹಣ್ಣಿನ ಗಾತ್ರದಷ್ಟು ಊದಿತ್ತು. ಅಂದಿನಿಂದ, ಯಾವಾಗಲೇ ರೈಲಿನ ಕಿಟಕಿಯನ್ನು ಬಳಸುವಾಗಲೂ ಸ್ವಲ್ಪ ಎಚ್ಚರಿಕೆಯಿಂದ ಬಳಸುತ್ತೇನೆ.
ಒಂದು ರೀತಿಯಲ್ಲಿ, ಭಾರತೀಯ ರೈಲಿನ(ಅಥವಾ ಭಾರತೀಯರ ರೈಲುಗಳು
ಎಷ್ಟೋ ವೇಳಿ, ನಮ್ಮ ದೇಶದಲ್ಲಿ ರೈಲುಗಳು ಅದರ ಬಗೆಗಿನ ಸುದ್ಧಿಯಾಗುವುದಕ್ಕಿಂತ, ಅದಕ್ಕೆ ಹೊರತಾದ ವಿಷಯಗಳಿಗೆ ಸುದ್ಧಿಯಾಗುತ್ತವೆ.
೧. ಜೈಲಿಗೆ ಹೋಗಿ ಬಂದ ಲಾಲೂ ರೈಲ್ವೇ ಸಚಿವನಾಗುವುದು.
೨. ರೈಲ್ವೇ ಪ್ಲಾಟಫಾರಂಗಳಲ್ಲಿ ಮಡಕೆಯಲ್ಲಿ ನೀರು ಮಾರುವುದು.
೩. ರೈಲ್ವೆಯವರು ಕನ್ನಡ ವಿರೋಧಿ ನೀತಿ ಕೈಗೊಂಡಿರುವುದು. ಕನ್ನಡ ಫಲಕಗಳನ್ನು ಕಿತ್ತು ಹಾಕುವುದು, ಕನ್ನಡಿಗರನ್ನು ಕೆಲಸದಿಂದ ಹೊರದಬ್ಬುವುದು, ಹೀಗೆ.
ಇಷ್ಟೆಲ್ಲದರ ಮಧ್ಯೆಯೂ,
ಪ್ರೀತಿ ಇದ್ರೆ ರೈಲು ನಾನ್-ಸ್ಟಾಪು, ಇಲ್ಲದಿದ್ದೆ ನಾನಾ ಕಡೆ ಸ್ಟಾಪು. ಹಾಯ್ ಶಿವನೇ. ಚುಕುಬುಕು ಚುಕುಬುಕು ಚುಕುಬುಕು, ಹಾಯ್ ಚುಕುಬುಕು ಚುಕುಬುಕು ಚುಕುಬುಕು. Made in India, Made in India, ಹುಡುಗಿಗೋಸ್ಕ್ರ ಬಿಡ್ತಾನ್ ನೋಡು ರೈಲು ಬಂಡೀಯಾ...ಆಆಆಆಆಎಂಬ ಹಾಡು ಮಾತ್ರ ಆಟೋಗಳಲ್ಲಿರುವ ರೇಡಿಯೋಗಳಲ್ಲಿ ಕೇಳುತ್ತಲೇ ಇರುತ್ತದೆ.