ಮತ್ತಷ್ಟು: ನಿಮ್ಮ ಚಿಂತನೆಗೊಂದಷ್ಟು ಉತ್ತಮ ಕೈಪಿಡಿಗಳು
- ಮತ್ತಷ್ಟು: ನಿಮ್ಮ ಚಿಂತನೆಗೊಂದಷ್ಟು ಉತ್ತಮ ಕೈಪಿಡಿಗಳು By: Shyam Kishore (Jan 8 2007 - 5:17am)
- Re: ಮತ್ತಷ್ಟು: ಉತ್ತಮ ಕೈಪಿಡಿಗಳು By: bhatpp (Jan 8 2007 - 6:12am)
- Re: ಪುಸ್ತಕ ಜ್ಞಾನ By: bhatpp (Jan 8 2007 - 6:17am)
- Re: ಪುಸ್ತಕ ಜ್ಞಾನ By: hpn (Jan 8 2007 - 2:34pm)
- Re: ಪುಸ್ತಕ ಜ್ಞಾನ By: ಶ್ರೀನಿಧಿ (Jan 8 2007 - 8:36am)
- Re: ಪುಸ್ತಕ ಜ್ಞಾನ By: bhatpp (Jan 8 2007 - 6:17am)
- Re: ಮತ್ತಷ್ಟು: ಉತ್ತಮ ಕೈಪಿಡಿಗಳು By: bhatpp (Jan 8 2007 - 6:12am)
- ನನ್ನನಿಸಿಕೆ: ಹೀಗೊಂದು ಚಿಂತನೆ By: Shyam Kishore (Jan 8 2007 - 4:39am)
- Re: ಹೀಗೊಂದು ತತ್ವಜ್ಞಾನ By: shreekant.mishrikoti (Jan 8 2007 - 12:10pm)
- Re: ಹೀಗೊಂದು ತತ್ವಜ್ಞಾನ By: hpn (Jan 8 2007 - 12:52pm)
- Re: ಹೀಗೊಂದು ತತ್ವಜ್ಞಾನ By: shreekant.mishrikoti (Jan 8 2007 - 12:10pm)
- Re: ಹೀಗ್ಯಾಕೆ ಚಿಂತನೆ? By: bhatpp (Jan 8 2007 - 1:51am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 3:44am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:03am)
- Re: ಹೀಗ್ಯಾಕೆ ಚಿಂತನೆ? By: ಶ್ರೀನಿಧಿ (Jan 8 2007 - 4:26am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:39am)
- Re: ಹೀಗ್ಯಾಕೆ ಚಿಂತನೆ? By: ಶ್ರೀನಿಧಿ (Jan 8 2007 - 4:26am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:03am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 3:44am)

RSS:
ಮತ್ತಷ್ಟು: ನಿಮ್ಮ ಚಿಂತನೆಗೊಂದಷ್ಟು ಉತ್ತಮ ಕೈಪಿಡಿಗಳು
ಶ್ರೀನಿಧಿಯವರೇ,
ನಿಮ್ಮ ಚಿಂತನೆಗಳನ್ನು ಓದಿದ ಮೇಲೆ ನನಗೆ ಇದರ ಬಗ್ಗೆ ಉಲ್ಲೇಖ ಮಾಡದೇ ಇರಲು ಸಾಧ್ಯವೇ ಆಗುತ್ತಿಲ್ಲ.
ಈ ರೀತಿಯ ಚಿಂತನೆಗಳು ನನಗೂ ಆಗಾಗ ಎದುರಾಗುತ್ತಲೇ ಇರುತ್ತವೆ (ಗ್ರೇಡ್ ಕಮ್ಮಿ ಬಂತು ಅಂತಲ್ಲ!). ಆಗೆಲ್ಲ ಪದೇ ಪದೇ "ಸಿದ್ಧಾರ್ಥ"ವನ್ನು ತಿರುವಿ ಹಾಕುತ್ತೇನೆ. ಆಧ್ಯಾತ್ಮಿಕ ಮತ್ತು ಜೀವನದ ಉದ್ದೇಶಗಳ ಬಗೆಗಿನ ಚಿಂತನೆಗಳ ಬಗ್ಗೆ ಬಂದಿರುವ ಅತ್ಯುತ್ತಮ ಪುಸ್ತಕಗಳಲ್ಲೊಂದು ಹರ್ಮನ್ ಹಸ್ (1946ರ ನೊಬೆಲ್ ಪ್ರಶಸ್ತಿ ವಿಜೇತರು) ಅವರ "ಸಿದ್ಧಾರ್ಥ". ಇಪ್ಪತ್ತನೇ ಶತಮಾನದ ಕ್ಲಾಸಿಕ್ ಪುಸ್ತಕಗಳಲ್ಲೊಂದು ಅಂದರೂ ತಪ್ಪೇನಿಲ್ಲ. ಅದರ online edition ಲಭ್ಯವಿದೆ. ಈ ರೀತಿಯ ವಿಚಾರಗಳಲ್ಲಿ, ಉತ್ತರ ಹುಡುಕುವಲ್ಲಿ ಆಸಕ್ತಿಯಿದ್ದಲ್ಲಿ ತಪ್ಪದೇ ಓದಿ. ಅದರ ಕೊಂಡಿ ಇಲ್ಲಿದೆ: ಹರ್ಮನ್ ಹಸ್ ಅವರ ಸಿಧ್ಧಾರ್ಥ
ಇನ್ನೊ ಸ್ವಲ್ಪ ಆಳವಾಗಿ ಶೋಧಿಸುವ ಆಸಕ್ತಿಯಿದ್ದಲ್ಲಿ, ಸ್ವಾಮಿ ರಾಮತೀರ್ಥರ In Woods of God Realization (Vol 1 to 8 ಗಳಲ್ಲಿ Vol 1 to 4) ಓದಿನೋಡಿ. ಅದರ ಪರಿಚಯದ ಕೊಂಡಿ ಇಲ್ಲಿದೆ: ಸ್ವಾಮಿ ರಾಮತೀರ್ಥ
ಆದರೆ ನನಗೆ ವೈಯಕ್ತಿಕವಾಗಿ ಈ ವಿಷಯದಲ್ಲಿ ರಾಮಕೃಷ್ಣ ಪರಮಹಂಸರ ವಿಚಾರಧಾರೆ ಸಮಂಜಸ ಅನ್ನಿಸುತ್ತದೆ. ಈ ಪ್ರಶ್ನೆಗಳು ಎದುರಾದಾಗ ಉತ್ತರ ಹುಡುಕಲೇಬೇಕೆಂಬ ಹಂಬಲ ಮತ್ತು "ಕತ್ತಿಯಲುಗಿನಂತಹ ಸತ್ಯದ ಹಾದಿಯಲ್ಲಿ" ನಡೆಯುವ ಧೈರ್ಯ ಎರಡೂ ಇದ್ದಲ್ಲಿ, ಯಾವ ಪುಸ್ತಕ ಕೂಡಾ ಉಪಯೋಗಕ್ಕೆ ಬರೋದಿಲ್ಲ. ನಮ್ಮ ಪ್ರಶ್ನೆಗೆ ನಾವೇ ಉತ್ತರ ಹುಡುಕಬೇಕು.
- ಶ್ಯಾಮ್ ಕಿಶೋರ್