Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
- ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Shyam Kishore (Jan 13 2007 - 10:41am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- ಧನ್ಯವಾದಗಳು By: Yamini (Jan 13 2007 - 5:09pm)
- ಕೆಲವು ಪ್ರಶ್ನೆಗಳು: ಮಠ, ಮಠಾಧಿಪತಿ ಮತ್ತು ನೇತಾರರ ಬಗ್ಗೆ By: Shyam Kishore (Jan 14 2007 - 2:21am)
- Re: ಧನ್ಯವಾದಗಳು By: ಶ್ಯಾಮ ಕಶ್ಯಪ (Jan 14 2007 - 12:17am)
- ಧನ್ಯವಾದಗಳು By: Yamini (Jan 13 2007 - 5:09pm)
- ಪ್ರತಿಕ್ರಿಯೆಗೆ ಜೊತೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Sunil Jayaprakash (Jan 13 2007 - 11:12am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: H.S.R.Raghavendra Rao (Jan 13 2007 - 12:06am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ಸಂಗನಗೌಡ (Jan 12 2007 - 10:01am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ವೈಭವ (Jan 18 2007 - 10:53pm)
- ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ismail (Jan 12 2007 - 4:43pm)
- Re: ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ಸಂಗನಗೌಡ (Jan 17 2007 - 12:19pm)

RSS:
Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ಶ್ರೀ ವಿಶ್ವೇಶ್ವರ ಭಟ್ ಅವರ ಮೂಲ ಲೇಖನ ಮತ್ತು ಶ್ರೀ ಸಂಗನಗೌಡ ಅವರ ಪ್ರತಿಕ್ರಿಯೆಗಳಿಗೆ ಬಹಳ ಪ್ರಬುದ್ಧವಾದ ಮುಂದುವರಿಕೆಯನ್ನು ನೀವು ನೀಡಿದ್ದೀರಿ. ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ಅತ್ಯಗತ್ಯ. ಸುಮಾರು ನಲವತ್ತು ವರ್ಷಗಳ ಹಿಂದೆ, ಕೆಲವು ಜಾತಿಗಳಿಗೆ ಸೇರಿದ್ದ ಮಠಗಳು ಶ್ಯೆಕ್ಷಣಿಕ ಕೆಲಸ ಮಾಡಿದ ಬಗೆಗೂ ಇಂದಿನ ಸನ್ನಿವೇಶಕ್ಕೂ ಬಹಳ ವ್ಯತ್ಯಾಸವಿದೆ. ಅಂದು ನಿರಕ್ಷರತೆ ಹೆಚ್ಚಾಗಿ ಇದ್ದಾಗ, ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳನ್ನು ತೆಗೆದ, ವಿದ್ಯಾರ್ಥಿನಿಲಯಗಳನ್ನು ನಡೆಸಿದ ಮಠಗಳು ಕೆಲವು ಮಿತಿಗಳ ಒಳಗೆ ಒಳ್ಳೆಯ ಕೆಲಸ ಮಾಡಿದವು. ತಮ್ಮ ಧಾರ್ಮಿಕ ಓಲುವೆಗಳು ಶಿಕ್ಷಣಕ್ಕೆ ಅಡ್ಡಿಯಾಗದಂತೆ ಎಚ್ಚರ ವಹಿಸಿದವು. ಆದರೆ, ಇಂದಿನ ಸನ್ನಿವೇಶವೇ ಬೇರೆ. ಇಲ್ಲಿ ಯಾಮಿನಿಯವರು ಹೇಳಿರುವುದು ನೂರಕ್ಕೆ ನೂರರಷ್ಟು ಸರಿ. ಇಂದು ಮಠಗಳು ಮತ್ತು ರಾಜಕಾರಣಿಗಳ ನಡುವೆ ಇರುವುದು ಅಪವಿತ್ರ ಮೈತ್ರಿ. ಅವು ಜಾತಿರಾಜಕಾರಣದ ಅಂತೆಯೇ ಶಕ್ತಿ ರಾಜಕಾರಣದ ಅಡ್ಡೆಗಳಾಗಿ ಪರಿಣಮಿಸಿವೆ. ಶಿಕ್ಷಣಸಂಸ್ಥೆಗಳು ಆದಾಯಮೂಲವಾಗಿದೆಯೇ ವಿನಾ ಕನಿಷ್ಠ ಪಕ್ಷ ತಮ್ಮ ಜಾತಿಯ ಬದವರಲ್ಲಿಯೂ ಆಸಕ್ತವಾಗಿಲ್ಲ. ಅವು ಸರ್ಕಾರದ ನೆರವನ್ನು ಪಡೆಯುತ್ತಲೇ ತಮ್ಮದೇ ಆದ ಕೋಟೆಗಳನ್ನು ಕಟ್ಟಿಕೊಳ್ಳುತ್ತಿವೆ. ಇಲ್ಲಿ ಯಾವುದೇ ವಿಧವಾದ ಚಾರಿಟಿ ಕೂಡ ಇಲ್ಲ. ಧರ್ಮ, ಅಧ್ಯಾತ್ಮ ಮುಂತಾದ ಪದಗಳನ್ನು ಬಳಸುವ ನೈತಿಕ ನೆಲೆಗಟ್ಟನ್ನೇ ಬಹುಪಾಲು ಮಠಾಧಿಪತಿಗಳು ಕಳೆದುಕೊಂಡಿದ್ದಾರೆ.
ಈ ಸನ್ನಿವೇಶವನ್ನು ಎದುರಿಸುವುದಾಗಲೀ ಬದಲಾಯಿಸುವುದಾಗಲೀ ಕಷ್ಟ ಸಾಧ್ಯ. ಈಚೆಗೆ ಕಲೆ ಮತ್ತು ಸಂಸ್ಕತಿಗಳ ವಕ್ತಾರರೂ ಕೂಡ ಈ ಬಗ್ಗೆ ಸಂಕೋಚ ತೋರಿಸುತ್ತಿಲ್ಲ. ಇಂದಿನ ಸನ್ನಿವೇಶದಲ್ಲಿ ಇವು ತಾವು ಮಾಡಬೇಕಾದುದನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಮಾಡುತ್ತಿವೆ.
ಇದೇ ಮಾತನ್ನು ಮಠಗಳು ಎಂದು ಕರೆಸಿಕೊಳ್ಳದ, ಆದರೆ ಹಿಂದೂ ಧರ್ಮದ ರಾಯಭಾರಿಗಳೆಂಬ ಹೆಸರಿನಲ್ಲಿ ಅಧ್ಯಾತ್ಮವನ್ನು ಮಾರಾಟದ ಸರಕಾಗಿ ಮಾರ್ಪಡಿಸಿರುವ `ದೇವಮಾನವರಿ'ಗೂ ಅನ್ವಯಿಸಬಹುದು. ಈ ಚರ್ಚೆಯನ್ನು ಎತ್ತಿದವರಿಗೆ ಮತ್ತು ಮುಂದುವರೆಸಿದವರಿಗೆ ವಂದನೆಗಳು.
H.S.Raghavendra Rao