ಪ್ರತಿಕ್ರಿಯೆಗೆ ಜೊತೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
- ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Shyam Kishore (Jan 13 2007 - 10:41am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- ಧನ್ಯವಾದಗಳು By: Yamini (Jan 13 2007 - 5:09pm)
- ಕೆಲವು ಪ್ರಶ್ನೆಗಳು: ಮಠ, ಮಠಾಧಿಪತಿ ಮತ್ತು ನೇತಾರರ ಬಗ್ಗೆ By: Shyam Kishore (Jan 14 2007 - 2:21am)
- Re: ಧನ್ಯವಾದಗಳು By: ಶ್ಯಾಮ ಕಶ್ಯಪ (Jan 14 2007 - 12:17am)
- ಧನ್ಯವಾದಗಳು By: Yamini (Jan 13 2007 - 5:09pm)
- ಪ್ರತಿಕ್ರಿಯೆಗೆ ಜೊತೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Sunil Jayaprakash (Jan 13 2007 - 11:12am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: H.S.R.Raghavendra Rao (Jan 13 2007 - 12:06am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ಸಂಗನಗೌಡ (Jan 12 2007 - 10:01am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ವೈಭವ (Jan 18 2007 - 10:53pm)
- ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ismail (Jan 12 2007 - 4:43pm)
- Re: ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ಸಂಗನಗೌಡ (Jan 17 2007 - 12:19pm)

RSS:
ಪ್ರತಿಕ್ರಿಯೆಗೆ ಜೊತೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ಶ್ಯಾಮ್ ಕಿಶೋರರ ಐದು ಪಾಯಿಂಟುಗಳಿದೆ ನನ್ನದು ಪಾಸ್ಟ್ಯುಲೇಟ್ ಗಳಿದ್ದ ಹಾಗೆಂದು ತಿಳಿಯುವುದು.
೨.೧. ಶ್ಯಾಮ್ರವರು ವಿದ್ಯಾರಣ್ಯರ ಕುರಿತು ಉದಾಹರಿಸಿದರು. ಧರ್ಮಕ್ಕೆ ರಾಜಕೀಯ ಆಗಬೇಕು ಮತ್ತು ರಾಜಕೀಯಕ್ಕೆ ಧರ್ಮ ಆಗಬೇಕು ಎಂಬ ತತ್ವದ ಪೂರ್ಣ ಜ್ಞಾನವಿದ್ದುದರಿಂದಲೇ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗಿಳಿದುದು. ಹಾಗೆಯೇ, ಕೃಷ್ಣದೇವರಾಯ ಮತ್ತು ತಿರುಪತಿಯ ವೆಂಕಟೇಶ್ವರನ ನಡುವೆ ಇದ್ದ ಗುಟ್ಟಾದ ವ್ಯವಹಾರಗಳನ್ನು ಅಭ್ಯಾಸಮಾಡುವ ಯಾರಿಗಾದರೂ ಇದು ತಿಳಿಯುತ್ತದೆ. ಒಟ್ಟಿನಲ್ಲಿ ಮಠಗಳು ಎಂದ ಮಾತ್ರಕ್ಕೆ ಅವು ಆಧ್ಯಾತ್ಮಕ ಕೇಂದ್ರಗಳು ಎಂದು ಹೇಳಲು ಬರುವುದಿಲ್ಲ. ನಾವು ತಿಳಿದಷ್ಟು ಸಾಮಾಜಿಕವಲ್ಲ ಮಠಗಳು, ಅವು socio-economical. ಮತ್ತು ಅವುಗಳು ಹಾಗೆಯೇ ಇರಬೇಕು. ಕೇವಲ ಆಧ್ಯಾತ್ಮ ಸಮಾಜದ ಎಲ್ಲ (ಎಲ್ಲರ ಅಲ್ಲ) ಹಸಿವನ್ನು ನೀಗಿಸುವಲ್ಲಿ ಸಹಾಯ ಮಾಡುವುದಿಲ್ಲ.
ಹಾಗೆಯೇ ಮಠ ಮತ್ತು ರಾಜಕೀಯ ಎಷ್ಟು ಹತ್ತಿರದಲ್ಲಿರುತ್ತವೆ ಎಂಬುದನ್ನು ಬರೇ ಹಿಂದು ಮಠಗಳಲ್ಲದೆ, ಕ್ರಿಶ್ಟಿಯನ್ ಚರ್ಚುಗಳನ್ನು ನೋಡಿಯೂ ನಿರ್ಣಯಕ್ಕೆ ಬರಬೇಕು. ಮಠಗಳಿದ್ದ ಮಾತ್ರಕ್ಕೆ ರಾಜಕೀಯ ಪ್ರಜ್ಞೆಯಿರುವುದಿಲ್ಲ ಎಂಬುದು ಶ್ಯಾಮ್ ಅವರು ಹೇಳಿದ ಹಾಗೆ, ನಾಣ್ಯದ ಒಂದು ಮುಖ ಮಾತ್ರ.
೨.೨ ಯಾವುದೇ ಚುನಾವಣೆಯಾಗಲಿ, ಮತ ಚಲಾಯಿಸಬೇಕೆನ್ನುವ ಹುಮ್ಮಸ್ಸು ನಗರಗಳಲ್ಲಿ ಹೆಚ್ಚಿರುತ್ತದೆಯೋ ಬೇರೆಡೆ ಹೆಚ್ಚಿರುತ್ತದೆಯೋ ಗಮನಿಸಿ. ಓದು ಬರಹ ಕಲಿತ ಎಷ್ಟು "ವಿದ್ಯಾವಂತರು" ಚುನಾವಣೆಯಲ್ಲಿ ಭಾಗವಹಿಸುತ್ತಾರೆ.