ಧನ್ಯವಾದಗಳು
- ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Shyam Kishore (Jan 13 2007 - 10:41am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- ಧನ್ಯವಾದಗಳು By: Yamini (Jan 13 2007 - 5:09pm)
- ಕೆಲವು ಪ್ರಶ್ನೆಗಳು: ಮಠ, ಮಠಾಧಿಪತಿ ಮತ್ತು ನೇತಾರರ ಬಗ್ಗೆ By: Shyam Kishore (Jan 14 2007 - 2:21am)
- Re: ಧನ್ಯವಾದಗಳು By: ಶ್ಯಾಮ ಕಶ್ಯಪ (Jan 14 2007 - 12:17am)
- ಧನ್ಯವಾದಗಳು By: Yamini (Jan 13 2007 - 5:09pm)
- ಪ್ರತಿಕ್ರಿಯೆಗೆ ಜೊತೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Sunil Jayaprakash (Jan 13 2007 - 11:12am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: H.S.R.Raghavendra Rao (Jan 13 2007 - 12:06am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ಸಂಗನಗೌಡ (Jan 12 2007 - 10:01am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ವೈಭವ (Jan 18 2007 - 10:53pm)
- ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ismail (Jan 12 2007 - 4:43pm)
- Re: ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ಸಂಗನಗೌಡ (Jan 17 2007 - 12:19pm)



RSS:
ಧನ್ಯವಾದಗಳು
ನಾನು ಬರೆದ ವಿಷಯವೊಂದಕ್ಕೆ ಇಷ್ಟೊಂದು ಗಹನವಾದ ಪ್ರತಿಕ್ರಿಯೆಗಳು ಬರುತ್ತವೆಯೆಂದು ಭಾವಿಸಿರಲಿಲ್ಲ. ರಾಜಕೀಯ ಪ್ರಜ್ಞೆಯ ವಿಕಾಸಕ್ಕೆ ಧರ್ಮ ಅಡ್ಡಿಯಾಗುವುದು ನಿಜ. ಧರ್ಮವನ್ನು ನಮ್ಮ ರಾಜಕಾರಣಿಗಳು ಬಳಸಿಕೊಳ್ಳುವ ವಿಧಾನವೇ ಇದಕ್ಕೆ ಉದಾಹರಣೆ. ನೀವು ಹೇಳುವಂತೆ ಮಠ ಮಾನ್ಯಗಳು ಅಕ್ಷರ ದಾಸೋಹದ ಮೂಲಕ ವೈಚಾರಿಕ ಜಾಗೃತಿಗೆ ಕಾರಣವಾಗುತ್ತಿದ್ದರೆ ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳ ಸ್ಥಾನವೇನು ಎಂದು ಪ್ರಶ್ನಿಸುವ ಅಗತ್ಯವೇ ಇರಲಿಲ್ಲ.
ಅವುಗಳು ಪ್ರತಿನಿಧಿಸುತ್ತವೆ ಎಂದು ಹೇಳಲಾಗುವ ಧಾರ್ಮಿಕ ಮೌಲ್ಯಗಳಿಗೂ ಅವುಗಳ ನಡವಳಿಕೆಗೂ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ಸಮಸ್ಯೆ ಉದ್ಭವವಾಗಿದೆ. ಪ್ರತಿ ಮಠವೂ ಒಂದಲ್ಲಾ ಒಂದು ಸಮುದಾಯವನ್ನು ಪ್ರತಿನಿಧಿಸುತ್ತಾ ಇರುತ್ತದೆ. ಅದು ತಾನು ಪ್ರತಿನಿಧಿಸುವ ಸಮುದಾಯದ ಓಟುಗಳನ್ನು ತಾನು ವಾಣಿಜ್ಯ ಉದ್ದೇಶದಿಂದ ಸ್ಥಾಪಿಸಿರುವ ಕ್ಯಾಪಿಟೇಶನ್ ಸಂಸ್ಥೆಗಳನ್ನು ಕಾಪಾಡಲು ಬಳಸಿಕೊಳ್ಳುವುದು ಇಲ್ಲಿರುವ ಸಮಸ್ಯೆ. ಅಷ್ಟು ಮಾತ್ರ ಅಲ್ಲ ಹಲವು ಧಾರ್ಮಿಕ ಸಂಸ್ಥೆಗಳ ಭೂ ದಾಹ ಎಷ್ಟಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದೆ.
ಎಲ್ಲಾ ಧರ್ಮಗಳಿಗೆ ಸೇರಿದ 'ಮಠ'ಗಳೂ ಹೀಗೆಯೇ ಇವೆ. ಇದಕ್ಕೆ ವ್ಯತಿರಿಕ್ತವಾದುವುಗಳಿದ್ದರೆ ಅವು ಅಪವಾದ ಮಾತ್ರ. ಎಚ್ ಎಸ್ ಆರ್ ಅವರು ಹೇಳಿದಂತೆ 30-40 ವರ್ಷಗಳ ಹಿಂದೆ ಅವುಗಳ ಮಾಡಿದ ಕೆಲಸ ಒಳ್ಳೆಯದು. ಇದನ್ನು ಕೇವಲ ಮಠಗಳಷ್ಟೇ ಮಾಡಿದ್ದಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಕ್ತಿಗಳೂ ಕೂಡಾ ಇಂಥ ಕೆಲಸ ಮಾಡಿದರು. ಈಗ ಮಠಗಳು ಆ ಕೆಲಸ ಮಾಡುತ್ತಿಲ್ಲ. ಈಗ ಅವು ಇಂಟರ್ ನ್ಯಾಶನಲ್ ಸ್ಕೂಲ್ ಸ್ಥಾಪಿಸುತ್ತಿವೆ. ಅಲ್ಲಿ ಪ್ರವೇಶವಿರುವುದು ಯಾರಿಗೆ ಎಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
ಈಗಿನ ಮಠಗಳು ನಿಜಕ್ಕೂ ವೈಚಾರಿಕವಾಗಿ ಬಲವಾಗಿದ್ದರೆ ತಾನು ಪ್ರತಿನಿಧಿಸುವ ಸಮುದಾಯವನ್ನು ಅದರ ಹಕ್ಕಿಗಾಗಿ ಹೋರಾಡಲು ಪ್ರೇರೇಪಿಸುತ್ತಿತ್ತು. ವಿದ್ಯಾರಣ್ಯರು ಮಾಡಿದ್ದು ಅದನ್ನೇ. ಈಗ ಕರ್ನಾಟಕದ ಸರ್ವ ಜಾತಿ-ಜನಾಂಗಗಳ ಮಠಗಳೂ ಮಾಡುತ್ತಿರುವಂತೆ ಕ್ಯಾಪಿಟೇಶನ್ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಲು ಬೇಕಾದ 'ರಾಜಕೀಯ ಪ್ರಜ್ಞೆ'ಯನ್ನಾಗಲೀ, ಹೆಲಿಕಾಪ್ಟರ್ ಕೊಳ್ಳಲು ಇಲ್ಲವೇ ತಮ್ಮ ಊಳಿಗಮಾನ್ಯ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಬೇಕಾದ ರಾಜಕೀಯ ಪ್ರಜ್ಞೆಯನ್ನು ವಿದ್ಯಾರಣ್ಯರು ಪ್ರತಿಪಾದಿಸಲಿಲ್ಲ.
ಇನ್ನು ಮಠಗಳಿಗೆ ಮಾತ್ರ ಸಾಮಾಜಿಕ ಕಾಳಜಿ ಇದೆ ಎಂದಾದರೆ ಎಲ್ಲಾ ಮಠಗಳ ಒಂದು ಪರಿಷತ್ತು ಮಾಡಿ ಅದಕ್ಕೇ ರಾಜಕೀಯ ಅಧಿಕಾರವನ್ನೂ ಕೊಟ್ಟು ಬಿಡಬಹುದಲ್ಲಾ?
--ಯಾಮಿ.