ಕೆಲವು ಪ್ರಶ್ನೆಗಳು: ಮಠ, ಮಠಾಧಿಪತಿ ಮತ್ತು ನೇತಾರರ ಬಗ್ಗೆ
- ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Shyam Kishore (Jan 13 2007 - 10:41am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- ಧನ್ಯವಾದಗಳು By: Yamini (Jan 13 2007 - 5:09pm)
- ಕೆಲವು ಪ್ರಶ್ನೆಗಳು: ಮಠ, ಮಠಾಧಿಪತಿ ಮತ್ತು ನೇತಾರರ ಬಗ್ಗೆ By: Shyam Kishore (Jan 14 2007 - 2:21am)
- Re: ಧನ್ಯವಾದಗಳು By: ಶ್ಯಾಮ ಕಶ್ಯಪ (Jan 14 2007 - 12:17am)
- ಧನ್ಯವಾದಗಳು By: Yamini (Jan 13 2007 - 5:09pm)
- ಪ್ರತಿಕ್ರಿಯೆಗೆ ಜೊತೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Sunil Jayaprakash (Jan 13 2007 - 11:12am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: H.S.R.Raghavendra Rao (Jan 13 2007 - 12:06am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ಸಂಗನಗೌಡ (Jan 12 2007 - 10:01am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ವೈಭವ (Jan 18 2007 - 10:53pm)
- ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ismail (Jan 12 2007 - 4:43pm)
- Re: ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ಸಂಗನಗೌಡ (Jan 17 2007 - 12:19pm)


RSS:
ಕೆಲವು ಪ್ರಶ್ನೆಗಳು: ಮಠ, ಮಠಾಧಿಪತಿ ಮತ್ತು ನೇತಾರರ ಬಗ್ಗೆ
ನೀವು ಹೇಳಿದಿರಿ "ಪ್ರತಿ ಮಠವೂ ಒಂದಲ್ಲಾ ಒಂದು ಸಮುದಾಯವನ್ನು ಪ್ರತಿನಿಧಿಸುತ್ತಾ ಇರುತ್ತದೆ. ಅದು ತಾನು ಪ್ರತಿನಿಧಿಸುವ ಸಮುದಾಯದ ಓಟುಗಳನ್ನು ತಾನು ವಾಣಿಜ್ಯ ಉದ್ದೇಶದಿಂದ ಸ್ಥಾಪಿಸಿರುವ ಕ್ಯಾಪಿಟೇಶನ್ ಸಂಸ್ಥೆಗಳನ್ನು ಕಾಪಾಡಲು ಬಳಸಿಕೊಳ್ಳುವುದು ಇಲ್ಲಿರುವ ಸಮಸ್ಯೆ. ಅಷ್ಟು ಮಾತ್ರ ಅಲ್ಲ ಹಲವು ಧಾರ್ಮಿಕ ಸಂಸ್ಥೆಗಳ ಭೂ ದಾಹ ಎಷ್ಟಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದೆ." ಅಂತ. ಹಾಗಿದ್ದಲ್ಲಿ ನಮ್ಮ ರಾಜಕಾರಣಿಗಳೂ ತಮ್ಮ ತಮ್ಮ ಸಮುದಾಯವನ್ನು ಪ್ರತಿನಿಧಿಸುತ್ತಾರೆ ತಾನೇ? ಅವರಿಗೇಕೆ ಈ "ಸ್ವಹಿತಾಸಕ್ತಿ"ಯುಳ್ಳ ಸಾಮಾಜಿಕ ಕಾಳಜಿಯಿಲ್ಲ? ಓಟಿನ ಅಗತ್ಯ ಅವರಿಗಿಂತ ಹೆಚ್ಚಾಗಿ ಯಾರಿಗಿದೆ ಹೇಳಿ? ಅವರೇ ಶಾಲೆ-ಕಾಲೇಜುಗಳನ್ನು ತೆರೆದು ಓಟು ಗಿಟ್ಟಸಬಹುದಲ್ಲ? ಅದನ್ನೇಕೆ ಮಾಡುವುದಿಲ್ಲ? ಇಷ್ಟು ಮಾತ್ರದ ಸರಳ ಮಾರ್ಗ ಅವರಿಗೆ ಗೋಚರಿಸಲಿಲ್ಲವೇ? ಹಾಗಿರುವಾಗ ಮಠವೊಂದು ಆ ಕೆಲಸವನ್ನು ಮಾಡಿದಲ್ಲಿ ಅದರ ಹಿಂದೆ "ಹೆಸರು" ಮಾಡುವ ಉದ್ದೇಶವಿದ್ದರೂ ನಾನು ತಪ್ಪು ಅನ್ನೋದಿಲ್ಲ. ನಮ್ಮದೇ ಓಟಿನಿಂದ ಆರಿಸಿಬಂದು, ಯಾವ ಕೆಲಸವನ್ನೂ ಮಾಡದೇ, ಕೇವಲ ನಮ್ಮ ತೆರಿಗೆಯ/ಬೊಕ್ಕಸದ ಹಣ ದೋಚುವ ಈ ನೇತಾರರಿಗಿಂತ ಒಬ್ಬ ಮಠಾಧಿಪತಿ ನನಗೆ ಬಹಳ ಮೇಲು ಅನ್ನಿಸುತ್ತಾನೆ.
ಇನ್ನು "ಭೂದಾಹದ" ವಿಚಾರ. ನಮ್ಮಲ್ಲಿ (ಕು)ಪ್ರಸಿದ್ಧ) ರಾಜಕಾರಣಿಯೊಬ್ಬರಿಗೆ (ಹೆಸರು ಬೇಡ) ಸುಮಾರು ೪೦೦ ಎಕರೆ ಜಮೀನಿರುವ ವಿಚಾರ ಜಗತ್ತಿಗೇ ಗೊತ್ತಿರುವ ವಿಚಾರ. ಹಾಗೆಯೇ ನಮ್ಮ ರಾಷ್ಟ್ರೀಯ ಮಟ್ತದ ನೇತಾರರಲ್ಲಿ ಮುವ್ವತ್ತು ಪ್ರತಿಶತ ಜನರು "ಸ್ವಿಸ್ ಬ್ಯಾಂಕ್"ನಲ್ಲಿ ಖಾತೆ ಹೊಂದಿದ್ದಾರೆ ಅನ್ನುವುದೂ ಗೊತ್ತಿರುವ ವಿಚಾರ. ಆದರೆ ಇವುಗಳ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ! ಯಾಕೆಂದರೆ ಅದು ಸಾಧ್ಯವೂ ಇಲ್ಲ. ಒಬ್ಬ ಧುರೀಣ ತನ್ನ ಹುಟ್ಟುಹಬ್ಬದಂಥ ಅತಿ ಸಾಮಾನ್ಯ ವಿಷಯವನ್ನು, ಬೀದಿ ಬೀದಿಗಳಲ್ಲಿ vinyl posters "ಹಾಕಿಸಿ", ಯಾವುದೋ ಮೈದಾನವೊಂದರಲ್ಲಿ ಹತ್ತು ಸಾವಿರ ಜನರನ್ನು "ಸೇರಿಸಿ" ಆಚರಿಸಿಕೊಳ್ಳುವುದು ದೊಡ್ಡ ಮಟ್ಟದ ಚರ್ಚೆಗೇಕೆ ಕಾರಣವಾಗುವುದಿಲ್ಲ? ಇವತ್ತು ಆಲ್ಮೋಸ್ಟ್ ಪ್ರತಿ "ಹಿರಿಯ" ರಾಜಕಾರಣಿ ಕನಿಷ್ಠ ಐದಾರು ನಿವೇಶನಗಳನ್ನು, ವಾಣಿಜ್ಯ ಮಳಿಗೆಗಳನ್ನು ಹೊಂದಿದ್ದಾರಂತೆ. ಇದು ಭೂದಾಹ ಆಗಲಿಲ್ಲವೇ? ನನಗೆ ಎಲ್ಲದಕ್ಕಿಂತ ಹೆಚ್ಚು ಕೋಪ ಬರುವುದು, ಇದೆಲ್ಲ ನಮ್ಮ ತೆರಿಗೆ ಹಣ ಅಥವಾ ಬೊಕ್ಕಸದ ಹಣದಿಂದ ಆಗುತ್ತಿರುವುದಕ್ಕೆ. ಮಠವೊಂದಕ್ಕೆ ಕೊಡುವ ಹಣ "ತೆರಿಗೆ" ಅಲ್ಲ ತಾನೇ? ಅದು ನಾನು ನನ್ನ ಸ್ವ-ಇಚ್ಛೆಯಿಂದ ಕೊಡುವ ಹಣ. ಅದರಲ್ಲಿಯೇ ಇಷ್ಟಾದರೂ ಒಳ್ಳೆಯ ಕೆಲಸ ನಡೆಯುತ್ತಿರುವಾಗ ನಮ್ಮ ತೆರಿಗೆಯ ಹಣದಿಂದ ಏಕೆ ಒಳ್ಳೆಯ ಪ್ರಗತಿಪರ ಕೆಲಸ ನಡೆಯಬಾರದು?
ಇನ್ನೊಂದು ಉದಾ: ಮಠಾಧಿಪತಿಯೊಬ್ಬ ಯಾರಿಗೋ "ಹೊಡೆಸಿದ" ಅನ್ನುವ ಬಗ್ಗೆ ಎಲ್ಲ ಬುದ್ಧಿಜೀವಿಗಳೂ ಸೇರಿ ಚರ್ಚಿಸುವಾಗ, ಅವರ "ಸಾಮಾಜಿಕ ಕಾಳಜಿ"ಗೆ ಒಂದು ಸಲಾಮು ಹಾಕುವಂತಾದರೂ ಅದಕ್ಕೆ ಮುನ್ನ ನನ್ನ ಮನಸ್ಸಿನಲ್ಲಿ ಪ್ರಶ್ನೆಯೊಂದು ಭೂತದಂತೆ ಏಳುತ್ತದೆ. ತೈಲ ವಿತರಣೆಯಲ್ಲಿ ಆಗುತ್ತಿದ್ದ ಹಗಲುದರೋಡೆಯನ್ನು ತಡೆಯಲು, ಅದರ ವಿರುದ್ಧ whistleblower ಕೆಲಸ ಮಾಡಿದ ಪ್ರತಿಭಾವಂತ ಮಂಜುನಾಥನ ಹತ್ಯೆಯ ಬಗ್ಗೆ ಇದೇ "ಬುದ್ಧಿಜೀವಿಗಳು" ಇಷ್ಟು ವ್ಯಾಪಕ ಮಟ್ಟದ ಚರ್ಚೆ ಯಾಕೆ ನಡೆಸಲಿಲ್ಲ? ಮಠಾಧಿಪತಿ "ಹೊಡೆಸಿದ್ದರ" ಬಗ್ಗೆ ಚರ್ಚೆ ಆಗಬೇಕಾದ್ದೇ; ಎರಡನೇ ಮಾತೇ ಇಲ್ಲ, ಒಪ್ಪೋಣ. ಅದರೆ ಮಂಜುನಾಥ್ ಸಾವೂ ಕೂಡ ಅಷ್ಟೇ ಗಂಭೀರ ವಿಚಾರ ತಾನೇ? ಇತ್ತೀಚಿನ ತೈಲ ಹಗರಣದ ಬಗ್ಗೆ ಯಾಕೆ ಯಾವ ಪತ್ರಿಕೆಯೂ ದೊಡ್ಡ ಮಟ್ಟದ ಚರ್ಚೆ ನಡೆಸಲಿಲ್ಲ? ವರದಿ ಮಾಡಿದರು, ಬಿಡಿ; ಆದರೆ ಚರ್ಚೆಯೇಕೆ ಆಗಲಿಲ್ಲ? ನಮ್ಮ ನೇತಾರರು "ಲೋಕಸಭೆಯಲ್ಲಿ ಅಕ್ಷರಷಃ ಕೈ-ಕೈ ಮಿಲಾಯಿಸಿ ಕಿತ್ತಾಡಿದ್ದನ್ನು" ಟಿ.ವಿ.ಯಲ್ಲಿ ನೇರಪ್ರಸಾರ ಮಾಡಿದಾಗ ಎಲ್ಲಿತ್ತು ನಮ್ಮೆಲ್ಲರ so called ರಾಜಕೀಯ, ಸಾಮಾಜಿಕ, ಎಲ್ಲಕ್ಕಿಂತ ಹೆಚ್ಚಾಗಿ ನೈತಿಕ ಪ್ರಜ್ಞೆ? ನಾವು, ನಮ್ಮ ವ್ಯವಸ್ಥೆ ಮುಟ್ಟಿರುವ "ಪಾತಾಳ"ವನ್ನು ತೋರಿಸಲು ಇದಕ್ಕಿಂತ ಹೆಚ್ಚಿನ ಇನ್ನೊಂದು ಉದಾಹರಣೆ ಬೇಕೆ? ಇದರ ಬಗ್ಗೆ ಯಾವುದಾದರೂ forumನಲ್ಲಿ ವ್ಯಾಪಕ ಚರ್ಚೆ ನಡೆದದ್ದು ನೋಡಿದ್ದಲ್ಲಿ, ಭಾಗವಹಿಸದ ನೆನಪಿದ್ದಲ್ಲಿ ಯಾರಾದರೂ ದಯವಿಟ್ಟು ತಿಳಿಸಿ! ಇವುಗಳ ಬಗ್ಗೆ ಎರಡು ದಿನ ವರದಿಗಳು ಬಂತೇ ವಿನಃ ಚರ್ಚೆ, ಖಂಡನೆ ನಡೆಯಲಿಲ್ಲ. ಯಾಕೆ? ನನಗನ್ನಿಸೋದು ಧರ್ಮ ನಮಗೆ ಒಂದು taboo ತರಹ ಆಗಿದೆ. ಆಗಿದೆ ಅಲ್ಲ, ಹಾಗೆ ಆಗುವಂತೆ ಮಾಡಿದ್ದಾರೆ. ಮಾಧ್ಯಮಗಳೂ ಇದನ್ಣೇ ಇನ್ನಷ್ಟು ಬಣ್ಣ ಕಟ್ಟಿ ಬೆಳಸುತ್ತವೆ.
ನಿಮ್ಮ ಕೊನೆಯ ಪಾಯಿಂಟ್ ನಾನು ಒಪ್ಪುತ್ತೇನೆ. ಆಕಸ್ಮಾತ್ ಮಠಗಳ ಪರಿಷತ್ತು ರೂಪಿತವಾಗಿ, ನಮ್ಮ ಇಂದಿನ ರಾಜಕಾರಣಿಗಳಿಗಿಂತ ಒಳ್ಳೆಯ ಕೆಲಸ ಮಾಡುವುದಾದಲ್ಲಿ ಅವರೇ ಅಧಿಕಾರಕ್ಕೆ ಬರಲಿ. ಕೆಲಸ ಮಾಡುತ್ತಿರುವ ವ್ಯಕ್ತಿಗೆ ನನ್ನ ತೆರಿಗೆಯ/ದುಡಿಮೆಯ ಹಣ ಹೋಗುತ್ತಿದೆ ಅಂತ ನನಗೆ ತೃಪ್ತಿಯಾದರೂ ಇರುತ್ತದೆ. ಭಾರತದ ಏಳಿಗೆಗೆ, ಪ್ರಗಿತಿಪರ ಕೆಲಸಕ್ಕೆ ಮಠಾಧಿಪತಿಯೊಬ್ಬ ಮುಂದಾದರೆ ನಾನು ಖಂಡಿತ ಬೆಂಬಲಿಸುತ್ತೇನೆ. ನನಗೆ ನನ್ನ ದೇವರನ್ನು ಕಾಣಲು, ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಲು ಮಠಗಳ ಅಗತ್ಯವೇ ಇಲ್ಲ. ಕೆಲವು ಮಠಗಳು ಆಧ್ಯಾತ್ಮಿಕತೆಯ ಹಂಗಿನಿಂದ ಹೊರಬಂದು ಸಾಮಾಜಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಏಕೆ ಬೆಂಬಲ ನೀಡಬಾರದು? ಲಂಚಕೋರರ, ಕೆಟ್ಟು ದುರ್ನಾತ ಬೀರುತ್ತಿರುವ ವ್ಯವಸ್ಥೆಯ ವಿರುದ್ಧ ಇಲ್ಲದ ನನ್ನ ಸಾಮಾಜಿಕ, ರಾಜಕೀಯ ಪ್ರಜ್ಞೆ ಇಲ್ಲಿ ಮಾತ್ರ ಏಕೆ ಜಾಗೃತವಾಗಬೇಕು?
ನಾನು ಮಠಾಧಿಪತಿಗಳ "ಹೆಸರಿನ ಹಂಬಲ, ಜಾತಿ ರಾಜಕಾರಣ, ಅಧಿಕಾರದ ಹಂಬಲ" ಇದ್ಯಾವುದನ್ನೂ ಬೆಂಬಲಿಸುತ್ತಿಲ್ಲ. ಇವೆಲ್ಲವೂ ಖಂಡಿತ ತಪ್ಪು. ಆದರೆ ಅದಕ್ಕಿಂತ ಮೊದಲು ನಾವೇ ಆರಿಸಿ ಕಳಿಸಿದ ನಾಯಕರ, ನಮ್ಮ ಇಂದಿನ ವ್ಯವಸ್ಥೆಯ ಬಗ್ಗೆ ನಮ್ಮ ಪ್ರಜ್ಞೆಯನ್ನು ಹರಿತಗೊಳಿಸಿಕೊಂಡು ಆಗುತ್ತಿರುವ ಅನ್ಯಾಯಗಳನ್ನು ತಡೆಯೋಣ. ಕೇವಲ ಚರ್ಚೆಗಳ ಮೂಲಕ ಅಲ್ಲ, ನಮ್ಮ ಕೃತಿಗಳ ಮೊಲಕ ಕೂಡ. ಆಗ ನಮ್ಮ ಪ್ರಜ್ಞೆ ತಾನಾಗಿಯೇ ಮಠಾಧಿಪತಿಗಳನ್ನೂ, ಅವರಿಂದ ಆಗುತ್ತಿರುವ ಅನ್ಯಾಯಗಳನ್ನೂ "ಅಟ್ಯಾಕ್" ಮಾಡಿಯೇ ಮಾಡುತ್ತದೆ. ಏನಂತೀರಾ?
- ಶ್ಯಾಮ್ ಕಿಶೋರ್