ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...?

January 18, 2007 - 4:41am — Shyam Kishore

ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...?

Shyam Kishore's picture

ವೆಂಕಟೇಶ್‌ರವರೇ,

ಚೆನಾಗಿ ಹೇಳಿದ್ರಿ Smile. ಅದರಲ್ಲೂ ನಿಮ್ಮ ಎರಡನೇ ಸುತ್ತಿನ ಉತ್ತರ ಚೆನ್ನಾಗಿತ್ತು. ಹೌದು, ನಾವೆಲ್ಲ ಚಿಕ್ಕವರಿದ್ದಾಗ ಪ್ರಶ್ನೆ ಕೇಳೋದು ತಪ್ಪು ಅನ್ನೋ ಅಭಿಪ್ರಾಯದಲ್ಲೇ ನೋಡ್ತಾ ಇದ್ದರು. ಈಗೀಗ ಬದಲಾಗ್ತಾ ಇದೆ ಅಂತಿಟ್ಟುಕೊಳ್ಳಿ. ಉತ್ತರ ಸರಿಯಾಗಿ ಇದ್ದಲ್ಲಿ ಯಾವ ಜನರೇಶನ್ ಮಕ್ಕಳೇ ಆಗಲಿ ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತಾರೆ. ಆ ರೀತಿ ಉತ್ತರ ಹೇಳೋದಕ್ಕೆ ಪ್ರಯತ್ನ ಮಾಡಬೇಕು ಅಷ್ಟೇ. ಆದರೆ "ಪ್ರಶ್ನೆಯನ್ನು ಮಾಡುವುದೇ ತಪ್ಪು" ಅಂತನ್ನುವುದು ಸರಿಯಲ್ಲ ಅನ್ನೋದನ್ನು ನಾನೂ ಅನುಮೋದಿಸುತ್ತೀನಿ.

ನಮ್ಮ ಪುರಾಣಗಳನ್ನು, ಕಥೆಗಳನ್ನು ಓದಿದಾಗ, ಅದರಲ್ಲಿ ಬರುವ ಋಷಿಗಳ ಕೋಪ-ತಾಪ-ಶಾಪ, ಇಂದ್ರ ಮೊದಲಾದ ದೇವತೆಗಳ ದ್ವೇಷ-ಅಸೂಯೆಯ ಕಥೆಗಳು ಇವನ್ನೆಲ್ಲ ಓದುತ್ತಾ ಇರುವಾಗ, ನಿಜವಾಗಿಯೂ ಸ್ವಲ್ಪ ಹೊತ್ತು ತಣ್ಣಗೆ ಕೂತು ಯೋಚಿಸಿಬಿಟ್ಟರೆ ಎಷ್ಟು ನಗು ಬರುತ್ತೆ ಅಲ್ವಾ?

ಆದರೆ ಒಂದು ವಿಷಯ: ಇದರಲ್ಲಿ ನಮ್ಮದೂ ತಪ್ಪಿದೆ ಅಂತ ಅನ್ನಿಸುತ್ತೆ. "ದೊಡ್ಡವರು" ಅಂದ ತಕ್ಷಣ ನಾವೇ ಇಲ್ಲದಿರುವ ಗುಣಗಳನ್ನು, "ಹೀಗೇ ಇರಬೇಕು ಅವರು" ಅನ್ನುವ "ಇಮೇಜನ್ನು" ಕಲ್ಪಿಸಿಕೊಂಡು ಸುಮ್ಮನೆ ಒದ್ದಾಡುತ್ತೀವಾ ಅಂತ? ಆ ಮೂಲಕ ಅವರು ಮಾಡಿದ್ದನ್ನೆಲ್ಲ ವೈಭವೀಕರಿಸುತ್ತೀವಾ ಅಂತ. ನಾನು ಪುರಾಣದ ವ್ಯಕ್ತಿಗಳ ಬಗ್ಗೆ ಹೇಳುತ್ತಾ ಇಲ್ಲ. ನಮ್ಮ ನಡುವಿನ ದೊಡ್ಡವರ ಬಗ್ಗೆಯೇ ಹೇಳುತ್ತಿರೋದು. ಅವರೂ ನಮ್ಮ ಹಾಗೇ ಮನುಷ್ಯರು, ಅವರಿಗೂ ರಾಗ-ದ್ವೇಷ-ಅಸಹನೆ-ಕೋಪಗಳು ಇರುತ್ತೆ ಅಂತ ನಾವು ಯಾಕೆ ತಿಳ್ಕೋಬಾರದು? ಅವರು ನಮಗಿಂತ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದನ್ನು ರೂಢಿಸಿಕೊಂಡಿರಬಹುದು,ನಿಜ. ಆದರೆ ಕೊನೆಗೆ ಅವರೂ ಮನುಷ್ಯರೇ ತಾನೇ? ಇದು ಸುಮಾರು ದಿನಗಳಿಂದ ನನ್ನನ್ನು ಕಾಡುತ್ತಾ ಇರೋ ಪ್ರಶ್ನೆ. ನಿಮಗೆ ಏನನ್ನಿಸುತ್ತೆ? ಉದಾಹರಣೆಗೆ ಯಾವುದೇ ದೊಡ್ಡ ವ್ಯಕ್ತಿ "ಸದಾಕಾಲ ನಾನು ಹೀಗೇ ಇರುತ್ತೇನೆ" ಅಂತ ಎಲ್ಲೂ ಹೇಳೋದಿಲ್ಲ. ಪಾಪ, ಅವರೂ ಒಮ್ಮೊಮ್ಮೆ ಆಯಾ ಸನ್ನಿವೇಶಕ್ಕೆ, ಅವರ ನಂಬಿಕೆಗೆ ತಕ್ಕಂತೆ ನಡೆದುಕೊಳ್ಳುತ್ತಾರೇನೋ? ಅದು ಅವರಿಗೆ ಸರಿ ಅನ್ನಿಸಿದ್ದರೂ, ನಾವು "ನಮ್ಮ ಮನಸ್ಸಿನಲ್ಲಿ ಅವರ ಒಂದು ಇಮೇಜ್ ಸೃಷ್ಟಿಸಿಕೊಂಡಿರುತ್ತೀವಲ್ಲ", ಆ ಇಮೇಜ್‌ಗೆ ಧಕ್ಕೆ ಬಂದಂತಾಗಿ ಅದನ್ನು "ಇದು ತಪ್ಪು; ಇಂಥವರೂ ನಮ್ಮ ಹಾಗೆ ಸಾಮಾನ್ಯವಾಗಿ ನಡೆದುಕೊಳ್ಳುವುದೇ?!" ಅಂತ ಒಂದು ನಿರ್ಣಯಕ್ಕೆ ಬಂದುಬಿಡುತ್ತೀವೇನೋ? ಇದರಲ್ಲಿ ಅವರು ಹಾಗೆ ನಡೆದುಕೊಂಡಿದ್ದು ತಪ್ಪೋ, ಅಥವಾ ನಮ್ಮ ಮನಸ್ಸಿನಲ್ಲಿ ಬಂದ ನಿರ್ಣಯ ತಪ್ಪೋ? ನನಗೂ ಗೊತ್ತಿಲ್ಲ. ಏನನ್ನಿಸುತ್ತೆ ಹೇಳಿ. ಇದೊಂದು ರೀತಿಯ "ಸಿಂಡ್ರೋಮ್" ಇರಬಹುದಾ?

"ಸಿಂಡ್ರೋಮ್" ಅಂದ ತಕ್ಷಣ ನೆನಪಾಯಿತು. ಈ ಬಾರಿಯ "ವಿಕ್ರಾಂತ ಕರ್ನಾಟಕ"ದಲ್ಲಿ "ಮಹಾಜನ್ ಸಿಂಡ್ರೋಮ್" ಅಂತ ಒಂದು ಲೇಖನ ಬಂದಿದೆ. ಕೆಲವು ಒಳ್ಳೆಯ ಅಂಶಗಳು ಅದರಲ್ಲಿವೆ. ಸಾಧ್ಯವಾದಲ್ಲಿ ಓದಿ ನೋಡಿ.

ಕಲೆಗಾರರಲ್ಲೂ ಅಷ್ಟೇ ತಾನೇ? ಅವರ ಕಲೆಯನ್ನು ಕೇಳಿದಾಗ/ನೋಡಿದಾಗ ಎಷ್ಟು ದೈವಿಕ ಆನಂದ. ಆದರೆ ಕೆಲವೊಮ್ಮೆ ಅವರ ವೈಯಕ್ತಿಕ ವಿವರಗಳನ್ನು ತಿಳಿದಾಗ "ಅಯ್ಯೋ, ಇಂಥಾ ದೊಡ್ಡ ಕಲಾವಿದ ಹೀಗೆ ಮಾಡಬಹುದಾ?" ಅಂತ ಅನ್ನಿಸುತ್ತೆ ಅಲ್ವಾ? (ಅಂದಹಾಗೆ ಭೈರಪ್ಪನವರ "ಮಂದ್ರ"ದ ಮೂಲ ಶೋಧ ಇದೇನೆ ತಾನೇ) ಆಗ ಆ ಕಲೆಗಾರರನ್ನು ನೀವು ಕೇಳಿದರೆ ಅವರು "ಅದೆಲ್ಲ ನನ್ನ ಪರ್ಸನಲ್. ಬೇಕಾದ್ರೆ ನನ್ನ ಕಲೆಯನ್ನು ಆನಂದಿಸಿ, ಇಲ್ಲಾಂದ್ರೆ ಸುಮ್ಮನಿರಿ. ನನ್ನ ವೈಯಕ್ತಿಕ ವಿಚಾರಕ್ಕೆ ಯಾಕೆ ತಲೆ ಹಾಕ್ತೀರಾ?" ಅಂತ ಕೇಳುತ್ತಾರೇನೋ?

ನನಗನ್ನಿಸುತ್ತೆ ಈ ವಿಷಯದಲ್ಲಿ "ಹಂಸ-ಹಾಲಿನ ನ್ಯಾಯ" ಸರಿಯೇನೋ? ಆದರ್ ಒಂದು ಮಾತ್ರ ನಿಜ; ಯಾವುದೇ ವಿಷಯದಲ್ಲಿ "ದೊಡ್ಡವರು" ಅಂತ ಅನ್ನಿಸಿಕೊಂಡಿರುವವರಲ್ಲಿ ಆ ರೀತಿ ಕಲಿಯೋದಕ್ಕೆ ತುಂಬಾ +ve ಗುಣಗಳು ಇರುತ್ತೆ . At least ಒಂದಾದರೂ ಗುಣ ಇಲ್ಲದೆ ಅವರು ದೊಡ್ಡ ಮಟ್ಟಕ್ಕೆ ಏರೋದಕ್ಕೆ ಸಾಧ್ಯವೇ ಇಲ್ಲ ಅಲ್ವಾ? ಅವರಿಂದ ಒಳ್ಳೆಯದನ್ನು (ನಮಗೆ ಬೇಕಾದ್ದನ್ನು) ಕಲಿತು ಉಳಿದದ್ದನ್ನು ಸುಮ್ಮನೇ ಬಿಟ್ಟರಾಯಿತು. ಅವರಲ್ಲಿ ಯಾವುದು ಒಳ್ಳೆಯದು ಅಂತ ವಿಚಾರ ಮಾಡೋಕೆ ಶುರು ಮಾಡೊದೇ "ಅವರು ಹೇಳಿದ್ದೆಲ್ಲ/ಮಾಡಿದ್ದೆಲ್ಲ ಸರಿ" ಅಂತ ವೈಭವೀಕರಿಸಿ ಒಪ್ಪಿಕೊಳ್ಳುವುದನ್ನೂ ತಪ್ಪಿಸುತ್ತೆ ಅಲ್ಲವೇ?

ನಮ್ಮ ಚಿ.ಉದಯಶಂಕರ್ ಹೇಳಿದಂತೆ "ಹೂವು ಮುಳ್ಳು ಎರಡೂ ಉಂಟು ಬಾಳ ಲತೆಯಲಿ...".

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (23 replies) January 17, 2007 - 2:08pm
  • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 10:50am)
    • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 1:57pm)
      • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 4:00pm)
        • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: smurthygr (Jul 6 2007 - 8:09pm)
  • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 5 2007 - 5:19pm)
    • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 5 2007 - 8:02pm)
      • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 6 2007 - 12:48am)
        • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 6:24am)
  • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: ಸಂಗನಗೌಡ (Jul 5 2007 - 4:06pm)
  • ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: Shyam Kishore (Jan 18 2007 - 4:41am)
    • Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: venkatesh (Jan 18 2007 - 2:05pm)
      • Re: ದೊಡ್ಡವರು By: shreekant.mishrikoti (Jan 18 2007 - 4:00pm)
        • Re: ದೊಡ್ಡವರು By: venkatesh (Jan 19 2007 - 8:09am)
          • ಉ: Re: ದೊಡ್ಡವರು By: ritershivaram (Jul 6 2007 - 10:09am)
          • ಉ: Re: ದೊಡ್ಡವರು By: smurthygr (Jul 4 2007 - 8:40pm)
            • ಉ: Re: ದೊಡ್ಡವರು By: venkatesh (Jul 5 2007 - 7:38am)
        • ಚಪ್ಪಾಳೆ: ದೊಡ್ಡವರು By: Sunil Jayaprakash (Jan 18 2007 - 4:46pm)
          • Re: ಚಪ್ಪಾಳೆ: ದೊಡ್ಡವರು By: venkatesh (Jan 19 2007 - 9:16am)
            • Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: shreekant.mishrikoti (Jan 19 2007 - 11:48am)
              • Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: venkatesh (Jan 19 2007 - 1:32pm)
  • Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: kannadiga_1956 (Jan 17 2007 - 3:23pm)
    • Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jan 17 2007 - 8:34pm)
      • ಟಿಪ್ಪಣಿ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? By: Sunil Jayaprakash (Jan 17 2007 - 10:07pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator