Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
- ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Shyam Kishore (Jan 13 2007 - 10:41am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- ಧನ್ಯವಾದಗಳು By: Yamini (Jan 13 2007 - 5:09pm)
- ಕೆಲವು ಪ್ರಶ್ನೆಗಳು: ಮಠ, ಮಠಾಧಿಪತಿ ಮತ್ತು ನೇತಾರರ ಬಗ್ಗೆ By: Shyam Kishore (Jan 14 2007 - 2:21am)
- Re: ಧನ್ಯವಾದಗಳು By: ಶ್ಯಾಮ ಕಶ್ಯಪ (Jan 14 2007 - 12:17am)
- ಧನ್ಯವಾದಗಳು By: Yamini (Jan 13 2007 - 5:09pm)
- ಪ್ರತಿಕ್ರಿಯೆಗೆ ಜೊತೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Sunil Jayaprakash (Jan 13 2007 - 11:12am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: H.S.R.Raghavendra Rao (Jan 13 2007 - 12:06am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ಸಂಗನಗೌಡ (Jan 12 2007 - 10:01am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ವೈಭವ (Jan 18 2007 - 10:53pm)
- ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ismail (Jan 12 2007 - 4:43pm)
- Re: ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ಸಂಗನಗೌಡ (Jan 17 2007 - 12:19pm)



RSS:
Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ನೀವು ಹೇಳಿರುವುದನ್ನು(ಮಠಗಳು ರಾಜಕೀಯ ಪ್ರಙ್ನೆ ಬೆಳೆಯಲು ಬಿಡುತ್ತಿಲ್ಲ) ನಾನು ಮೊದಮೊದಲು ಒಪ್ಪಿದರೂ
ಅಮೇಲೆ ನನಗೆ ನಾನೆ ತರ್ಕಿಸಿಕೊಂಡಾಗ ಅದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಾಗಲಿಲ್ಲ. ಅದನ್ನು ಒಂದು ಉದಾಹರಣೆಯೊಂದಿಗೆ ವಿವರಿಸಲು ಯತ್ನಿಸುತ್ತೇನೆ.
ಚಾಮರಾಜನಗರ ನಮ್ಮ ರಾಜ್ಯದಲ್ಲಿರುವ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಇಲ್ಲಿ ಅಭಿವೃದ್ದಿಯಿರಲಿ ನಮ್ಮ ಸರ್ಕಾರದ ಯಾವ ಮಂತ್ರಿಯು ( ಮುಖ್ಯಮಂತ್ರಿಯಂತು ಇಲ್ಲವೆ ಇಲ್ಲ ಬಿಡಿ) ಹೋಗುವುದಿಲ್ಲ ಏಕೆಂದರೆ ಅವರು ತಮ್ಮ ಅಧಿಕಾರ ಕಳೆದುಕೊಳ್ಳುತ್ತೇವೆಂಬ ವಿಚಿತ್ರವಾದ ಮೂಢನಂಬಿಕೆ. ಹಾಗಾಗಿ ಇದು ಜಿಲ್ಲಾ ಕೇಂದ್ರವಾಗಿದ್ದರೂ ಅಭಿವೃದ್ಧಿ ಕಾರ್ಯಗಳು ಕೇವಲ ಮರೀಚಿಕೆಯಾಗಿ ಉಳಿದಿದೆ. ಇಷ್ಟಾದರೂ ಇಲ್ಲಿನ ಜನ ಇದರ ವಿರುದ್ಧ ದಿನವೂ ಪ್ರತಿಭಟನೆ ಮಾಡುತ್ತಲೆ ಇದ್ದಾರೆ. ಇಂತಹ ಹಿಂದುಳಿದ ಪ್ರದೇಶದಲ್ಲೂ ಈ ಭಾಗದ ಪ್ರಸಿದ್ಧ ಮಠ(ಗಳು) ಇಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದಲ್ಲದೆ ತನ್ನ ಮಿತಿಯೊಳಗೆ ಮಾಡಬಹುದಾದ ಇನ್ನಿತರ ಸಮಾಜಮುಖಿಯಂಥ ಕೆಲಸಗಳನ್ನು ಮಾಡುತ್ತಾ ಬಂದಿದೆ. ಆಂದರೆ ಇಲ್ಲಿ ಪ್ರಜೆಗಳಿಂದಲೆ ಚುನಾಯಿತವಾದ ಸರ್ಕಾರ ಈ ಭಾಗವನ್ನು ಕಡೆಗಣಿಸಿದ್ದರೂ ಆ ಭಾಗದಲ್ಲೆ ಮಠಗಳು ಸಮಾಜವನ್ನು ಮೇಲೆತ್ತುವಲ್ಲಿ ನಿರತವಾಗಿದೆ. ಇಷ್ಟಾದರೂ ಇಲ್ಲಿನ ಜನ, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ದಿನವೂ ಪ್ರತಿಭಟನೆ ಮಾಡುತ್ತಲೆ ಇದ್ದಾರೆ. ಅಂದ ಮೇಲೆ ಮಠಗಳು ರಾಜಕೀಯ ಪ್ರಙ್ನೆ ಬೆಳೆಯಲು ಬಿಡುತ್ತಿಲ್ಲ ಎಂದರೆ ಒಪ್ಪಿಕೊಳ್ಳಬಹುದೆ ?
೧೯೨೬ ರಲ್ಲಿ ಮೈಸೂರು- ಚಾ.ನಗರ(ಮೈಸೂರು- ನಂಜನಗೂಡು ಮಾರ್ಗ ೧೮೯೫ ರಲ್ಲೆ ಮಾಡಲಾಗಿತ್ತು) ಕ್ಕೆ ಮೀಟರ ಗೇಜ್ ರೈಲು ಮಾರ್ಗ ಮಾಡಲಾಯಿತು. ಈಗ ಅಂದರೆ ೨೦೦೭ ರಲ್ಲಿ ಇದನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಅಂದರೆ ನಮ್ಮ ಸರ್ಕಾರದಿಂದ ಆಗಬೇಕಾದ ಈ ಕೆಲಸಕ್ಕೆ ಒಂದು ಶತಮಾನವೆ ಬೇಕಾಯಿತು. ಹಾಗದರೆ ನಾವು ಸರಕಾರದಿಂದಲೆ ಎಲ್ಲ ಕೆಲಸಗಳು ನಡೆಯುತ್ತವೆ ಎಂದು ಒಪ್ಪಿಕೊಳ್ಳುವುದು ಎಷ್ಟರ ಮಟ್ಟಿಗೆ ಪ್ರಾಕ್ಟಿಕಲ್ ? ಹಾಗಾದರೆ ಒಂದು ಮಠದ ಸಾಮುದಾಯಿಕ ಸೇವೆ (ಕಮ್ಯೂನಿಟಿ ಸರ್ವಿಸ್) ಯಿಂದ ಸಮಾಜಕ್ಕೆ ಒಳ್ಳೆಯದಾದರೆ ನಾವು ಏಕೆ ಅದನ್ನು ಹೊಗಳದೆ ಹೋದರೂ ಪರವಾಗಿಲ್ಲ ಒಪ್ಪಿಕೊಳ್ಳಬಾರ್ದಾ?
ಇನ್ನು ಕೆಲವು ಮಠಗಳು ಗೋ ತಳಿಗಳ ಸಂರಕ್ಷಣೆ(ಶಿವಮೊಗ್ಗ ಜಿಲ್ಲೆಗೆ), 'ಮೂಢನಂಬಿಕೆ' ತೊಲಗಿಸುವುದು(ಚಿತ್ರದುರ್ಗಕ್ಕೆ ಭೇಟಿ ಕೊಡಿ) ಮತ್ತು ಗ್ರಾಮೀಣ(ಗುಡಿ) ಕೈಗಾರಿಕೆಗಳನ್ನು ನಡೆಸಲು ಪ್ರೋತ್ಸಾಹಿಸುವುದು( ದ.ಕ. ಜಿಲ್ಲೆಗೆ ಭೇಟಿ ಕೊಡಿ), ಇಂಥ ಒಳ್ಳೊಳ್ಳೆ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ನಮ್ಮ ಸರ್ಕಾರಗಳೆ ಇವುನ್ನೆಲ್ಲ ಮಾಡಿದ್ದರೆ ಮಠಗಳಿಗೆ ಇವುನ್ನ ಮಾಡಲು ಅವಕಾಶವೆ ಇರುತ್ತಿರಲಿಲ್ಲ. ಈಗಲು 'ದಾಸೋಹ' ದಂತಹ(ಙ್ನಾನ, ಅನ್ನ, ಅಕ್ಷರ) ಉತ್ತಮ ಸಂಸ್ಕೃತಿ ಉಳಿದಿರುವುದು ಈ ನಮ್ಮ ಮಠಗಳಲ್ಲಿ ಅಂದರೆ ರಾಜಕೀಯವಾಗಿ ನಾವು ಏನನ್ನು ಸಾಧಿಸಲು ಸಾಧ್ಯವಾಗಿಲ್ಲವೊ ಅಲ್ಲಿ ಮಠಗಳು ತಮ್ಮನ್ನು ಗುರುತಿಸಿಕೊಂಡಿವೆ.
ಇನ್ನೊಂದು ವಿಚಾರ ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು ....ನಮ್ಮಲ್ಲಿ ಎರಡು ಪಂಥದ ಮಠಗಳಿವೆ.. ಒಂದು ವಿರಕ್ತ ಮಠ, ಇನ್ನೊಂದು ಪಟ್ಟದ ಮಠ.
ಪಟ್ಟದ ಮಠಗಳನ್ನು ನಾವು ಆಧ್ಯಾತ್ಮ ಕೇಂದ್ರಗಳನ್ನಾಗಿ ಪರಿಗಣಿಸಬಾರದು. ಇಂದಿಗೂ ಹಲವು ವಿರಕ್ತ ಮಠಗಳು ಆಧ್ಯಾತ್ಮವನ್ನೆ ಧ್ಯೇಯವನ್ನಾಗಿಸಿಕೊಂಡಿದೆ.
ಪಟ್ಟದ ಮಠಗಳನ್ನು ನಾವು ಒಂದು ಖಾಸಗಿ ಸಂಸ್ಥೆಯಂತೆ ಪರಿಗಣಿಸಬೇಕು ಹಾಗು ಆ ಮಠಾಧೀಶ ಆ ಸಂಸ್ಥೆಯ ಮುಖ್ಯಸ್ಥ ಅಷ್ಟೆ. ಇದನ್ನು ನಮ್ಮ ಜನರು ಅರಿಯಬೇಕು. ಖಾಸಗಿ ಸಂಸ್ಥೆಗಳು ಸ್ವಲ್ಪವಾದರೂ ಲಾಭಕ್ಕಾಗೇ ನಡೆಯುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರವೆ.
ಇನ್ನು ಮಠಗಳು ಜಾತಿ ರಾಜಕಾರಣ ಮಾಡುತ್ತವೆ ಎಂದು ದೂಷಿಸುತ್ತೇವೆ ಆದರೆ ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕ ಸತ್ಯ ಎಂದು ಯೋಚಿಸಬೇಕಾಗುತ್ತದೆ. ಏಕೆಂದರೆ ಮಠಾಧೀಶರು ರಾಜಕೀಯ ಮಾಡಿದರೆ ಖಂಡಿತ ಜನರು ಒಪ್ಪುವುದಿಲ್ಲ( ಇದನ್ನು ನಾನೆ ಕಣ್ಣಾರೆ ಗಮನಿಸಿದ್ದೇನೆ). ಅವರು ಗಳಿಸುವ ಗೌರವವನ್ನು ಕಳೆದುಕೊಳ್ಳುತ್ತಾರೆ ಏಕೆಂದರೆ ಈವತ್ತಿನ ರಾಜಕೀಯ ಎಷ್ಟು ಕೊಳಕಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಮ್ಮ ಕೆಲವು ಮುಖಂಡರು ಆ ಜಾತಿಯ ಮಠಾಧೀಶರನ್ನು ಭೇಟಿಯನ್ನು ಮಾಡಿದರೆ ಆ ಜಾತಿಯ ಮತಗಳನ್ನೆಲ್ಲ ಪಡೆಯಬಹುದು ಎಂಬ ಹುಚ್ಚು ಕಲ್ಪನೆಯಿದೆ. ಅದನ್ನೆ ಪತ್ರಿಕೆಗಳೂ ಕೂಡ ಬಿಂಬಿಸುತ್ತವೆ. ಈ ರಾಜಕಾರಣಿಗಳು ಈ ಹುಚ್ಚು ಕಲ್ಪನೆಯಿಂದ ಹೊಸ ಮಠಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಹುಟ್ಟು ಹಾಕುತ್ತಿದ್ದಾರೆ. ಇದು ನಮ್ಮ ರಾಜಕೀಯದ ದೊಡ್ಡ ದುರಂತ ಹಾಗು ಅಪಾಯಕಾರಿ ಬೆಳವಣಿಗೆ. ಇದನ್ನು ಖಂಡಿತ ನಾವು ಖಂಡಿಸಲೇಬೇಕು.
ನಾವು ಸೂಚ್ಯ ಸತ್ಯಗಳನ್ನು(ಇಂಪ್ಲೈಡ್ ಟ್ರೂತ್) ಒಪ್ಪುವ ಮೊದಲು ಅದನ್ನು ವಾಸ್ತವಿಕತೆಯೆಂಬ ಮಸೂರದಿಂದ ನೋಡುವುದು ಸೂಕ್ತವಲ್ಲವೆ?
-ಜೈ ಕರ್ನಾಟಕ