ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ
- ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ By: Shyam Kishore (Jan 19 2007 - 2:43pm)
- ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: Sunil Jayaprakash (Jan 19 2007 - 9:22pm)
- Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: srivathsajoshi (Jan 20 2007 - 12:21am)
- ಉ: Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: Shyam Kishore (Jan 20 2007 - 3:29am)
- Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: srivathsajoshi (Jan 20 2007 - 12:21am)
- ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: Sunil Jayaprakash (Jan 19 2007 - 9:22pm)


RSS:
ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ
ಸುನಿಲ್,
ಚರ್ಚೆಯ ವಿಷಯ ಓದಿದೆ. ಉತ್ತರವನ್ನು ನನಗೆ ಹೊಳೆದಾಗ, ಮತ್ತು ಮನಸ್ಸಿನಲ್ಲಿ ಹರಳುಗಟ್ಟಿದಾಗ, ಮತ್ತೆ ಬರೆಯುತ್ತೀನಿ. "ಸಂತೆಯಲ್ಲ್ಲಿಕೂತು ಮೂರು ಮೊಳ ನೇಯ್ದಂತೆ" ಆಗೋದು ಬೇಡ ನೋಡಿ.
ಆದರೆ ಚರ್ಚೆಯ ವಿಷಯವನ್ನು ಸುಮ್ಮನೇ ಒಂದು ಪ್ರಬಂಧದ ರೀತಿ ಓದಿದಾಗ ಮನಸ್ಸಿನಲ್ಲಿ ಕೆಲವು ಅನಿಸಿಕೆಗಳು ಬಂದವು. ಬರೆಯಲೇಬೇಕು ಅಂತ ಅನ್ನಿಸುತ್ತಿದೆ. ಬರೀತಿದ್ದೀನಿ. ವೈಯಕ್ತಿಕ ಟೀಕೆ ಅಂತ ತಿಳ್ಕೋಬೇಡೀಪ್ಪ. ಹಾಗನಿಸಿದಲ್ಲಿ ನನಗೊಂದು "ವೈಯಕ್ತಿಕ ಸಂದೇಶ" ಕಳುಹಿಸಿ, ಸರಿಯಾಗಿ ಬಯ್ದು ಬಿಡಿ! ನಾನು ಬರೆದಿರುವ ಅನಿಸಿಕೆಯೆಲ್ಲ, ಚರ್ಚೆಯ ವಿಷಯಕ್ಕೆ ನನ್ನ ಉತ್ತರ ಅಲ್ಲವೇ ಅಲ್ಲ ಅಂತ ಮೊದಲಿಗೇ ಹೇಳುತ್ತೀನಿ. ಇದೊಂದು ರೀತಿಯ "on a lighter note" ತರಹ.
೧. ಯಾಕೋ ಸ್ವಲ್ಪ "ಋಣಾತ್ಮಕ ಧೋರಣೆ" ಇಣುಕಿದಂತಿದೆಯಲ್ಲ? ಆ ರೀತಿಯ ಚಿಂತನೆ ಖಂಡಿತ ಬೇಡ. ಬೇಕಾದವರು ಖಂಡಿತ ಭಾಗವಹಿಸುತ್ತಾರೆ. ನಿಮಗನ್ನಿಸಿದ್ದನ್ನು "ಹಾಡುವುದು ಅನಿವಾರ್ಯ ಕರ್ಮ ಎನಗೆ" ಎಂಬಂತೆ, ಆದರೆ "ಎದೆ ತುಂಬಿ" ಹಾಡಿ! ಉಳಿದದ್ದು ನಿಮ್ಮ ಕೈಯಲ್ಲಿಲ್ಲ್ಲ(ಕೇವಲ ನಿಮಗೆ ಅಂತಲ್ಲ, ನನಗೂ ಕೂಡ ಅನ್ವಯಿಸಿಕೊಂಡು). ಅದೂ ಅಲ್ಲದೇ ಯಾವ ಚರ್ಚೆಯಲ್ಲಿ ಭಾಗವಹಿಸಬೇಕು, ಬೇಡ ಅನ್ನೋದು ಅವರವರಿಗೆ ಸೇರಿದ್ದು ತಾನೇ? ಅದರಲ್ಲಿ ಯಾರೂ ಮೂಗು ತೂರಿಸುವಂತಿಲ್ಲ. ತೂರಿಸಿದಲ್ಲಿ ಗಾಯಗೊಳ್ಳುವುದು ನಮ್ಮ ಮೂಗೇ ಅಲ್ಲವೇ?
೨.
ಯಾಕೆ ಯಾರೇ ಆದರೂ ಕೂಡ "ನಾನು ಅವರಲ್ಲ" ಅಂತ ಯೋಚಿಸಬೇಕು? ಎಲ್ಲವನ್ನೂ "ಅವರೇ" ಹೇಳಬೇಕು, ಆಗಲೇ ಅಭಿಪ್ರಾಯಕ್ಕೆ ತೂಕ ಅಂದಲ್ಲಿ, ನಾವು ನಾವಾಗಿ, ವಿಭಿನ್ನವಾಗಿ ಹೇಳೋ ಪ್ರಮೇಯವೇ ಬರೋದಿಲ್ಲ ಅಲ್ಲವೇ? ಬೇಡಪ್ಪ, ನೀವು ನೀವಾಗಿಯೇ ಹೇಳಿ; ನಾನು ನಾನಾಗಿಯೇ ಹೇಳುತ್ತೀನಿ;ಇನ್ನೊಬ್ಬರು ಅವರಾಗಿಯೇ ಹೇಳಲಿ. ನಮ್ಮ ಮಾತುಗಳನ್ನು ನಮ್ಮದಾಗಿಯೇ ಕೇಳಿಸಿಕೊಂಡಲ್ಲಿ ಮಾತ್ರ ಮಾತಾಡಿದ್ದೂ ಸಾರ್ಥಕ.
ಇಲ್ಲ ಅಂದರೆ (ನಮ್ಮ ಮಾತಿಗೆ ಬೆಲೆಯಿಲ್ಲ ಅಂದರೆ) ಮಾತಾಡದೇ ಇರೋ ಜಾಣತನ ಕಲಿಯಬೇಕು. ನೀವೇನಂತೀರಾ? ಮರೆಯದೇ ತಿಳಿಸಿ.
೩.
ಸುನಿಲ್, ದಯವಿಟ್ಟು ಕ್ಷಮಿಸಿ; ನನಗೆ ಈ ಒಂದು ಅಂಶ ಅರ್ಥ ಆಗುತ್ತಲೇ ಇಲ್ಲ! ಇನ್ನೊಂದು ಭಾಷೆಯನ್ನು ಅಲ್ಲಗಳೆಯುವುದರಿಂದ ಮಾತ್ರ ನಮ್ಮ ಭಾಷೆ ದೊಡ್ಡದಾಗಬೇಕೆ. ನನ್ನ ಸ್ನೇಹಿತರ ಜತೆ ಕೂಡ ಈ ಬಗ್ಗೆ ಚರ್ಚಿಸಿದ್ದೇನೆ. ನಮ್ಮ ಚರ್ಚೆಯ ವಿಷಯ ಆಗೆಲ್ಲ "ತಮಿಳು ಪುರಾತನವೋ, ಕನ್ನಡವೋ...", ಹೀಗೆ ಈ ಧಾಟಿಯಲ್ಲಿ. ನನ್ನ ಅನಿಸಿಕೆ ಇಷ್ಟೇ: ಇನ್ನೊಂದು ಭಾಷೆಗಿಂತ ಪುರಾತನವಾದಲ್ಲಿ ಮಾತ್ರ ನಮ್ಮ ಕನ್ನಡಕ್ಕೆ "ಗರಿ ಮೂಡುತ್ತೆ" ಅನ್ನೋದನ್ನು ನಾನು ಒಪ್ಪೋಲ್ಲ. ನಾನು ಕನ್ನಡವನ್ನು "ಹಚ್ಚಿಕೊಳ್ಳೋಕೆ", ಇಷ್ಟಪಡೋದಕ್ಕೆ, ನನಗೆ ಅದನ್ನು ಇನ್ನೊಂದು ಭಾಷೆಯ ಜತೆ ಹೋಲಿಸಿ, ತೂಗಿ, prove ಮಾಡಬೇಕಿಲ್ಲ. ಹಾಗೆಯೇ ಇಲ್ಲಿ ಕೂಡ. ನನ್ನ ವಿನಂತಿ ಇಷ್ಟೇ: ಕನ್ನಡವನ್ನು ಹೊಗಳೋಣ, ಚರ್ಚಿಸೋಣ. ಆದರೆ ಆ ಧಾವಂತದಲ್ಲಿ ಇನ್ನೊಂದು ಭಾಷೆಯನ್ನು ಹಂಗಿಸುವುದು ಬೇಡ. ಆ ಇನ್ನೊಂದು ಭಾಷೆ ಇಂಗ್ಲಿಷ್ ಇರಬಹುದು, ಸಂಸ್ಕೃತ ಇರಬಹುದು ಅಥವಾ ತಮಿಳೋ, ತೆಲುಗೋ, ಯಾವುದಾದರೂ ಸರಿ. ಅದು ನಮಗೇ ಅಷ್ಟು ಹಿತಕರವಲ್ಲ ಅಲ್ಲವೇ? ಏನಂತೀರಾ? ನಾನು ಸಂಸ್ಕೃತ ಪಂಡಿತನೂ ಅಲ್ಲ, ಕಟ್ಟಾ ಸಂಸ್ಕೃತ ಅಭಿಮಾನಿಯೂ ಅಲ್ಲ. ಆದರೆ ಇದೊಂದು ರೀತಿ, "ನಮ್ಮಮ್ಮ ದೊಡ್ಡವಳು ಅಂತ ತೋರಿಸೋಕೆ ನಿಮ್ಮಮ್ಮನನ್ನು ಚಿಕ್ಕವಳಾಗಿ ಮಾಡಬೇಕು, ಹಂಗಿಸಬೇಕು" ಅನ್ನೋ ಥರ ಆಯಿತು. ಅಮ್ಮ ಅಂದಮೇಲೆ, ಯಾರಿಗೋ ಅಮ್ಮನೇ ತಾನೇ? ಹತ್ತು ಮಕ್ಕಳಿಗೆ ಅಮ್ಮ ಆದರೇನು, ಸಾವಿರ ಮಕ್ಕಳಿಗೆ ಅಮ್ಮ ಆದರೇನು? ಬಳಸದೇ ಹೋದಲ್ಲಿ ಯಾವ ಭಾಷೆಯೇ ಆದರೂ ಖಂಡಿತ "ಮೃತ ಭಾಷೆ" ಆಗುತ್ತೆ. ಇದು ಸತ್ಯ. ನಾಳೆ ನನ್ನ ಮಗ/ಮಗಳು ಕನ್ನಡಕ್ಕೆ ಹಾಗಂತ (ಸತ್ತ ಭಾಷೆ) ಅಂದ್ರೆ ಕೂರಿಸಿಕೊಂಡು "ಹಾಗೆ ಅನ್ನೋದು ತಪ್ಪು. ಕನ್ನಡ ಹಾಗಾಗೋಕೆ ಕಾರಣ ನೀವು. ಅದನ್ನು ಬಳಸಿ, ಆಮೇಲೆ ಮಾತನಾಡಿ" ಅಂತ ತಿಳಿ ಹೇಳುತ್ತೀನಿ. ಸರಿ ತಾನೇ?
ಇವು ಓದಿದ ತಕ್ಷಣ ಅನ್ನಿಸಿದ್ದು. ಇನ್ನು ಚರ್ಚೆಯ ನಿಜವಾದ ವಿಷಯದ ಬಗ್ಗೆ, ಮತ್ತೊಮ್ಮೆ ಮಾತಾಡೋಣ!
- ಶ್ಯಾಮ್ ಕಿಶೋರ್