ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ

January 19, 2007 - 2:43pm — Shyam Kishore

ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ

Shyam Kishore's picture

ಸುನಿಲ್,

ಚರ್ಚೆಯ ವಿಷಯ ಓದಿದೆ. ಉತ್ತರವನ್ನು ನನಗೆ ಹೊಳೆದಾಗ, ಮತ್ತು ಮನಸ್ಸಿನಲ್ಲಿ ಹರಳುಗಟ್ಟಿದಾಗ, ಮತ್ತೆ ಬರೆಯುತ್ತೀನಿ. "ಸಂತೆಯಲ್ಲ್ಲಿಕೂತು ಮೂರು ಮೊಳ ನೇಯ್ದಂತೆ" ಆಗೋದು ಬೇಡ ನೋಡಿ. Wink

ಆದರೆ ಚರ್ಚೆಯ ವಿಷಯವನ್ನು ಸುಮ್ಮನೇ ಒಂದು ಪ್ರಬಂಧದ ರೀತಿ ಓದಿದಾಗ ಮನಸ್ಸಿನಲ್ಲಿ ಕೆಲವು ಅನಿಸಿಕೆಗಳು ಬಂದವು. ಬರೆಯಲೇಬೇಕು ಅಂತ ಅನ್ನಿಸುತ್ತಿದೆ. ಬರೀತಿದ್ದೀನಿ. ವೈಯಕ್ತಿಕ ಟೀಕೆ ಅಂತ ತಿಳ್ಕೋಬೇಡೀಪ್ಪ. ಹಾಗನಿಸಿದಲ್ಲಿ ನನಗೊಂದು "ವೈಯಕ್ತಿಕ ಸಂದೇಶ" ಕಳುಹಿಸಿ, ಸರಿಯಾಗಿ ಬಯ್ದು ಬಿಡಿ! ನಾನು ಬರೆದಿರುವ ಅನಿಸಿಕೆಯೆಲ್ಲ, ಚರ್ಚೆಯ ವಿಷಯಕ್ಕೆ ನನ್ನ ಉತ್ತರ ಅಲ್ಲವೇ ಅಲ್ಲ ಅಂತ ಮೊದಲಿಗೇ ಹೇಳುತ್ತೀನಿ. ಇದೊಂದು ರೀತಿಯ "on a lighter note" ತರಹ.

೧. ಯಾಕೋ ಸ್ವಲ್ಪ "ಋಣಾತ್ಮಕ ಧೋರಣೆ" ಇಣುಕಿದಂತಿದೆಯಲ್ಲ? ಆ ರೀತಿಯ ಚಿಂತನೆ ಖಂಡಿತ ಬೇಡ. ಬೇಕಾದವರು ಖಂಡಿತ ಭಾಗವಹಿಸುತ್ತಾರೆ. ನಿಮಗನ್ನಿಸಿದ್ದನ್ನು "ಹಾಡುವುದು ಅನಿವಾರ್ಯ ಕರ್ಮ ಎನಗೆ" ಎಂಬಂತೆ, ಆದರೆ "ಎದೆ ತುಂಬಿ" ಹಾಡಿ! ಉಳಿದದ್ದು ನಿಮ್ಮ ಕೈಯಲ್ಲಿಲ್ಲ್ಲ(ಕೇವಲ ನಿಮಗೆ ಅಂತಲ್ಲ, ನನಗೂ ಕೂಡ ಅನ್ವಯಿಸಿಕೊಂಡು). ಅದೂ ಅಲ್ಲದೇ ಯಾವ ಚರ್ಚೆಯಲ್ಲಿ ಭಾಗವಹಿಸಬೇಕು, ಬೇಡ ಅನ್ನೋದು ಅವರವರಿಗೆ ಸೇರಿದ್ದು ತಾನೇ? ಅದರಲ್ಲಿ ಯಾರೂ ಮೂಗು ತೂರಿಸುವಂತಿಲ್ಲ. ತೂರಿಸಿದಲ್ಲಿ ಗಾಯಗೊಳ್ಳುವುದು ನಮ್ಮ ಮೂಗೇ ಅಲ್ಲವೇ? Laughing

೨.

ಸುನಿಲ್ ಜಯಪ್ರಕಾಶ್ wrote:
ಈ ಲೇಖನ ಒಂದು ರೀತಿ ಪವನಜರು "ನಾನು ಅನಂತಮೂರ್ತಿಯಲ್ಲವಲ್ಲ..ಆದ್ದರಿಂದ.." ಎಂದು ಹೇಳಿದ ಹಾಗೆಯೇ, ಈ ಪಾಮರನ ಮಾತುಗಳೂ ಆಗುತ್ತದೆಯೋ ಏನೋ ಎಂಬು ಗುಮಾನಿ ನನ್ನದು.
.

ಯಾಕೆ ಯಾರೇ ಆದರೂ ಕೂಡ "ನಾನು ಅವರಲ್ಲ" ಅಂತ ಯೋಚಿಸಬೇಕು? ಎಲ್ಲವನ್ನೂ "ಅವರೇ" ಹೇಳಬೇಕು, ಆಗಲೇ ಅಭಿಪ್ರಾಯಕ್ಕೆ ತೂಕ ಅಂದಲ್ಲಿ, ನಾವು ನಾವಾಗಿ, ವಿಭಿನ್ನವಾಗಿ ಹೇಳೋ ಪ್ರಮೇಯವೇ ಬರೋದಿಲ್ಲ ಅಲ್ಲವೇ? ಬೇಡಪ್ಪ, ನೀವು ನೀವಾಗಿಯೇ ಹೇಳಿ; ನಾನು ನಾನಾಗಿಯೇ ಹೇಳುತ್ತೀನಿ;ಇನ್ನೊಬ್ಬರು ಅವರಾಗಿಯೇ ಹೇಳಲಿ. ನಮ್ಮ ಮಾತುಗಳನ್ನು ನಮ್ಮದಾಗಿಯೇ ಕೇಳಿಸಿಕೊಂಡಲ್ಲಿ ಮಾತ್ರ ಮಾತಾಡಿದ್ದೂ ಸಾರ್ಥಕ.Wink ಇಲ್ಲ ಅಂದರೆ (ನಮ್ಮ ಮಾತಿಗೆ ಬೆಲೆಯಿಲ್ಲ ಅಂದರೆ) ಮಾತಾಡದೇ ಇರೋ ಜಾಣತನ ಕಲಿಯಬೇಕು. ನೀವೇನಂತೀರಾ? ಮರೆಯದೇ ತಿಳಿಸಿ.

೩.

ಸುನಿಲ್ ಜಯಪ್ರಕಾಶ್ wrote:
ನಂತರ ದೇವಭಾಷೆಯಾಗಿ, ಬದುಕಿನ ಸಾರ್ಥಕ ಪಥದಲ್ಲಿ ನಡೆದು, ಕೊನೆಗೆ ಸತ್ತು ಸ್ವರ್ಗವನ್ನು(ಹೌದು, ಸತ್ತ ಮೇಲೆ ತಾನೇ ಸ್ವರ್ಗ Eye-wink ) ಸೇರಿ...

ಸುನಿಲ್, ದಯವಿಟ್ಟು ಕ್ಷಮಿಸಿ; ನನಗೆ ಈ ಒಂದು ಅಂಶ ಅರ್ಥ ಆಗುತ್ತಲೇ ಇಲ್ಲ! ಇನ್ನೊಂದು ಭಾಷೆಯನ್ನು ಅಲ್ಲಗಳೆಯುವುದರಿಂದ ಮಾತ್ರ ನಮ್ಮ ಭಾಷೆ ದೊಡ್ಡದಾಗಬೇಕೆ. ನನ್ನ ಸ್ನೇಹಿತರ ಜತೆ ಕೂಡ ಈ ಬಗ್ಗೆ ಚರ್ಚಿಸಿದ್ದೇನೆ. ನಮ್ಮ ಚರ್ಚೆಯ ವಿಷಯ ಆಗೆಲ್ಲ "ತಮಿಳು ಪುರಾತನವೋ, ಕನ್ನಡವೋ...", ಹೀಗೆ ಈ ಧಾಟಿಯಲ್ಲಿ. ನನ್ನ ಅನಿಸಿಕೆ ಇಷ್ಟೇ: ಇನ್ನೊಂದು ಭಾಷೆಗಿಂತ ಪುರಾತನವಾದಲ್ಲಿ ಮಾತ್ರ ನಮ್ಮ ಕನ್ನಡಕ್ಕೆ "ಗರಿ ಮೂಡುತ್ತೆ" ಅನ್ನೋದನ್ನು ನಾನು ಒಪ್ಪೋಲ್ಲ. ನಾನು ಕನ್ನಡವನ್ನು "ಹಚ್ಚಿಕೊಳ್ಳೋಕೆ", ಇಷ್ಟಪಡೋದಕ್ಕೆ, ನನಗೆ ಅದನ್ನು ಇನ್ನೊಂದು ಭಾಷೆಯ ಜತೆ ಹೋಲಿಸಿ, ತೂಗಿ, prove ಮಾಡಬೇಕಿಲ್ಲ. ಹಾಗೆಯೇ ಇಲ್ಲಿ ಕೂಡ. ನನ್ನ ವಿನಂತಿ ಇಷ್ಟೇ: ಕನ್ನಡವನ್ನು ಹೊಗಳೋಣ, ಚರ್ಚಿಸೋಣ. ಆದರೆ ಆ ಧಾವಂತದಲ್ಲಿ ಇನ್ನೊಂದು ಭಾಷೆಯನ್ನು ಹಂಗಿಸುವುದು ಬೇಡ. ಆ ಇನ್ನೊಂದು ಭಾಷೆ ಇಂಗ್ಲಿಷ್ ಇರಬಹುದು, ಸಂಸ್ಕೃತ ಇರಬಹುದು ಅಥವಾ ತಮಿಳೋ, ತೆಲುಗೋ, ಯಾವುದಾದರೂ ಸರಿ. ಅದು ನಮಗೇ ಅಷ್ಟು ಹಿತಕರವಲ್ಲ ಅಲ್ಲವೇ? ಏನಂತೀರಾ? ನಾನು ಸಂಸ್ಕೃತ ಪಂಡಿತನೂ ಅಲ್ಲ, ಕಟ್ಟಾ ಸಂಸ್ಕೃತ ಅಭಿಮಾನಿಯೂ ಅಲ್ಲ. ಆದರೆ ಇದೊಂದು ರೀತಿ, "ನಮ್ಮಮ್ಮ ದೊಡ್ಡವಳು ಅಂತ ತೋರಿಸೋಕೆ ನಿಮ್ಮಮ್ಮನನ್ನು ಚಿಕ್ಕವಳಾಗಿ ಮಾಡಬೇಕು, ಹಂಗಿಸಬೇಕು" ಅನ್ನೋ ಥರ ಆಯಿತು. ಅಮ್ಮ ಅಂದಮೇಲೆ, ಯಾರಿಗೋ ಅಮ್ಮನೇ ತಾನೇ? ಹತ್ತು ಮಕ್ಕಳಿಗೆ ಅಮ್ಮ ಆದರೇನು, ಸಾವಿರ ಮಕ್ಕಳಿಗೆ ಅಮ್ಮ ಆದರೇನು? ಬಳಸದೇ ಹೋದಲ್ಲಿ ಯಾವ ಭಾಷೆಯೇ ಆದರೂ ಖಂಡಿತ "ಮೃತ ಭಾಷೆ" ಆಗುತ್ತೆ. ಇದು ಸತ್ಯ. ನಾಳೆ ನನ್ನ ಮಗ/ಮಗಳು ಕನ್ನಡಕ್ಕೆ ಹಾಗಂತ (ಸತ್ತ ಭಾಷೆ) ಅಂದ್ರೆ ಕೂರಿಸಿಕೊಂಡು "ಹಾಗೆ ಅನ್ನೋದು ತಪ್ಪು. ಕನ್ನಡ ಹಾಗಾಗೋಕೆ ಕಾರಣ ನೀವು. ಅದನ್ನು ಬಳಸಿ, ಆಮೇಲೆ ಮಾತನಾಡಿ" ಅಂತ ತಿಳಿ ಹೇಳುತ್ತೀನಿ. ಸರಿ ತಾನೇ?

ಇವು ಓದಿದ ತಕ್ಷಣ ಅನ್ನಿಸಿದ್ದು. ಇನ್ನು ಚರ್ಚೆಯ ನಿಜವಾದ ವಿಷಯದ ಬಗ್ಗೆ, ಮತ್ತೊಮ್ಮೆ ಮಾತಾಡೋಣ!

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ By: Sunil Jayaprakash (4 replies) January 19, 2007 - 12:09pm
  • ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ By: Shyam Kishore (Jan 19 2007 - 2:43pm)
    • ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: Sunil Jayaprakash (Jan 19 2007 - 9:22pm)
      • Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: srivathsajoshi (Jan 20 2007 - 12:21am)
        • ಉ: Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: Shyam Kishore (Jan 20 2007 - 3:29am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator