ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು......

January 19, 2007 - 9:22pm — Sunil Jayaprakash

ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು......

Sunil Jayaprakash's picture

ಶ್ಯಾಮ್ ಕಿಶೋರ್,

ನಿಮ್ಮ ಪ್ರತಿಕ್ರಿಯೆಯನ್ನು ನನ್ನ ಗೂಗಲ್ ರೀಡರ್ನಲ್ಲಿ ಮಧ್ಯಾಹ್ನವೇ ಓದಿದೆ. ನಿಜಕ್ಕೂ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ ಸಂತೋಷವಾಯಿತು. ಕೆಲಸದ ಒತ್ತಡದಲ್ಲಿದ್ದುದರಿಂದ (ನಮ್ಮ ಸಹೋದ್ಯೋಗಿ, ಈಗಷ್ಟೇ ಪ್ಲೇನ್ ಹತ್ತಿಯಾಯಿತು) ನೀವು ಮೊದಲು ಮಾಡಿದ ಮಾತುಗಳು ಮತ್ತು ಪ್ರಶ್ನೆಗಳಿಗೆ ನನ್ನ ಮಾತುಗಳನ್ನು ಸೇರಿಸಲಾಗಲಿಲ್ಲ.

Shyam Kishore wrote:
ವೈಯಕ್ತಿಕ ಟೀಕೆ ಅಂತ ತಿಳ್ಕೋಬೇಡೀಪ್ಪ

ಖಂಡಿತವಾಗಿಯೂ ನಿಮ್ಮ ಟಿಪ್ಪಣಿಗಳನ್ನು ವೈಯಕ್ತಿಕ ಟೀಕೆಯೆಂದು ನಾನು ಭಾವಿಸಲಿಲ್ಲ. ಇದರ ಬಗ್ಗೆ ಎಳ್ಳಷ್ಟೂ ಸಂಶಯ ಬೇಡ.

Shyam Kishore wrote:
"ಹಾಡುವುದು ಅನಿವಾರ್ಯ ಕರ್ಮ ಎನಗೆ"

ಹೌದು, ನಿಮ್ಮ ಮಾತುಗಳು, ನನ್ನ ಮನಸ್ಸಿಗೆ ಹೀಗೆ ಮನವರಿಕೆ ಮಾಡಿಕೊಡಲು ಸಹಾಯ ಮಾಡಿದೆ. "ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ, ಬರೆಯುವುದು ನನಗಾಗಿಯೇ" Laughing out loud

Shyam Kishore wrote:
ಯಾಕೆ ಯಾರೇ ಆದರೂ ಕೂಡ "ನಾನು ಅವರಲ್ಲ" ಅಂತ ಯೋಚಿಸಬೇಕು?....ನೀವೇನಂತೀರಾ? ಮರೆಯದೇ ತಿಳಿಸಿ.

ಈ ಮಾತಿಗೆ ನಿಜಕ್ಕೂ ಸವಿಯೊದಗನ್ನು ಸಲ್ಲಿಸುವೆ. ಒಂದು ವಿಷಯ ಸ್ಪಷ್ಟಪಡಿಸಿಬಿಡುವೆ, ನಾನು ಯಾವುದಾದರೂ ಲೇಖನ ಬರೆದಾಗ ಅದಕ್ಕೆ ಪ್ರತಿಕ್ರಿಯೆ ಬರಲಿಲ್ಲವೆಂದ ಮಾತ್ರಕ್ಕೆ ನನಗೆ ಖಂಡಿತವಾಗಿಯೂ ಬೇಸರವಾಗುವುದಿಲ್ಲ. ನನಗೆ ನಿಜವಾದ ಸಂತೋಷ ಸಿಗುವುದು ಬರೆಯುವುದರಿಂದ. ಇಂಥವರು ಓದಲಿ, ಅಥವಾ ಇಂಥವರೇ ಪ್ರತಿಕ್ರಿಯಿಸಲಿ ಎಂಬ ಪೂರ್ವಾಗ್ರಹಪೀಡಿತನಾಗಿ ಖಂಡಿತವಾಗಿಯೂ ಕೂಡ ಬರೆಯುವುದಿಲ್ಲ. ಯಾರಾದರು ಪ್ರತಿಕ್ರಿಯಿಸದರೆ ಮತ್ತಷ್ಟು ಸಂತೋಷವಾಗುತ್ತದೆಯೇ ಹೊರತು, ಯಾರು ಪ್ರತಿಕ್ರಿಯಿಸದ ಮಾತ್ರಕ್ಕೆ ಬೇಸರ ಖಂಡಿತವಾಗಿಯೂ ಆಗುವುದಿಲ್ಲ.

Shyam Kishore wrote:
ಸುನಿಲ್, ದಯವಿಟ್ಟು ಕ್ಷಮಿಸಿ; ನನಗೆ ಈ ಒಂದು ಅಂಶ ಅರ್ಥ ಆಗುತ್ತಲೇ ಇಲ್ಲ! ಇನ್ನೊಂದು ಭಾಷೆಯನ್ನು ಅಲ್ಲಗಳೆಯುವುದರಿಂದ ಮಾತ್ರ ನಮ್ಮ ಭಾಷೆ ದೊಡ್ಡದಾಗಬೇಕೆ.

ಅಯ್ಯೋ, ಶ್ಯಾಮ್ ಕಿಶೋರರೆ, ಮತ್ತೊಮ್ಮೆ ನಾನು ಪ್ರಾರಂಭಿಸಿದ ಚರ್ಚೆಯನ್ನು ನೋಡಿ. ನಾನು ಚರ್ಚಿಸ ಹೊರಟಿದ್ದು, ಇಂಗ್ಲೀಷಿಗೊಂದು ನ್ಯಾಯ, ಸಂಸ್ಕೃತಕ್ಕೊಂದು ನ್ಯಾಯವೇಕೆ ? ಎಂಬುದರ ಕುರಿತಾಗಿ. ಇದು ಪಂಡಿತರೆನಿಸಿದವರ ಸ್ವಹಿತಾಸಕ್ತಿಯ ಸಂಕೇತವೇ ? H.S.R.Raghavendra Raoರವರು ತುಂಬಾ ಚೆನ್ನಾಗಿ, ಕರ್ನಾಟಕ v/s ಕನ್ನಡ ಎಂಬುದಾಗಿ ಬರೆದಿದ್ದಾರೆ ನೋಡಿ. ಸಂಸ್ಕೃತವನ್ನು ಬರಮಾಡಿಕೊಂಡ ವಿದ್ವಾಂಸರು, ಇಂಗ್ಲೀಷನ್ನೇಕೆ ಬೇಡವೆನ್ನುತ್ತಾರೆ ? ಇದು ಪುರೋಹಿತಶಾಯಿ ಪದ್ಧತಿಯ ಸಂಕೇತವೇ ?

Shyam Kishore wrote:
ನಾನು ಕನ್ನಡವನ್ನು "ಹಚ್ಚಿಕೊಳ್ಳೋಕೆ", ಇಷ್ಟಪಡೋದಕ್ಕೆ, ನನಗೆ ಅದನ್ನು ಇನ್ನೊಂದು ಭಾಷೆಯ ಜತೆ ಹೋಲಿಸಿ, ತೂಗಿ, prove ಮಾಡಬೇಕಿಲ್ಲ.

ನಿಮ್ಮ ಮಾತಿಗೆ ನಿಜಕ್ಕೂ ನನ್ನ ಸಹಮತವೂ ಇದೆ. ನನಗೆ ಕನ್ನಡ ಇಷ್ಟವಾಗಲು ಕನ್ನಡವೇ ಕಾರಣ. ದಯವಿಟ್ಟು, ಇಡೀ ಲೇಖನವನ್ನು ಮತ್ತೊಮ್ಮೆ ಓದಿ ನೋಡೀಪ್ಪ(ಪಾತಿಗೆ ಸಾತು ಸಂಪತ್ತುನಲ್ಲಿ ಪಾಚು ಹೇಳುವ ರೀತಿ Eye-wink ). ನಾನು ಸಂಸ್ಕೃತವನ್ನೇ ಆಗಲೀ, ಬೇರೆ ಯಾವುದೇ ಭಾಷೆಯನ್ನಾಗಲೀ ಎಲ್ಲಿಯೂ ತುಚ್ಛವಾಗಿ ಕಂಡಿಲ್ಲ. ಬೇರೆ ಭಾಷೆಯನ್ನು ಕೀಳಾಗಿ ಕಾಣುವುದು ಒಂದು ರೀತಿಯ ಅಸಹನೆಯ ಸಂಕೇತ ಎಂಬ ಮಾತನ್ನು ಒಪ್ಪುತ್ತೇನೆ

. ನಿಮ್ಮಂತೆ ನನಗೂ ಕೂಡ, ಕನ್ನಡ ಇಷ್ಟವಾಗಲು ಅದು ಪುರಾತನ ಎನ್ನುವ ಕಾರಣಕ್ಕೋ ಅಥವಾ ಇನ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿಯೋ ಖಂಡಿತವಾಗಿಯೂ ಅಲ್ಲ. ಕನ್ನಡವನ್ನು ಬೇರೆ ಭಾಷೆಯ ಜೊತೆ ಹೋಲಿಸಿ ಬೇರೆಯದನ್ನು ತುಚ್ಛವಾಗಿ ಕಂಡು ನಮ್ಮನ್ನು ಉದ್ಧಾರವಾಗಿಸುವುದರಲ್ಲಿ ಯಾವ ಪುರುಷಾರ್ಥವೂ ನನಗೆ ಕಾಣಿಸುವುದಿಲ್ಲ.

ಈ ಚರ್ಚೆಯ ಆಶಯ ಸಂಸ್ಕೃತದ ವಿರುದ್ಧವಾಗಲೀ, ಅಥವಾ ಬೇರೆ ಭಾಷೆಯ ವಿರುದ್ಧ ಖಂಡಿತವಾಗಿಯೂ ಅಲ್ಲ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ By: Sunil Jayaprakash (4 replies) January 19, 2007 - 12:09pm
  • ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ By: Shyam Kishore (Jan 19 2007 - 2:43pm)
    • ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: Sunil Jayaprakash (Jan 19 2007 - 9:22pm)
      • Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: srivathsajoshi (Jan 20 2007 - 12:21am)
        • ಉ: Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: Shyam Kishore (Jan 20 2007 - 3:29am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • vidhata
    ಉ: ನಮ್ಮ ಬಾಳು
    October 8, 2008 - 7:52am
  • shylaswamy
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 7:50am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 7:38am
  • rameshbalaganchi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 7:22am
  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
ಇನ್ನಷ್ಟು


ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator