ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ತಂಜಾವೂರೀಕರಣ

January 24, 2007 - 8:32pm — ismail

ತಂಜಾವೂರೀಕರಣ

ismail's picture

ಇತ್ತೀಚೆಗೆ ಎಲ್ಲಾದರೂ ದೇವಾಲಯಗಳ ನವೀಕರಣದ ನಡೆಯುತ್ತಿದೆ ಎಂಬ ಸುದ್ದಿ ಓದಿದರೆ ನನಗೆ ಭಯವಾಗುತ್ತದೆ. ಏಕೆಂದರೆ ನವೀಕರಣದ ಹೆಸರಿನಲ್ಲಿ ಕರ್ನಾಟಕದ ದೇವಾಲಯಗಳ ತಂಜಾವೂರೀಕರಣ ನಡೆಯುತ್ತಿದೆ. ಇದರ ಅತ್ಯುತ್ತಮ ಉದಾಹರಣೆ ಎಂದರೆ ಮುರುಡೇಶ್ವರ. ಅಲ್ಲಿನ ಗೋಪುರದಿಂದ ಆರಂಭಿಸಿ ಶಿಲ್ಪಗಳವರೆಗೆ ಎಲ್ಲವೂ ತಮಿಳುನಾಡಿನ ಯಾವುದೋ ದೇವಸ್ಥಾನವನ್ನು ನೆನಪಿಸುತ್ತಿರುತ್ತದೆ. ದೇವಾಲಯಗಳ ಪುನರ್ ಪ್ರತಿಷ್ಟಾ ಬ್ರಹ್ಮಕಲಶಗಳಿಗೆ ಭಾಷಣಕ್ಕೆ ಹೋದರೆ ಅಲ್ಲಿಯೇ ಇದನ್ನು ಖಂಡಿಸಿ ಮಾತನಾಡುವ ಧೈರ್ಯ ತೋರುವುದು ಡಾ.ಎಂ. ಪ್ರಭಾಕರ ಜೋಶಿ ಮಾತ್ರ. ದಕ್ಷಿಣ ಕನ್ನಡದಲ್ಲಿ ಅವರ ಪ್ರಯತ್ನದಿಂದ ಕೆಲವು ದೇವಾಲಯಗಳ ತಂಜಾವೂರೀಕರಣ ತಪ್ಪಿದೆ.

ಇಲ್ಲಿರುವ ದೊಡ್ಡ ಸಮಸ್ಯೆ ಎಂದರೆ ದೇವಾಲಯಗಳ ಜೀರ್ಣೋದ್ಧಾರ ಮಾಡುವವರಿಗೆ ಭಕ್ತಿ ಇರುತ್ತದೆ, ಹಣ ಇರುತ್ತದೆ. ಆದರೆ ಕಲಾತ್ಮಕ ಔಚಿತ್ಯವೆಂದರೇನೆಂದೇ ತಿಳಿದಿರುವುದಿಲ್ಲ. ಈ ಬಗ್ಗೆ ನಾವು ಮಾತನಾಡಿದರೆ ಸಾಕಾಗುವುದಿಲ್ಲ. ಇಂಥದ್ದರ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು. ದೇವಾಲಯ ಎಂದರೆ ಕೇವಲ ದೇವಾಲಯ ಮಾತ್ರ ಅಲ್ಲ ನಮ್ಮ ವಾಸ್ತುಶಿಲ್ಲ ಪರಂಪರೆಯ ತುಣುಕು ಎಂಬುದನ್ನು ಮರೆಯಬೇಡಿ ಎಂದು ಯಾರು ಹೇಳುವುದು?

ಇದು ಕೇವಲ ದೇವಾಲಯಗಳಿಗೆ ಮಾತ್ರ ಸಂಬಂಧಿಸಿದ ವಿಷಯ ಅಲ್ಲ. ಮಸೀದಿಗಳ ವಿಷಯದಲ್ಲಿಯೂ ಇದು ನಿಜ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 800 ವರ್ಷಗಳಷ್ಟು ಹಳೆಯದಾದ ಒಂದು ಮಸೀದಿಯನ್ನು ಏಳೆಂಟು ವರ್ಷಗಳ ಹಿಂದೆ ನವೀಕರಿಸಲಾಯಿತು. ಮೂಲವಾಸ್ತುವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕಾಂಕ್ರೀಟ್ ಕಟ್ಟಡ ಸುತ್ತುವರಿಯಿತು. ಮಧ್ಯದ ಭಾಗ ಉಳಿದುಕೊಂಡದ್ದು ಕೆಲವರ ತೀವ್ರ ಆಕ್ಷೇಪದಿಂದ. ಹೀಗೆ ಆಕ್ಷೇಪಿಸದವು ಕಾಂಕ್ರೀಟ್ ಕಟ್ಟಡಗಳಾದವು.

ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿಗಳ ವಾಸ್ತು ಮತ್ತು ಜೈನ ಬಸದಿಗಳ ವಾಸ್ತುವಿನ ಮಧ್ಯೆ ಬಹುದೊಡ್ಡ ಸಾಮ್ಯವಿದೆ. ಮುಗುಳಿ ಎಂದು ಕರೆಯಲಾಗುವ ಕಲಶವೂ ಈ ಮಸೀದಿಗಳಿಗೆ ಇರುತ್ತಿತ್ತು. ಇದನ್ನು ಅನುಸ್ಥಾಪಿಸುವ ತಜ್ಞರೂ ಇದ್ದರು. ನಮ್ಮ ಕುಟುಂಬದಲ್ಲಿ ನನ್ನ ತಂದೆಗೆ ಇದರ ತಂತ್ರ ತಿಳಿದಿತ್ತು. ಸಂಪೂರ್ಣ ಮರದ ಚಾವಣಿ ಇರುವ ಈ ಕಟ್ಟಡಗಳಲ್ಲಿ ಮಧ್ಯಭಾಗದಲ್ಲಿ ಮುಗುಳಿಯನ್ನು ಕೂರಿಸುವ ಕೆಲಸಕ್ಕೆ ವಿಶೇಷ ಕೌಶಲ್ಯ ಬೇಕಿತ್ತು. ಇದೆಲ್ಲಾ ಯಾರಾ ಗಮನಕ್ಕೂ ಬರುವುದಿಲ್ಲ. ಈಗ ಹಂತು ಹೊದಿಸಬೇಕಾಗಿಲ್ಲ. ಕಾಂಕ್ರೀಟ್ ಹಾಕಿದರೆ ಸಾಕು ಎಂಬುದನ್ನು ಮಾತ್ರ ಜೀರ್ಣೋದ್ಧಾರ ಪ್ರಿಯರು ಅರಿತಿರುವುದು.

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ? By: ವೈಭವ (4 replies) January 24, 2007 - 11:46am
  • ದನಿಗೂಡು: ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ? By: Shyam Kishore (Jan 24 2007 - 12:21pm)
    • ತಂಜಾವೂರೀಕರಣ By: ismail (Jan 24 2007 - 8:32pm)
      • Re: ತಂಜಾವೂರೀಕರಣ By: ವೈಭವ (Jan 25 2007 - 9:28am)
      • ಮತ್ತಷ್ಟು ತಂಜಾವೂರೀಕರಣ ಉದಾಹರಣೆಗಳು By: Sunil Jayaprakash (Jan 24 2007 - 11:06pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:55pm
  • mahesha
    ಉ: "ಕನ್ನಡ+ತಮಿಳ್" = ?
    July 24, 2008 - 4:53pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:49pm
  • savithru
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:48pm
  • savithru
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:47pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 4:23pm
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator