ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಮತ್ತಷ್ಟು ತಂಜಾವೂರೀಕರಣ ಉದಾಹರಣೆಗಳು

January 24, 2007 - 11:06pm — Sunil Jayaprakash

ಮತ್ತಷ್ಟು ತಂಜಾವೂರೀಕರಣ ಉದಾಹರಣೆಗಳು

Sunil Jayaprakash's picture

ನಾನು ಇತ್ತೀಚೆಗೆ ಗಮನಿಸಿದ ಎರಡು ಸ್ಥಳಗಳೆಂದರೆ

೧. ಹೊರನಾಡು ಅನ್ನಪೂರ್ಣೇಶ್ವರೀ ದೇವಸ್ಥಾನ - ಈ ದೇವಸ್ಥಾನದ ದ್ವಾರದಲ್ಲಿರುವ ಸಿಂಹ ಹೊಯ್ಸಳರ ಸಿಂಹವನ್ನು ಹೋಲುವುದೇ ಇಲ್ಲ. ನಾಲಗೆ ಚಾಚಿಕೊಂಡಿರುವ ಸಿಂಹಗಳು ನವೀಕರಣದ ಹೆಸರಿನಲ್ಲಿ ನುಸುಳಿವೆಯೇ ? ಇಲ್ಲಿ ಬಳಿಯಲಾಗಿರುವ ತೆಳು ನೀಲಿ ಬಣ್ಣವೂ ಕೂಡ ನನಗೆ ಹತ್ತಿರವೆನಿಸಲಿಲ್ಲ.

೨. ಮೈಸೂರಿನಿಂದ ಬಂಡೀಪುರಕ್ಕೆ ಹೋಗುವ ದಾರಿಯಲ್ಲಿ ಸಿಗುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಮೈಸೂರಿಗೆ ಇಷ್ಟು ಹತ್ತಿರವಿದ್ದಾಗಿಯೂ ಕೂಡ ಇಲ್ಲಿರುವ ದೇವಸ್ಥಾನ ಪೂಜಾವಿಧಾನದಲ್ಲಾಗಲೀ, ವಾಸ್ತುಶಿಲ್ಪದಲ್ಲಾಗಲೀ, ಕರ್ನಾಟಕದ್ದು ಅಂತ ಅನ್ನಿಸುವುದೇ ಇಲ್ಲ. Sad ಪ್ರಕೃತಿ ಸೌಂದರ್ಯವನ್ನು ಸವಿದು ಬರಬೇಕಷ್ಟೇ.

ismail wrote:
ದೇವಾಲಯ ಎಂದರೆ ಕೇವಲ ದೇವಾಲಯ ಮಾತ್ರ ಅಲ್ಲ ನಮ್ಮ ವಾಸ್ತುಶಿಲ್ಲ ಪರಂಪರೆಯ ತುಣುಕು ಎಂಬುದನ್ನು ಮರೆಯಬೇಡಿ

ಈ ಮಾತು ತುಂಬಾ ಇಷ್ಟವಾಯಿತು. ಧರ್ಮಶ್ರೀ ಕಾದಂಬರಿಯಲ್ಲಿ ಬರುವ ಈ ರೀತಿಯ ಒಂದು ಮಾತು ನನಗೆ ನಿಜಕ್ಕೂ ಇಷ್ಟವಾಗಿತ್ತು. ದೇವಸ್ಥಾನ, ಧರ್ಮ, ವಾಸ್ತುಶಿಲ್ಪ, ಕಲೆ (ಸಂಗೀತ, ನೃತ್ಯ ಮುಂತಾದವು) ಮತ್ತು ಆಧ್ಯಾತ್ಮ ಎಲ್ಲ ಕಡೆಯೂ ಪ್ರಾಚೀನ ಕಾಲದಿಂದ ಹೀಗೆ ಒಂದಕ್ಕೊಂದು ಜೊತೆಗೂಡುತ್ತಲೇ ಒಂದಕ್ಕೊಂದು ಪೂರಕವಾದ ಕೆಲಸ ಮಾಡಿಕೊಂಡು ಸಾಗಿವೆಯೇನೋ ಅಂತನಿಸುತ್ತದೆ. ಬೇಲೂರಿನಲ್ಲಿ ಚೆನ್ನಕೇಶವನಿದ್ದರೂ, ದೇವಸ್ಥಾನದ ಹೊರ ಆವರಣವಲ್ಲದೆ, ಆ ನಕ್ಷತ್ರಾಕಾರದ ಕಲ್ಲಿನಲ್ಲಿಯೂ ಕೂಡ ಜೈನ ಸನ್ಯಾಸಿಗಳ ಕೆತ್ತನೆಗಳಿರುವುದನ್ನು ಗಮನಿಸುವವರು ವಿರಳ.

ismail wrote:
ಮುಗುಳಿ ಎಂದು ಕರೆಯಲಾಗುವ ಕಲಶವೂ ಈ ಮಸೀದಿಗಳಿಗೆ ಇರುತ್ತಿತ್ತು. ಇದನ್ನು ಅನುಸ್ಥಾಪಿಸುವ ತಜ್ಞರೂ ಇದ್ದರು. ನಮ್ಮ ಕುಟುಂಬದಲ್ಲಿ ನನ್ನ ತಂದೆಗೆ ಇದರ ತಂತ್ರ ತಿಳಿದಿತ್ತು.

ಹಾಗಾದರೆ, ನಿಜಕ್ಕೂ ನೀವು ಪುಣ್ಯವಂತರು ಬಿಡಿ. ಅಂದ ಹಾಗೆ ವಂಶಪಾರಂಪರ್ಯವಾಗಿ ಈ ಕಲೆ ನಿಮಗೂ ಸಿದ್ಧಿಸಿದೆಯೇ. ಇಲ್ಲವಾದರೆ ಶೇಮ್, ಶೇಮ್.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ? By: ವೈಭವ (4 replies) January 24, 2007 - 11:46am
  • ದನಿಗೂಡು: ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ? By: Shyam Kishore (Jan 24 2007 - 12:21pm)
    • ತಂಜಾವೂರೀಕರಣ By: ismail (Jan 24 2007 - 8:32pm)
      • Re: ತಂಜಾವೂರೀಕರಣ By: ವೈಭವ (Jan 25 2007 - 9:28am)
      • ಮತ್ತಷ್ಟು ತಂಜಾವೂರೀಕರಣ ಉದಾಹರಣೆಗಳು By: Sunil Jayaprakash (Jan 24 2007 - 11:06pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • siddharam
    ಉ: ಗಜಲ್
    October 8, 2008 - 1:30pm
  • Deeparavishankar
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 1:24pm
  • anil.ramesh
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 1:07pm
  • rasheedgm
    ಉ: ದಾನದ ಹಬ್ಬ ಈದ್ -ಉಲ್ - ಫಿತರ್
    October 8, 2008 - 12:46pm
  • rasheedgm
    ಉ: ದಾನದ ಹಬ್ಬ ಈದ್ -ಉಲ್ - ಫಿತರ್
    October 8, 2008 - 12:37pm
  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
ಇನ್ನಷ್ಟು


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator