ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ...

February 8, 2007 - 8:52am — Shyam Kishore

ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ...

Shyam Kishore's picture

ನನ್ನ ಅನಿಸಿಕೆ ಕೆಳಕಂಡಂತಿದೆ. ಚರ್ಚೆಯನ್ನು "ಉದ್ದಿಸುವ" ಉದ್ದೇಶ ನನ್ನದಲ್ಲ; ಆದರೆ ಕೆಲವೊಂದು ಸಂದೇಹಗಳು ಹಾಗೇ ಉಳಿದಿವೆ. ಹಾಗಾಗಿ ಬರೆಯುತ್ತಿದ್ದೇನೆ. ನಿಮಗೇನನ್ನಿಸಿತು ಅಂತ ಹೇಳಿ.

೧. ಹೌದು, ಕೆಲವೊಂದು ಪದಗಳಿಗೆ ಬದಲಾಗಿ, ಸುಮ್ಮನೆ ತರಲೇಬೇಕೂಂತ ನಾವು ಕನ್ನಡ ಪದಗಳನ್ನು ತಂದರೂ, ಜನ ಅವನ್ನು ತಿರಸ್ಕರಿಸಿದಲ್ಲಿ ನಮ್ಮ ಪ್ರಯತ್ನವೆಲ್ಲ ನೀರಿನಲ್ಲಿ ಹೋಮ ಮಾಡಿದಂತೆಯೇ ಸರಿ. ಹಾಗೆಂದು ಎಲ್ಲಾ ಪದಗಳನ್ನೂ, "ಇದೇ, ಈಗಿರುವುದೇ ಸುಲಭ" ಅಂತ ಒಪ್ಪಿಕೊಂಡಲ್ಲಿ ಕೊನೆಗೆ ಕನ್ನಡೀಕರಣ, ಕನ್ನಡದ ಕಂಪ್ಯೂಟರ್ ಅನ್ನುವುದರ ಅರ್ಥ ಏನು? ಇಂಗ್ಲಿಷ್ ಪದಗಳನ್ನು ಕನ್ನಡದಲ್ಲಿ ಬರೆದ ಮಾತ್ರಕ್ಕೆ ಅವು ಕನ್ನಡದ್ದೇ ಆಗುತ್ತವೆಯೇ? ಅಲ್ಲದೇ ಇದರಿಂದ ನಾವು ಕನ್ನಡ ಬಳಕೆಯನ್ನು ಇನ್ನಷ್ಟು ಹಿಂದೆ ನೂಕಿದಂತೆ ಆಗುವುದಿಲ್ಲವೇ? ನಾನು ಮೊದಲೇ ಹೇಳಿದಂತೆ, ಇದು ಎಲ್ಲಾ ಪದಗಳಿಗೂ ಅನ್ವಯಿಸುವುದಿಲ್ಲ. ಕೆಲವೊಂದು ಪದಗಳನ್ನು ಹಾಗೆಯೇ (ಈಗಿರುವ ಇಂಗ್ಲಿಷ್ ಪದಗಳಂತೆ) ಬಳಸುವುದು ಖಂಡಿತ ಒಳ್ಳೆಯದು. ಆದರೆ ಈ ಒಂದು "ಆರೋಗ್ಯಕರ ಮಿಶ್ರಣ"ವನ್ನು (healthy mix of English and Kannada words) ಹೇಗೆ ಹದಕ್ಕೆ ತರೋದು? ಇದು ನಮ್ಮ ಮುಂದಿನ ದೊಡ್ಡ ಪ್ರಶ್ನೆ ಅಂತ ನನ್ನ ಅನಿಸಿಕೆ.

೨. ಕೆಲವು ಕನ್ನಡ ಪದಗಳನ್ನು, ಕೆಲವೊಮ್ಮೆ, ಕನ್ನಡಕ್ಕಾಗಿಯಾದರೂ ಬಳಕೆಗೆ ತರಬೇಕಾಗುತ್ತದೆ. ಇಲ್ಲವಾದಲ್ಲಿ ಈಗ ಪುಸ್ತಕಗಳಲ್ಲಿ ಮಾತ್ರ ಉಳಿದಿರುವ ಆ ಪದಗಳು ನಾಳೆ ಎಲ್ಲೂ ಕಣ್ಣಿಗೂ ಸಿಕ್ಕೋದಿಲ್ಲ.

೩. ಪುಸ್ತಕದ ಅನುವಾದ ತಲುಪುವುದಕ್ಕಿಂತ ಹೆಚ್ಚು ಜನರನ್ನು ಕಂಪ್ಯೂಟರಿನ ಅನುವಾದ ತಲುಪುತ್ತೆ ಅಲ್ಲವೇ? (ನಾಳೆ ಕನ್ನಡದ ಕಂಪ್ಯೂಟರ್ ಎಲ್ಲೆಡೆ ಬಳಕೆಗೆ ಬಂದಾಗ) ಹಾಗಿದ್ದಾಗ, ಇಂತಹ ಕಡೆ ನಾವು ಆದಷ್ಟೂ ಹೆಚ್ಚು ಕನ್ನಡ ಪದಗಳನ್ನು (ಸರಳವಾದ ಪದಗಳನ್ನು) ಬಳಸಿದರೆ ಒಳ್ಳೆಯದಲ್ಲವೇ? ಇದರಿಂದ ಕನ್ನಡದ ಬಳಕೆಗೆ ಇನ್ನಷ್ಟು ಬಲ ಬರುತ್ತದೆ ಅಲ್ಲವೇ?

ಹೆಚ್ಚು ಜನ ತಮ್ಮ ಅಭಿಪ್ರಾಯಗಳನ್ನು ತಿಳಿಸಿದಲ್ಲಿ ಅನುವಾದಕರಿಗೂ ಒಂದು "ಗೊತ್ತು-ಗುರಿ" ಸಿಕ್ಕಿದಂತಾಗುತ್ತದೆ. ಜನಾಭಿಪ್ರಾಯ ಯಾವ ಕಡೆಗಿದೆ ಅನ್ನುವುದು ಸ್ಪಷ್ಟವಾಗುತ್ತದೆ. ಹಾಗಾಗಿ, ನಿಮ್ಮ ಅಭಿಪ್ರಾಯವನ್ನು, ಒಂದೆರಡು ಸಾಲುಗಳಲ್ಲಾದರೂ ಪರವಾಗಿಲ್ಲ, ತಪ್ಪದೇ ಬರೆಯಿರಿ.

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು? By: shreekant.mishrikoti (12 replies) February 7, 2007 - 3:35pm
  • Re: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು? By: pavanaja (Mar 7 2007 - 11:35pm)
  • Re : ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? By: suchara (Feb 8 2007 - 10:59am)
  • A quick point to be noted your honour By: Sunil Jayaprakash (Feb 8 2007 - 10:36am)
    • Re:point ಅದಲ್ಲ.. By: ASHOKKUMAR (Feb 8 2007 - 11:06am)
      • Re:ಕ್ಷಮಿಸಿ ...ಒಂದೇ ಅನಿಸಿಕೆ ಹಲವಾರು ಬಾರಿ ಪ್ರಕಟವಾಗಿ ಬಿಡ್ತು By: ASHOKKUMAR (Feb 8 2007 - 11:11am)
        • ಉ:ಕ್ಷಮಿಸಿ ...ಒಂದೇ ಅನಿಸಿಕೆ ಹಲವಾರು ಬಾರಿ ಪ್ರಕಟವಾಗಿ ಬಿಡ್ತು By: hpn (Feb 8 2007 - 11:59am)
  • ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ... By: Shyam Kishore (Feb 8 2007 - 8:52am)
    • Re: ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ. By: smurthygr (Mar 7 2007 - 8:12pm)
    • ಉ: ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ. By: hpn (Feb 8 2007 - 9:19am)
      • re: random ಅಂತಹ ಪದ ಕನ್ನಡವಾಗಬಾರದು By: ASHOKKUMAR (Feb 8 2007 - 10:27am)
        • ಉ: random ಅಂತಹ ಪದ ಕನ್ನಡವಾಗಬಾರದು By: hpn (Feb 8 2007 - 10:47am)
  • ಉ: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? By: hpn (Feb 8 2007 - 12:36am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
  • hamsanandi
    ಉ: ಕೌಮಾರೀ ಗೌರೀ ವೇಳಾವಳಿ
    September 5, 2008 - 9:51pm
ಇನ್ನಷ್ಟು


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator