ಶಿಶು ಸಾಹಿತ್ಯ: ಇನ್ನು ಕೆಲವು ಆಲೋಚನೆಗಳು
- ಕಥೆ ಚೆನ್ನಾಗಿದೆ. ಶಿಶುಸಾಹಿತ್ಯದ ಬಗ್ಗ್ಗೆ ನನ್ನ ಟಿಪ್ಪಣಿ By: nilagriva (Sep 15 2005 - 7:07pm)
- ಜಾನಪದ ಶಿಶು ಪ್ರಾಸಗಳಿಲ್ಲವೇ? By: Yamini (Sep 19 2005 - 4:09pm)
- ಜಾನಪದ ಮತ್ತು ಶಿಶುಪ್ರಾಸ By: olnswamy (Sep 19 2005 - 7:51pm)
- ನಾನೂ ಪುಸ್ತಕ ಕೊಡುವವನು By: pavanaja (Sep 19 2005 - 10:53am)
- ಜಾನಪದ ಶಿಶು ಪ್ರಾಸಗಳಿಲ್ಲವೇ? By: Yamini (Sep 19 2005 - 4:09pm)
- ಶಿಶು ಸಾಹಿತ್ಯ ? By: ismail (Sep 14 2005 - 2:09pm)
- ಶಿಶು ಸಾಹಿತ್ಯ ಎಂಬ ತಪ್ಪು ಕಲ್ಪನೆ By: olnswamy (Sep 14 2005 - 10:16pm)
- ಇನ್ನಷ್ಟು ವಿವರ By: ಪ್ರಶಾಂತ.ಪಂಡಿತ (Sep 15 2005 - 12:38pm)
- ಶಿಶು ಸಾಹಿತ್ಯ: ಇನ್ನು ಕೆಲವು ಆಲೋಚನೆಗಳು By: olnswamy (Sep 16 2005 - 8:34am)
- ಇನ್ನಷ್ಟು ವಿವರ By: ಪ್ರಶಾಂತ.ಪಂಡಿತ (Sep 15 2005 - 12:38pm)
- ನಿಜ, ಆದರೆ ... By: ಪ್ರಶಾಂತ.ಪಂಡಿತ (Sep 14 2005 - 5:02pm)
- ಐಡಿಯಾಲಜಿ ಮತ್ತು By: ismail (Sep 14 2005 - 5:26pm)
- ಅನುಪಮಾ ನಿರಂಜನ By: hpn (Sep 14 2005 - 3:55pm)
- definition By: modmani (Sep 15 2005 - 1:19pm)
- ಏನಿದು? By: hpn (Sep 15 2005 - 2:21pm)
- definition By: modmani (Sep 15 2005 - 1:19pm)
- ಶಿಶು ಸಾಹಿತ್ಯ ಎಂಬ ತಪ್ಪು ಕಲ್ಪನೆ By: olnswamy (Sep 14 2005 - 10:16pm)
- ಒಳ್ಳೆಯ By: modmani (Sep 13 2005 - 7:09pm)
- ಇದಕ್ಕೆ ಪ್ರಶಸ್ತಿಯೂ ಬಂದಿತ್ತು! By: pavanaja (Sep 13 2005 - 7:33pm)
- ಒಳ್ಳೆಯದೇ ಆಯಿತು.;) By: modmani (Sep 13 2005 - 7:39pm)
- ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ By: pavanaja (Sep 13 2005 - 8:23pm)
- ವಾಹ್! ವಾಹ್! By: tvsrinivas41 (Sep 13 2005 - 11:01pm)
- ಕನಸ್ಸಿನಲ್ಲಿ ಬರುವುದು ಏನು? By: pavanaja (Sep 19 2005 - 4:21pm)
- ಸುಂದರವದನ By: tvsrinivas41 (Sep 19 2005 - 8:34pm)
- ಖಡ್ಗಕ್ಕಿಂತ ಹರಿತ By: modmani (Sep 15 2005 - 1:07pm)
- ಕನಸ್ಸಿನಲ್ಲಿ ಬರುವುದು ಏನು? By: pavanaja (Sep 19 2005 - 4:21pm)
- ವಾಹ್! ವಾಹ್! By: tvsrinivas41 (Sep 13 2005 - 11:01pm)
- ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ By: pavanaja (Sep 13 2005 - 8:23pm)
- ಒಳ್ಳೆಯದೇ ಆಯಿತು.;) By: modmani (Sep 13 2005 - 7:39pm)
- ಇದಕ್ಕೆ ಪ್ರಶಸ್ತಿಯೂ ಬಂದಿತ್ತು! By: pavanaja (Sep 13 2005 - 7:33pm)
- ಬಹುಮುಖಿ By: tvsrinivas41 (Sep 12 2005 - 9:05am)
- ಧನ್ಯವಾದಗಳು By: pavanaja (Sep 13 2005 - 6:57pm)
- ಭುಜಂಗಯ್ಯನ ದಶಾವತಾರ By: hpn (Sep 12 2005 - 3:35pm)
- ಹೊ ಹೋ ನಂಬ್ತೀವಿ By: olnswamy (Sep 11 2005 - 5:01pm)

RSS:
ಶಿಶು ಸಾಹಿತ್ಯ: ಇನ್ನು ಕೆಲವು ಆಲೋಚನೆಗಳು
ಪ್ರಶಾಂತ ಪಂಡಿತರ ಪತ್ರಕ್ಕೆ ಧನ್ಯವಾದಗಳು. ಶಿಶು ಸಾಹಿತ್ಯ ಎನ್ನುವುದು ಕನ್ನಡದಲ್ಲಿ ಬಾಲಿಶ ಸಾಹಿತ್ಯವಾಗಿರುವುದೇ ಹೆಚ್ಚು. ಸಮರ್ಥವಾದ, ಸದೃಢವಾದ ಬರವಣಿಗೆಯನ್ನು ಮಾಡಲಾರದವರು ಬೇಕಾಬಿಟ್ಟಿ ಬರೆದು ನಮ್ಮದು ಶಿಶು ಸಾಹಿತ್ಯ, ನಮಗೆ ಮನ್ನಣೆ ನೀಡಿ, ನಮಗೆ ಗೌರವಕೊಡಿ ಎಂದು ಯಾಚಿಸುವ ಉಪಾಯವಾಗಿಬಿಟ್ಟಿದೆ.
ಮಕ್ಕಳಿಗಾಗಿ ದೊಡ್ಡವರು ಬರೆಯುವಾಗ ಈ ಸಂಗತಿಗಳನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಮಕ್ಕಳು ಕೂಡ ಪ್ರಬುದ್ಧರೇ. ಅವರಿಗಾಗಿ ಬರೆಯುವ ಬರವಣಿಗೆ ನೀರು ಮಜ್ಜಿಗೆಯಂತಿರಬಾರದು, ಗಟ್ಟಿಮೊಸರಿನಂತೆ ಇರಬೇಕು. ಹೊಯ್ಸಳ, ರಾಜರತ್ನಂ, ಕುವೆಂಪು ಮೊದಲಾದವರು ಮಕ್ಕಳಿಗಾಗಿ ಬರೆದಾಗ ಕೂಡ ವಿಷಯ, ಛಂದಸ್ಸು, ಪದಗಳ ಆಯ್ಕೆಯಲ್ಲಿ ಪ್ರಬುದ್ಧ ಸಾಹಿತ್ಯ ರಚನೆಯಲ್ಲಿ ಕೊಡುವಷ್ಟೇ ಗಮನಕೊಟ್ಟಿರುವುದನ್ನು ಗಮನಿಸಬೇಕು. ಮಕ್ಕಳನ್ನು ಗಂಭೀರವಾಗಿ ಸೀರಿಯಸ್ಸಾಗಿ ತೆಗೆದುಕೊಂಡಿದ್ದೇವೆ ಎಂಬುದು ಮಕ್ಕಳಿಗೂ ತಿಳಿಯುವಂತಿರಬೇಕು. ಅಂದರೆ ಯಾವುದೇ ಬಗೆಯ ಉಡಾಫೆ ಇರಬಾರದು. ಸುಳ್ಳು ಇರಬಾರದು. ಕಲ್ಪನೆಯ ವಿಸ್ತಾರಕ್ಕೆ ಅವಕಾಶ ಇರಬೇಕು. ಎ. ಅರ್. ಕೃಷ್ಣಶಾಸ್ತ್ರಿಗಳು ವಚನಭಾರತ ಎಂದು ಮಕ್ಕಳಿಗಾಗಿ ಮಹಾಭಾರತವನ್ನು ನಿರೂಪಿಸಿರುವುದನ್ನು ಒಮ್ಮೆ ನೋಡಬಹುದು. ಹಾಗೆಯೇ ಕಥಾಸರಿತ್ಸಾಗರವನ್ನು ಕಥಾಮೃತ ಎಂದು ಮಾಡಿದ್ದಾರೆ. ಬಹಳ ಶ್ರಮದಿಂದ ಆ ಕೆಲಸ ಅವರು ಮಾಡಿದ್ದಾರೆ.
ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸುವುದಕ್ಕೆ ಮುನ್ನ ದೊಡ್ಡವರಲ್ಲಿ ಆ ಅಭ್ಯಾಸ ಇರಬೇಕು. ಮನೆಯಲ್ಲಿ ಪುಸ್ತಕಗಳು ಕಾಣುತ್ತಿರಬೇಕು, ದೊಡ್ಡವರು ಓದುತ್ತಿರುವುದು, ಆ ಓದಿನಿಂದ ಖುಷಿ ಪಡೆಯುತ್ತಿರುವುದು ಮಕ್ಕಳಿಗೆ ಗಮನಕ್ಕೆ ಬರುವಂತಿರಬೇಕು. ದೊಡ್ಡವರಿಗೆ ಓದಿನಿಂದ ಖುಷಿ ಪಡೆಯಲು ಆಗದಿದ್ದರೆ ಬರೀ ಮಾತಿನಿಂದ ಮಕ್ಕಳು ಓದುವಂತೆ ಮಾಡಲು ಸಾಧ್ಯವಿಲ್ಲ. ಮಕ್ಕಳು ನಮ್ಮ ಮಾತುಗಳನ್ನಷ್ಟೇ ಕೇಳುವುದಿಲ್ಲ, ನಮ್ಮ ವರ್ತನೆಯನ್ನೂ ಗಮನಿಸುತ್ತಾರೆ, ಅದನ್ನೇ ಮುಖ್ಯವಾಗಿ ಮನದಟ್ಟು ಮಾಡಿಕೊಳ್ಳುತ್ತಾರೆ. ದೊಡ್ಡವರಿಗೇ ಕನ್ನಡದ ಬಗ್ಗೆ, ಓದಿನ ಬಗ್ಗೆ ನಂಬಿಕೆ ಹೊರಟುಹೋಗಿದೆ. ಓದುವುದು ಎಂದರೆ ಪರೀಕ್ಷೆಗಾಗಿ ಎಂದಷ್ಟೇ ತಿಳಿಯುವ ಮನೋಭಾವವಿದೆ. ದೊಡ್ಡವರು ತಮ್ಮೊಳಗಿನ ಮಗುತನವನ್ನು ಕಾಪಾಡಿಕೊಳ್ಳದೆ ಮಕ್ಕಳ ಮಗುತನವನ್ನು ಕೊಲ್ಲುವುದರಲ್ಲಿ ತೊಡಗಿದ್ದೇವೆ. ನಿಜವಾಗಿ ಮಕ್ಕಳ ಶತ್ರುಗಳೆಂದರೆ ತಂದೆ ತಾಯಂದಿರೇ, ತಂದೆತಾಯಂದಿರಲ್ಲಿರುವ ಅತಿ ಹೆಚ್ಚು ದುಡ್ಡು ಅತಿ ಸುಲಭವಾಗಿ ಅತಿ ಬೇಗ ಮಾಡಬೇಕೆಂಬ ಆಸೆಯೇ, ತಮ್ಮ ಮಕ್ಕಳು ಉಳಿದೆಲ್ಲ ಮಕ್ಕಳನ್ನು ಇಕ್ಕಿ ಮೆಟ್ಟಬೇಕೆಂಬ ಆಕಾಂಕ್ಷೆಯೇ.
ಮಕ್ಕಳ ಸಾಹಿತ್ಯ ಹಾಗಿರಲಿ, ಮಕ್ಕಳ ಬಗ್ಗೆ ನಮಗೆ, ದೊಡ್ಡವರಿಗೆ ನಿಜವಾಗಿ ಪ್ರೀತಿ ಇದೆಯೇ ಎಂಬ ಪ್ರೆಶ್ನೆ ಕೇಳಿಕೊಳ್ಳೋಣ. ಮಕ್ಕಳಿಗೆ ಎಂಥ ಆದರ್ಶವನ್ನು, ಮೇಲುಪಂಕ್ತಿಯನ್ನು ಹಾಕಿಕೊಡುತ್ತಿದ್ದೇವೆ ನೋಡಿಕೊಳ್ಳೋಣ. ಪ್ರಶ್ನೆ ಮಕ್ಕಳಿಗಿಂತ ಹೆಚ್ಚಾಗಿ ದೊಡ್ಡವರಾದ ನಮಗೇ ಅನ್ವಯಿಸಿಕೊಳ್ಳಬೇಕಾದದ್ದು.