~
Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ
- ಸೇಡು ತೀರಿಸುವ ಅವಕಾಶ By: rajeshnaik111 (Feb 26 2007 - 10:00am)
- ಕೊನೆಯ ಲೀಗ್ ಪಂದ್ಯದಲ್ಲೂ ಕರ್ನಾಟಕಕ್ಕೆ ಜಯ By: rajeshnaik111 (Feb 16 2007 - 6:41pm)
- ಕರ್ನಾಟಕಕ್ಕೆ ಸತತ ೪ನೇ ಜಯ By: rajeshnaik111 (Feb 14 2007 - 9:43pm)
- ಕರ್ನಾಟಕಕ್ಕೆ ಗೆಲುವು ತಮಿಳುನಾಡಿನ ವಿರುದ್ಧ By: rajeshnaik111 (Feb 13 2007 - 7:27pm)
- Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Feb 9 2007 - 12:29am)
- Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Feb 12 2007 - 2:58pm)
- ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: Sunil Jayaprakash (Jan 28 2007 - 11:37am)
- Re: ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Jan 29 2007 - 4:17pm)

RSS:
Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ
ರಣಜಿ ಏಕದಿನ ಟ್ರೋಫಿಯಲ್ಲಿ ದಕ್ಷಿಣ ವಲಯ ಲೀಗ್ ನ ತನ್ನ ಪ್ರಥಮ ೨ ಪಂದ್ಯಗಳಲ್ಲಿ ಕರ್ನಾಟಕ, ಕೇರಳ ಹಾಗೂ ಗೋವಾ ವಿರುದ್ಧ ವಿಜಯ ದಾಖಲಿಸಿದೆ. ಸಂಕ್ಷಿಪ್ತ ಸ್ಕೋರುಗಳು ಹೀಗಿವೆ.
ಕೇರಳ ವಿರುದ್ದ ೯ ಹುದ್ದರಿಗಳಿಂದ ಗೆಲುವು: ಕೇರಳ ೪೭.೨ ಓವರ್ ಗಳಲ್ಲಿ ಎಲ್ಲಾ ಹುದ್ದರಿಗಳ ನಷ್ಟಕ್ಕೆ ೨೦೬ ಓಟಗಳು (ಅಖಿಲ್ ೩೧ಕ್ಕೆ ೪ ಹುದ್ದರಿಗಳು ಮತ್ತು ಧನಂಜಯ ೫೦ಕ್ಕೆ ೨ ಹುದ್ದರಿಗಳು). ಕರ್ನಾಟಕ ೩೫.೧ ಓವರ್ ಗಳಲ್ಲಿ ೧ ಹುದ್ದರಿ ನಷ್ಟಕ್ಕೆ ೨೦೯ ಓಟಗಳು (ಗೌರವ್ ಧೀಮನ್ ೯೪ ಅಜೇಯ ಮತ್ತು ರೋಲಂಡ್ ಬ್ಯಾರಿಂಗ್ಟನ್ ೧೦೧ ಅಜೇಯ).
ಗೋವಾ ವಿರುದ್ಧ ೮ ಹುದ್ದರಿಗಳಿಂದ ಗೆಲುವು: ಗೋವಾ ೪೯.೩ ಓವರ್ ಗಳಲ್ಲಿ ಎಲ್ಲಾ ಹುದ್ದರಿಗಳ ನಷ್ಟಕ್ಕೆ ೨೨೪ ಓಟಗಳು (ವಿನಯ್ ಕುಮಾರ್ ೩೮ಕ್ಕೆ ೩ ಹುದ್ದರಿಗಳು, ಅಖಿಲ್ ೩೬ಕ್ಕೆ ೩ ಹುದ್ದರಿಗಳು ಮತ್ತು ಸುನಿಲ್ ಜೋಶಿ ೪೧ಕ್ಕೆ ೩ ಹುದ್ದರಿಗಳು). ಕರ್ನಾಟಕ ೩೨.೪ ಓವರ್ ಗಳಲ್ಲಿ ೨ ಹುದ್ದರಿಗಳ ನಷ್ಟಕ್ಕೆ ೨೨೬ ಓಟಗಳು (ಭರತ್ ಚಿಪ್ಲಿ ೧೦೨ ಅಜೇಯ ಮತು ರೋಲಂಡ್ ಬ್ಯಾರಿಂಗ್ಟನ್ ೧೦೨ ಅಜೇಯ).
ಮುಂದಿನ ಪಂದ್ಯ ಬಲಶಾಲಿ ತಮಿಳು ನಾಡು ವಿರುದ್ಧ. ಇದೇ ರೀತಿ ಆಟ ಕರ್ನಾಟಕ ಪ್ರದರ್ಶಿಸಲಿ.