ಕರ್ನಾಟಕಕ್ಕೆ ಗೆಲುವು ತಮಿಳುನಾಡಿನ ವಿರುದ್ಧ
- ಸೇಡು ತೀರಿಸುವ ಅವಕಾಶ By: rajeshnaik111 (Feb 26 2007 - 10:00am)
- ಕೊನೆಯ ಲೀಗ್ ಪಂದ್ಯದಲ್ಲೂ ಕರ್ನಾಟಕಕ್ಕೆ ಜಯ By: rajeshnaik111 (Feb 16 2007 - 6:41pm)
- ಕರ್ನಾಟಕಕ್ಕೆ ಸತತ ೪ನೇ ಜಯ By: rajeshnaik111 (Feb 14 2007 - 9:43pm)
- ಕರ್ನಾಟಕಕ್ಕೆ ಗೆಲುವು ತಮಿಳುನಾಡಿನ ವಿರುದ್ಧ By: rajeshnaik111 (Feb 13 2007 - 7:27pm)
- Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Feb 9 2007 - 12:29am)
- Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Feb 12 2007 - 2:58pm)
- ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: Sunil Jayaprakash (Jan 28 2007 - 11:37am)
- Re: ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Jan 29 2007 - 4:17pm)

RSS:
ಕರ್ನಾಟಕಕ್ಕೆ ಗೆಲುವು ತಮಿಳುನಾಡಿನ ವಿರುದ್ಧ
ರಣಜಿ ಏಕದಿನ ಟ್ರೋಫಿಗಾಗಿ ಸಿಕಂದರಾಬಾದ್ ನಲ್ಲಿ ನಡೆದ ತನ್ನ ೩ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಮಿಳುನಾಡನ್ನು ೫ ಹುದ್ದರಿಗಳಿಂದ ಮಣಿಸಿ ಸತತ ೩ನೇ ವಿಜಯವನ್ನು ದಾಖಲಿಸಿ, ೧೪ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನುಳಿದ ೨ ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಸಾಕು, ಕರ್ನಾಟಕ ನಾಕ್ ಔಟ್ ಹಂತ ಪ್ರವೇಶಿಸಿದಂತೆ. ತಮಿಳುನಾಡಿನ ವಿರುದ್ಧದ ಪಂದ್ಯದ ಸಂಕ್ಷಿಪ್ತ ಸ್ಕೋರ್ ವಿವರ:
ತಮಿಳುನಾಡು ೪೮.೨ ಓವರ್ ಗಳಲ್ಲಿ ಎಲ್ಲಾ ಹುದ್ದರಿಗಳ ನಷ್ಟಕ್ಕೆ ೧೯೪ ಓಟಗಳು (ವಿನಯ್ ಕುಮಾರ್ ೩೩ಕ್ಕೆ ೩ ಹುದ್ದರಿಗಳು, ಅಖಿಲ್ ೨೩ಕ್ಕೆ ೧ ಹುದ್ದರಿ, ಸುನಿಲ್ ಜೋಶಿ ೪೭ಕ್ಕೆ ೧ ಹುದ್ದರಿ ಮತ್ತು ಭರತ್ ಚಿಪ್ಲಿ ೧೨ಕ್ಕೆ ೧ ಹುದ್ದರಿ).
ಕರ್ನಾಟಕ ೪೪ ಓವರ್ ಗಳಲ್ಲಿ ೫ ಹುದ್ದರಿಗಳ ನಷ್ಟಕ್ಕೆ ೧೯೫ ಓಟಗಳು (ಭರತ್ ಚಿಪ್ಲಿ ೨೭, ಗೌರವ್ ಧೀಮನ್ ೯, ರೋಲಂಡ್ ಬ್ಯಾರಿಂಗ್ಟನ್ ೪, ಚಂದ್ರಶೇಖರ್ ರಘು ೬೪ ಅಜೇಯ, ದೀಪಕ್ ಚೌಗುಲೆ ೩೪, ತಿಲಕ್ ನಾಯ್ಡು ೨೮ ಮತ್ತು ಯೆರೆ ಗೌಡ ೧೪ ಅಜೇಯ)
ಕರ್ನಾಟಕಕ್ಕೆ ೫ ಹುದ್ದರಿಗಳಿಂದ ಜಯ.
ಮುಂದಿನ ಪಂದ್ಯ ನಾಳೆ (ಫೆಬ್ರವರಿ ೧೪) ಆಂಧ್ರಪ್ರದೇಶದ ವಿರುದ್ಧ.