~
ಸೇಡು ತೀರಿಸುವ ಅವಕಾಶ
- ಸೇಡು ತೀರಿಸುವ ಅವಕಾಶ By: rajeshnaik111 (Feb 26 2007 - 10:00am)
- ಕೊನೆಯ ಲೀಗ್ ಪಂದ್ಯದಲ್ಲೂ ಕರ್ನಾಟಕಕ್ಕೆ ಜಯ By: rajeshnaik111 (Feb 16 2007 - 6:41pm)
- ಕರ್ನಾಟಕಕ್ಕೆ ಸತತ ೪ನೇ ಜಯ By: rajeshnaik111 (Feb 14 2007 - 9:43pm)
- ಕರ್ನಾಟಕಕ್ಕೆ ಗೆಲುವು ತಮಿಳುನಾಡಿನ ವಿರುದ್ಧ By: rajeshnaik111 (Feb 13 2007 - 7:27pm)
- Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Feb 9 2007 - 12:29am)
- Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Feb 12 2007 - 2:58pm)
- ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: Sunil Jayaprakash (Jan 28 2007 - 11:37am)
- Re: ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Jan 29 2007 - 4:17pm)

RSS:
ಸೇಡು ತೀರಿಸುವ ಅವಕಾಶ
ರಣಜಿ ಟ್ರೋಫಿ (೪ - ೫ ದಿನಗಳ ಪಂದ್ಯ) ಸೆಮಿಫೈನಲ್ ನಲ್ಲಿ ಬಂಗಾಲ, ಕರ್ನಾಟಕವನ್ನು ಸೋಲಿಸಿದ್ದು ಎಲ್ಲರಿಗೂ ತಿಳಿದಿರುವುದು. ಈ ಸೋಲಿಗೆ ಸೇಡು ತೀರಿಸುವ ಅವಕಾಶವೊಂದು ತಾನಾಗಿಯೇ ಕರ್ನಾಟಕವನ್ನು ಹುಡುಕಿಕೊಂಡು ಬಂದಿದೆ. ರಣಜಿ ಏಕದಿನ ಟ್ರೋಫಿಯಲ್ಲಿ ಕರ್ನಾಟಕ ದಕ್ಷಿಣ ವಲಯದ ಅಗ್ರಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿದಂತೆ, ಬಂಗಾಲ ಪೂರ್ವ ವಲಯದ ದ್ವಿತೀಯ ಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿದ್ದು, ಈಗ ಮಾರ್ಚ್ ೧೩ ರಂದು ಧರ್ಮಶಾಲಾದಲ್ಲಿ ನಡೆಯಲಿರುವ ರಣಜಿ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಕರ್ನಾಟಕ ಮತ್ತೆ ಬಂಗಾಲವನ್ನು ಎದುರಿಸಲಿದೆ. ನಮ್ಮ ಆಟಗಾರರು ಈ ಅವಕಾಶದ ಸದುಪಯೋಗ ಮಾಡಿಕೊಳ್ಳಲಿ ಎಂಬ ಶುಭ ಹಾರೈಕೆ - ೧೫ ದಿನ ಮುಂಚಿತವಾಗಿಯೇ.
ಮಾರ್ಚ್ ೧೨ರಂದು ಕನ್ನಡಿಗ ಅರುಣ್ ಕುಮಾರ್ ನೇತೃತ್ವದ ಪೂರ್ವ ವಲಯದ ಅಗ್ರಸ್ಥಾನಿ ಅಸ್ಸಾಮ್, ದಕ್ಷಿಣ ವಲಯದ ದ್ವಿತೀಯ ಸ್ಥಾನಿ ತಮಿಳುನಾಡನ್ನು ಧರ್ಮಶಾಲಾದಲ್ಲೇ ಎದುರಿಸಲಿದೆ. ಅರುಣ್ ಮತ್ತು ಆನಂದ್ ಕಟ್ಟಿಗೆ ಶುಭ ಹಾರೈಕೆಗಳು.