Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು
- Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: Sunil Jayaprakash (Feb 26 2007 - 4:08pm)
- Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: ಶ್ಯಾಮ ಕಶ್ಯಪ (Feb 26 2007 - 4:57pm)
- Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: Sunil Jayaprakash (Feb 26 2007 - 5:38pm)
- Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: ಶ್ಯಾಮ ಕಶ್ಯಪ (Feb 26 2007 - 4:57pm)
- Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: anupkumart (Feb 26 2007 - 2:24pm)

RSS:
Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು
ಶ್ಯಾಮ್ ಕಶ್ಯಪ್, ನೀವು ಪ್ರಸ್ತಾಪಿಸಿದ, ರಕ್ತೇ ಕೊಟ್ಟೇವು, ನೀರು ಕೊಡೆವು ಎಂಬುದು ತಪ್ಪು ಎಂಬ ಮಾತಿಗೆ ನಾನೂ ದನಿಗೂಡಿಸುತ್ತೇನಾದರೂ ಮೇಲಿನ ಮಾತನ್ನು ನಾನು ಖಂಡಿತವಾಗಿಯೂ ಒಪ್ಪುವುದಿಲ್ಲ. ಇಡೀ ಚಳುವಳಿ ನೀವು ಪ್ರಸ್ತಾಪಿಸಿದಷ್ಟು ಸೀಮಿತವಾಗಿಲ್ಲ. ಮೈಸೂರು ಹೆದ್ದಾರಿಯಲ್ಲಿ ಅಡಿಗೆ ಮಾಡಿ, ತಮಿಳುನಾಡಿಗೆ ತೆರಳುತ್ತಿದ್ದ ಮಕ್ಕಳಿಗೆ ಊಟ ಬಡಿಸುವ ಮೂಲಕ ಪ್ರತಿಭಟನೆಗಳನ್ನು ಮಾಡಲಾಗಿದೆ. ಕಾವೇರಿ ಹೆಸರಿನಲ್ಲಿ ಇಲ್ಲಿಯವರೆಗೆ ನಡೆದ ಯಾವ ಪ್ರತಿಭಟನೆಯಲ್ಲಿಯೂ ಹಿಂಸೆಯಾಗಿಲ್ಲ. ಪ್ರತಿಭಟನೆ ಮಾಡುವವರೆಲ್ಲರೂ ಕರ್ನಾಟಕ ರಕ್ಷಣಾ ವೇದಿಕೆಯವರು, ವಾಟಾಳ್ ನಾಗರಾಜ್ ಚೇಲಾಗಳು ಎಂದೆಲ್ಲಾ ಕೆಟ್ಟದಾಗಿ ಯೋಚಿಸುವ ಕನ್ನಡಿಗರ ಸಂಖ್ಯೆಯೇನು ಕಡಿಮೆಯಿಲ್ಲ. ಇದು ಕೇವಲ ಅಪ್ರಬುದ್ಧತೆಯ ಲಕ್ಷಣವೆನ್ನುವುದನ್ನು ಒಪ್ಪಬೇಕಷ್ಟೇ. ಕಳೆದ ವಾರ, ನಾನು ಕಛೇರಿಗೆ ಬರುತ್ತಿದ್ದಾಗ ಒಂದೆಡೆ ಸಹಿ ಸಂಗ್ರಹ ಚಳುವಳಿ ನಡೆಯುತ್ತಿತ್ತು. ಇದರಿಂದಾಗಿ ನಾನು ಕಛೇರಿಗೆ ಸುಮಾರು ಎರಡೂವರೆ ತಾಸು ತಡವಾಗಿ ಬರಬೇಕಾಯಿತು. ಎರಡೇ ಎರಡು ನಿಮಿಷ ಟ್ರಾಫಿಕ್ ಜ್ಯಾಮಿಗೆ ರೋಸಿ, ಛೀ, ಥೂ, ಆಟೋದವರು ದರಿದ್ರದವರು ಎಂದೆಲ್ಲಾ ಓಗುಟ್ಟವ ಕನ್ನಡಿಗರಿಗೆ ಆಟೋದವರ ಕಷ್ಟ ಎಲ್ಲಿ ಅರ್ಥವಾಗಬೇಕು. ಪ್ರತಿಭಟನೆಯಿಂದ ಏನೂ ಕೆಲಸ ಆಗುವುದಿಲ್ಲ ಎಂಬ ಮಾತೆಲ್ಲ ಸುಳ್ಳು. ಕಡೇಪಕ್ಷ ಜನರಿಗೆ ನಮಗೆ ತೊಂದರೆಯಾಗಿದೆ ಎಂಬುದರ ಬಗ್ಗೆ ತಿಳಿವಳಿಕೆಯಾದರೂ ಬರುತ್ತದೆ. ಅಂದು ಇದೇ ಕಾರಣದಿಂದ ಕಛೇರಿಗೆ ಸುಮಾರಾಗಿ ತಡವಾಗಿ ಬಂದ ಇತರ ಸಹೋದ್ಯೋಗಿಗಳಿಗೆ ಅದರ ಹಿಂದಿನ ಉದ್ದೇಶ ತಿಳಿಹೇಳಿದ್ದೇನೆ. "ನಮ್ಮ ದೌರ್ಬಲ್ಯವೆಂದರೆ ಬೇರೆಯವರು ಎಲ್ಲಿ ಬೇಜಾರು ಮಾಡಿಕೊಂಡುಬಿಡುತ್ತಾರೋ ಏನೋ" ಅಂದುಕೊಂಡು ನಮ್ಮನ್ನು, ನಮ್ಮವರನ್ನು ನಾವೇ ಬಯ್ಯುವುದು, ಮತ್ತು ನಮ್ಮನ್ನು ನಾವೇ ಶಿಕ್ಷೆಗೊಳಪಡಿಸಿಕೊಳ್ಳುವುದು.
ಅಂದಹಾಗೆ, ಮುಖ್ಯವಾಗಿ ನಾವು ಗಮನಿಸಬೇಕಿರುವುದು ವರದಿಯನ್ನು ತಯಾರಿಸಿದ ಮುಖಂಡರುಗಳಲ್ಲೇ ಒಮ್ಮತವಿರಲಿಲ್ಲ ಎಂಬುದು. ಅನ್ಯಾಯವಾಗಿರುವದು ನಮಗೆ. ಕಾವೇರಿಯಂತಹ ವಿಷಯಗಳಲ್ಲಿ, ನನ್ನ ನಿಲುವಿನಿಂದ ನನ್ನ ಸಹೋದ್ಯೋಗಿಗಳಿಗೆ ಕಿರಿಕಿರಿಯಾಗುತ್ತದೆಯೇ ಎಂದು ಯೋಚಿಸುವುದು ಅಪ್ರಬುದ್ಧತೆಯ ಲಕ್ಷಣವಷ್ಟೇ. ಏಕೆಂದರೆ, ಬಹುತೇಕ ಕಂಪೆನಿಗಳಲ್ಲಿ, ವೈಯಕ್ತಿಕ ನಿಲುವುಗಳಿಗೆ ಅಡ್ಡಬರುವಂತಹ ನಿಯಮಗಳಿಲ್ಲ.
ಕಾವೇರಿ ಹೆಸರಿನಲ್ಲಿ ನಡೆಯುವ ಪ್ರತಿಭಟನೆಗಳು, ರಾಜಕೀಯ ಬಣ್ಣಕ್ಕೆ ತಿರುಗಿದರೆ ಅದಕ್ಕೆ ಹೊಣೆ ರಾಜಕೀಯ ಮುಖಂಡರಾಗುತ್ತಾರೆಯೇ ಹೊರತು, ರೈತರಾಗಲೀ, ಪ್ರತಿಭಟನಾಕಾರರಾಗಲೀ, ಪ್ರತಿಭಟನೆಯ ಉದ್ದೇಶವನ್ನಾಗಲೀ ಹೊಣೆಯಾಗಿಸಲು ಸಾಧ್ಯವಿಲ್ಲ. ಕಾವೇರಿ ಹೆಸರಿನಲ್ಲಿ ಇಲ್ಲಿವರೆಗೆ ನಡೆದ ಯಾವ ಪ್ರತಿಭಟನೆಗಲೂ ನನಗೆ ಅತಿಯಾಯಿತು ಎಂದೆನಿಸಲಿಲ್ಲ. ಕಾರಣ ಸುಸ್ಪಷ್ಟ. ಟ್ರಿಬ್ಯುನಲ್ ವರ್ಡಿಕ್ಟ್ ಅಂತು ಒಂಚೂರೂ ವೈಜ್ಞಾನಿಕವಾಗಿಲ್ಲ. ಅನ್ಯಾಯ ಆಗಿರುವದು ನಮಗೆ, ನಮ್ಮ ರೈತರಿಗೆ. ನೆನ್ನೆ ಭಾನುವಾರ, ಬೆಂಗಳೂರಿನಿಂದ ಘಾಟಿಗೆ ಹೋಗುವಾಗ, ಅಲ್ಲಲ್ಲಿ ಹೊಲ ಗದ್ದೆಯಲ್ಲಿ, ತೋಟಗಳಲ್ಲಿ ಬೆಳೆದಿದ್ದ ದ್ರಾಕ್ಷಿ, ಕಲ್ಲಂಗಡಿ, ಸೌತೇಕಾಯಿಗಳನ್ನು ಮಾರುವುದರ ಜೊತೆ, ರೈತರು ತೂಗುಬಿತ್ತಿಗಳನ್ನು ನೇತು ಹಾಕಿದ್ದರು. ಅವು ಫ್ಲೆಕ್ಸ್ ಬಾನರ್ರುಗಳಲ್ಲ, ಕೆಲವೆಡೆ chalk pieceನಿಂದ ಬರೆಯಲಾಗಿತ್ತು. ಇವನ್ನು ರಾಜಕೀಯ ಪ್ರೇರಿತ ಎಂದು ಹೇಗೆ ಹೇಳುವುದು. ಕಾವೇರಿ ತೀರ್ಪಿನಿಂದಾಗ ಅತಂತ್ರರಾಗಬಹುದೆಂಬ ಆತಂಕ ರೈತರನ್ನು ಕಾಡುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದಿತ್ತು. ಹಾಗೆಯೇ, ಮೈಸೂರಿನಲ್ಲಿಯೂ ನನ್ನ ಕೆಲವು ಇಂಜಿನಿಯರಿಂಗ್ ಓದುತ್ತಿರುವ ಸ್ನೇಹಿತರು ಪ್ರತಿಭಟನೆ ನಡೆಸಿದ್ದಾರೆ. ಇವುಗಳು ಯಾವುದೂ ಅತಿಯಾಯಿತು ಎನ್ನಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಕುಳಿತು ಸುಮ್ಮನೆ, ಪ್ರತಿಭಟನೆ ಹೆಚ್ಚಾಯಿತು ಎಂದರೆ ಅದಕ್ಕೆ ಯಾವ ಕವಡೆಯ ಕಿಮ್ಮತ್ತೂ ಸಿಗುವುದಿಲ್ಲ. ಏಕೆಂದರೆ ಬೆಂಗಳೂರು, ಕನ್ನಡಿಗರ ಹೆಮ್ಮೆ ಪಡಬೇಕಾದ ಊರು. ಕನ್ನಡಿಗರಿಗೆ ತೊಂದರೆಯಾದರೆ, ಈ ನಗರವನ್ನು ಬಳಸಿ ಕನ್ನಡಿಗರು ಹಕ್ಕೊತ್ತಾಯ ಮಾಡುವುದು ಕನ್ನಡಿಗರ fundamental right. ಅಂದ ಹಾಗೆ, ಬಹುತೇಕ ಕಂಪೆನಿಗಳು ಅವರಿಗಾದ ನಷ್ಟವನ್ನು ಬೇರೆ ರೀತಿಯಲ್ಲಿ ಸರಿದೂಗಿಸಿಕೊಂಡಿರುತ್ತಾರೆ. ಆ ದಿಸೆಯಲ್ಲಿ ನಾವು ನೀವು ಯೋಚನೆ ಮಾಡಬೇಕಿಲ್ಲ. ಏನೇ ಆದರೂ ಕನ್ನಡಿಗರಿಗೆ ಕೆಟ್ಟ ಹೆಸರು ಬರುವುದಿಲ್ಲ ಎಂದು ನಾವು ಯೋಚಿಸಬೇಕೇ ಹೊರತ್ತು, ಸ್ವಲ್ಪ ಪ್ರತಿಭಟನೆ ಮಾಡಿದರೂ ಕೆಟ್ಟೆ ಹಸರು ಬಂದು ಬಿಡುತ್ತದೆಯಪ್ಪಾ ಎಂದು ಯೋಚಿಸಬಾರದು.
ನಾನು ಹೇಳಬೇಕಿರುವುದಿಷ್ಟೇ, ನ್ಯಾಯವಂತೂ ಸಿಗಲಿಲ್ಲ, ಪ್ರತಿಭಟನೆಯ ಹಕ್ಕನ್ನೂ ಕಸಿದುಕೊಂಡು, ಪ್ರತಿಭಟನೆಗಳು ಅತಿಯಾಯಿತು ಎಂದು ಹೇಳುವ ದರ್ಪವನ್ನು ತೋರಲು ನನ್ನಿಂದ ಸಾಧ್ಯವಿಲ್ಲ. ಬೇರೆ ರಾಜ್ಯದ ರೈತರಿಗೂ ನಮ್ಮ ರಾಜ್ಯದ ರೈತರಿಗೂ ಇರುವ ಆರ್ಥಿಕ ಮಟ್ಟವನ್ನು ಅಭ್ಯಸಿಸಿದರೆ ಇವೆಲ್ಲ ತಿಳಿಯುವುದು. ಕರ್ನಾಟಕದ ಕೃಷಿಯ ಬಗ್ಗೆ ಪ್ರಸ್ತಾಪಿಸಿದರಿ. ಆದರೆ ಮಂಡ್ಯದಲ್ಲಿ ತಯಾರಾದ ಸಕ್ಕರೆಗೆ ಮಾರುಕಟ್ಟೆನ್ನೊದಗಿಸದೆ ಬೇರೆ ದೇಶದಿಂದ ಸಕ್ಕರೆಯನ್ನು ಆಮದು ಮಾಡಿಕೊಂಡ ನಿದರ್ಶನಗಳು ಎಷ್ಟೋ ಇವೆ. ಇಂತಹ ವಿವರಗಳನ್ನು ಪತ್ರಿಕೆಯವರೂ ಪ್ರಕಟಿಸುವುದಿಲ್ಲ. ಇಂಜಿನಿಯರುಗಳೂ ರೈತರ ಸಹಾಯಕ್ಕೆ ನಿಲ್ಲವುದಿಲ್ಲ. ಇಂತಹ ವರದಿಗಳನ್ನು ಪ್ರಕಟಿಸಿ ನಮ್ಮ ಎಂ.ಎಲ್. ಎ ಮತ್ತು ಎಂ.ಪಿಗಳಿಗೆ ರೈತಿರಿಂದಲೇ ಚುರುಕು ಮುಟ್ಟಿಸಲು ಸಾಧ್ಯವಿಲ್ಲವೇ ? ಇವುಗಳ ಪ್ರಸ್ತಾಪ ಮಾಡದೆ, ಸುಮ್ಮನೆ "ನಿನ್ನ ಪ್ರತಿಭಟನೆ ಹೆಚ್ಚಾಯಿತು, ತೆಪ್ಪಿಗರು" ಎಂದು ಹೇಳುವದಕ್ಕೆ ನನಗೆ ಖಂಡಿತ ಮನಸ್ಸು ಬರುವುದಿಲ್ಲ.
ಇಷ್ಟೆಲ್ಲ ಆಗುವಾಗಲೂ ನನಗನಿಸಿದ್ದ ಒಂದೇ ಒಂದು ಮಾತು ಏನು ಗೊತ್ತೇ. ಅಷ್ಟಕ್ಕೂ ಒಕ್ಕಲಿಗ ಸರ್ಕಾರವೇ ಇದ್ದು ಇನ್ನೂ ಒಂದು ತೀರ್ಪು ಹೊರಬಿದ್ದಿಲ್ಲ ಎಂದರೆ ಇದಕ್ಕಿಂತ ಬೇಜವಾಬ್ದಾರಿತನ ಇದೆಯೇ?
ರಕ್ತ ಕೊಟ್ಟೇವು, ಕಾವೇರಿ ಬಿಡೆವು ಎಂಬ ನಿಲುವು ೧೦೦ರಲ್ಲಿ ೧ ಪರ್ಸೆಂಟಿರಬಹುದೇ ಹೊರತ್ತು, ಪ್ರತಿಭಟನೆ ಮಾಡುವವರೆಲ್ಲರೂ ಹಾಗೆಯೇ ಇದ್ದಾರೆ ಎನ್ನುವುದು ತುಂಬಾ ತಪ್ಪು. ಹಾ! ನೀವು ಹಾಗೆ ಹೇಳಿದ್ದೀರಿ ಎಂದು ನಾನು ಹೇಳುತ್ತಿಲ್ಲ
. ತಮಿಳುನಾಡಿಗೆ ಕಾವೇರಿಯ ಮೇಲೆ ಎಷ್ಟು ನ್ಯಾಯಯುತ ಹಕ್ಕಿದೆಯೂ ಅಷ್ಟೇ ಹಕ್ಕು ಕರ್ನಾಟಕ್ಕೂ ಇದೆ ಎಂಬುದೇ ಬಹುತೇಕ ಪ್ರತಿಭಟನಾಕಾರರ ಒಕ್ಕೊರಲಿನ ಅಭಿಪ್ರಾಯ. ಕರ್ನಾಟಕದ ಹೊಲಗಳಿಗೂ ಕಾವೇರಿ ಹರಿಯಬೇಕು. ಕರ್ನಾಟಕದ ಫಲವತ್ತತೆಯೂ ಹೆಚ್ಚಾಗಬೇಕು. ನಮ್ಮ ರೈತರು ಕೂಡ ಹಣ ಸಂಪಾದಿಸಿ ಇತರರ ಹಾಗೆ ಶ್ರೀಮಂತರಾಗಬೇಕು. ಮಣ್ಣು ಚೆನ್ನಿದ್ದು, ಕೇವಲ ನೀರಿನಿಂದಾಗಿ ಒಬ್ಬ ರೈತ ಬೆಳೆ ತೆಗೆಯಲಾಗಲಿಲ್ಲವೆಂದರೆ ಇದರಲ್ಲಿ ತಪ್ಪು ಯಾರದು ?