Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು
- Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: Sunil Jayaprakash (Feb 26 2007 - 4:08pm)
- Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: ಶ್ಯಾಮ ಕಶ್ಯಪ (Feb 26 2007 - 4:57pm)
- Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: Sunil Jayaprakash (Feb 26 2007 - 5:38pm)
- Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: ಶ್ಯಾಮ ಕಶ್ಯಪ (Feb 26 2007 - 4:57pm)
- Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: anupkumart (Feb 26 2007 - 2:24pm)


RSS:
Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು
ಸುನೀಲ್,
ನನ್ನ ಲೇಖನವನ್ನು ದಯವಿಟ್ಟು ಮತ್ತೊಮ್ಮೆ ಓದಿ. ನಾನೆಲ್ಲೂ ನಡೆಯುತ್ತಿರುವ ಚಳುವಳಿಯಿಂದ ನಮಗೆ, ಅಥವ ಬೆಂಗಳೂರಿನವರಿಗೆ ತೊಂದರೆಯಾಗುತ್ತಿದೆ ಎಂದಾಗಲೀ, ಚಳುವಳಿ ಅತಿಯಾಯಿತು, ಇವರ ಚಳುವಳಿಯ ಹಕ್ಕನ್ನೇ ಕೀಳಬೇಕು ಎಂದಾಗಲಿ ಹೇಳೇ ಇಲ್ಲ. ವ್ಯತಿರಿಕ್ತವಾಗಿ, ನೀವು ನಿಮ್ಮ ಅನಿಸಿಕೆಯಲ್ಲಿ ಹೇಳಿರುವ ಬಹಳಷ್ಟು ವಿಷಯವನ್ನು ನಾನೂ ಹೇಳಿರುವೆ. ಜೊತೆಗೆ, ಈ ಚಳುವಳಿಯು ಕರ್ನಾಟಕಕ್ಕೆ ಸೀಮಿತವಾಗಿರಬಾರದು ಎಂದು ಹೇಳಿರುವುದರ ಉದ್ದೇಶ ಕೂಡ ಸ್ಪಷ್ಟವಾಗಿದೆ. ಚಳುವಳಿ ಕರ್ನಾಟಕದಲ್ಲೇ ಸೀಮಿತವಾದರೆ, ಅದು ಬಹುಮಟ್ಟಿಗೆ ಕೇವಲ ಭಾಗವಹಿಸದೇ ಇರುವವರ ವಿರುದ್ಧದ ಸಿಟ್ಟಿನ ಪ್ರದರ್ಶನವಾಗುತ್ತದೆ ಅಂತ. (ಇದೂ ತಪ್ಪಲ್ಲ, ಆದರೆ ಸಾಧಿಸುವುದು ಇನ್ನೂ ಮಹತ್ತರವಾದದ್ದು ಅಂತಲೂ ಹೇಳಿರುವೆ)
ಮುಖ್ಯವಾಗಿ
೧.
೨.
ಎಂಬ ವಾಕ್ಯವಗಳು ಇಲ್ಲಿ ಯಾಕೆ ಹೇಳಿರುವಿರೋ ನನಗೆ ತಿಳಿಯದಾಗಿದೆ. ನೀವು ಬರೆದಿರುವ ಬಹಳಷ್ಟು ವಿಷಯಗಳು ನಿಮ್ಮ ಯೋಚನೆ, ನಿಮ್ಮ ಅನಿಸಿಕೆಗಳಷ್ಟೇ, ನನ್ನ ಲೇಖನಕ್ಕೆ ಪ್ರತಿಕ್ರಿಯೆಯಲ್ಲ ಅಂದುಕೊಂಡಿದ್ದೇನೆ.
ಪ್ರತಿಭಟನೆ ಮಾಡಿದವರೆಲ್ಲ ಕಾವೇರಿ ನಮ್ಮದು, ಬೇರೆಯವರದ್ದಲ್ಲ ಎನ್ನುತ್ತಾರೆ ಎಂದೂ ನಾನೆಲ್ಲೂ ಹೇಳಿಲ್ಲ. ನಿದರ್ಶನ ಕೊಟ್ಟು ಹೇಳಬೇಕೆಂದರೆ ಹಾಗೆ ಹೇಳಿರುವುದು ನಮ್ಮ ಚಿತ್ರರಂಗದ ಬಹಳಷ್ಟು ಮಂದಿ, ಇದಕ್ಕೆ ಈಗಲೂ ಹಲವಾರು ಚ್ಯಾನೆಲ್ಲುಗಳಲ್ಲಿ ಕವರೇಜ್ ಬರುತ್ತಿರುತ್ತದೆ, ನೋಡಿ. ಅವರು ಹೇಳಿದ್ರೆ ರೈತರು ಹೇಳಿದ ಹಾಗೆ ಅಂತಲ್ಲ. ಟೀವಿಯಲ್ಲಿ ಹೀಗೆ ಎಲ್ಲರ ಮುಂದೆ ಹೇಳುವುದು ಕಳವಳಕಾರಿ ಎಂದಷ್ಟೇ ನನ್ನ ಅನಿಸಿಕೆ.
ಸರ್ಕಾರ ಆಗಲೀ ಇತರೆ ರಾಜಕಾರಣಿಯರಾಗಲೀ ಏಕೆ ಸುಮ್ಮನಿದ್ದಾರೆ ಎನ್ನುವುದಕ್ಕೂ ಕೆಲವು ಸಾಧ್ಯವಿರಬಹುದಾದ ಉತ್ತರಗಳನ್ನು ನೀಡಿದ್ದೇನೆ. ಸಮಸ್ಯೆ ರಾಜಕೀಯ ಆಟಕ್ಕೆ ಮಾರ್ಪಾಡಾಗಿದೆ, ಹಾಗು ಇದಕ್ಕೆ ಪ್ರತಿಭಟನಾಕಾರರೇ ಹೊಣೆ ಎಂದು ಅರ್ಥಬರುವಂತೆ ನಾನು ಹೇಳಿಲ್ಲ. ಅದನ್ನು ತಮ್ಮ ಅನಿಸಿಕೆಯಷ್ಟೇ ಎಂದು ತಿಳಿದಿದ್ದೇನೆ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ