ನಿಜಕ್ಕೂ ಈ ಪುಸ್ತಕದ ಶೀರ್ಷಿಕೆ "ಮಾಯಾಲೋಕ" ಅನ್ವರ್ಥನಾಮವೇ! ಒಂದು ಹಂದರವಾಗಲೀ, ಕ್ರಮವಾಗಲೀ ಇಲ್ಲದೆ ವಿಭಿನ್ನವಾಗಿ ಸಾಗುವ ನಿರೂಪಣೆ ಉಂಟುಮಾಡುವ ಗೊಂದಲ-ಗೋಜಲು ಒಂದು ಕಡೆಯಾದರೆ, ಪ್ರತಿ ಪುಟದಲ್ಲೂ ಇರುವ ಕಪ್ಪು-ಬಿಳುಪು ಚಿತ್ರಗಳು ಸೃಷ್ಟಿಸುವ ಭ್ರಮೆ ಇನ್ನೊಂದೆಡೆ. ಎಲ್ಲವೂ ಸೇರಿ ಒಂದು ವಿಭಿನ್ನ ಮಾಯಾಲೋಕವನ್ನೇ ನಮ್ಮ ಮುಂದಿಡುತ್ತವೆ. ಕಾದಂಬರಿಯನ್ನು ಓದಿ ಮುಗಿಸಿದ ನಂತರ ನನಗಾದ ಅನುಭವ ಒಂದು ಹದ ಮಳೆಯಲ್ಲಿ ನೆಂದು ಬಂದಂತೆ, ಟೆಂಟೊಂದರಲ್ಲಿ ಸಿನೆಮಾ ನೋಡಿ ಬಂದಂತೆ, ನನ್ನದೇ ನೆನಪಿನ ಓಣಿಗಳಲ್ಲಿ ಸುತ್ತಾಡಿ ಬಂದಂತೆ. ಹೇಳಲು ಸಾಧ್ಯವಿಲ್ಲ, ಆದರೆ ಅದರ ರಸಾನುಭವ ಉಂಟಾದದ್ದು ಮಾತ್ರ ಸತ್ಯ.
ಏಡಿಗಳನ್ನು ಗುಡ್ಡೆಹಾಕಿ ಹಿಡಿಯುವ ಸಂದರ್ಭ, ಹಾವು ಓಡಿಸುವುದು ಇವೆರಡೂ ತೇಜಸ್ವಿಯವರ ಹಾಸ್ಯಭರಿತ ಅನನ್ಯ ನಿರೂಪಣಾ ವಿಧಾನದ ಎರಡು ಉದಾಹರಣೆಗಳಷ್ಟೇ. ಮೇಲ್ನೋಟಕ್ಕೆ ಹಾಸ್ಯದ ಹಾಗೆ ಕಾಣುವ ಈ ಕಥೆ, ಉದ್ದಕ್ಕೂ ಕಂಡೂ ಕಾಣದ ಹಾಗೆ (ಗುಪ್ತಗಾಮಿನಿಯಂತೆ) ಜಾಗತೀಕರಣದ ಪರಿಣಾಮಗಳನ್ನು ಯಾವುದೇ ಭಾಷಣಗಳಿಲ್ಲದೆ, ಗಹನವಾದ ಉದಾಹರಣೆಗಳಿಲ್ಲದೆ, ಅತ್ಯಂತ ಸರಳವಾಗಿ ಬಿಚ್ಚಿಡುತ್ತಾ ಹೋಗುತ್ತದೆ. ಇದರ ಪರಾಕಾಷ್ಠೆಯೆಂದರೆ ಕೊನೆಯಲ್ಲಿ ತಾವೇತಕ್ಕೆ ಮುಷ್ಕರ ಮಾಡುತ್ತಿದ್ದೇವೆ ಎನ್ನುವುದನ್ನೂ ತಿಳಿಯದೇ, ಮುಷ್ಕರಕ್ಕಿಳಿದು, ಅಸಹಾಯಕರಾಗಿ ಒದ್ದಾಡುವ ಜನರ ಚಿತ್ರಣ. ಮಾಯಾಲೋಕದ ಈ ಹಂತದಲ್ಲಿ, ಕಥೆಗಾರರ ಮೂಲ ಆಶಯ ಹಾಸ್ಯ ಅಥವಾ ಒಂದು ರಮ್ಯ ಕಥಾನಕವಷ್ಟೇ ಅಲ್ಲ ಅಂತನ್ನಿಸಿ, ಚಿಂತನೆಗೆ ಹಚ್ಚುತ್ತದೆ.
ಅನಿಸಿಕೆ: ಮಾಯಾಲೋಕ-೧: ವಿಹಾರಾನಂದ
ನಿಜಕ್ಕೂ ಈ ಪುಸ್ತಕದ ಶೀರ್ಷಿಕೆ "ಮಾಯಾಲೋಕ" ಅನ್ವರ್ಥನಾಮವೇ! ಒಂದು ಹಂದರವಾಗಲೀ, ಕ್ರಮವಾಗಲೀ ಇಲ್ಲದೆ ವಿಭಿನ್ನವಾಗಿ ಸಾಗುವ ನಿರೂಪಣೆ ಉಂಟುಮಾಡುವ ಗೊಂದಲ-ಗೋಜಲು ಒಂದು ಕಡೆಯಾದರೆ, ಪ್ರತಿ ಪುಟದಲ್ಲೂ ಇರುವ ಕಪ್ಪು-ಬಿಳುಪು ಚಿತ್ರಗಳು ಸೃಷ್ಟಿಸುವ ಭ್ರಮೆ ಇನ್ನೊಂದೆಡೆ. ಎಲ್ಲವೂ ಸೇರಿ ಒಂದು ವಿಭಿನ್ನ ಮಾಯಾಲೋಕವನ್ನೇ ನಮ್ಮ ಮುಂದಿಡುತ್ತವೆ. ಕಾದಂಬರಿಯನ್ನು ಓದಿ ಮುಗಿಸಿದ ನಂತರ ನನಗಾದ ಅನುಭವ ಒಂದು ಹದ ಮಳೆಯಲ್ಲಿ ನೆಂದು ಬಂದಂತೆ, ಟೆಂಟೊಂದರಲ್ಲಿ ಸಿನೆಮಾ ನೋಡಿ ಬಂದಂತೆ, ನನ್ನದೇ ನೆನಪಿನ ಓಣಿಗಳಲ್ಲಿ ಸುತ್ತಾಡಿ ಬಂದಂತೆ. ಹೇಳಲು ಸಾಧ್ಯವಿಲ್ಲ, ಆದರೆ ಅದರ ರಸಾನುಭವ ಉಂಟಾದದ್ದು ಮಾತ್ರ ಸತ್ಯ.
ಏಡಿಗಳನ್ನು ಗುಡ್ಡೆಹಾಕಿ ಹಿಡಿಯುವ ಸಂದರ್ಭ, ಹಾವು ಓಡಿಸುವುದು ಇವೆರಡೂ ತೇಜಸ್ವಿಯವರ ಹಾಸ್ಯಭರಿತ ಅನನ್ಯ ನಿರೂಪಣಾ ವಿಧಾನದ ಎರಡು ಉದಾಹರಣೆಗಳಷ್ಟೇ. ಮೇಲ್ನೋಟಕ್ಕೆ ಹಾಸ್ಯದ ಹಾಗೆ ಕಾಣುವ ಈ ಕಥೆ, ಉದ್ದಕ್ಕೂ ಕಂಡೂ ಕಾಣದ ಹಾಗೆ (ಗುಪ್ತಗಾಮಿನಿಯಂತೆ) ಜಾಗತೀಕರಣದ ಪರಿಣಾಮಗಳನ್ನು ಯಾವುದೇ ಭಾಷಣಗಳಿಲ್ಲದೆ, ಗಹನವಾದ ಉದಾಹರಣೆಗಳಿಲ್ಲದೆ, ಅತ್ಯಂತ ಸರಳವಾಗಿ ಬಿಚ್ಚಿಡುತ್ತಾ ಹೋಗುತ್ತದೆ. ಇದರ ಪರಾಕಾಷ್ಠೆಯೆಂದರೆ ಕೊನೆಯಲ್ಲಿ ತಾವೇತಕ್ಕೆ ಮುಷ್ಕರ ಮಾಡುತ್ತಿದ್ದೇವೆ ಎನ್ನುವುದನ್ನೂ ತಿಳಿಯದೇ, ಮುಷ್ಕರಕ್ಕಿಳಿದು, ಅಸಹಾಯಕರಾಗಿ ಒದ್ದಾಡುವ ಜನರ ಚಿತ್ರಣ. ಮಾಯಾಲೋಕದ ಈ ಹಂತದಲ್ಲಿ, ಕಥೆಗಾರರ ಮೂಲ ಆಶಯ ಹಾಸ್ಯ ಅಥವಾ ಒಂದು ರಮ್ಯ ಕಥಾನಕವಷ್ಟೇ ಅಲ್ಲ ಅಂತನ್ನಿಸಿ, ಚಿಂತನೆಗೆ ಹಚ್ಚುತ್ತದೆ.
ಪೂರಕ ಓದಿಗೆ, "ಮಾಯಾಲೋಕ"ದ ಬಗ್ಗೆ ಜಾನಕಿಯವರ ಈ ಪರಿಚಯಾತ್ಮಕ ಬರಹವನ್ನೂ ಓದಿ ನೋಡಿ: ಥ್ಯಾಂಕ್ಯೂ ಮಿಸ್ಟರ್ ತೇಜಸ್ವಿ!
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)