~
Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: ವೈಭವ (Nov 29 2007 - 2:32pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: shreekant.mishrikoti (Nov 29 2007 - 1:04pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (Nov 29 2007 - 1:43pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: mahesha (Nov 29 2007 - 3:34pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: shreekant.mishrikoti (Nov 29 2007 - 2:46pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (Nov 29 2007 - 4:07pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (Nov 29 2007 - 1:43pm)
- ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: mahesha (Jul 14 2007 - 11:20pm)
- Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: pavanaja (Mar 12 2007 - 12:15am)
- Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Khavi (Mar 22 2007 - 2:50pm)
- Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: ASHOKKUMAR (Mar 11 2007 - 9:22pm)
- Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: H.S.R.Raghavendra Rao (Mar 11 2007 - 10:29pm)
- ಚಿಂತನಾ ಬರಹದ ಆಶಯ By: Sunil Jayaprakash (Mar 14 2007 - 9:42pm)
- Status Message By: mahesha (Mar 15 2007 - 12:09am)
- ಚಿಂತನಾ ಬರಹದ ಆಶಯ By: Sunil Jayaprakash (Mar 14 2007 - 9:42pm)
- Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: H.S.R.Raghavendra Rao (Mar 11 2007 - 10:29pm)

RSS:
Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ
ಪ್ರೀತಿಯ ಸುನೀಲ್ ಜಯಪ್ರಕಾಶ್ ಅವರೇ,
ನಿಮ್ಮ ಅಪೇಕ್ಷೆಯಂತೆ ಆ ವಚನದ ಪೂರ್ಣ ಪಾಠವನ್ನು ಇಲ್ಲಿ ಕೊಟ್ಟಿದ್ದೇನೆ:
'ಏನಿ ಬಂದಿರಿ, ಹದುಳವಿದ್ದಿರೆ?' ಎಂದರೆ
ನಿಮ್ಮ ಮೈಸಿರಿ ಹಾರಿಹೋಹುದ?
'ಕುಳ್ಳಿರೆಂ'ದರೆ ನೆಲ ಕುಳಿಹೋಹುದೇ?
ಒಡನೆ ನುಡಿದರೆ ಶಿರ-ಹೊಟ್ಟೆಯೊಡೆವುದೇ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ,
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮದೇವನು ?
-ಬಸವಣ್ಣ
ಈ ಪಾಠವನ್ನು ಶಿ.ಶಿ. ಬಸವನಾಳ ಅವರ ಪುಸ್ತಕದಿಂದ ತೆಗೆದು ಕೊಟ್ಟದ್ದೇನೆ. ನೀವು ನಡೆಸುತ್ತಿರುವ ಹುಡುಕಾಟಕ್ಕೆ ವಚನಗಳು ಅತ್ಯುತ್ತಮ ಆಕರಗಳು. ಅಲ್ಲಿನ ಅನೇಕ ಪದಗಳು ಹಳಗನ್ನಡದಿಂದ ಮತ್ತು ಸಂಸ್ಕೃತದಿಂದ ದೂರವಾಗಿ ಹೊಸ ರೂಪಗಳನ್ನು ಪಡೆಯುತ್ತಿರುತ್ತವೆ.
ಇನ್ನು ನಿಮ್ಮ ವಿಚಾರಗಳ ಬಗ್ಗೆ, ಬಹಳ ಸಂಗ್ರಹವಾಗಿ ಪ್ರತಿಕ್ರಿಯಿಸುತ್ತೇನೆ.
೧. ಯಾವುದೇ ಭಾಷೆಯ ಚರಿತ್ರೆಯಲ್ಲಿ ನೀವು ಸೂಚಿಸಿರುವಂತಹ ಬದಲಾವಣೆಗಳು (ಧ್ವನಿವ್ಯತ್ಯಾಸಗಳು) ಕಾಲದಿಂದ ಕಾಲಕ್ಕೆ ನಡೆಯುತ್ತವೆ. ಹಾಗೆ ಆಗಲು ಕಾರಣಗಳಿರುತ್ತವೆ. ಒಂದು ಅವಧಿಯ ನಂತರ ಅವು ನಿಂತುಹೋಗುತ್ತವೆ. ಉದಾಹರಣೆಗೆ ಈಗ ಪ ಕಾರದಿಂದ ಮೊದಲಾಗುವ ಪದಗಳು ಹ ಕಾರಾದಿ ಆಗುವುದಿಲ್ಲ.
೨. ಒಂದು ಪದದ ಮೂಲ ರೂಪ ಮತ್ತು ಹೊಸ ರೂಪಗಳನ್ನು ಬೇರೆ ಬೇರೆ ಅರ್ಥಗಳಲ್ಲಿ ಬಳಸುವ ಕೆಲಸವು ಭಾಷೆಯಲ್ಲಿ ನಡೆಯುತ್ತದೆ. ಉದಾ: ಯೋಗಿ-ಜೋಗಿ, ಯಾತ್ರೆ-ಜಾತ್ರೆ, ಸಂಸ್ಥೆ-ಸಂತೆ ಇತ್ಯಾದಿ.
೩. ಒಂದು ರೂಪವನ್ನು ನಾಮಪದವಾಗಿ ಮತ್ತೊಂದನ್ನು ಕ್ರಿಯಾಪದವಾಗಿ ಬಳಸುವ ನಿಮ್ಮ ಸೂಚನೆಯು ಕುತೂಹಲಕಾರಿಯಾಗಿದೆ. ಈಗ ಇರುವಂತೆ ಒಂದೇ ಪದವು ಸಂದರ್ಭಕ್ಕೆ ಅನುಗುಣವಾಗಿ ಎರಡೂ ಕೆಲಸಗಳನ್ನು ನಿರ್ವಹಿಸುತ್ತದೆ.
ಉದಾ: ನೀನು ಒಂದು ಹಾಡು ಹಾಡು.
೪. ಹೊಸ ಪದಗಳನ್ನು ಹೊಸ ಅರ್ಥದಲ್ಲಿ ಮತ್ತು ಹಳೆಯ ಪದಗಳನ್ನು ಹೊಸ ಅರ್ಥದಲ್ಲಿ ಬಳಸುವ ಕೆಲಸವು ಒಬ್ಬ ವ್ಯಕ್ತಿಯಿಂದ ಮೊದಲಾದರೂ ಕ್ರಮೇಣ ಎಲ್ಲ ಕಡೆಯೂ ಚಾಲ್ತಿಗೆ ಬರಬಹುದು.
ಉದಾ: ಶ್ರೀಸಾಮಾನ್ಯ, ಹಂಸಗೀತೆ
ಪಾರಿಭಾಷಿಕವಾಗಿ ಬಳಸಿದರೆ, ಆ ಅರ್ಥವನ್ನು ವಿವರಿಸುವ ಹೊಣೆಯು ಬಳಸುವವನಿಗೆ ಇರುತ್ತದೆ.
ಉದಾ: Status Message = 'ಹದುಳ ಸಂದೇಶ' ವೇ?
ಸಾಮಾನ್ಯವಾಗಿ 'ಹದುಳ' ಎಂದರೆ "ಯೋಗಕ್ಷೇಮ' ಎನ್ನುವುದಕ್ಕೆ ಹತ್ತಿರವಾದ ಪದ. ಕಂಪ್ಯುಟರ್ ಅನ್ನು ಬಳಸುವವರಿಗೆ ಆ ಅರ್ಥಛಾಯೆಯು ಹೇಗೂ ಗೊತ್ತಿರುವುದಿಲ್ಲ. ಆದ್ದರಿಂದ ಇದು ಹೇಗೂ ಹೊಸ ಪದವೇ ಆಗುತ್ತದೆ.
೫. ನಿಮಗೆ ಅಗತ್ಯವೆನಿಸಿದರೆ, ಈ ಚರ್ಚೆಯನ್ನು ಮುಂದುವರಿಸೋಣ.
H.S.Raghavendra Rao