ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ

March 11, 2007 - 10:29pm — H.S.R.Raghavend...

Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ

H.S.R.Raghavendra Rao's picture

ಪ್ರೀತಿಯ ಸುನೀಲ್ ಜಯಪ್ರಕಾಶ್ ಅವರೇ,

ನಿಮ್ಮ ಅಪೇಕ್ಷೆಯಂತೆ ಆ ವಚನದ ಪೂರ್ಣ ಪಾಠವನ್ನು ಇಲ್ಲಿ ಕೊಟ್ಟಿದ್ದೇನೆ:

'ಏನಿ ಬಂದಿರಿ, ಹದುಳವಿದ್ದಿರೆ?' ಎಂದರೆ

ನಿಮ್ಮ ಮೈಸಿರಿ ಹಾರಿಹೋಹುದ?

'ಕುಳ್ಳಿರೆಂ'ದರೆ ನೆಲ ಕುಳಿಹೋಹುದೇ?

ಒಡನೆ ನುಡಿದರೆ ಶಿರ-ಹೊಟ್ಟೆಯೊಡೆವುದೇ?

ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ,

ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮದೇವನು ?

-ಬಸವಣ್ಣ

ಈ ಪಾಠವನ್ನು ಶಿ.ಶಿ. ಬಸವನಾಳ ಅವರ ಪುಸ್ತಕದಿಂದ ತೆಗೆದು ಕೊಟ್ಟದ್ದೇನೆ. ನೀವು ನಡೆಸುತ್ತಿರುವ ಹುಡುಕಾಟಕ್ಕೆ ವಚನಗಳು ಅತ್ಯುತ್ತಮ ಆಕರಗಳು. ಅಲ್ಲಿನ ಅನೇಕ ಪದಗಳು ಹಳಗನ್ನಡದಿಂದ ಮತ್ತು ಸಂಸ್ಕೃತದಿಂದ ದೂರವಾಗಿ ಹೊಸ ರೂಪಗಳನ್ನು ಪಡೆಯುತ್ತಿರುತ್ತವೆ.

ಇನ್ನು ನಿಮ್ಮ ವಿಚಾರಗಳ ಬಗ್ಗೆ, ಬಹಳ ಸಂಗ್ರಹವಾಗಿ ಪ್ರತಿಕ್ರಿಯಿಸುತ್ತೇನೆ.

೧. ಯಾವುದೇ ಭಾಷೆಯ ಚರಿತ್ರೆಯಲ್ಲಿ ನೀವು ಸೂಚಿಸಿರುವಂತಹ ಬದಲಾವಣೆಗಳು (ಧ್ವನಿವ್ಯತ್ಯಾಸಗಳು) ಕಾಲದಿಂದ ಕಾಲಕ್ಕೆ ನಡೆಯುತ್ತವೆ. ಹಾಗೆ ಆಗಲು ಕಾರಣಗಳಿರುತ್ತವೆ. ಒಂದು ಅವಧಿಯ ನಂತರ ಅವು ನಿಂತುಹೋಗುತ್ತವೆ. ಉದಾಹರಣೆಗೆ ಈಗ ಪ ಕಾರದಿಂದ ಮೊದಲಾಗುವ ಪದಗಳು ಹ ಕಾರಾದಿ ಆಗುವುದಿಲ್ಲ.

೨. ಒಂದು ಪದದ ಮೂಲ ರೂಪ ಮತ್ತು ಹೊಸ ರೂಪಗಳನ್ನು ಬೇರೆ ಬೇರೆ ಅರ್ಥಗಳಲ್ಲಿ ಬಳಸುವ ಕೆಲಸವು ಭಾಷೆಯಲ್ಲಿ ನಡೆಯುತ್ತದೆ. ಉದಾ: ಯೋಗಿ-ಜೋಗಿ, ಯಾತ್ರೆ-ಜಾತ್ರೆ, ಸಂಸ್ಥೆ-ಸಂತೆ ಇತ್ಯಾದಿ.

೩. ಒಂದು ರೂಪವನ್ನು ನಾಮಪದವಾಗಿ ಮತ್ತೊಂದನ್ನು ಕ್ರಿಯಾಪದವಾಗಿ ಬಳಸುವ ನಿಮ್ಮ ಸೂಚನೆಯು ಕುತೂಹಲಕಾರಿಯಾಗಿದೆ. ಈಗ ಇರುವಂತೆ ಒಂದೇ ಪದವು ಸಂದರ್ಭಕ್ಕೆ ಅನುಗುಣವಾಗಿ ಎರಡೂ ಕೆಲಸಗಳನ್ನು ನಿರ್ವಹಿಸುತ್ತದೆ.

ಉದಾ: ನೀನು ಒಂದು ಹಾಡು ಹಾಡು.

೪. ಹೊಸ ಪದಗಳನ್ನು ಹೊಸ ಅರ್ಥದಲ್ಲಿ ಮತ್ತು ಹಳೆಯ ಪದಗಳನ್ನು ಹೊಸ ಅರ್ಥದಲ್ಲಿ ಬಳಸುವ ಕೆಲಸವು ಒಬ್ಬ ವ್ಯಕ್ತಿಯಿಂದ ಮೊದಲಾದರೂ ಕ್ರಮೇಣ ಎಲ್ಲ ಕಡೆಯೂ ಚಾಲ್ತಿಗೆ ಬರಬಹುದು.

ಉದಾ: ಶ್ರೀಸಾಮಾನ್ಯ, ಹಂಸಗೀತೆ

ಪಾರಿಭಾಷಿಕವಾಗಿ ಬಳಸಿದರೆ, ಆ ಅರ್ಥವನ್ನು ವಿವರಿಸುವ ಹೊಣೆಯು ಬಳಸುವವನಿಗೆ ಇರುತ್ತದೆ.

ಉದಾ: Status Message = 'ಹದುಳ ಸಂದೇಶ' ವೇ?

ಸಾಮಾನ್ಯವಾಗಿ 'ಹದುಳ' ಎಂದರೆ "ಯೋಗಕ್ಷೇಮ' ಎನ್ನುವುದಕ್ಕೆ ಹತ್ತಿರವಾದ ಪದ. ಕಂಪ್ಯುಟರ್ ಅನ್ನು ಬಳಸುವವರಿಗೆ ಆ ಅರ್ಥಛಾಯೆಯು ಹೇಗೂ ಗೊತ್ತಿರುವುದಿಲ್ಲ. ಆದ್ದರಿಂದ ಇದು ಹೇಗೂ ಹೊಸ ಪದವೇ ಆಗುತ್ತದೆ.

೫. ನಿಮಗೆ ಅಗತ್ಯವೆನಿಸಿದರೆ, ಈ ಚರ್ಚೆಯನ್ನು ಮುಂದುವರಿಸೋಣ.

H.S.Raghavendra Rao

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (13 replies) March 9, 2007 - 3:11pm
  • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: ವೈಭವ (Nov 29 2007 - 2:32pm)
  • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: shreekant.mishrikoti (Nov 29 2007 - 1:04pm)
    • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (Nov 29 2007 - 1:43pm)
      • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: mahesha (Nov 29 2007 - 3:34pm)
      • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: shreekant.mishrikoti (Nov 29 2007 - 2:46pm)
        • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (Nov 29 2007 - 4:07pm)
  • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: mahesha (Jul 14 2007 - 11:20pm)
  • Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: pavanaja (Mar 12 2007 - 12:15am)
    • Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Khavi (Mar 22 2007 - 2:50pm)
  • Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: ASHOKKUMAR (Mar 11 2007 - 9:22pm)
    • Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: H.S.R.Raghavendra Rao (Mar 11 2007 - 10:29pm)
      • ಚಿಂತನಾ ಬರಹದ ಆಶಯ By: Sunil Jayaprakash (Mar 14 2007 - 9:42pm)
        • Status Message By: mahesha (Mar 15 2007 - 12:09am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
  • ಗಣೇಶ
    ಉ: ವೈಕುಂಠ ಏಕಾದಶಿ
    January 7, 2009 - 10:57pm
  • Nagaraj.G
    ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
    January 7, 2009 - 10:49pm
  • Narayana
    ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
    January 7, 2009 - 10:46pm
ಇನ್ನಷ್ಟು


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator