ಜೈ ಪ್ರಜಾಪ್ರಭುತ್ವ! ನಿಜಕ್ಕೂ ಬ್ರಿಟಿಷರು ನಮ್ಮನ್ನು ಸುಲಿಗೆ ಮಾಡಿದರೋ, ಅಥವಾ ಅವರಿಗಿಂತ ಈ ಐವತ್ತು ವರ್ಷಗಳಲ್ಲಿ ನಮ್ಮವರೇ ನಮ್ಮನ್ನು ಸುಲಿದರೋ ಎಂದು ಅನುಮಾನ ಬರುತ್ತಿದೆ. ಒಟ್ಟಿನಲ್ಲಿ, ಘನ ಸರ್ಕಾರದ ಸಂದೇಶ ಇಷ್ಟೇ: ನ್ಯಾಯವಾಗಿ ದುಡಿಮೆ ಮಾಡೋದು ತಪ್ಪು. ಲಂಚದಲ್ಲಿ ಕೋಟ್ಯಾಂತರ ರೂಪಾಯಿ ಹಣ ಹೊಡೆಯಿರಿ. ನಿಮಗೆ ಎಲ್ಲ ರೀತಿಯ ಸೆಕ್ಯೂರಿಟಿ ಕೊಡುತ್ತೀವಿ. ನೀವೇ ನೋಡಿ; ನೂರು ರೂಪಾಯಿ ಕದ್ದವನಿಗೆ ಜೈಲಿನಲ್ಲಿ ಯಾವುದೇ ವಿಚಾರಣೆಯ ಹಂಗೂ ಇಲ್ಲದೇ ಒಂದು ರಾತ್ರಿ ಕೊಳೆಹಾಕುತ್ತಾರೆ. ಅದೇ ನೂರು ಕೋಟಿ "ಸ್ಕ್ಯಾಮ್"ನಲ್ಲಿ ಭಾಗಿಯಾದರೆ, ವಿಚಾರಣೆ, ಜಾಮೀನು, ಪೋಲೀಸ್ ಭದ್ರತೆ ಇತ್ಯಾದಿ ಇತ್ಯಾದಿ ನಾಟಕಗಳು. ಆ ಕೇಸು ಏನಿಲ್ಲವೆಂದರೂ ಒಂದು ವರ್ಷ ಎಳೆಯುತ್ತದೆ. ಎಂತಹ "ಸಾಮಾಜಿಕ ನ್ಯಾಯ" ಅಲ್ಲವೇ?
ಈ "ಫೈನ್ ಮಸೂದೆ" (ಫೈನ್ ಅಂದರೆ ಚೆನ್ನ ಅಂತಲ್ಲ ಮತ್ತೆ!) ಅಂಗೀಕೃತವಾದಲ್ಲಿ, RTO ಅಧಿಕಾರಿಗಳು "ಇಲ್ಲಿ ರಿಯಾಯತಿ ದರದಲ್ಲಿ ಫೈನ್ ಪಾಸುಗಳು ದೊರೆಯುತ್ತವೆ" ಅಂತ ತಮ್ಮ ಮನೆಯಲ್ಲೇ ಹೊಸ ದಂಧೆ ಶುರು ಮಾಡಬಹುದೇನೋ? ಆಗ ರಸ್ತೆಗಿಳಿಯುವ ಅವಶ್ಯಕತೆಯೂ ಇರುವುದಿಲ್ಲ ನೋಡಿ! ಅಥವಾ ಮಹಾಭಾರತದ ಬಕಾಸುರನ ತರಹ, ಆಯಾ ಏರಿಯಾದವರೆಲ್ಲ, ತಿಂಗಳಿಗೊಮ್ಮೆ ಇಷ್ಟು ಅಂತ ಹಣವನ್ನು ಒಗ್ಗೂಡಿಸಿ ಆ ಬಡಾವಣೆಯ ಅಧಿಕಾರಿಗೆ ಕೊಟ್ಟರೆ ಆಯಿತು. ಆ ಬಡಾವಣೆಯ ಯಾವ ಗಾಡಿಯನ್ನೂ ಆ ತಿಂಗಳಿನಲ್ಲಿ ಹಿಡಿಯುವುದಿಲ್ಲ ಅಂತ ವಚನ ಕೊಡಬಹುದೇನೋ?
ಯಾವುದೇ ಆಗಲಿ, ವಿಪರೀತಕ್ಕೆ ತಲುಪಿದಾಗ ಮಾತ್ರ ಸಾಮಾಜಿಕ ಆಂದೋಳನವೊಂದು ಉಂಟಾಗಲು ಸಾಧ್ಯವೆಂದು ಇತಿಹಾಸ ಪದೇ ಪದೇ ತೋರಿಸಿಕೊಟ್ಟಿದೆ. ಈ ರೀತಿಯ ಹುಚ್ಚು ಏರಿಕೆಗಳು ಅಂತಹದೊಂದು ಸಂಧಿಕಾಲಕ್ಕೆ ನಮ್ಮನ್ನು ತಯಾರುಮಾಡಲು ಬಂದೊದಗಿರುವ ವರಗಳೇ ಏನೋ! ಮತ್ತೊಮ್ಮೆ ಜೈ ಪ್ರಜಾಪ್ರಭುತ್ವ.
ಕೊನೆಹನಿ: ಈ ಯೋಜನೆಯನ್ನು ಮಂಡಿಸಿದವರಿಗೆ ಯಾವುದಾದರೂ "ಬೀದಿ ನಾಯಿ" ಕಚ್ಚಿದ್ದರಿಂದ ಇಂತಹ ಅಮೋಘವಾದ ಆಲೋಚನೆ ಹೊಳೆದಿರಬಹುದೇ?
ಪ್ರಜಾಪ್ರಭುತ್ವಕ್ಕೆ ಜೈ: ನಡುಗಿಸಲಿರುವ "ಮಾಮು ಫೈನು"
ಜೈ ಪ್ರಜಾಪ್ರಭುತ್ವ! ನಿಜಕ್ಕೂ ಬ್ರಿಟಿಷರು ನಮ್ಮನ್ನು ಸುಲಿಗೆ ಮಾಡಿದರೋ, ಅಥವಾ ಅವರಿಗಿಂತ ಈ ಐವತ್ತು ವರ್ಷಗಳಲ್ಲಿ ನಮ್ಮವರೇ ನಮ್ಮನ್ನು ಸುಲಿದರೋ ಎಂದು ಅನುಮಾನ ಬರುತ್ತಿದೆ. ಒಟ್ಟಿನಲ್ಲಿ, ಘನ ಸರ್ಕಾರದ ಸಂದೇಶ ಇಷ್ಟೇ: ನ್ಯಾಯವಾಗಿ ದುಡಿಮೆ ಮಾಡೋದು ತಪ್ಪು. ಲಂಚದಲ್ಲಿ ಕೋಟ್ಯಾಂತರ ರೂಪಾಯಿ ಹಣ ಹೊಡೆಯಿರಿ. ನಿಮಗೆ ಎಲ್ಲ ರೀತಿಯ ಸೆಕ್ಯೂರಿಟಿ ಕೊಡುತ್ತೀವಿ. ನೀವೇ ನೋಡಿ; ನೂರು ರೂಪಾಯಿ ಕದ್ದವನಿಗೆ ಜೈಲಿನಲ್ಲಿ ಯಾವುದೇ ವಿಚಾರಣೆಯ ಹಂಗೂ ಇಲ್ಲದೇ ಒಂದು ರಾತ್ರಿ ಕೊಳೆಹಾಕುತ್ತಾರೆ. ಅದೇ ನೂರು ಕೋಟಿ "ಸ್ಕ್ಯಾಮ್"ನಲ್ಲಿ ಭಾಗಿಯಾದರೆ, ವಿಚಾರಣೆ, ಜಾಮೀನು, ಪೋಲೀಸ್ ಭದ್ರತೆ ಇತ್ಯಾದಿ ಇತ್ಯಾದಿ ನಾಟಕಗಳು. ಆ ಕೇಸು ಏನಿಲ್ಲವೆಂದರೂ ಒಂದು ವರ್ಷ ಎಳೆಯುತ್ತದೆ. ಎಂತಹ "ಸಾಮಾಜಿಕ ನ್ಯಾಯ" ಅಲ್ಲವೇ?
ಈ "ಫೈನ್ ಮಸೂದೆ" (ಫೈನ್ ಅಂದರೆ ಚೆನ್ನ ಅಂತಲ್ಲ ಮತ್ತೆ!) ಅಂಗೀಕೃತವಾದಲ್ಲಿ, RTO ಅಧಿಕಾರಿಗಳು "ಇಲ್ಲಿ ರಿಯಾಯತಿ ದರದಲ್ಲಿ ಫೈನ್ ಪಾಸುಗಳು ದೊರೆಯುತ್ತವೆ" ಅಂತ ತಮ್ಮ ಮನೆಯಲ್ಲೇ ಹೊಸ ದಂಧೆ ಶುರು ಮಾಡಬಹುದೇನೋ? ಆಗ ರಸ್ತೆಗಿಳಿಯುವ ಅವಶ್ಯಕತೆಯೂ ಇರುವುದಿಲ್ಲ ನೋಡಿ! ಅಥವಾ ಮಹಾಭಾರತದ ಬಕಾಸುರನ ತರಹ, ಆಯಾ ಏರಿಯಾದವರೆಲ್ಲ, ತಿಂಗಳಿಗೊಮ್ಮೆ ಇಷ್ಟು ಅಂತ ಹಣವನ್ನು ಒಗ್ಗೂಡಿಸಿ ಆ ಬಡಾವಣೆಯ ಅಧಿಕಾರಿಗೆ ಕೊಟ್ಟರೆ ಆಯಿತು. ಆ ಬಡಾವಣೆಯ ಯಾವ ಗಾಡಿಯನ್ನೂ ಆ ತಿಂಗಳಿನಲ್ಲಿ ಹಿಡಿಯುವುದಿಲ್ಲ ಅಂತ ವಚನ ಕೊಡಬಹುದೇನೋ?
ಯಾವುದೇ ಆಗಲಿ, ವಿಪರೀತಕ್ಕೆ ತಲುಪಿದಾಗ ಮಾತ್ರ ಸಾಮಾಜಿಕ ಆಂದೋಳನವೊಂದು ಉಂಟಾಗಲು ಸಾಧ್ಯವೆಂದು ಇತಿಹಾಸ ಪದೇ ಪದೇ ತೋರಿಸಿಕೊಟ್ಟಿದೆ. ಈ ರೀತಿಯ ಹುಚ್ಚು ಏರಿಕೆಗಳು ಅಂತಹದೊಂದು ಸಂಧಿಕಾಲಕ್ಕೆ ನಮ್ಮನ್ನು ತಯಾರುಮಾಡಲು ಬಂದೊದಗಿರುವ ವರಗಳೇ ಏನೋ! ಮತ್ತೊಮ್ಮೆ ಜೈ ಪ್ರಜಾಪ್ರಭುತ್ವ.
ಕೊನೆಹನಿ: ಈ ಯೋಜನೆಯನ್ನು ಮಂಡಿಸಿದವರಿಗೆ ಯಾವುದಾದರೂ "ಬೀದಿ ನಾಯಿ" ಕಚ್ಚಿದ್ದರಿಂದ ಇಂತಹ ಅಮೋಘವಾದ ಆಲೋಚನೆ ಹೊಳೆದಿರಬಹುದೇ?
- ಶ್ಯಾಮ್ ಕಿಶೋರ್