ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ
- ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ By: ASHOKKUMAR (Mar 21 2007 - 11:24am)
- ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ By: mahesha (Mar 21 2007 - 12:51pm)
- ಮುಂದೆ ಹರಿದ ಮುಂಗಾರು ಮಳೆ ನೀರು... By: Abhaya Simha (Mar 21 2007 - 1:38pm)
- ಮಳೆ By: mahesha (Mar 21 2007 - 3:21pm)
- ಅಸಮಂಜಸ ಕಾಮೆಂಟು By: hpn (Mar 22 2007 - 12:57am)
- ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. By: mahesha (Mar 22 2007 - 1:20am)
- Re: ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. By: ರವಿ (Mar 23 2007 - 2:09pm)
- Re: ಸ್ವತಃ ಬಿರುದು ಕೊಟ್ಟುಕೊಳ್ಳುವವರು! By: ASHOKKUMAR (Mar 22 2007 - 2:09pm)
- ಬಿರುದು By: mahesha (Mar 22 2007 - 2:38pm)
- ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. By: mahesha (Mar 22 2007 - 1:20am)
- ಕೆಟ್ಟ ಕನ್ನಡ ಸಿನಿಮಾ ಯಾಕೆ ಉಳಿಯಬೇಕು? By: tksbhat (Mar 21 2007 - 8:51pm)
- ಅಸಮಂಜಸ ಕಾಮೆಂಟು By: hpn (Mar 22 2007 - 12:57am)
- ಮಳೆ By: mahesha (Mar 21 2007 - 3:21pm)
- ಮುಂದೆ ಹರಿದ ಮುಂಗಾರು ಮಳೆ ನೀರು... By: Abhaya Simha (Mar 21 2007 - 1:38pm)
- ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ By: mahesha (Mar 21 2007 - 12:51pm)
- ಮುಂಗಾರು ಮಳೆಗೆ ಸಿಂಗಾರದ ವಿಮರ್ಶೆ By: mahesha (Mar 21 2007 - 10:36am)
- ಹದವಾದ ಮಳೆ By: anivaasi (Mar 21 2007 - 8:48am)

RSS:
ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ
ಅಶೋಕರೆ, ಶೋಕ ಬೇಡ, "ಸ್ವಲ್ಪ adjust ಮಾಡಿಕೊಳ್ಳಿ".
ಕನ್ನಡ ಸಿನಿಮಾ ನೋಡದೇ ಹೋದರೆ, ಕನ್ನಡ ಸಿನಿಮಾ ಈಗ ಮಾಡೋರು, ಮುಂದೆ ಮಾಡಲ್ಲ.
ಅಂಬೇಗಾಲಿಡದೇ, ಮಗು ಎದ್ದು ಓಡಲ್ಲ. ಅದು ಅಂಬೇಗಾಲಿಟ್ಟಾಗ, ತಪ್ಪುಹೆಚ್ಚೆ ಇಟ್ಟಾಗ ಅದಕ್ಕೆ ಬೆಂಬಲವಾಗಿ ನಿಲ್ಲಬೇಕು.
ಹಾಗೆ ಕನ್ನಡ ಸಿನಿಮಾ, ಕನ್ನಡ ಹಾಡುಗಾರರು, ಕನ್ನಡ ನಟರು, ಕನ್ನಡ ಹೊತ್ತಗೆಗಳು ಹೀಗೆ ಕನ್ನಡದ್ದು ಎನ್ನುವ ಎಲ್ಲವೂ ಉತ್ತಮವಾಗ ಬೇಕಾದರೆ ಅದರ ಬೆಂಬಲದಲ್ಲಿ ಕನ್ನಡಿಗರು ನಿಲ್ಲಬೇಕು.
ನಾನು ಅತಿಯುತ್ತಮ ಟೇಸ್ಟ್ ಉಳ್ಳವನು, ಕನ್ನಡದೋರು ನನ್ನ ಅತಿಯುತ್ತಮ ಟೇಸ್ಟಿಗೆ ಏನೂ ಮಾಡಲ್ಲ. ಅದಕ್ಕೆ ನಾನು ಅಂತಹ ಕೀಳುಸರುಕನ್ನು ಮುಟ್ಟಲ್ಲ, ನೋಡಲ್ಲ, ಬರಿ ಬೈತೇನೆ, ಅನ್ನುವ ಕನ್ನಡದ ಪಂಡಿತರು ಸಾವಿರ ಸಾವಿರ. ಕನ್ನಡದಲ್ಲಿ ಚೆನ್ನಾಗಿರುವುದು ಇಲ್ಲ ಅದಕ್ಕೆ ನಾನೇ ಭಾಷಾಂತರನಾಗಿ( ಮತಾಂತರದಂತೆ ) ಬೇರೆ ಭಾಷೆಯ ಸಿನಿಮಾ ಹೊಗಳ್ತೇನೆ, ನೋಡ್ತೇನೆ, ಅನ್ನುವ ಮಹಾಶಯರೂ ಇದ್ದಾರೆ. ಅದು ಅವರ 'ಟಾಕ್' ಸ್ವಾತಂತ್ರ್ಯ ವಂತೆ. ಇಂತು ಇಂದು ಹಲವು ಮಂದಿ, ತಾವೇ ಬುದ್ಧಿವಂತರು, ಆ ಬೊಮ್ಮ ಬುದ್ಧಿಕೊಡುವಾಗ ತಮಗೆ ಕೊಂಚ ಹೆಚ್ಚು ಕೊಟ್ಟಿದ್ದಾನೆ ಎಂದು ಕೊಂಡವರು ಇದ್ದಾರೆ.
ಆದರೆ ಅವರು ತಮ್ಮ ಅಧಿಕ ಪ್ರಸಂಗತನದಿಂದ, ತೋರಿಸಿಕೊಳ್ಳವ ಭರಾಟೆಯಲ್ಲಿ ಒಂದು ಮುಖ್ಯಮಾನ ಸಂಗತಿ ಮರೆಯುತ್ತಿದ್ದಾರೆ.
ಈಗ "ಕನ್ನಡಿಗರು" ಎನ್ನುವ ಒಂದು ಕಂಪೆನಿ ಇದೆ ಎಂದು ಅಂದುಕೊಳ್ಳಿರಿ. ಅದು ಮೈಸೂರ ಪಾಕ್ ಮಾಡಿ ಮಾರುತ್ದೆ. ಆದರೆ ನಮ್ಮ ಮೈಸೂರ ಪಾಕ್ ಅಷ್ಟು ಚೆನ್ನಾಗಿಲ್ಲ. ಇಲ್ವೇ ನಮ್ಮ ಪಂಡಿತವರ್ಗಕ್ಕೆ ಹಿಡಿಸಲಿಲ್ಲ. ಹಾಗಾದರೆ ದುಡ್ಡು ಖರ್ಚು ಮಾಡಿ ತಯಾರಿಸಿದ ಮೈಸೂರು ಪಾಕನ್ನು ಮೋರಿಗೆ ಎಸೆದು ಬಿಡೋಣವೇ, ಇಲ್ಲ ನಮ್ಮ ಅಂಗಡಿ ಮುಂದೆ, ನಮ್ಮವರೇ ನಿಂತು "ಇದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ "ಎಂದು ಹೇಳಿಸೋಣವೇ, ನಮ್ಮ ಕಂಪೆನಿಗೆ ಒಳ್ಳೆ ಮೈಸೂರ ಪಾಕ್ ಮಾಡುವ ಯೋಗ್ಯತೆಯೇ ಇಲ್ಲ ಅಂತ ಕಂಪೆನಿಯನ್ನು ಮುಚ್ಚಿಬಿಡೋಣವೇ. ಹಾಗೆ ಮುಚ್ಚಿ ಬಿಟ್ಟು, ನಮ್ಮ ನೆಲದಲ್ಲಿ ಬೇರೆ ನಾಡಿನವರು, ಸದ್ಯಕ್ಕೆ ಡೆಲ್ಲಿಯವರು ಅಂತ ಇಟ್ಟುಕೊಳ್ಳೋಣ. ಅವರು ಬಂದು 'ಮೈಸೂರ ಪಾಕ್' ಎಂದು ಏನೇನೋ ಮಾರಲು ಬಿಟ್ಟು ಬಿಡೋಣವೇ?
ಇಲ್ವೇ..
ಈಗ ಮಾಡಿರೋ ಮೈಸೂರ್ ಪಾಕನ್ನು ಕೊಂಚ ಹೊಗಳಿ(adverise) ಸೇಲ್ ಮಾಡೋಣ, ಮುಂದೆ ನಾವೇ ಖುದ್ದು ನಿಂತು ಚೆನ್ನಾಗಿರೋ ಮೈಸೂರ ಪಾಕ್ ಮಾಡೋಣ, ಅದರ ಮಟ್ಟ ಏರಿಸೋಣ, ಎಂದು ಉಪಾಯ ಮಾಡೋಣವೇ. ಖುದ್ದು ನಿಲ್ಲಲಾಗವರು ಮೈಸೂರ ಪಾಕ್ ತಿನ್ನೋದು ಬೇಡ, ಆದರೆ ನಮ್ಮ ಅಂಗಡಿ ಮುಂದೆ ನಿಂತು ಬೈತಾ ಇದ್ರೆ ಹೇಗೆ ಸೇಲಾಗುತ್ದೆ?
ಈ ಬಗೆಯಲ್ಲಿ ನಮ್ಮ ಸರಕುಗಳನ್ನು, ಕನ್ನಡದ ಸರಕುಗಳನ್ನು/goods ಬೈಯೋ ಮಂದಿ, ಒಂದು ರೀತಿ ಅದರ ಮಾರ್ಕೆಟ್ ಅನ್ನೂ ಹಾಳು ಮಾಡ್ತಾ ಇದ್ದಾರೆ.
ಆದರೆ 'ಕನ್ನಡ' ನನ್ನದು ಎನ್ನುವ ಮಂದಿ, ಅವರ ಮಾತನ್ನು ಕೇಳಿಸಿಕೊಳ್ಳದೇ, ನಮ್ಮ ಕನ್ನಡದ ಸರಕಿನ ಮಾರಾಟ ಹೆಚ್ಚಿಸಬೇಕು. ಅದಕ್ಕೆ ಬೆಂಬಲವಾಗಬೇಕು.
ಇದೇ ಕನ್ನಡದೋರಿಗೆ , ತಮಿಳರಿಗೂ ಇದು diiference. ತಮಿಳರು ಎಂದು ತಮ್ಮ ಯಾವುದೇ ಸರಕನ್ನು ಅದು ಎಷ್ಟ ಕೆಟ್ಟದಾಗಿದ್ದರೂ ಹೊಗಳುವವರೇ ಹೊರತು, ಅದನ್ನು ಎಂದು ತೆಗಳುವವರಲ್ಲ.
ಆದರೆ ನಾವು ಕನ್ನಡವರು ಅಂತಹ ತಮಿಳರನ್ನು ಬೈತಾನೆ ಇದ್ದು ನಮ್ಮ ದೊಡ್ಡ ಕನ್ನಡತನ ತೋರಿಸ್ತೇವೆ.