ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ
- ಉ: ಹಳಗನ್ನಡ ಸಾಹಿತ್ಯವೆಂದರೆ ಬರಿ ಅನುವಾದ? By: kannadakanda (Aug 27 2008 - 10:44am)
- ಉ: ಹಳಗನ್ನಡ ಸಾಹಿತ್ಯವೆಂದರೆ ಬರಿ ಅನುವಾದ? By: kannadakanda (Aug 27 2008 - 10:43am)
- ಲಿಂಗದೇವರು ಹಳೆಮನೆಯವರ ಹೊತ್ತಗೆ By: mahesha (Mar 25 2007 - 8:25pm)
- ಯಾಕಿಲ್ಲ ...ಇದೆ By: ವೈಭವ (Mar 22 2007 - 12:19am)
- ಪ್ರಭುಲಿಂಗಲೀಲೆ By: mahesha (Mar 22 2007 - 12:50am)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 12:44pm)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: mahesha (Mar 22 2007 - 7:31pm)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 11:50pm)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: mahesha (Mar 23 2007 - 9:04am)
- ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: Khavi (Mar 22 2007 - 10:12pm)
- ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: Khavi (Mar 22 2007 - 10:11pm)
- ವಚನ By: mahesha (Mar 22 2007 - 10:37pm)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 11:50pm)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: mahesha (Mar 22 2007 - 7:31pm)
- ಕಬ್ಬಿಗರ ಕಾವನ್ ಮತ್ತು ಕಾಮದಹನ By: Sunil Jayaprakash (Mar 22 2007 - 11:06am)
- "ಶಿವನು ಏಕೆ ಮತ್ತು ಹೇಗೆ ಅರ್ಧನಾರೀಶ್ವರನಾದ" By: mahesha (Mar 22 2007 - 11:25am)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 12:44pm)
- ಪ್ರಭುಲಿಂಗಲೀಲೆ By: mahesha (Mar 22 2007 - 12:50am)

RSS:
ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ
ಕನ್ನಡದಲ್ಲಿ ಸ್ವತಂತ್ರ ಕೃತಿಗಳು ಇವೆ ಎಂಬುದಕ್ಕೆ ವಚನಗಳು ಅತ್ಯುತ್ತಮ ಸಾಕ್ಷಿಗಳಾಗಿವೆ. ವಚನಗಳು ಯಾವುದೇ ಅನ್ಯಭಾಷೆಯ ಪ್ರಭಾವಗಳಿನಂದಾಗಿಲ್ಲ. ಅವು ಸ್ವಂತ ಜೀವನಾನುಭವಗಳಿಂದ ಬಂದುವು.. ಅದಕ್ಕಾಗಿಯೇ ಅಲ್ಲವೇ ಬಸವಾದಿ ಶರಣರು "ಅನುಭವ ಮಂಟಪ"ವನ್ನು ನಿರ್ಮಿಸಿದ್ದು. ಅಲ್ಲಿ ವಚನ ಸಾಹಿತ್ಯದ ಮರ್ಜವೇ ಆಗುತ್ತಿತ್ತು... ಹೀಗೆ ಸೃಷ್ಟಿಸಿದ ವಚನಗಳು ಸರ್ವ ಸ್ವತಂತ್ರವಾಗಿವೆ.... ವಚನಗಳು ಆಗಲೇ ಅತಿಯಾಗಿ ಬಳಕೆಯಲ್ಲಿದ್ದ ಸಂಸ್ಕೃತದ ಪದಗಳನ್ನು ಒಳಗೊಂಡಿವೆಯಂಬುದನ್ನು ಬಿಟ್ಟರೆ ಉಳಿದುದೆಲ್ಲ ಕನ್ನಡದಲ್ಲೇ ರಚಿತಗೊಂಡ ಸ್ವತಂತ್ರ ಕೃತಿಗಳು. Dr. Rice ಅನ್ನೋ ಕನ್ನಡವನ್ನು ಅಭ್ಯಸಿಸಿದ ಪಾಶ್ಚಾತ್ಯರೊಬ್ಬರು ಪ್ರಥಮಬಾರಿಗೆ ಆಂಗ್ಲ ಭಾಷೆಯಲ್ಲಿ ಕನ್ನಡದ ಬಗ್ಗೆ ಬರೆದರು. ಆದರೆ ಕೊನೆಯಲ್ಲಿ ಬರೆದ ತಾತ್ಪರ್ಯ ಅಥವಾ ಸಾರಾಂಶದಲ್ಲಿ "ಕನ್ನಡ ಸ್ವತಂತ್ರವಲ್ಲದ" ಭಾಷೆಯಂದು ಬರೆದು ಬಿಟ್ಟರು.. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಟ ಪ್ರಾರಂಭವಾದ ಆ ಕಾಲದಲ್ಲಿ ಇದರಿಂದ ಹಿನ್ನಡೆಯುಂಟಾಯಿತು. ಇದಕ್ಕೆ ಸವಿವರವಾಗಿ, ಡಾ|| ರೈಸ್ ಮಾಡಿದ ಆಪದನೆಗಳಿಗೆ ಡಾ|| ರಂ. ಶ್ರೀ. ಮುಗಳಿಯವರು ತಮ್ಮ ಧೀರ್ಘವಾದ "ಕನ್ನಡ ಸಾಹಿತ್ಯ ಚರಿತ್ರೆ" ಪುಸ್ತಕದಲ್ಲಿ ಬರೆದಿದ್ದಾರೆ. ಬೇಕಿದ್ದರೆ ಒಂದು ಸಾರಿ ಅದನ್ನು .. ಓದಿ... ಇದರಿಂದ ಹೆಚ್ಚು ಮಾಹಿತಿ ಹೊರಬೀಳಬಹುದು..
ಧನ್ಯವಾದಗಳೊಂದಿಗೆ,
ವಿನಾಯಕ ಖವಾಸಿ.
RBIN/ECD1 Mailto:Vinayak.Khavasi@in.bosch.com or Khavasi.Vinayak@boschrexroth.de
“ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು, ಕನ್ನಡಕ್ಕಾಗಿ ಧ್ವನಿ ಎತ್ತು, ಅಲ್ಲಿ ಪಾಂಚಜನ್ಯ ಮೊಳಗುವುದು.“
– ಕುವೆಂಪು.