ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ್ಯ ?
- ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ್ಯ ? By: venkatesh (Mar 23 2007 - 4:01pm)
- Re: ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ By: mahesha (Mar 23 2007 - 4:49pm)

RSS:
ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ್ಯ ?
ಹೀಗೆ ಬೇಸತ್ತು, ಅದು ಶಾಪವೋ ವರವೋ ಎನ್ನುವ ಮಾತು ಅಷ್ಟು ಸಮಂಜಸವಲ್ಲ. ನೋಡಿ, ನಮ್ಮ ಭಾರತ ದೇಶದಲ್ಲಿ ಎಲ್ಲಾ ರಾಜ್ಯಗಳು ಕೆಲವು ನದಿಗಳನ್ನು ಹೊಂದಿವೆ. ಅದು ಬಂದದ್ದು ದೇವರ ಕೃಪೆ ಅಷ್ಟೆ. ಯಾರೂ ನಮ್ಮ ತರಹದ ಪೀಕಲಾಟದಲ್ಲಿ ಸಿಕ್ಕಿಹಾಕಿಕೊಂಡು ’ಸಿಂಬಳದಲ್ಲಿನ ಹುಳದಂತೆ” ಒದ್ದಾಡುತ್ತಿಲ್ಲ. ಇದಕ್ಕೆ ಕಾರಣ ನಮ್ಮ ಮೌಢ್ಯ, ಹಾಗೂ ಐಕ್ಯತೆ, ದೇಶಾಭಿಮಾನ, ಇಲ್ಲದಿರುವುದು, ನಮ್ಮ ನಾಡು, ನುಡಿಗಳ ಬಗ್ಗೆ ತಿರಸ್ಕಾರ ; ಇವೆಲ್ಲಾ ಸೇರಿಕೊಂಡು ನಮ್ಮ ತಲೆಯಮೇಲೆ ಕಲ್ಲು ಹಾಕಿಕೊಂಡಿದ್ದರಿಂದ ಆಗಿರುವ ಅನಾಹುತ. ಒಳ್ಳೆ ನಾಯಕರಿಲ್ಲ. ಇರೋ ನಾಯಕರಿಗೂ ಎಲ್ಲರನ್ನು ಮಾತಿನಲ್ಲಿ ಒಪ್ಪಿಸುವ ಮರ್ಮ ಗೊತ್ತಿಲ್ಲ. ಧರ್ಯವಿಲ್ಲ. ಹೇಳೋದೊಂದು. ಮಾಡೊದೊಂದು. ಮಂಡ್ಯ, ಮೈಸೂರೇ ಕರ್ನಾಟಕವಲ್ಲ !
ಸ್ವಲ್ಪದಿನಗಳಾದಮೇಲೆ ನೋಡಿ, ಈ ಆಂದೊಳನದಲ್ಲಿ ಕರ್ನಾಟಕದ ಜನತೆ ಭಿನ್ನಾಭಿಪ್ರಾಯದಲ್ಲಿ, ಇರುವುದನ್ನೂ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ರಾಜರಕಾಲದಲ್ಲಿ ಹಿತೈಷಿಗಳು ತಮಿಳರು. ರಾಜ್ಯದ ವಹಿವಾಟನ್ನೆಲ್ಲಾ ಅವರೇ ನೋಡ್ತಿದ್ರು. ನಿರ್ಧರಿಸ್ತಿದ್ರು. ಅವರು ಮೈಸೂರಿನಲ್ಲಿ ಇದ್ರೂ ಅವರಿಗೆ ತಮ್ಮ ನೆಲದ ವ್ಯಾಮೋಹ ಸ್ವಲ್ಪವೂ ಕಮ್ಮಿ ಇರಲಿಲ್ಲ. ಕನ್ನಂಬಾಡಿ ಅಣೆಕಟ್ಟು ಕಟ್ಟಿದ್ದು, ಬಂಗಾರ ಪೇಟೆಯ ಚಿನ್ನದ ಗಣಿಗಳ ಯಂತ್ರಕ್ಕೆ ತಡೆಯಿಲ್ಲದ ವಿದ್ಯುತ್ ಸರಬರಾಜನ್ನು ಮಾಡಲು. ವ್ಯವಸಾಯ, ನೀರಾವರಿ ಮಾತು ಆಮೇಲೆ. ಇದೊಂದು ಅಗ್ರಿಮೆಂಟ್ , ಕೆಲವು ವರ್ಷಗಳ ವರೆಗೆ ಲಾಗೂ ಆಗಬೇಕಿತ್ತು. ಆದರೆ ವಿಶಾಲ ಕರ್ನಾಟಕ ಆದಮೇಲು, ಯಾಕೆ ಇದನ್ನು ಮುಂದುವರೆಸಬೇಕು ? ನಮ್ಮ ರಾಜ್ಯದ ಜನ, ರೈತರು, ಕುಡಿಯಲು ನೀರಿಲ್ಲದೆ, ಉಳಲು ಬೇಕಾದ ನೀರಾವರಿ ಸಹಾಯವಿಲ್ಲದೆ, ಒದ್ದಾಡುತ್ತಿರುವಾಗ ನೀರಿವ ಹಂಚಿಕೆಗೆ ಅರ್ಥವಿಲ್ಲ. ನಮಗೆ ಹೆಚ್ಚಾದ ನೀರನ್ನು ನಾವು ಬಿಟ್ಟೇಬಿಡುತ್ತೇವೆ. ಧರ್ಮರಾಯನ ತರಹ ತಲೆಮೇಲೆ ಕೈ ಇಟ್ಟುಕೊಂಡು ಕುಳಿತುಕೊಳ್ಳೋದೇಕೆ ? ಯಾವ ಅಗ್ರಿಮೆಂಟಿಗೂ ಗಡಿ, ವಾಯಿದೆ ಇರುತ್ತೆ. ಎಂದೆಂದಿಗೂ ಸರ್ವಕಾಲದಲ್ಲಿಯೂ ಅನುಸರಿಸಿಕೊಂಡು ಹೋಗಲು ಹೇಗೆ ಸಾಧ್ಯ ?
ನಿಜವಾಗಿ ನೋಡಿದರೆ, ಕಾವೇರಿ ವಿವಾದವೇ ಅಲ್ಲ. ನಮಗೆ ಹೆಚ್ಚಾದ ನೀರನ್ನು ತಮಿಳುನಾಡಿಗೂ ಮತ್ತು ನಮ್ಮ ನೆರೆಹೊರೆಯ ಕೇರಳ ರಾಜ್ಯಕ್ಕೂ ನಾವೇ ನೀರು ಕೊಟ್ಟು ಸಹಾಯ ಮಾಡುತ್ತೇವೆ. ಕನ್ನಡಿಗರು ಒಳ್ಳೆತನಕ್ಕೆ ಹೆಸರಾದವರು. ” ಬೆಪ್ಪ’ರೆಂದು ಸಾಬೀತು ಮಾಡುವುದನ್ನು ನಾನು ಖಂಡಿತ ಎಂದಿಗೂ ಒಪ್ಪುವುದಿಲ್ಲ.
ಬೆಳಗಾಂನಲ್ಲಿ ನಮ್ಮವರಿಗೇಟು. ಇನ್ನೊಂದು ಹೊಡೆತ, ಆಂಧ್ರದಿಂದ, ಮತ್ತೊಂದು ಕೇರಳದಿಂದ. ’ಬಕ್ರ ಸಿಕ್ಕರೆ ಎಲ್ರೂ ಮಟ್ಟಹಾಕೋರೆ” !