Re: ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ
- ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ್ಯ ? By: venkatesh (Mar 23 2007 - 4:01pm)
- Re: ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ By: mahesha (Mar 23 2007 - 4:49pm)

RSS:
Re: ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ
ನಿಮ್ಮ ಮಾತು ಸರಿ..
ಆದರೆ ಹುಟ್ಟಿದಾಗಿನಿಂದ, ನಮ್ಮೂರಿನ ಜನ "ನೀರು ನೀರು" ಎಂದು ಪರಿತಪಿಸುವುದು, ಗಲಾಟೆ ಮಾಡುವುದು, ರೈಲ್ವೇ ನಿಲ್ದಾಣ ಒಡೆದು ಹಾಕುವುದು, ೨-೩ ವಾರ ಶಾಲೆ ನಡೆಯದೇ ಹೋಗುವುದು, ಮಳೆಯಿಲ್ಲದ ವರುಷ ಊರ ಜಾತ್ರೆ, ಹಬ್ಬಗಳನ್ನು ನೆಟ್ಟಗೆ ಮಾಡದೇ ಹೋಗುವುದು, ಬೇಸಿಗೆಯಲ್ಲಿ ಊರಾಚೆಯ ಕರೆಯಿಂದ ನೀರು ಹೊರುವುದು, ಈಗ ಆಟೋಗಳಲ್ಲಿ ತರುವುದು, ನಮ್ಮ ಎಂಪಿಗಳು, ಎಮ್ಮೆಲ್ಯೇ ಗಳು ಏನೂ ಮಾಡದೆ, ಬರಿ ಮಾತಲ್ಲೇ ಮಾಳಿಗೆ ಕಟ್ಟಿ, ನಮ್ಮ ಕೈ ಬಿಡುವುದು, ರೈತರು ಸಾಲ ಮಾಡಿ ಹೊಲದಲ್ಲೇ ವಿಷ ತಿಂದು ಸಾಯೋದು.
ಇದು ಪ್ರತೀ ವರುಷ ನಡೀತಾನೆ ಇದೆ. ಅದಕ್ಕೆ ಕೊಂಚ ಬೇಸರ ಈ ಕಾವೇರಿ ಕಂಡ್ರೆ.
ನಾವು ಒಳ್ಳೆಯವರಾದವೊತ್ತಿಗೇ ನಾವು ಕನ್ನಡಿಗರು ಇಷ್ಟ ಅನ್ಯಾಹ ಸಹಿಸಿ ತೆಪ್ಪಗಿರುವುದು. ಆದರೆ ನನಗೆ ನಮ್ಮ ಒಳ್ಳೇತನ ತುಸು ಅತಿ ಆಯ್ತು ಅನ್ಸುತ್ತೆ, ಹಲವು ಸರ್ತಿ.
ಇರಲಿ ಬಿಡಿ, ನಮ್ಮ ಗ್ರಾಚಾರ, ಹಣೆಬರಹ!
=========================================================
=========================================================
ಹೆಚ್ಚು ಜನ ನಂಬಿರುವುದೇ ಧರ್ಮ, ನ್ಯಾಯ, ಸತ್ಯ, ನೀತಿ, ಸಭ್ಯತೆ, ಸದಾಚಾರ, ಸರಿ!