ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
Re: ಅಲ್ಲಮನ ವಚನವನ್ನು ಬಿಡಿಸಿ
- Re: ಅಲ್ಲಮನ ವಚನವನ್ನು ಬಿಡಿಸಿ By: olnswamy (Apr 6 2007 - 6:08pm)
- Re: ಅಲ್ಲಮನ ವಚನವನ್ನು ಬಿಡಿಸಿ By: ವೈಭವ (Apr 7 2007 - 2:33am)
- Re: ಅಲ್ಲಮನ ವಚನವನ್ನು ಬಿಡಿಸಿ: ನೆರವಾಗುವ ಪುಸ್ತಕಗಳು By: olnswamy (Apr 7 2007 - 8:38am)
- Re: ಬೆಡಗಿನ ವಚನಗಳಿಗೊಂದು ಪುಸ್ತಕ By: sharathchandra (Apr 7 2007 - 12:28pm)
- Re: ಅಲ್ಲಮನ ವಚನವನ್ನು ಬಿಡಿಸಿ: ನೆರವಾಗುವ ಪುಸ್ತಕಗಳು By: olnswamy (Apr 7 2007 - 8:38am)
- Re: ಅಲ್ಲಮನ ವಚನವನ್ನು ಬಿಡಿಸಿ By: ವೈಭವ (Apr 7 2007 - 2:33am)

RSS:
Re: ಅಲ್ಲಮನ ವಚನವನ್ನು ಬಿಡಿಸಿ
ಅಲ್ಲಮನ ವಚನವನ್ನು ಮತ್ತೆ ಚಿಂತಿಸಲು ಅವಕಾಶಮಾಡಿಕೊಟ್ಟದ್ದಕ್ಕೆ ನಿಮಗೆ ಕೃತಜ್ಞ.
ಸ್ವಾರ್ಥದ ಲಾಭದ ಕಾಮನೆಯೂ ಇಲ್ಲದೆ, ಭಯವೂ ಇಲ್ಲದೆ ಬದುಕುವ ರೀತಿಯ ಅಚ್ಚರಿಯನ್ನು ಈ ವಚನ ಹೇಳುತ್ತದೆ ಅನ್ನುವುದು ನನ್ನ ತಿಳಿವಳಿಕೆ. ಅದನ್ನು ಸ್ಪಷ್ಟಮಾಡುವುದಕ್ಕೆ ಗಂಡು ಹೆಣ್ಣಿನ ರೂಪಕದ ಬಳಕೆಯಾಗಿದೆ. ದೇವರು ಗಂಡು, ಭಕ್ತ ಹೆಣ್ಣು. ಒತ್ತೆ ಅನ್ನುವ ಮಾತು ವೇಶ್ಯೆಯೊಬ್ಬಳು ತಾನು ಸುಖ ನೀಡಿದ್ದಕ್ಕೆ ವಿಟನಿಂದ ಪಡೆಯುವ ಹಣ ಅನ್ನುವ ಅರ್ಥದಲ್ಲಿ ವಚನಕಾರರು ಅನೇಕ ಕಡೆಗಳಲ್ಲಿ ಬಳಸಿರುವುದುಂಟು. ದೇವರ ಆರಾಧನೆ ಹಾಗೆ ದುಡ್ಡಿನ ಲಾಭಕ್ಕೆ ಮಾಡುವಂಥ ಸಂಬಂಧವಾದರೆ ದೇವರಿಗೆ ಅಚ್ಚರಿಯಾದೀತು. ಎಲ್. ಬಸವಾರಜು ಅವರು ಮುಂದಿನ ಸಾಲುಗಳನ್ನು ತಲೆಯ ಮೇಲೆ ಬೆಂಕಿ ಹೊತ್ತು ಮಾಡುವಂಥ ಭಯಂಕರ ಪೂಜೆ ಎಂದು ವಿವರಿಸುತ್ತಾರೆ. ದೇವರನ್ನು ಅಂಜಿಸಿ ವರ ಪಡೆಯುವಂಥ ಪೂಜೆಯೂ ಸರಿಯಾದುದಲ್ಲ. ಗಳಿಹ ಎಂದರೆ ಸುಳ್ಳು, ವಂಚನೆ. ಮನಸ್ಸಿನಿಂದ ಸುಳ್ಳು ವಂಚನೆಗಳನ್ನು ಇಳಿಸಿಕೊಂಡಾಗ ನಿಶ್ಚಿಂತೆ ಆಗುತ್ತದೆ. ದೇವರನ್ನು ಬೇರೆಯಾವ ಅಪೇಕ್ಷೆಯೂ ಇಲ್ಲದೆ, ಭಯವೂ ಇಲ್ಲದೆ ನಿಶ್ಚಿಂತ ನಿರಾಳ ಮನಸ್ಸಿನಿಂದ ಬಯಸುವುದು ಸರಿಯಾದ ಆಶ್ಚರ್ಯಕರವೂ ಆದ ದಾರಿ.
ಇನ್ನು ಸುಮಾರು ಮುನ್ನೂರು ವರ್ಷಗಳ ಹಿಂದೆ ಇದ್ದ ಕಲ್ಲುಮಠದ ಪ್ರಭುದೇವರು ಕೊನೆಯ ಸಾಲುಗಳಲ್ಲಿ ಬರುವ ಬೆಂಕಿಯನ್ನು ಜ್ಞಾನಾಗ್ನಿ ಎಂದು ವಿವರಿಸಿರುವುದುಂಟು. ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿನ ಬೆಂಕಿಯನ್ನು ಮೈಮನಸ್ಸುಗಳಲ್ಲಿ ಹೊತ್ತು ಕೊಂಡೇ ದೇವರೊಡನೆ ಸಂಬಂಧ ಇಟ್ಟುಕೊಳ್ಳುವುದು ಅನ್ನುವುದು ಅವರ ವಿವರಣೆ. ಅರಿವು ಬೆಂಕಿಯಂತೆಯೇ ಅಲ್ಲವೇ!
ನಿಶ್ಚಿಂತ ಅನ್ನುವ ಮಾತು ನನಗೆ ಬಹಳ ಮುಖ್ಯವಾಗಿ ಕಾಣುತ್ತದೆ. ದೇವರು ಮನುಷ್ಯ ಬಿಡಿ, ನಮ್ಮ ಎಲ್ಲ ಸಂಬಂಧಗಳೂ ನಿಶ್ಚಿಂತ ಸಂಬಂಧಗಳೇ ಆದಾಗ ಅದರಂಥ ಆಶ್ಚರ್ಯ, ಅದರಂಥ ಸುಖ ಯಾವುದು ಇದ್ದೀತು!