ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

Re: ಅಲ್ಲಮನ ವಚನವನ್ನು ಬಿಡಿಸಿ

April 6, 2007 - 6:08pm — olnswamy

Re: ಅಲ್ಲಮನ ವಚನವನ್ನು ಬಿಡಿಸಿ

olnswamy's picture

ಅಲ್ಲಮನ ವಚನವನ್ನು ಮತ್ತೆ ಚಿಂತಿಸಲು ಅವಕಾಶಮಾಡಿಕೊಟ್ಟದ್ದಕ್ಕೆ ನಿಮಗೆ ಕೃತಜ್ಞ.
ಸ್ವಾರ್ಥದ ಲಾಭದ ಕಾಮನೆಯೂ ಇಲ್ಲದೆ, ಭಯವೂ ಇಲ್ಲದೆ ಬದುಕುವ ರೀತಿಯ ಅಚ್ಚರಿಯನ್ನು ಈ ವಚನ ಹೇಳುತ್ತದೆ ಅನ್ನುವುದು ನನ್ನ ತಿಳಿವಳಿಕೆ. ಅದನ್ನು ಸ್ಪಷ್ಟಮಾಡುವುದಕ್ಕೆ ಗಂಡು ಹೆಣ್ಣಿನ ರೂಪಕದ ಬಳಕೆಯಾಗಿದೆ. ದೇವರು ಗಂಡು, ಭಕ್ತ ಹೆಣ್ಣು. ಒತ್ತೆ ಅನ್ನುವ ಮಾತು ವೇಶ್ಯೆಯೊಬ್ಬಳು ತಾನು ಸುಖ ನೀಡಿದ್ದಕ್ಕೆ ವಿಟನಿಂದ ಪಡೆಯುವ ಹಣ ಅನ್ನುವ ಅರ್ಥದಲ್ಲಿ ವಚನಕಾರರು ಅನೇಕ ಕಡೆಗಳಲ್ಲಿ ಬಳಸಿರುವುದುಂಟು. ದೇವರ ಆರಾಧನೆ ಹಾಗೆ ದುಡ್ಡಿನ ಲಾಭಕ್ಕೆ ಮಾಡುವಂಥ ಸಂಬಂಧವಾದರೆ ದೇವರಿಗೆ ಅಚ್ಚರಿಯಾದೀತು. ಎಲ್. ಬಸವಾರಜು ಅವರು ಮುಂದಿನ ಸಾಲುಗಳನ್ನು ತಲೆಯ ಮೇಲೆ ಬೆಂಕಿ ಹೊತ್ತು ಮಾಡುವಂಥ ಭಯಂಕರ ಪೂಜೆ ಎಂದು ವಿವರಿಸುತ್ತಾರೆ. ದೇವರನ್ನು ಅಂಜಿಸಿ ವರ ಪಡೆಯುವಂಥ ಪೂಜೆಯೂ ಸರಿಯಾದುದಲ್ಲ. ಗಳಿಹ ಎಂದರೆ ಸುಳ್ಳು, ವಂಚನೆ. ಮನಸ್ಸಿನಿಂದ ಸುಳ್ಳು ವಂಚನೆಗಳನ್ನು ಇಳಿಸಿಕೊಂಡಾಗ ನಿಶ್ಚಿಂತೆ ಆಗುತ್ತದೆ. ದೇವರನ್ನು ಬೇರೆಯಾವ ಅಪೇಕ್ಷೆಯೂ ಇಲ್ಲದೆ, ಭಯವೂ ಇಲ್ಲದೆ ನಿಶ್ಚಿಂತ ನಿರಾಳ ಮನಸ್ಸಿನಿಂದ ಬಯಸುವುದು ಸರಿಯಾದ ಆಶ್ಚರ್ಯಕರವೂ ಆದ ದಾರಿ.
ಇನ್ನು ಸುಮಾರು ಮುನ್ನೂರು ವರ್ಷಗಳ ಹಿಂದೆ ಇದ್ದ ಕಲ್ಲುಮಠದ ಪ್ರಭುದೇವರು ಕೊನೆಯ ಸಾಲುಗಳಲ್ಲಿ ಬರುವ ಬೆಂಕಿಯನ್ನು ಜ್ಞಾನಾಗ್ನಿ ಎಂದು ವಿವರಿಸಿರುವುದುಂಟು. ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿನ ಬೆಂಕಿಯನ್ನು ಮೈಮನಸ್ಸುಗಳಲ್ಲಿ ಹೊತ್ತು ಕೊಂಡೇ ದೇವರೊಡನೆ ಸಂಬಂಧ ಇಟ್ಟುಕೊಳ್ಳುವುದು ಅನ್ನುವುದು ಅವರ ವಿವರಣೆ. ಅರಿವು ಬೆಂಕಿಯಂತೆಯೇ ಅಲ್ಲವೇ!
ನಿಶ್ಚಿಂತ ಅನ್ನುವ ಮಾತು ನನಗೆ ಬಹಳ ಮುಖ್ಯವಾಗಿ ಕಾಣುತ್ತದೆ. ದೇವರು ಮನುಷ್ಯ ಬಿಡಿ, ನಮ್ಮ ಎಲ್ಲ ಸಂಬಂಧಗಳೂ ನಿಶ್ಚಿಂತ ಸಂಬಂಧಗಳೇ ಆದಾಗ ಅದರಂಥ ಆಶ್ಚರ್ಯ, ಅದರಂಥ ಸುಖ ಯಾವುದು ಇದ್ದೀತು!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಅಲ್ಲಮನ ವಚನವನ್ನು ಬಿಡಿಸಿ By: ವೈಭವ (4 replies) April 6, 2007 - 5:50am
  • Re: ಅಲ್ಲಮನ ವಚನವನ್ನು ಬಿಡಿಸಿ By: olnswamy (Apr 6 2007 - 6:08pm)
    • Re: ಅಲ್ಲಮನ ವಚನವನ್ನು ಬಿಡಿಸಿ By: ವೈಭವ (Apr 7 2007 - 2:33am)
      • Re: ಅಲ್ಲಮನ ವಚನವನ್ನು ಬಿಡಿಸಿ: ನೆರವಾಗುವ ಪುಸ್ತಕಗಳು By: olnswamy (Apr 7 2007 - 8:38am)
        • Re: ಬೆಡಗಿನ ವಚನಗಳಿಗೊಂದು ಪುಸ್ತಕ By: sharathchandra (Apr 7 2007 - 12:28pm)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
  • kannadakanda
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 1, 2008 - 11:44pm
  • ಗಣೇಶ
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:32pm
ಇನ್ನಷ್ಟು


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator