ಈಗ್ಗೆ ಕೆಲವು ವರ್ಷಗಳ ಹಿಂದೆ, ನಮ್ಮ ಕ್ಲಾಸ್ಮೇಟ್ ಒಬ್ಬಳು ಬಾಟನಿ ಕ್ಲಾಸಿನಲ್ಲಿ ತಲೆತಿರುಗಿ ಬಿದ್ದಿದ್ದಳು. ಏನೆಂದು ಕಾರಣ ಹುಡುಕಿದ್ದಾಗ ಕೊನೆಗೆ ತಿಳಿದದ್ದು ಅವಳು ಸ್ಲಿಮ್ ಆಗಬೇಕು ಅಂತ ಸರಿಯಾಗಿ ಊಟ ತಿಂಡೀನೇ ಮಾಡ್ತಾ ಇರಲಿಲ್ಲವಂತೆ. ಆಗ ನಮ್ಮ ಬಾಟನಿ ಪ್ರೋಫೆಸರ್ "ಬರೀ ಗರಡಿ ಮನೆಯಲ್ಲಿರುವವರಿಗಷ್ಟೇ ಅಲ್ಲ ಊಟ ಬೇಕಾಗಿರುವದು, ಓದುವುದಕ್ಕೂ, ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೂ ಮಿದುಳಿಗೂ ರಕ್ತ ಬೇಕು. ಅದಕ್ಕೆ ಚೆನ್ನಾಗಿ ತಿನ್ನಿ ಎಂಬ ಸಲಹೆಯಿತ್ತು. ಇನ್ನೇನು ಬೇಸಿಗೆ ಶುರುವಾಗುತ್ತಿದೆ, ವಾರಕ್ಕೆ ಕಡಿಮೆಯೆಂದರೆ ಐದಾದರೂ ಮಾವಿನಹಣ್ಣು ತಿನ್ನಿ" ಎಂದಿದ್ದರು.
"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)
ನಮ್ಮ ಬಾಟನಿ ಪ್ರೊ. ಹೇಳಿದ ಮಾತು
ಈಗ್ಗೆ ಕೆಲವು ವರ್ಷಗಳ ಹಿಂದೆ, ನಮ್ಮ ಕ್ಲಾಸ್ಮೇಟ್ ಒಬ್ಬಳು ಬಾಟನಿ ಕ್ಲಾಸಿನಲ್ಲಿ ತಲೆತಿರುಗಿ ಬಿದ್ದಿದ್ದಳು. ಏನೆಂದು ಕಾರಣ ಹುಡುಕಿದ್ದಾಗ ಕೊನೆಗೆ ತಿಳಿದದ್ದು ಅವಳು ಸ್ಲಿಮ್ ಆಗಬೇಕು ಅಂತ ಸರಿಯಾಗಿ ಊಟ ತಿಂಡೀನೇ ಮಾಡ್ತಾ ಇರಲಿಲ್ಲವಂತೆ. ಆಗ ನಮ್ಮ ಬಾಟನಿ ಪ್ರೋಫೆಸರ್ "ಬರೀ ಗರಡಿ ಮನೆಯಲ್ಲಿರುವವರಿಗಷ್ಟೇ ಅಲ್ಲ ಊಟ ಬೇಕಾಗಿರುವದು, ಓದುವುದಕ್ಕೂ, ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೂ ಮಿದುಳಿಗೂ ರಕ್ತ ಬೇಕು. ಅದಕ್ಕೆ ಚೆನ್ನಾಗಿ ತಿನ್ನಿ ಎಂಬ ಸಲಹೆಯಿತ್ತು. ಇನ್ನೇನು ಬೇಸಿಗೆ ಶುರುವಾಗುತ್ತಿದೆ, ವಾರಕ್ಕೆ ಕಡಿಮೆಯೆಂದರೆ ಐದಾದರೂ ಮಾವಿನಹಣ್ಣು ತಿನ್ನಿ" ಎಂದಿದ್ದರು.