Re: ಹತ್ತಿ v/s ಖಾದಿ
- Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: venkatesh (Apr 17 2007 - 8:39am)
- Re: ಹತ್ತಿ v/s ಖಾದಿ By: ASHOKKUMAR (Apr 17 2007 - 9:50am)
- Re: ಹತ್ತಿ v/s ಖಾದಿ By: venkatesh (Apr 17 2007 - 12:17pm)
- ಕಾರ್ಪಸ ಮತ್ತು ಕಲಾಪತ್ತು By: Sunil Jayaprakash (Apr 17 2007 - 12:25pm)
- Re: ಡೆನಿಮ್ ಮತ್ತು ಹತ್ತಿ By: ASHOKKUMAR (Apr 17 2007 - 12:56pm)
- ಉ: By: venkatesh (Apr 20 2007 - 11:14pm)
- ಉ: By: ASHOKKUMAR (Apr 20 2007 - 11:29pm)
- ಉ: By: venkatesh (Apr 21 2007 - 7:12am)
- ಉ: By: ASHOKKUMAR (Apr 20 2007 - 11:29pm)
- ಜೀನ್ಸು By: mahesha (Apr 17 2007 - 1:18pm)
- ಉ: By: venkatesh (Apr 20 2007 - 11:14pm)
- Re: ಡೆನಿಮ್ ಮತ್ತು ಹತ್ತಿ By: ASHOKKUMAR (Apr 17 2007 - 12:56pm)
- ಕಾರ್ಪಸ ಮತ್ತು ಕಲಾಪತ್ತು By: Sunil Jayaprakash (Apr 17 2007 - 12:25pm)
- Re: ಹತ್ತಿ v/s ಖಾದಿ By: venkatesh (Apr 17 2007 - 12:17pm)
- Re: ಹತ್ತಿ v/s ಖಾದಿ By: ASHOKKUMAR (Apr 17 2007 - 9:50am)
- Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: venkatesh (Jan 26 2007 - 8:04pm)
- ಉ: Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: girish.rajanal (Sep 8 2007 - 1:40pm)
- ಉ: Re: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: girish.rajanal (Sep 8 2007 - 1:39pm)
- ಉ: ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ? By: hpn (Jan 27 2007 - 12:41am)

RSS:
Re: ಹತ್ತಿ v/s ಖಾದಿ
ಭಾರತದಲ್ಲಿ ಕೈನಿಂದ ತಯಾರಿಸಿದ ಹತ್ತಿ ಬಟ್ಟೆಗೆ "ಖಾದಿ ಅಥವಾ ಖದ್ದರ್ " ಎಂದು ಹೆಸರು. ಹತ್ತಿಯಲ್ಲದೆ ಉಣ್ಣೆ, ರೇಷ್ಮೆ ಸೇರಿದಂತೆ ಇನ್ನೂ ಹಲವು ನಾರಿನಿಂದ ನೇದು ಮಗ್ಗದಲ್ಲಿ ತಯಾರಿಸಿದ ಬಟ್ಟೆಗಳು ಖಾದಿ ವರ್ಗಕ್ಕೆ ಸೇರುತ್ತವೆ. ಕೈನಿಂದ ನೂತ ದಾರದಿಂದಲೇ ಬಟ್ಟೆಯನ್ನು ಕೈ ಮಗ್ಗದ ಮೇಲೆ ನೇಯುವ ಕಲೆಯನ್ನು ಮಹಾತ್ಮಗಾಂಧಿಯವರು ಕುಮ್ಮಕ್ಕು ಕೊಟ್ಟು ಬೆಳೆಸಿದರು. ಹತ್ತಿ-ಬಟ್ಟೆಗೆ ಗಾಂಧಿಯವರು ಕೊಟ್ಟ ಹೆಸರು- ಖಾದಿ !
ನಮ್ಮ ದೇಶದ ಕರ- ಕುಶಲ ಕೈಗಾರಿಕೆಗಳಿಗೆ ಆದ್ಯತೆ, ಸ್ವಾವಲಂಬನೆ, ಇವು ಆಗ ನಮ್ಮನ್ನು ಕಾಡಿಸಿದ ನಿಜವಾದ ಉದ್ದೇಶ್ಯಗಳು. ಆದರೆ ಇದರ ತಯಾರಿಕೆಯಲ್ಲಿ, ಮತ್ತು ಅದರ ಉಪಯೋಗದಲ್ಲಿ ಅನೇಕ ತೊಡಕು ಹಾಗೂ ಅಪಪ್ರಚಾರಗಳಿಂದ ಇಂದಿನ ಖಾದಿ ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ಮೇಲಾಗಿ ಅಂದಿನ ಉದ್ದೇಶ್ಯವೇ ಬೇರೆ. ಇಂದಿನ ನಮ್ಮ ಅನಿವಾರ್ಯತೆಗಳೇ ಬೇರೆ. ಖಾದಿಯನ್ನು ಇನ್ನೂ ಅವೈಜ್ಞಾನಿಕವಾಗಿ, ಮೊದಲಿನಂತೆಯೇ ಹಳೆಪದ್ಧತಿಯಲ್ಲಿ ನಿರ್ಮಿಸುವ ಮೂರ್ಖತನಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ !
ಮಹಾತ್ಮರ ಈ ಕಾರ್ಯವೈಖರಿ, ಮುಂದಾಲೋಚನೆಯ ಪ್ರವೃತ್ತಿಗಳು, ಬ್ರಿಟನ್ನಿನ ಯಂತ್ರ ವಸ್ತ್ರೋದ್ಯಮಕ್ಕೆ ಭಾರಿ ಸವಾಲನ್ನು ಒಡ್ಡಿದವು !
ಭಾವನಾತ್ಮಕವಾಗಿ ಯಾರೂ ಊಹಿಸಲಾರದಂತಹ, ನಮ್ಮ ಸ್ವಾತಂತ್ರ್ಯ ಸೇನಾನಿಗಳ ಮಹತ್ತರ ಕಾರ್ಯಸಾಧನೆಗಳಿಂದ, ಬ್ರಿಟಿಷರು ಹೇಳದೇ ಕೇಳದೆ ನಮ್ಮ ಭರತವರ್ಷವನ್ನು ಬಿಟ್ಟು ಹೋಗಬೇಕಾದ ಪ್ರಮೇಯ ಒದಗಿ ಬಂತು. ಅವರು ಕನಸು ಮನಸಿನಲ್ಲೂ ಊಹಿಸದಂತಹ ಇಂತಹ ಅಸಾಧಾರಣ ತತ್ವಗಳು ಅದನ್ನು ಅನುಷ್ಠಾನಕ್ಕೆ ತಂದ ನಮ್ಮ ಮಹಾತ್ಮರ ನಿಲವುಗಳು, ಇಂಗ್ಲೀಷ್ ಸಾಮ್ರಾಜ್ಯಕ್ಕೆ ಬೃಹತ್ ತಲೆನೋವಿನ ಪ್ರಸಂಗಗಳು. ಈ ನಿಟ್ಟಿನಲ್ಲಿ ಮಹಾತ್ಮ ಗಾಂಧಿಯವರು ಅಮರರಾಗಿ ನಮ್ಮ ದೇಶದ ಚರಿತ್ರೆಯಲ್ಲಿ ಪ್ರಜ್ವಲಿಸುತ್ತಾರೆ !
ಹತ್ತಿ, ಭಾರತದೇಶಕ್ಕೆ ದೇವರು ಕೊಟ್ಟ ಮಹತ್ವದ ಕೊಡುಗೆ. ಎಲ್ಲಿಲ್ಲಿಯೂ ಬೆಳೆಯಬಹುದಾದ, ಪರಿಶುದ್ಧವಾದ versatile ಆದ, ತಂತು ( Fibre) ಮತ್ತೊಂದಿಲ್ಲ. ಎಂದೆಂದಿಗೂ ಅದರ ಭಂಡಾರ ಖಾಲಿಯಾಗುವುದಿಲ್ಲ. ಅದು ನಮ್ಮ ದೇಶದ ಅಮರ ತಂತು ! ಹಾಗೂ ರಾಷ್ಟ್ರೀಯ ತಂತು. ಹತ್ತಿ- ನೀರನ್ನು, ಬೆವರನ್ನು ಹೀರುವ ಶಕ್ತಿ ಹೊಂದಿದ್ದು, ನಮ್ಮಂತಹ "ಉಷ್ಣ ಕಟೀ ದೇಶ "ಕ್ಕೆ ಹೇಳಿಮಾಡಿಸಿ ಬೆಳಸಿದ ಫೈಬರ್. ಬೇಸಿಗೆಯಲ್ಲಿ ಹತ್ತಿ ಬಟ್ಟೆಗಳು ಉಡಲು ಮುದಕೊಡುತ್ತವೆ, ಮತ್ತು ತಂಪಾಗಿರುತ್ತವೆ. ಇದನ್ನು ನಾವೆಲ್ಲಾ ಅನುಭವಿಸಿದ್ದೇವೆ !