ಮೇಲ್ನೋಟಕ್ಕೆ, ರಕ್ಷಣಾ ವೇದಿಕೆ ಮಾಡಿದ್ದು ಸ್ವಲ್ಪ ತರ್ಲೆ ಕೆಲ್ಸ ಅನ್ಸುದ್ರೂ ಒಳಗೆಲ್ಲೋ ನನಗೆ ಅವರು ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಅನ್ಸುತ್ತೆ. ಮೆರಿಟ್ ಅಗತ್ಯವಿರುವ ಕೆಲಸಗಳನ್ನು ಬಿಟ್ಟು ಕೆಳ ದರ್ಜೆಯ ಕೆಲಸಗಳಿಗೂ ಹೊರರಾಜ್ಯದವರಿಗೆ ಮಣೆ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಬೆಂಗಳೂರಿನಲ್ಲಿ ಇವರುಗಳು ತಮ್ಮ ಧಂಧೆ ನಡೆಸಲು ಎಷ್ಟೆಲ್ಲ ಸವಲತ್ತುಗಳನ್ನು ನಮ್ಮ ಸರ್ಕಾರ ಒದಗಿಸಿದೆ. ಈಹೊತ್ತು ಬೆಂಗಳೂರಿನಲ್ಲಿರುವ ಬಹುತೇಕ ಫ್ಲೈಓವರ್ಗಳೂ ಅವರ ಆಫೀಸುಗಳತ್ತಲೇ ಮುಖ ಮಾಡಿವೆ. ಬದಲಿಗೆ ಕರ್ನಾಟಕದ ಸಾಮಾನ್ಯರಿಗೆ ಏನು ಸಿಕ್ಕಿದೆ. ಇವರುಗಳಿದಾಗಿ ಕರ್ನಾಟಕ ಸರ್ಕಾರವು, ಇವರು ಕರೆ ತರುವ ವಲಸಿಗರಿಗೂ ಸೌಲಭ್ಯಗಳನ್ನೊದಗಿಸಬೇಕು...ನಮಗಿದ್ಯಾವ ಕರ್ಮ. ಇದರ ಮೇಲೆ, ಇವರುಗಳಿಂದ ಕರ್ನಾಟಕದ ಭಾಷಂ ಸಂಸ್ಕೃತಿಗಾಗುತ್ತಿರುವ ಅವಮಾನವನ್ನೂ ಸಹಿಸಬೇಕು. ಇತ್ತೀಚಿಗೆ ಐಬಿಎಂ ಕಂಪನಿಯವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಅರಮನೆ ಮೈದಾನದಲ್ಲಿ ನಡೆಸಿದ ಸಮಾರಂಭದಲ್ಲಿ, ಕೆಲವು ಜನಪ್ರಿಯ ಗಾಯಕರು ಕನ್ನಡ ಹಾಡುಗಳನ್ನು ಹಾಡಲು ಮುಂದಾದಾಗ ಅವರನ್ನು ತದೆಯಲಾಯಿತಂತೆ. ಈಗ ಹೇಳಿ ಎಲ್ಲ ಸಹನೆಗೂ ಮಿತಿಯಿರುತ್ತದಲ್ಲವೆ...
ಒಮ್ಮೆ ಯೋಚಿಸಬೇಕು
ಮೇಲ್ನೋಟಕ್ಕೆ, ರಕ್ಷಣಾ ವೇದಿಕೆ ಮಾಡಿದ್ದು ಸ್ವಲ್ಪ ತರ್ಲೆ ಕೆಲ್ಸ ಅನ್ಸುದ್ರೂ ಒಳಗೆಲ್ಲೋ ನನಗೆ ಅವರು ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಅನ್ಸುತ್ತೆ. ಮೆರಿಟ್ ಅಗತ್ಯವಿರುವ ಕೆಲಸಗಳನ್ನು ಬಿಟ್ಟು ಕೆಳ ದರ್ಜೆಯ ಕೆಲಸಗಳಿಗೂ ಹೊರರಾಜ್ಯದವರಿಗೆ ಮಣೆ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಬೆಂಗಳೂರಿನಲ್ಲಿ ಇವರುಗಳು ತಮ್ಮ ಧಂಧೆ ನಡೆಸಲು ಎಷ್ಟೆಲ್ಲ ಸವಲತ್ತುಗಳನ್ನು ನಮ್ಮ ಸರ್ಕಾರ ಒದಗಿಸಿದೆ. ಈಹೊತ್ತು ಬೆಂಗಳೂರಿನಲ್ಲಿರುವ ಬಹುತೇಕ ಫ್ಲೈಓವರ್ಗಳೂ ಅವರ ಆಫೀಸುಗಳತ್ತಲೇ ಮುಖ ಮಾಡಿವೆ. ಬದಲಿಗೆ ಕರ್ನಾಟಕದ ಸಾಮಾನ್ಯರಿಗೆ ಏನು ಸಿಕ್ಕಿದೆ. ಇವರುಗಳಿದಾಗಿ ಕರ್ನಾಟಕ ಸರ್ಕಾರವು, ಇವರು ಕರೆ ತರುವ ವಲಸಿಗರಿಗೂ ಸೌಲಭ್ಯಗಳನ್ನೊದಗಿಸಬೇಕು...ನಮಗಿದ್ಯಾವ ಕರ್ಮ. ಇದರ ಮೇಲೆ, ಇವರುಗಳಿಂದ ಕರ್ನಾಟಕದ ಭಾಷಂ ಸಂಸ್ಕೃತಿಗಾಗುತ್ತಿರುವ ಅವಮಾನವನ್ನೂ ಸಹಿಸಬೇಕು. ಇತ್ತೀಚಿಗೆ ಐಬಿಎಂ ಕಂಪನಿಯವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಅರಮನೆ ಮೈದಾನದಲ್ಲಿ ನಡೆಸಿದ ಸಮಾರಂಭದಲ್ಲಿ, ಕೆಲವು ಜನಪ್ರಿಯ ಗಾಯಕರು ಕನ್ನಡ ಹಾಡುಗಳನ್ನು ಹಾಡಲು ಮುಂದಾದಾಗ ಅವರನ್ನು ತದೆಯಲಾಯಿತಂತೆ. ಈಗ ಹೇಳಿ ಎಲ್ಲ ಸಹನೆಗೂ ಮಿತಿಯಿರುತ್ತದಲ್ಲವೆ...