ಉ: ಕಡ್ಲಿಮಟ್ಟಿಯ ಕಾಶೀಬಾಯಿ!!!
- ಉ: ಕಡ್ಲಿಮಟ್ಟಿಯ ಕಾಶೀಬಾಯಿ!!! By: anivaasi (Apr 22 2007 - 9:43am)
- Re: ಕಡ್ಲಿಮಟ್ಟಿಯ ಕಾಶೀಬಾಯಿ!!! By: mahesha (Apr 19 2007 - 5:36pm)
- ನನ್ನಿ: ಕಡ್ಲಿಮಟ್ಟಿಯ ಕಾಶೀಬಾಯಿ!!! ಹಾಗೆಯೇ ದುರ್ಗದ ಗರತಿ By: Sunil Jayaprakash (Apr 18 2007 - 10:48am)
- Re: ನನ್ನಿ: ಕಡ್ಲಿಮಟ್ಟಿಯ ಕಾಶೀಬಾಯಿ!!! ಹಾಗೆಯೇ ದುರ್ಗದ ಗರತಿ By: Khavi (Apr 18 2007 - 1:54pm)
- ಟಿ : ಕಡ್ಲಿಮಟ್ಟಿಯ ಕಾಶೀಬಾಯಿ!!! ಹಾಗೆಯೇ ದುರ್ಗದ ಗರತಿ By: Sunil Jayaprakash (Apr 18 2007 - 2:24pm)
- Re: ನನ್ನಿ: ಕಡ್ಲಿಮಟ್ಟಿಯ ಕಾಶೀಬಾಯಿ!!! ಹಾಗೆಯೇ ದುರ್ಗದ ಗರತಿ By: Khavi (Apr 18 2007 - 1:54pm)
- Re: ಕಡ್ಲಿಮಟ್ಟಿಯ ಕಾಶೀಬಾಯಿ!!! By: shreekant.mishrikoti (Apr 18 2007 - 10:29am)
- Re: ಕಡ್ಲಿಮಟ್ಟಿಯ ಕಾಶೀಬಾಯಿ!!! By: Rohit (Apr 18 2007 - 10:01am)
- Re: ಕಡ್ಲಿಮಟ್ಟಿಯ ಕಾಶೀಬಾಯಿ!!! By: ASHOKKUMAR (Apr 17 2007 - 10:51pm)

RSS:
ಉ: ಕಡ್ಲಿಮಟ್ಟಿಯ ಕಾಶೀಬಾಯಿ!!!
ತೀವ್ರ ದ್ವಂದ್ವವನ್ನು ನಮ್ಮೆದುರಿಗಿಟ್ಟು ನಂತರ ಒಳ್ಳೆಯದು ಗೆಲ್ಲುತ್ತದೆ ಎಂಬುದನ್ನು ನಿರೂಪಿಸುವ ಹಲವಾರು ನೀತಿಕತೆಗಳಿವೆ. ಈ ಕತೆಯೂ ಹೆಣ್ತನ(ಶೀಲ ಎಂಬರ್ಥದಲ್ಲಿ) ಮತ್ತು ತಾಯ್ತನದ ನಡುವಿನ ತೀವ್ರ ದ್ವಂದ್ವವನ್ನು ಹೃದಯಂಗಮವಾಗಿ ತೆರೆದಿಡುತ್ತದೆ. ಶೀಲವನ್ನು ಕಾಪಾಡಿಕೊಳ್ಳುವ ಹೆಣ್ತನವೇ ಇಲ್ಲಿ ಗೆಲ್ಲುತ್ತದೆ. ಅದೂ ಮಗುವನ್ನು ರಕ್ಷಿಸಬೇಕಾದ ತಾಯ್ತನದ ಎದುರು! ಇಲ್ಲಿ ದ್ವಂದ್ವವಿರುವುದು ಒಳ್ಳೆಯ ಕಾಶಿಬಾಯಿ ಮತ್ತು ಕೆಟ್ಟ ಸ್ಟೇಷನ್ ಮಾಸ್ಟರ್ ನಡುವೆ ಅಲ್ಲ ಎಂಬುದನ್ನು ಗಮನಿಸಿ. ಕತೆ ದಾರುಣವಾಗಿರುವುದರಿಂದ ನನ್ನ ತಲೆಯಲ್ಲಿ ಚರ್ಚೆ ಮುಂದುವರಿಯಿತು. "ಸನಾತನ ಭರತ ಸಂಸ್ಕೃತಿಯ ಪ್ರತೀಕ ನಮ್ಮ ಈ ಕಾಶೀಬಾಯಿ" ಎಂಬುದನ್ನು ಯಾಕೋ ಮನಸ್ಸು ಒಪ್ಪುತ್ತಿಲ್ಲ.
ಸಾಮಾನ್ಯವಾಗಿ ಒಂದು ಮೌಲ್ಯವನ್ನು ಆಯ್ದುಕೊಳ್ಳುವಂತೆ ಹೇರುವ/ಪ್ರೇರೇಪಿಸುವ ಕೆಲಸವನ್ನು ನೀತಿಕತೆಗಳು ಮಾಡುತ್ತವಾದರೂ, ಅಂಥ ಕತೆಯನ್ನು ಸ್ವೀಕರಿಸುವಾಗ ಅದರಿಂದ ತಪ್ಪಿಸಿಕೊಳ್ಳುವ ಹೊಂಚು ಹಾಕುತ್ತೇನೆ. ಇಲ್ಲೂ ಹೀಗೆ ಮಾಡುವುದಾದರೆ-
೧. "ಸಾವಿರ ಮುದ್ದು ಮಕ್ಕಳನ್ನು ಪಡೀತೇನೆ" ಎನ್ನುವದರ ಮೂಲಕ ತಾಯ್ತನವನ್ನು ಕಳೆದುಕೊಳ್ಳುತ್ತಿಲ್ಲ ಎಂದು ಸೂಚಿಸುತ್ತಾಳೆ. ಆದರೆ ಅದು ಸಾಯುತ್ತಿರುವ ಮಗುವನ್ನು ಉಳಿಸಿದಂತಾಯಿತೆ?
೨. ಶೀಲದ ಮೂಲಕ ಹೆಣ್ಣು ಕಾಪಾಡಬೇಕಾದ/ಕೆಡಬಾರದ ವಸ್ತುವೆಂದು ನಿರೂಪಿಸುವುದನ್ನು ನಾನು ಹೇಗೆ ಒಪ್ಪುತ್ತೇನೆ? ಶೀಲಬಿಟ್ಟ ಹೆಣ್ಣು ವಸ್ತುವಾಗುವುದನ್ನು ವಿರೋಧಿಸುವ ನಾವು ಕಾಪಾಡಿಕೊಳ್ಳುವ ಮೂಲಕವೂ ಹೆಣ್ಣು ವಸ್ತುವಾಗುವುದನ್ನು ಒಪ್ಪುತ್ತೇವೆಯೆ?
೩. ಮೇಲಿನ ಅಂಶವನ್ನು ಮುಂದುವರೆಸಿ, ನೂರಾರು ವರ್ಷದ ಹಳೆಯ ಕತೆಯಲ್ಲಿ ನಿರೂಪಿತವಾಗಿರುವ ನೈತಿಕತೆಯನ್ನು ಇಂದಿಗೆ ಆರೋಪಿಸಬಹುದ? ಶೀಲದ ಬಗ್ಗೆಗಿನ ಇಂದಿನ ಚರ್ಚೆ ಲಿಂಗವನ್ನು ಮೀರಿದೆಯಲ್ಲವೆ?
೪. ಸ್ಟೇಷನ್ ಮಾಸ್ಟರ್ ನಮ್ಮನ್ನಾಳುತ್ತಿದ್ದ ಪಾಶ್ಚಿಮಾತ್ಯ ಬಲದ ಪ್ರತೀಕವಾಗಿ ಇಲ್ಲಿ ಬರುತ್ತಾನೆಯೆ? ಹಾಗಾದಾಗ, ಈ ಕತೆ ಸ್ವಾತಂತ್ಯ್ರ ಹೋರಾಟದ ಇನ್ನೊಂದು ಮಗ್ಗುಲಿನ ನಿರೂಪಣೆಯೆ?
ಎಲ್ಲ ಜಾನಪದ ಕತೆಗಳಂತೆ ಈ ಕತೆಗೂ ಬೇರೆ ಬೇರೆ ಅವತರಣಿಕೆಗಳು ಇರಲು ಸಾಧ್ಯವಲ್ಲವೆ? ಇದ್ದುದಾದರೆ, ಅವು ಯಾವ ಭಿನ್ನ ನೋಟಗಳನ್ನು ಮುಂದಿಡುತ್ತವೆ? ಹುಡುಕಲು ಗ್ರಾಸ ಕೊಟ್ಟದ್ದಕ್ಕೆ ನಿಮಗೆ ವಂದನೆಗಳು.