ಸುದ್ದಿಯನ್ನು ಹುಟ್ಟಿಸಿ (ಅಥವಾ ಮುರಿದು – ಈ Breaking News ಅಂದರೇನು, ಬಿತ್ತರಿಸಲಾಗುತ್ತಿರುವ ಸುದ್ದಿಗಳನ್ನೆಲ್ಲ ತುಂಡರಿಸಿ ಪ್ರಸಾರ ಮಾಡಲೇಬೇಕಾದ ಸುದ್ದಿ ಅಂತಲೇ? ಜೇಡ್ ಗೂಡಿ ಎಂಬಾಕೆ ಹೊರಗಾಗಿ ಶಿಲ್ಪಾಶೆಟ್ಟಿ ಎಂಬಾಕೆ ಒಳಗಿದ್ದದ್ದೂ ‘ಮುರಿಯಬೇಕಾದ ಸುದ್ದಿ’ ಆಗಿಬಿಟ್ಟಿತ್ತು!) ವಿಚಿತ್ರವಾದ ಧ್ವನಿಗಳಲ್ಲಿ ಬಿತ್ತರಿಸುವ ಈ ದೃಕ್ಶ್ರವಣ ಮಾಧ್ಯಮಗಳ ಭರಾಟೆಯಲ್ಲಿ ಈ ಮಾಧ್ಯಮಗಳು ತೋರಿಸುತ್ತವೆಯೆಂಬುದಕ್ಕಾಗಿಯೇ (ಬಹುಷಃ ಮಾಧ್ಯಮದವರನ್ನು ಮೊದಲಾಗಿ ಕರೆಯಿಸಿಕೊಂಡೇ) ವಿಪರೀತವಾಗಿ ಕಿರುಚುವುದು, ಪ್ರತಿಕೃತಿಗಳನ್ನು ಸುಡುವುದು, ಬಣ್ಣ ಬಣ್ಣದ ಶಾಲುಗಳು, ಹಣೆಬೊಟ್ಟುಗಳು ಇತ್ಯಾದಿಗಳನ್ನು ಧರಿಸಿ ಪೋಸು ಕೊಡುತ್ತಾ ತಾವು ಮಾಡುತ್ತಿರುವುದೇ ಸರಿ ಎಂಬಂತೆ ಬೊಬ್ಬಿರಿಯುವುದು ಇವೇ ಮುಂತಾದ ವರ್ತನೆಗಳು ಗುಣಲಕ್ಷಣಗಳಾಗಿರುವ ಹೊಸದೊಂದು ‘ನಾಯಕರ’ (ಅಥವಾ ಹಾಗೆಂದುಕೊಳ್ಳುವವರ) ದಂಡೇ ಇಂದು ನಿರ್ಮಾಣವಾಗುತ್ತಿರುವಂತೆ ತೋರುತ್ತಿದೆ. ಇಂತಹಾ ‘ಕ್ಯಾಮರಾ ನಾಯಕರುಗಳನ್ನು’ ತಯಾರಿಸಿ, ಪ್ರಚೋದಿಸಿ, ಅವರುಗಳಿಂದ ಸಮಾಜವಿದ್ರೋಹೀ ಕೃತ್ಯಗಳಾಗುವಂತೆ ಪ್ರೇರೇಪಿಸುವ ಶ್ರೇಯ ಈ ಮಾಧ್ಯಮಗಳಿಗೇ ಸೇರಬೇಕು.
ಉ: ಮಾಧ್ಯಮಗಳಿಗೆ ಸುದ್ದಿಯ ಕ್ಷಾಮ.
'ಕ್ಯಾಮರಾ ನಾಯಕರು'
ಡಾ| ಶ್ರೀನಿವಾಸ ಕಕ್ಕಿಲ್ಲಾಯ
ಸುದ್ದಿಯನ್ನು ಹುಟ್ಟಿಸಿ (ಅಥವಾ ಮುರಿದು – ಈ Breaking News ಅಂದರೇನು, ಬಿತ್ತರಿಸಲಾಗುತ್ತಿರುವ ಸುದ್ದಿಗಳನ್ನೆಲ್ಲ ತುಂಡರಿಸಿ ಪ್ರಸಾರ ಮಾಡಲೇಬೇಕಾದ ಸುದ್ದಿ ಅಂತಲೇ? ಜೇಡ್ ಗೂಡಿ ಎಂಬಾಕೆ ಹೊರಗಾಗಿ ಶಿಲ್ಪಾಶೆಟ್ಟಿ ಎಂಬಾಕೆ ಒಳಗಿದ್ದದ್ದೂ ‘ಮುರಿಯಬೇಕಾದ ಸುದ್ದಿ’ ಆಗಿಬಿಟ್ಟಿತ್ತು!) ವಿಚಿತ್ರವಾದ ಧ್ವನಿಗಳಲ್ಲಿ ಬಿತ್ತರಿಸುವ ಈ ದೃಕ್ಶ್ರವಣ ಮಾಧ್ಯಮಗಳ ಭರಾಟೆಯಲ್ಲಿ ಈ ಮಾಧ್ಯಮಗಳು ತೋರಿಸುತ್ತವೆಯೆಂಬುದಕ್ಕಾಗಿಯೇ (ಬಹುಷಃ ಮಾಧ್ಯಮದವರನ್ನು ಮೊದಲಾಗಿ ಕರೆಯಿಸಿಕೊಂಡೇ) ವಿಪರೀತವಾಗಿ ಕಿರುಚುವುದು, ಪ್ರತಿಕೃತಿಗಳನ್ನು ಸುಡುವುದು, ಬಣ್ಣ ಬಣ್ಣದ ಶಾಲುಗಳು, ಹಣೆಬೊಟ್ಟುಗಳು ಇತ್ಯಾದಿಗಳನ್ನು ಧರಿಸಿ ಪೋಸು ಕೊಡುತ್ತಾ ತಾವು ಮಾಡುತ್ತಿರುವುದೇ ಸರಿ ಎಂಬಂತೆ ಬೊಬ್ಬಿರಿಯುವುದು ಇವೇ ಮುಂತಾದ ವರ್ತನೆಗಳು ಗುಣಲಕ್ಷಣಗಳಾಗಿರುವ ಹೊಸದೊಂದು ‘ನಾಯಕರ’ (ಅಥವಾ ಹಾಗೆಂದುಕೊಳ್ಳುವವರ) ದಂಡೇ ಇಂದು ನಿರ್ಮಾಣವಾಗುತ್ತಿರುವಂತೆ ತೋರುತ್ತಿದೆ. ಇಂತಹಾ ‘ಕ್ಯಾಮರಾ ನಾಯಕರುಗಳನ್ನು’ ತಯಾರಿಸಿ, ಪ್ರಚೋದಿಸಿ, ಅವರುಗಳಿಂದ ಸಮಾಜವಿದ್ರೋಹೀ ಕೃತ್ಯಗಳಾಗುವಂತೆ ಪ್ರೇರೇಪಿಸುವ ಶ್ರೇಯ ಈ ಮಾಧ್ಯಮಗಳಿಗೇ ಸೇರಬೇಕು.