ಹೌದು, ಈ ಎಲ್ಲ ಕಥೆಗಳೂ ಖಂಡಿತ ಓದಬೇಕಾದವೇ. ಮಾಸ್ತಿ ನನಗೆ ಇಷ್ಟವಾಗುವುದು ಅವರ ದೂರದಿಂದ ನಿಂತು ನೋಡಿ ಹೇಳುವಂತಹ, ಸಂತೋಷವಾಗಲೀ ಕಷ್ಟವಾಗಲೀ ಯಾವುದನ್ನೂ ವೈಭವೀಕರಿಸದೆ ಹೇಳುವ ಗುಣ. ಯಾವ ಪಾತ್ರವನ್ನೂ ಅವರು ಅಳೆದು-ಸುರಿದು ಇವರು ತಪ್ಪು ಇವರು ಸರಿ ಎಂಬ ಮಾತೇ ಇಲ್ಲದಂತೆ, ಚಿತ್ರಿಸುತ್ತಾರೆ. ಅವರ ಕಾದಂಬರಿಗಳು ಎರಡೂ (ಚೆನ್ನಬಸವನಾಯಕ, ಚಿಕವೀರರಾಜೇಂದ್ರ) ಇದಕ್ಕೆ ದೃಷ್ಟಾಂತ.
ಇವುಗಳ ಜೊತೆಗೆ ನನಗೆ ನೆನಪಾದ ಇನ್ನೊಂದೆರಡು ಉತ್ತಮ ಕಥೆಗಳು - ರಂಗನಹಳ್ಳಿ ರಾಮ, ಪಂಡಿತನ ಮರಣಶಾಸನ ( ಹೆಸರು ತಪ್ಪಿರಬಹುದು, ಮೈಸೂರು ರಾಜರ ಕಾಲದ ಕಥೆ), ಪೆನುಕೊಂಡೆಯ ಕೃಷ್ಣಮೂರ್ತಿ, ಚೆಟ್ಟೆಕಾರನ ಹೆಂಡತಿ ಮೊದಲಾದವು.
ಉ: ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು
ಹೌದು, ಈ ಎಲ್ಲ ಕಥೆಗಳೂ ಖಂಡಿತ ಓದಬೇಕಾದವೇ. ಮಾಸ್ತಿ ನನಗೆ ಇಷ್ಟವಾಗುವುದು ಅವರ ದೂರದಿಂದ ನಿಂತು ನೋಡಿ ಹೇಳುವಂತಹ, ಸಂತೋಷವಾಗಲೀ ಕಷ್ಟವಾಗಲೀ ಯಾವುದನ್ನೂ ವೈಭವೀಕರಿಸದೆ ಹೇಳುವ ಗುಣ. ಯಾವ ಪಾತ್ರವನ್ನೂ ಅವರು ಅಳೆದು-ಸುರಿದು ಇವರು ತಪ್ಪು ಇವರು ಸರಿ ಎಂಬ ಮಾತೇ ಇಲ್ಲದಂತೆ, ಚಿತ್ರಿಸುತ್ತಾರೆ. ಅವರ ಕಾದಂಬರಿಗಳು ಎರಡೂ (ಚೆನ್ನಬಸವನಾಯಕ, ಚಿಕವೀರರಾಜೇಂದ್ರ) ಇದಕ್ಕೆ ದೃಷ್ಟಾಂತ.
ಇವುಗಳ ಜೊತೆಗೆ ನನಗೆ ನೆನಪಾದ ಇನ್ನೊಂದೆರಡು ಉತ್ತಮ ಕಥೆಗಳು - ರಂಗನಹಳ್ಳಿ ರಾಮ, ಪಂಡಿತನ ಮರಣಶಾಸನ ( ಹೆಸರು ತಪ್ಪಿರಬಹುದು, ಮೈಸೂರು ರಾಜರ ಕಾಲದ ಕಥೆ), ಪೆನುಕೊಂಡೆಯ ಕೃಷ್ಣಮೂರ್ತಿ, ಚೆಟ್ಟೆಕಾರನ ಹೆಂಡತಿ ಮೊದಲಾದವು.
ಇಡೀ ಪುಸ್ತಕವನ್ನು ಓದಿ ಎನ್ನುವುದು ನನ್ನ ಶಿಫಾರಸು.
-ಹಂಸಾನಂದಿ