ಉ: ನನ್ನ ಇತ್ತೀಚಿನ ಓದು
- ಉ: ನನ್ನ ಇತ್ತೀಚಿನ ಓದು By: mahesha (May 25 2007 - 8:04pm)
- ಉ: ನನ್ನ ಇತ್ತೀಚಿನ ಓದು By: ವೈಭವ (May 25 2007 - 7:53pm)
- ಉ: ನನ್ನ ಇತ್ತೀಚಿನ ಓದು By: shreekant.mishrikoti (May 26 2007 - 1:16pm)
- ಉ: ನನ್ನ ಇತ್ತೀಚಿನ ಓದು By: ASHOKKUMAR (May 26 2007 - 5:22pm)
- ಉ: ನನ್ನ ಇತ್ತೀಚಿನ ಓದು By: shreekant.mishrikoti (May 26 2007 - 1:16pm)
- ಉ: ನನ್ನ ಇತ್ತೀಚಿನ ಓದು By: ಸಂಗನಗೌಡ (May 25 2007 - 7:04pm)

RSS:
ಉ: ನನ್ನ ಇತ್ತೀಚಿನ ಓದು
ಅ.ರಾ.ಸೇ ಬಗೆಗೆ ನನಗೆ ಗೊತ್ತಿದ್ದಷ್ಟು ಹೇಳುವೆ.
೧. ಅವರ ಹೆಸರು ಅ.ರಾ.ಸೇ ಎಂದು ಎಲ್ಲ ಕಡೆ ಓದಿದ ನೆನಪು , ಆದರೆ ಅದೇಕೋ ಇತ್ತೀಚಿನ ಪುಸ್ತಕ - ಅಪರಂಜಿ( ಈ ಅಪರಂಜಿ ಯಾರು ? ಎಂದು ಆಮೇಲೆ ಹೇಳುವೆ ) ಪ್ರಕಾಶನದ್ದು - ಶೀನಣ್ಣನ ರೋಮಾನ್ಸು' ನಲ್ಲಿ ಎಲ್ಲೆಡೆ ಆ.ರಾ.ಸೇ ಎಂದಿದೆ. ನಮಗೆ ಅದು ಅಷ್ಟು ಮಹತ್ವದ್ದಲ್ಲ (!) - ಅವರು ಏನು ಬರೆದಿದ್ದಾರೆ ಎಂಬುದು ಮುಖ್ಯ !.
೨. ಇವರ ಸಂಬಂಧಿಗಳೊಬ್ಬರು ನಮ್ಮ ಸಂಪದದ ಸಕ್ರಿಯ ಸದಸ್ಯರು . ಅ.ರಾ.ಸೇ (ಹೆಸರೂ ಸೇರಿದಂತೆ) ಕುರಿತು ಬರೆಯಲು ಅವರನ್ನು ಕೇಳುವೆ.
೩. ನನಗೆ ಅ.ರಾ.ಸೇ ಹೆಸರು ಗಮನಕ್ಕೆ ಬಂದಿದ್ದು , ತುಷಾರ , ಸುಧಾ , ಪ್ರಜಾವಾಣಿ , ಉದಯವಾಣಿ ದೀಪಾವಳಿ/ಯುಗಾದಿ ವಿಶೇಷಾಂಕಗಳಲ್ಲಿನ ಹಾಸ್ಯ ಲೇಖನಗಳ ಮೂಲಕ . ಸಾಮಾನ್ಯವಾಗಿ ತುಂಬ ಅದ್ಭುತವಾಗಿವೆ. ನನ್ನ ಕೈಗೆ ಸಿಕ್ಕ ಎಲ್ಲವನ್ನೂ ಕತ್ತರಿಸಿ ಇಟ್ಟುಕೊಂಡಿರುವೆ. ಅವರ ಹಾಸ್ಯಕಾದಂಬರಿ ( ಹೌದು . ಹಾಸ್ಯ ಕಾದಂಬರಿ ) - 'ಸೊಗದಿರುಳು ನಲ್ವಗಲು' ('ಏನ್ಸಾ ಅಂಗಂದ್ರೆ ?' ' ಅಂಗಂದ್ರೆ ಕನ್ನಡದಲ್ಲಿ ಗುಡ್ನೈಟ್ , ಗುಡ್ ಡೇ! ' ) ಧಾರಾವಾಹಿಯಾಗಿ ಸುಮಾರು ೨೦ ವರ್ಷಗಳ ಹಿಂದೆ ತುಷಾರದಲ್ಲಿ ಬಂದಿತ್ತು. ಇದನ್ನು ಇಟ್ಟುಕೊಳ್ಳಲಿಲ್ಲ .
೪. ಹಳೆಗನ್ನಡವಿರಲಿ , ಸಂಸ್ಕೃತವಿರಲಿ , ಪದ್ಯವಿರಲಿ , ಅಂತರ್ರಾಷ್ಟ್ರೀಯ ಸಂಗತಿ ಇರಲಿ , ಮುಗಿಲುಹಳ್ಳಿ ಇರಲಿ , ಮಂಡಿವ್ಯಾಪಾರ ಇರಲಿ ಎಲ್ಲವನ್ನು ಬೆರೆಸಿ ತುಂಬ ಚೆನ್ನಾಗಿ ಬರೆಯುತ್ತಾರೆ. ( ಈ ರೀತಿ ಬರೆಯುವ ಇನ್ನೊಬ್ಬರಿದ್ದಾರೆ - ಅವರು ಸಿ.ಎನ್.ಕೃಷ್ಣಮಾಚಾರ್ - ಅವರ ಲೇಖನ ಇಲ್ಲಿದೆ -http://sampada.net/blog/shreekant_mishrikoti/28/07/2006/2029
-ತಪ್ಪದೇ ಓದಿ . ಅ.ರಾ.ಸೇ ಮಾದರಿ ನಿಮಗೆ ಅರಿವಾಗುತ್ತದೆ. ಈ ಸಿ.ಎನ್.ಕೃಷ್ಣಮಾಚಾರ್ ವಾರದಲ್ಲೊಂದು ದಿನ ಪ್ರಜಾವಾಣಿಯಲ್ಲಿ ಧ್ಯದ ಎಡಪುಟದಲ್ಲಿ ಕೆಲಬಾಗದಲ್ಲಿ ಬರೆಯುತ್ತಾರೆ . ಗಮನಿಸುತ್ತಾ ಇರಿ . ಒಮ್ಮೊಮ್ಮೆ ಒಳ್ಳೇ ಬರಹ ಸಿಗುತ್ತದೆ.)
ಈ ರೀತಿ ಬರೆಯುವದನ್ನು ಬಹುಶ್ರುತ ಎಂದೇನೋ ಎನ್ನುತ್ತಾರೆ. ಆನಂದಿಸಲು ಓದುಗರೂ ಬಹುಶ್ರುತರಿರಬೇಕು , ಅಷ್ಟೇ .
ಇದನ್ನೂ ನೋಡಿ .
http://sampada.net/blog/shreekant_mishrikoti/07/03/2006/1273
http://sampada.net/blog/shreekant_mishrikoti/07/03/2006/1273#comment-181...
ನೆನಪಿನಲ್ಲಿ ಉಳಿದಿರುವ ಇನ್ನಷ್ಟು ವಾಕ್ಯಗಳು .
೧. ಕವಿರಾಜಮಾರ್ಗವನ್ನು ಶ್ರೀವಿಜಯನು ೧೯೬೩ ರಲ್ಲಿ ಬರೆದನು. ( ೧೯೬೩ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ಕವಿರಾಜಮಾರ್ಗವನ್ನು ಶ್ರೀವಿಜಯನು ಬರೆದ ವಿಷಯ ಬಂದಿದೆ)
೨. ಹಂದಿಗಳು ಒಣಹಾಕಿದ ನೆಲಗಡಲೆಯ ಮೇಲೆ ಸೋಲೋ ನೃತ್ಯವನ್ನು ಮಾಡುತ್ತಿದ್ದವು . ಹೀಗೆ ಸಂಸ್ಕರಿಸಲ್ಪಟ್ಟ ನೆಲಗಡಲೆಯೇ ಸಂಜೆ ವೇಳೆ ಬಿಸಿಬಿಸಿ ಮಾರಾಟವಾಗುವದು.
ಇನ್ನು ಎಷ್ಟೋ ಇದೆ.
೫. ಅವರು ಕಾವ್ಯ , ಸಾಹಿತ್ಯಪ್ರೇಮಿಗಳಲ್ಲದೆ ಆಧ್ಯಾತ್ಮ ಚಿಂತಕರೂ ಹೌದಂತೆ . ಅವ್ರ ಬಗ್ಗೆಗೆ ಇತ್ತೀಚಿನ ಮಯೂರದಲ್ಲಿ - ಸುಮಾರು ೨-೩ ತಿಂಗಳ ಹಿಂದೆ ಬಂದಿದೆ.
ನಾಪತ್ತೆಯಾದ ಗ್ರಾಮಾಫೋನ್ ಎಂಬ ಪುಸ್ತಕದಲ್ಲಿಯೂ ಅವರ ಕುರಿತು ನೋಡಿದೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"