ಉ: ಭಾರತೀಯತೆ ಅಂದ್ರೆ ಏನು?
- ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 26 2007 - 5:55pm)
- ಉ: ಭಾರತೀಯತೆ ಅಂದ್ರೆ ಏನು? By: mahesha (May 26 2007 - 10:41pm)
- ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 7:30pm)
- ಉ: ಭಾರತೀಯತೆ ಅಂದ್ರೆ ಏನು? By: ವೈಭವ (May 28 2007 - 12:06am)
- ಉ: ಭಾರತೀಯತೆ ಅಂದ್ರೆ ಏನು? By: mahesha (May 27 2007 - 8:13pm)
- ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 9:55pm)
- ಉ: ಭಾರತೀಯತೆ ಅಂದ್ರೆ ಏನು? By: mahesha (May 28 2007 - 2:48pm)
- ಉ: ಭಾರತೀಯತೆ ಅಂದ್ರೆ ಏನು? By: ಸಂಗನಗೌಡ (May 28 2007 - 4:58pm)
- ಉ: ಭಾರತೀಯತೆ ಅಂದ್ರೆ ಏನು? By: mahesha (May 29 2007 - 6:09pm)
- ಉ: ಭಾರತೀಯತೆ ಅಂದ್ರೆ ಏನು? By: ಸಂಗನಗೌಡ (May 28 2007 - 4:58pm)
- ಉ: ಭಾರತೀಯತೆ ಅಂದ್ರೆ ಏನು? By: kishorpatwardhan (May 28 2007 - 12:06am)
- ಉ: ಭಾರತೀಯತೆ ಅಂದ್ರೆ ಏನು? By: mahesha (May 28 2007 - 2:48pm)
- ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 9:55pm)
- ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 7:30pm)
- ಉ: ಭಾರತೀಯತೆ ಅಂದ್ರೆ ಏನು? By: mahesha (May 26 2007 - 10:41pm)
- ಉ: ಭಾರತೀಯತೆ ಅಂದ್ರೆ ಏನು? By: mahesha (May 20 2007 - 7:35pm)

RSS:
ಉ: ಭಾರತೀಯತೆ ಅಂದ್ರೆ ಏನು?
ಹಾ ಹಾಗಾ...
ಹವುದವುದು. ನನ್ನ ಕೊರಲಿದೆ ನಿಮ್ಮ ಜೊತೆ.
ಈ "ಬೆಂಗಳೂರು ಕನ್ನಡ" ಅದೊಂದು ಕಲಸುಮೇಲೋಗರ. ಆದರೂ ಬೆಂಗಳೂರಲ್ಲಿ ಕೊಂಚ ಕನ್ನಡ ಇದೆ ಎಂಬ ಸಮಧಾನ.
ಆದರೆ ಸುದ್ದಿ ಮತ್ತು ಮನರಂಜನೆಯಲ್ಲಿ ಮಂಗಳೂರಿಗರು ತಕ್ಕಮಟ್ಟದಲ್ಲಿದ್ದಾರಲ್ಲವೇ?(ಊಹೆ).
ಇಲ್ಲಿ ನೀವು ಹಿಂದಿಸಿದ/ಸಂಸ್ಕೃತೀಕರಣ sanskritized ಭಾರತೀಯತೆಯನ್ನು, ಕನ್ನಡದ ಪಾಡಿಗೆ ಹೋಲಿಸಿಹಿರಿ. ಹಿಂದಿಯಲ್ಲೂ ನಾವು ಆದಷ್ಟು ಕಡಮೆ ಅಪಭ್ರಂಶಗಳನ್ನು, ಉರ್ದು-ಪಾರಸೀಯ ಸಿಹಿಪದಗಳನ್ನು ತಗೆದು ಸಂಸ್ಕೃತ ಪದವನ್ನು ಹೇಳದಿದ್ದರೆ ಅದು ಭಾರತೀಯ ಹಿಂದಿಯಲ್ಲ ಬದಲಿಗೆ ಅದು ಪಾಕಿಸ್ತಾನಿ ಉರ್ದು ಅಂತೆ. ನನ್ನೊಡ ಇರುವ ಕೆಲ BIMARUಇಗ ಅಳಲಿದು.
ಗಮನಿಸಿದ್ದೀರ? ಈಗ ಸುದ್ದಿ ಪೇಪರುಗಳಲ್ಲಿ "ತಯಾರು" ಮುಂತಾದ ಉರ್ದು ಸದ್ದು ತಗ್ಗಿ,"ಸಿದ್ಧತೆ" ಮುಂತಾದವು ಬಂದು ಬಿಟ್ಟಿದೆ. ವಿಕದಲ್ಲಿ ಒಬ್ಬರು ಈ ಸಿಹಿ-ಉರ್ದು ಉಲಿಗಳ ಮೇಲೆ ಕೆಂಡಕಾರಿದ್ದೂ ಉಂಟು.
ಹಿಂದೆ ಒಂದು ಸಂಗತಿ ನಡೆಯಿತು. ನನ್ನ ಗೆಳೆಯನ್ನು ಒಬ್ಬ ಗೌಡನಿದ್ದಾನೆ. ಅವನ ಬಳಿ ಯಾರೂ ಬಿಹಾರದವನೋ, ಮಹಾರಾಷ್ಟ್ರದವನೋ ಒಬ್ಬ ಮಹಾಹಿಂದು ಬಂದು, "ಹೆಣವನ್ನು ಹೂಳುವವರು ಹಿಂದುಗಳಲ್ಲ" ಅಂದನಂತೆ. ಇದಕ್ಕೆ ಇವನು ಮುನಿಸಿಕೊಂಡು ನಮ್ಮ ಬಳಿ ಹೇಳಿಕೊಂಡನು. ಅದಕ್ಕೆ ನಾವು "ಇರಲಿ ಬಿಡಪ್ಪ, ನೀವು ಹೆಣ ಸುಡದಿದ್ರೆ ಹಿಂದೂ ಆಗಲ್ಲ, ಆದರೆ ಗೌಡ-ಒಕ್ಕಲಿಗನಾಗಿ ಇದ್ದೇ ಇರ್ತೀಯ. ಯಾಕೆ ಮುನಿಸು. ನಮಗೆ ನೀನು ಹಿಂದುಗಿಂತ ಗೌಡನಾಗಿರೋದೇ ಇಷ್ಟ. ಮನೆಯಿಂದ ಕಜ್ಜಾಯ-ಗಿಜ್ಜಾಯ ತರ್ತೀಯ :)" ಅಂತ ಸಮಾಧಾನ ಮಾಡಿದ್ವಿ.
ಆದರೆ ಕನ್ನಡದ ವಿಷಯದಲ್ಲಿ ಹೀಗೆ ಜಾಸ್ತಿ ಇಲ್ಲ. ಕನ್ನಡದಲ್ಲಿ ಎಲ್ಲ ಕನ್ನಡಗಳೂ ಸಲ್ಲುವವು. ಬೆಂಗಳೂರಲ್ಲಿ ಹೆಚ್ಚು ಬರಹಗಾರರು ಇದ್ದಾರೆ, ಹೆಚ್ಚು publishers ಇದ್ದಾರೆ ಅದಕ್ಕೆ ಅಲ್ಲಿ ಬೆಂಗಳೂರ ಕನ್ನಡ ಇದೆ. ಹಾಗೆ ಗದಗದಿಂದ ಹೊರಬಂದ ಹೊತ್ತಗೆಗಳಲ್ಲಿ ಗದಗದ ನುಡಿಯಿದೆ.
ಬಡಗಲ ಕನ್ನಡದಲ್ಲಿ ಹಲವಾರು ಕನ್ನಡ ಸಿನಿಮಾಗಳು ಬಂದಿವೆ ಸಂತ ಶಿಶುನಾಳ ಷರೀಪ, ಸಿಂಗಾರವ್ವ, ಮುನ್ನೆ ಬಂದ ಜೊತೆಜೊತೆಯಲಿ, ಕಂಠಿ ಮುಂತಾದವು.
ನಾಯಿ ನೆರಳು ಹವ್ಯಕ + ಧಾರವಾಡ ಕನ್ನಡದಲ್ಲಿದೆ.
ಕಾಸರವಳ್ಳಿಯವರ ಹಲವು ಸಿನಿಮಾಗಳು ಮಲೆನಾಡ ಕನ್ನಡದಲ್ಲೇ ಇರೋದು.
ಹಿಂದೆ ಬಂದ "ಗುಡ್ಡದ ಭೂತ" ತುಳುನಾಡ ಕನ್ನಡವನ್ನು, "ಮೂಡಲ ಮನೆ" ಬಡಗಲ ಕನ್ನಡವನ್ನು ಸೂಸಿವೆ. ಕನ್ನಡದ ವಿಷಯದಲ್ಲಿ ಆ ಆ ಕನ್ನಡದವರು ಆ ಕನ್ನಡವನ್ನು "ಸರಕಾರದ ಬರಹ" ಬಿಟ್ಟು ಮಿಕ್ಕೆಲ್ಲೆಡೆ ಬಳಸಲು, ಬೆಳಸಲು ಅನುವಿದೆ.
ಸರಕಾರದ ಬರಹವೂ ೧೮ ಶತಮಾನದ ಮೈಸೂರು ಸಂಸ್ಥಾನದ ಕನ್ನಡದಲ್ಲಿ ನಿಂತು ಬಿಟ್ಟಿದೆ.( ಮೊನ್ನೆ ಒಂದು ಸ್ಥಿರ ಸ್ವತ್ತು ಶುದ್ಧ ಕ್ರಯಪತ್ರಕ್ಕೆ ಸಹಿ ಹಾಕಿದಾಗ ಅನ್ನಿಸಿದ್ದು )
ಕನ್ನಡದ commercial ಸಿನಿಮಾಗಳನ್ನು ಅವನ್ನು ಹೆಚ್ಚು ನೋಡುವ ನೋಡುಗನ್ನು ಮನದಲ್ಲಿಟ್ಟುಕೊಂಡು ಮಾಡ್ತಾರೆ.
ಕನ್ನಡ ಸಿನಿಮಾ ನೋಡದೇ ಇರುವದರಲ್ಲಿ ಹೆಸರುವಾಸಿಯಾದ ಮಂಗಳೂರಿಗರು(ಇದರ ಬಗ್ಗೆ ಹಿಂದೆ ಇಲ್ಲೇ ಒಂದು ಬರಹ ಬಂದಿದೆ), ತೆಲುಗು ಸಿನಿಮಾಪ್ರಿಯರಾದ ಬಳ್ಳಾರಿ, ಕೋಲಾರ, ಬೀದರ, ರಾಯಚೂರಿಗರು( ವಿಕದಲ್ಲಿ ಒಂದು ಕಿರುಬರಹ ಬಂದಿತ್ತು), ಹೀಗೆ ಬೇರೆ ಬೇರೆ ಕಾರಣಗಳಿಂದ ಅವರ ಕನ್ನಡದಲ್ಲಿ commercial ಸಿನಿಮಾ ಮಾಡಿದರೆ, ಸಿನಿಮಾ producerಗಳಿಗೆ ಗಿಟ್ಟಲ್ಲ.!!
ಕನ್ನಡ ಸಿನಿಮಾ ಜೋರಾಗಿ ನಡೆಯೋದೇ ಕಾವೇರಿ ಬಯಲು + ಮಲೆನಾಡಲ್ಲಿ( ಚಿಕ್ಕಮಗಳೂರು. ಶಿವಮೊಗ್ಗ ...) ಇಲ್ಲಿ. ಇವರ ಕನ್ನಡದಲ್ಲಿ ಬೇಕಾಷ್ಟು ಕನ್ನಡ ಸಿನಿಮ ಅದಕ್ಕೆ, ಮಾಡೋದು, ಅದೂ ಹಲವು ಹೊರರಾಜ್ಯದ producerಗಳೂ ಬಂದು.
ಗದಗ, ಕೊಪ್ಪಳ, ಬಾಗಲಕೋಟೆ, ದಾವಣಗೆರೆ-ಗಳ ಮಂದಿ ಈ ವಿಷಯದಲ್ಲಿ ಹೇಗೆ ಅಂತ ನಂಗೆ ಗೊತ್ತಿಲ್ಲ. ಇವರ ವಿಷಯ ಹೆಚ್ಚು ಎಲ್ಲೂ ಬರಲ್ಲ. ಇವರು ಒಂದು ತರಹದ ಗುಪ್ತಜೀವಿಗಳು, ಎಲೆಮರೆಯಕಾಯಿಗಳು, ಇದ್ದರೂ ಕಾಣಿಸಿಕೊಳ್ಳದ ಮಂದಿ. ಇವರ ಪಾಡುಗಿಂತ ಮಂಗಳೂರು, ಮಂಡ್ಯ, ಧಾರವಾಡ, ಬೆಳಗಾವಿಯವರ ಪಾಡು ಎಷ್ಟೋ ಮೇಲು.!
.
.
.
ಕೊನೆಯದಾಗಿ.. ಈ ಏಕೀಕರಣ, ಏಕತೆ ಎಂದು ನಮ್ಮ ನಮ್ಮ ಒಳಬಗೆಗಳನ್ನು, ಭಿನ್ನತೆಯನ್ನು ಅಳಿಸಹತ್ತಿರುವವರನ್ನು ತಡೆಯುವುದರ ಜೊತೆಗೆ, ನಮ್ಮ ನಮ್ಮ ಬೇರೆತನಗಳನ್ನು, ತನಗಳನ್ನು ಉಳಿಸಿ ಬೆಳಸಿಕೊಳ್ಳಬೇಕು. ಇದು ಅವರವರ ಹೊಣೆ.
- ಮಾಯ್ಸ