ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಘನಗಂಭೀರ ಕವಿತ್ವ

June 13, 2007 - 8:49pm — srivathsajoshi

ಉ: ಘನಗಂಭೀರ ಕವಿತ್ವ

srivathsajoshi's picture

ದ್ವಿತೀಯಾಕ್ಷರ ಪ್ರಾಸದ, ಭಾಮಿನಿ ಷಟ್ಪದಿಗೆ ಹೋಲುವ ಕೆಲವನ್ನು ವಿಚಿತ್ರಾನ್ನದ ೪೦ನೆ ಸಂಚಿಕೆಯಲ್ಲಿ ನಾನು ರಚಿಸಿ ಪ್ರಸ್ತುತಪಡಿಸಿದ್ದೆ. ಇಲ್ಲಿವೆ ಅವು, ನಿಮಗಾಗಿ (ವಿವರ/ಹಿನ್ನೆಲೆಗೆ ವಿಚಿತ್ರಾನ್ನ ೪೦ನೆ ಸಂಚಿಕೆ ನೋಡಿ).
==========
ಛಂದಸ್ಸು ಮಾಪಕ ತಂತ್ರಾಂಶದ ಬಗ್ಗೆ ಈಮೈಲನ್ನು ಓದಿದ ಒಬ್ಬ ಸಾಫ್ಟ್‌ವೇರ್‌ ಇಂಜನಿಯರ್‌(ಪ್ಲಸ್‌ ಸಾಹಿತ್ಯಾಭಿಮಾನಿ)ಗೆ ಮನದಲ್ಲಿ ಅನಿಸಿದ್ದು:

ಅಂದು ಕಲಿತಿಹ ವಿದ್ಯೆಯದು ಚಿ
ಕ್ಕಂದಿನಂದಿನ ನೆನೆವೆ ದಿನಗಳ
ಛಂದ ಕಲಿಸಿದ ಪಂಡಿತರ ಬಿಳಿ ಕಚ್ಚೆಪಂಚೆಯನು...
ಇಂದು ನೋಡುವೆ ಮತ್ತೆ ಗುರುಲಘು
ಎಂದುಕೊಳ್ಳುತ ಯಗಣ ರಗಣಗ
ಳಿಂದ ಪರಿಕಿಪ ಗಣಕವಿವರದ ವಿದ್ಯುದಂಚೆಯನು...

ಈ ಛಂದಸ್ಸು ಮಾಪಕ ಸಾಫ್ಟ್‌ವೇರ್‌ ಬಿಡುಗಡೆಯಾದ ಮೇಲೆ ಇದುವರೆಗೆ ಅಂತರ್ಜಾಲದಲ್ಲಿ ಮುಕ್ತ ಛಂದಸ್ಸಿನ ಕವನಗಳನ್ನು ಬರೆಯುತ್ತಿದ್ದವರೆಲ್ಲ ಛಂದೋಬದ್ಧ ಕಾವ್ಯರಚನೆಗೆ ತೊಡಗುತ್ತಾರೆ:

ಅಡಗಿ ಕುಳಿತಿಹನೆನ್ನ ತನುವೊಳು ಮೈ
ಬಡಿದೆಬ್ಬಿಸಿದೆನು ಮಲಗಿರ್ಪ ಕವಿಯನು
ಪೊಡಮಡುತಲಿ ವಾಗ್ದೇವಿಗೆ ಅಕ್ಷರಾಲಂಕಾರ ಪೂಜೆಯನು...
ಎಡವಿ ಬೀಳದೆ ನಡೆವ ಶಕ್ತಿಯ
ನೀಡೆನಗೆ ಛಂದಸ್ಸಿನ ನಿಯಮವೆಲ್ಲವ
ಬಿಡದೆ ಪಾಲಿಸುವಂತೆ ಸರಸತಿ ನಿನ್ನ ಬೇಡುವೆನು...

ಎಲ್ಲರೂ ಛಂದೋಬದ್ಧ ಕವನಗಳನ್ನು ಏಕ್‌ದಂ ಬರೆದು (ಐ ಮೀನ್‌, ಬರಹದಲ್ಲಿ ಟೈಪಿಸಿ) ಛಂದಸ್ಸು ಮಾಪಕ ತಂತ್ರಾಂಶದ ಪರೀಕ್ಷೆ ಪಾಸು ಮಾಡಿಸಿ ಪ್ರಕಟಣೆಗೆ ಸಂಪಾದಕರ ಈಮೈಲ್‌ ವಿಳಾಸಕ್ಕೆ ಕಳಿಸತೊಡಗಿದರೆ ಅವರ ಗತಿ ?

ಬರಹವೆಂಬೀ ಕನ್ನಡದ ಲಘು
ವರವಿರುವುದರಿಂದ ಕೇಳೈ
ಹರಿದುಬರುತಿದೆ ಕಾವ್ಯಧಾರೆಯು ವಿದ್ಯುದಂಚೆಯಲಿ...
ಕೊರೆಯುತಿಹ ಕವಿಮನದ ಗೆಳೆಯರು
ಬರಿಯ ಕೀಬೋರ್ಡಿಂದ ಬರೆಯುವ
ಪರಿಯ ನೋಡುತ ಛಲವ ಮೆಚ್ಚುವೆ ಎನ್ನ ಮನದಲ್ಲಿ...

ನನಗೆ ಮಾತ್ರ ಪದ್ಯಕ್ಕಿಂತ ಗದ್ಯವೇ ಒಳ್ಳೆಯದಾದ್ದರಿಂದ (ಗದ್ಯಂ ಹೃದ್ಯಂ ಎಂದ ಮುದ್ದಣ ಇನ್ಸಿಡೆಂಟಲಿ ನಮ್ಮ ಕಾರ್ಕಳ ತಾಲೂಕಿನ ನಂದಳಿಕೆಯವನು) ನಾನು ಪದ್ಯ ಬರೆಯದೆ ವಿಚಿತ್ರಾನ್ನದ ಅಡಿಗೆಯಲ್ಲೇ ತೃಪ್ತನಾಗುತ್ತೇನೆ. ಏಕೆಂದರೆ:

ರನ್ನ ಬರೆದಿಹ ಪಂಪ ಬರೆದಿಹ ಸಿರಿ
ಗನ್ನಡದಿ ಘನ ಕಾವ್ಯ ಬರೆಯುವ
ಉನ್ನತದ ಆಸೆಯೇ ಬೇಡೆನಗೆ ತುರಾಯಿ ಹಾರಗಳು...
ಪೆನ್ನು ಬಳಸದೆ pun ಬರೆವೆನು ದಟ್ಸ್‌
ಕನ್ನಡದಲಿ ಅಡಿಗಡಿಗೆ ಮಾಡುತ ವಿಚಿ
ತ್ರಾನ್ನ ಬಡಿಸುತ ಕಳೆದೆ ನಾ ನಲ್ವತ್ತು ವಾರಗಳು...

=================

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಘನಗಂಭೀರ ಕವಿತ್ವ By: mahesha (17 replies) June 12, 2007 - 7:22pm
  • ಉ: ಘನಗಂಭೀರ ಕವಿತ್ವ By: ವೈಭವ (Feb 6 2008 - 9:31pm)
    • ಉ: ಘನಗಂಭೀರ ಕವಿತ್ವ By: mahesha (Feb 7 2008 - 10:46am)
      • ಉ: ಘನಗಂಭೀರ ಕವಿತ್ವ By: shreekant.mishrikoti (Feb 7 2008 - 11:05am)
        • ಉ: ಘನಗಂಭೀರ ಕವಿತ್ವ By: ವೈಭವ (Feb 7 2008 - 11:25am)
        • ಉ: ಘನಗಂಭೀರ ಕವಿತ್ವ By: mahesha (Feb 7 2008 - 11:21am)
        • ಉ: ಘನಗಂಭೀರ ಕವಿತ್ವ By: Sunil Jayaprakash (Feb 7 2008 - 11:14am)
  • ಉ: ಘನಗಂಭೀರ ಕವಿತ್ವ By: Sunil Jayaprakash (Jun 12 2007 - 10:51pm)
    • ಉ: ಘನಗಂಭೀರ ಕವಿತ್ವ By: mahesha (Jun 13 2007 - 12:14pm)
      • ಉ: ಘನಗಂಭೀರ ಕವಿತ್ವ By: Khavi (Jun 13 2007 - 7:56pm)
        • ಉ: ಘನಗಂಭೀರ ಕವಿತ್ವ By: mahesha (Jun 13 2007 - 8:03pm)
          • ಉ: ಘನಗಂಭೀರ ಕವಿತ್ವ By: srivathsajoshi (Jun 13 2007 - 8:49pm)
  • ಉ: ಘನಗಂಭೀರ ಕವಿತ್ವ By: hamsanandi (Jun 12 2007 - 10:19pm)
    • ಉ: ಘನಗಂಭೀರ ಕವಿತ್ವ By: mahesha (Jun 13 2007 - 12:14pm)
    • ಉ: ಘನಗಂಭೀರ ಕವಿತ್ವ By: anivaasi (Jun 13 2007 - 3:16am)
      • ಉ: ಘನಗಂಭೀರ ಕವಿತ್ವ By: mahesha (Jun 13 2007 - 12:15pm)
      • ಉ: ಘನಗಂಭೀರ ಕವಿತ್ವ By: hamsanandi (Jun 13 2007 - 8:20am)
        • ಉ: ಘನಗಂಭೀರ ಕವಿತ್ವ By: mahesha (Jun 13 2007 - 8:19pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
  • kannadakanda
    ಉ: ಸ್ತ್ರೀಸೌಂದರ್ಯ
    July 25, 2008 - 6:25am
  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
ಇನ್ನಷ್ಟು


"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ' ಯಲ್ಲಿ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator