ಉ: ಘನಗಂಭೀರ ಕವಿತ್ವ
- ಉ: ಘನಗಂಭೀರ ಕವಿತ್ವ By: ವೈಭವ (Feb 6 2008 - 9:31pm)
- ಉ: ಘನಗಂಭೀರ ಕವಿತ್ವ By: mahesha (Feb 7 2008 - 10:46am)
- ಉ: ಘನಗಂಭೀರ ಕವಿತ್ವ By: shreekant.mishrikoti (Feb 7 2008 - 11:05am)
- ಉ: ಘನಗಂಭೀರ ಕವಿತ್ವ By: ವೈಭವ (Feb 7 2008 - 11:25am)
- ಉ: ಘನಗಂಭೀರ ಕವಿತ್ವ By: mahesha (Feb 7 2008 - 11:21am)
- ಉ: ಘನಗಂಭೀರ ಕವಿತ್ವ By: Sunil Jayaprakash (Feb 7 2008 - 11:14am)
- ಉ: ಘನಗಂಭೀರ ಕವಿತ್ವ By: shreekant.mishrikoti (Feb 7 2008 - 11:05am)
- ಉ: ಘನಗಂಭೀರ ಕವಿತ್ವ By: mahesha (Feb 7 2008 - 10:46am)
- ಉ: ಘನಗಂಭೀರ ಕವಿತ್ವ By: Sunil Jayaprakash (Jun 12 2007 - 10:51pm)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 12:14pm)
- ಉ: ಘನಗಂಭೀರ ಕವಿತ್ವ By: Khavi (Jun 13 2007 - 7:56pm)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 8:03pm)
- ಉ: ಘನಗಂಭೀರ ಕವಿತ್ವ By: srivathsajoshi (Jun 13 2007 - 8:49pm)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 8:03pm)
- ಉ: ಘನಗಂಭೀರ ಕವಿತ್ವ By: Khavi (Jun 13 2007 - 7:56pm)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 12:14pm)
- ಉ: ಘನಗಂಭೀರ ಕವಿತ್ವ By: hamsanandi (Jun 12 2007 - 10:19pm)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 12:14pm)
- ಉ: ಘನಗಂಭೀರ ಕವಿತ್ವ By: anivaasi (Jun 13 2007 - 3:16am)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 12:15pm)
- ಉ: ಘನಗಂಭೀರ ಕವಿತ್ವ By: hamsanandi (Jun 13 2007 - 8:20am)
- ಉ: ಘನಗಂಭೀರ ಕವಿತ್ವ By: mahesha (Jun 13 2007 - 8:19pm)

RSS:
ಉ: ಘನಗಂಭೀರ ಕವಿತ್ವ
ದ್ವಿತೀಯಾಕ್ಷರ ಪ್ರಾಸದ, ಭಾಮಿನಿ ಷಟ್ಪದಿಗೆ ಹೋಲುವ ಕೆಲವನ್ನು ವಿಚಿತ್ರಾನ್ನದ ೪೦ನೆ ಸಂಚಿಕೆಯಲ್ಲಿ ನಾನು ರಚಿಸಿ ಪ್ರಸ್ತುತಪಡಿಸಿದ್ದೆ. ಇಲ್ಲಿವೆ ಅವು, ನಿಮಗಾಗಿ (ವಿವರ/ಹಿನ್ನೆಲೆಗೆ ವಿಚಿತ್ರಾನ್ನ ೪೦ನೆ ಸಂಚಿಕೆ ನೋಡಿ).
==========
ಛಂದಸ್ಸು ಮಾಪಕ ತಂತ್ರಾಂಶದ ಬಗ್ಗೆ ಈಮೈಲನ್ನು ಓದಿದ ಒಬ್ಬ ಸಾಫ್ಟ್ವೇರ್ ಇಂಜನಿಯರ್(ಪ್ಲಸ್ ಸಾಹಿತ್ಯಾಭಿಮಾನಿ)ಗೆ ಮನದಲ್ಲಿ ಅನಿಸಿದ್ದು:
ಅಂದು ಕಲಿತಿಹ ವಿದ್ಯೆಯದು ಚಿ
ಕ್ಕಂದಿನಂದಿನ ನೆನೆವೆ ದಿನಗಳ
ಛಂದ ಕಲಿಸಿದ ಪಂಡಿತರ ಬಿಳಿ ಕಚ್ಚೆಪಂಚೆಯನು...
ಇಂದು ನೋಡುವೆ ಮತ್ತೆ ಗುರುಲಘು
ಎಂದುಕೊಳ್ಳುತ ಯಗಣ ರಗಣಗ
ಳಿಂದ ಪರಿಕಿಪ ಗಣಕವಿವರದ ವಿದ್ಯುದಂಚೆಯನು...
ಈ ಛಂದಸ್ಸು ಮಾಪಕ ಸಾಫ್ಟ್ವೇರ್ ಬಿಡುಗಡೆಯಾದ ಮೇಲೆ ಇದುವರೆಗೆ ಅಂತರ್ಜಾಲದಲ್ಲಿ ಮುಕ್ತ ಛಂದಸ್ಸಿನ ಕವನಗಳನ್ನು ಬರೆಯುತ್ತಿದ್ದವರೆಲ್ಲ ಛಂದೋಬದ್ಧ ಕಾವ್ಯರಚನೆಗೆ ತೊಡಗುತ್ತಾರೆ:
ಅಡಗಿ ಕುಳಿತಿಹನೆನ್ನ ತನುವೊಳು ಮೈ
ಬಡಿದೆಬ್ಬಿಸಿದೆನು ಮಲಗಿರ್ಪ ಕವಿಯನು
ಪೊಡಮಡುತಲಿ ವಾಗ್ದೇವಿಗೆ ಅಕ್ಷರಾಲಂಕಾರ ಪೂಜೆಯನು...
ಎಡವಿ ಬೀಳದೆ ನಡೆವ ಶಕ್ತಿಯ
ನೀಡೆನಗೆ ಛಂದಸ್ಸಿನ ನಿಯಮವೆಲ್ಲವ
ಬಿಡದೆ ಪಾಲಿಸುವಂತೆ ಸರಸತಿ ನಿನ್ನ ಬೇಡುವೆನು...
ಎಲ್ಲರೂ ಛಂದೋಬದ್ಧ ಕವನಗಳನ್ನು ಏಕ್ದಂ ಬರೆದು (ಐ ಮೀನ್, ಬರಹದಲ್ಲಿ ಟೈಪಿಸಿ) ಛಂದಸ್ಸು ಮಾಪಕ ತಂತ್ರಾಂಶದ ಪರೀಕ್ಷೆ ಪಾಸು ಮಾಡಿಸಿ ಪ್ರಕಟಣೆಗೆ ಸಂಪಾದಕರ ಈಮೈಲ್ ವಿಳಾಸಕ್ಕೆ ಕಳಿಸತೊಡಗಿದರೆ ಅವರ ಗತಿ ?
ಬರಹವೆಂಬೀ ಕನ್ನಡದ ಲಘು
ವರವಿರುವುದರಿಂದ ಕೇಳೈ
ಹರಿದುಬರುತಿದೆ ಕಾವ್ಯಧಾರೆಯು ವಿದ್ಯುದಂಚೆಯಲಿ...
ಕೊರೆಯುತಿಹ ಕವಿಮನದ ಗೆಳೆಯರು
ಬರಿಯ ಕೀಬೋರ್ಡಿಂದ ಬರೆಯುವ
ಪರಿಯ ನೋಡುತ ಛಲವ ಮೆಚ್ಚುವೆ ಎನ್ನ ಮನದಲ್ಲಿ...
ನನಗೆ ಮಾತ್ರ ಪದ್ಯಕ್ಕಿಂತ ಗದ್ಯವೇ ಒಳ್ಳೆಯದಾದ್ದರಿಂದ (ಗದ್ಯಂ ಹೃದ್ಯಂ ಎಂದ ಮುದ್ದಣ ಇನ್ಸಿಡೆಂಟಲಿ ನಮ್ಮ ಕಾರ್ಕಳ ತಾಲೂಕಿನ ನಂದಳಿಕೆಯವನು) ನಾನು ಪದ್ಯ ಬರೆಯದೆ ವಿಚಿತ್ರಾನ್ನದ ಅಡಿಗೆಯಲ್ಲೇ ತೃಪ್ತನಾಗುತ್ತೇನೆ. ಏಕೆಂದರೆ:
ರನ್ನ ಬರೆದಿಹ ಪಂಪ ಬರೆದಿಹ ಸಿರಿ
ಗನ್ನಡದಿ ಘನ ಕಾವ್ಯ ಬರೆಯುವ
ಉನ್ನತದ ಆಸೆಯೇ ಬೇಡೆನಗೆ ತುರಾಯಿ ಹಾರಗಳು...
ಪೆನ್ನು ಬಳಸದೆ pun ಬರೆವೆನು ದಟ್ಸ್
ಕನ್ನಡದಲಿ ಅಡಿಗಡಿಗೆ ಮಾಡುತ ವಿಚಿ
ತ್ರಾನ್ನ ಬಡಿಸುತ ಕಳೆದೆ ನಾ ನಲ್ವತ್ತು ವಾರಗಳು...
=================