ಒಲುಮೆಯ ಪ್ರಸಾದ್ ರವರೆ,
“ಕ್ರೈಸ್ತಧರ್ಮ” ಲೇಖನಕ್ಕೆ ನೀವು ಬರೆದ ಪ್ರತಿಕ್ರಿಯೆ, ನನ್ನನ್ನೂ ಬರೆಯುವಂತೆ ಮಾಡಿದ್ದಕ್ಕೆ ಇಗೋ ನಮನ!
“ಜಾತಿ ಮತ ಪಂಥ ಭೇದಗಳ ಕಿತ್ತೊಗೆದು ಬನ್ನಿ, ಮನುಜಮತ ವಿಶ್ವಪತ” ಎಂಬುದು ಹಿಂದುವಾಣಿಯಲ್ಲ, ಕವಿವಾಣಿ ಎಂಬುದನ್ನು ಪ್ರಸಾದರು ಗಮನಿಸಬೇಕು. ಕುವೆಂಪು, ಹಿಂದುವಾಗಿದ್ದ ಕಾರಣಕ್ಕೆ ಈ ವಾಣಿ ಹೊರಬಂತು ಎಂಬ ನಿಮ್ಮ ವಾದ ಎಷ್ಟು ಸರಿ? ಅದೇ, ಕವಿಯಾಗಿದ್ದ ಕಾರಣಕ್ಕೆ ಹೇಳಿದರು ಎಂಬುದು ಸರ್ವರೂ ಒಪ್ಪತಕ್ಕದ್ದಲ್ಲವೇ?
ಇನ್ನೊಂದು ಕಣ್ಣಿನಲ್ಲಿ ನೋಡುವುದಾದರೆ, ಕುವೆಂಪು ಯಾವತ್ತೂ ಹಿಂದುಧರ್ಮದ ಆಚಾರ ವಿಚಾರಗಳನ್ನು ಖಂಡಿಸುತ್ತಲೇ ಬಂದವರು, ಪೂಜಾರಿಯ ಢಾಂಬಿಕತೆ, ಒಳಹುಳುಕುಗಳನ್ನು ನೇರವಾಗಿ ಬರೆದವರು, “ಪ್ರಕೃತಿಯೇ ದೇವರು” ಎಂಬ ನಂಬಿಕೆಯ ನೆಲೆಗೆ ಜಿಗಿದವರು, ಪ್ರೀತಿಯನ್ನಷ್ಟೇ ಬೆಸಯಬಲ್ಲಂಥ ಮನುಜಮತದ ನಿರೀಕ್ಷೆ ಹೊತ್ತು ಕುಳಿತವರು.
“ಕ್ರೈಸ್ತಧರ್ಮ” ಲೇಖನ, ಧರ್ಮದ ಹುಟ್ಟು, ಕಟ್ಟುಪಾಡು, ಸಾಮರ್ಥ್ಯವನ್ನು ದಾಖಲಿಸುವುದರ ಜೊತೆಗೆ ಅದರ ಸವಿಸ್ತಾರ ಹರಿವಿಗೆ ಸಕಾರಣ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಿದೆಯಷ್ಟೆ! ಎಲ್ಲೂ ಕೂಡ ‘ಕ್ರೈಸ್ತಧರ್ಮವೇ ಶ್ರೇಷ್ಟ” ಎಂದು ಪ್ರತಿಪಾದಿಸಲು ಹೊರಡುವುದಿಲ್ಲ.
ಇನ್ನು ನಿಮ್ಮ ತಿರುಪತಿಯ ವಿಷಯ –
ಯಾವ ವಿಷಯ ವೇದಿಕೆ ಹತ್ತಿದರೂ ಮತಾಂತರವನ್ನು ಬಹು ಜಾಣತನದಿಂದ ನುಸುಳಿಸುವುದು ಎಷ್ಟರ ಮಟ್ಟಿಗೆ ಸರಿ?
ಲೇಖನವನ್ನು ತಾವು ಮತ್ತೊಮ್ಮೆ ಓದಬಾರದೇಕೆ? ಹೊಸ ಹೊಳಹುಗಳು ಕಂಡರೆ ಮಾತನಾಡೋಣ.
ಏನಂತೀರಿ?
ಯಜಮಾನ್ ಫ್ರಾನ್ಸಿಸ್
"ಇದು ಬಾಳು ನೋಡು, ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ,
ಹಲವುತನದ ಮೈಮರೆಸುವಾಟವಿದು
ನಿಜವು ತೋರದಲ್ಲ......" (ಗೋಪಾಲಕೃಷ್ಣ ಅಡಿಗ)
ಉ: ಕ್ರೈಸ್ತ ಧರ್ಮ
ಒಲುಮೆಯ ಪ್ರಸಾದ್ ರವರೆ,
“ಕ್ರೈಸ್ತಧರ್ಮ” ಲೇಖನಕ್ಕೆ ನೀವು ಬರೆದ ಪ್ರತಿಕ್ರಿಯೆ, ನನ್ನನ್ನೂ ಬರೆಯುವಂತೆ ಮಾಡಿದ್ದಕ್ಕೆ ಇಗೋ ನಮನ!
“ಜಾತಿ ಮತ ಪಂಥ ಭೇದಗಳ ಕಿತ್ತೊಗೆದು ಬನ್ನಿ, ಮನುಜಮತ ವಿಶ್ವಪತ” ಎಂಬುದು ಹಿಂದುವಾಣಿಯಲ್ಲ, ಕವಿವಾಣಿ ಎಂಬುದನ್ನು ಪ್ರಸಾದರು ಗಮನಿಸಬೇಕು. ಕುವೆಂಪು, ಹಿಂದುವಾಗಿದ್ದ ಕಾರಣಕ್ಕೆ ಈ ವಾಣಿ ಹೊರಬಂತು ಎಂಬ ನಿಮ್ಮ ವಾದ ಎಷ್ಟು ಸರಿ? ಅದೇ, ಕವಿಯಾಗಿದ್ದ ಕಾರಣಕ್ಕೆ ಹೇಳಿದರು ಎಂಬುದು ಸರ್ವರೂ ಒಪ್ಪತಕ್ಕದ್ದಲ್ಲವೇ?
ಇನ್ನೊಂದು ಕಣ್ಣಿನಲ್ಲಿ ನೋಡುವುದಾದರೆ, ಕುವೆಂಪು ಯಾವತ್ತೂ ಹಿಂದುಧರ್ಮದ ಆಚಾರ ವಿಚಾರಗಳನ್ನು ಖಂಡಿಸುತ್ತಲೇ ಬಂದವರು, ಪೂಜಾರಿಯ ಢಾಂಬಿಕತೆ, ಒಳಹುಳುಕುಗಳನ್ನು ನೇರವಾಗಿ ಬರೆದವರು, “ಪ್ರಕೃತಿಯೇ ದೇವರು” ಎಂಬ ನಂಬಿಕೆಯ ನೆಲೆಗೆ ಜಿಗಿದವರು, ಪ್ರೀತಿಯನ್ನಷ್ಟೇ ಬೆಸಯಬಲ್ಲಂಥ ಮನುಜಮತದ ನಿರೀಕ್ಷೆ ಹೊತ್ತು ಕುಳಿತವರು.
“ಕ್ರೈಸ್ತಧರ್ಮ” ಲೇಖನ, ಧರ್ಮದ ಹುಟ್ಟು, ಕಟ್ಟುಪಾಡು, ಸಾಮರ್ಥ್ಯವನ್ನು ದಾಖಲಿಸುವುದರ ಜೊತೆಗೆ ಅದರ ಸವಿಸ್ತಾರ ಹರಿವಿಗೆ ಸಕಾರಣ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಿದೆಯಷ್ಟೆ! ಎಲ್ಲೂ ಕೂಡ ‘ಕ್ರೈಸ್ತಧರ್ಮವೇ ಶ್ರೇಷ್ಟ” ಎಂದು ಪ್ರತಿಪಾದಿಸಲು ಹೊರಡುವುದಿಲ್ಲ.
ಇನ್ನು ನಿಮ್ಮ ತಿರುಪತಿಯ ವಿಷಯ –
ಯಾವ ವಿಷಯ ವೇದಿಕೆ ಹತ್ತಿದರೂ ಮತಾಂತರವನ್ನು ಬಹು ಜಾಣತನದಿಂದ ನುಸುಳಿಸುವುದು ಎಷ್ಟರ ಮಟ್ಟಿಗೆ ಸರಿ?
ಲೇಖನವನ್ನು ತಾವು ಮತ್ತೊಮ್ಮೆ ಓದಬಾರದೇಕೆ? ಹೊಸ ಹೊಳಹುಗಳು ಕಂಡರೆ ಮಾತನಾಡೋಣ.
ಏನಂತೀರಿ?
ಯಜಮಾನ್ ಫ್ರಾನ್ಸಿಸ್
"ಇದು ಬಾಳು ನೋಡು, ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ,
ಹಲವುತನದ ಮೈಮರೆಸುವಾಟವಿದು
ನಿಜವು ತೋರದಲ್ಲ......" (ಗೋಪಾಲಕೃಷ್ಣ ಅಡಿಗ)