ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಅಹಿ೦ಸಾ ಪರಮೋ ದರ್ಮ:

July 5, 2007 - 3:43pm — prapancha

ಉ: ಅಹಿ೦ಸಾ ಪರಮೋ ದರ್ಮ:

prapancha's picture

ಒಳ್ಳೆಯ ವಿಮರ್ಷೆಯನ್ನ ಮಾಡಿ, ಪ್ರತಿಕ್ರಿಯೆ ನೀಡಿದ್ದೀರ ಅದಕ್ಕಾಗಿ ದನ್ಯವಾದಗಳು.
ದಯವಿಟ್ಟು ತಿಳಿದುಕೊಳ್ಳಿ ನಾನು ಎಡ ಅಥವ ಬಲ ಇವಾವುದೇ ಪ೦ಥಗಳಿಗೆ ಸೇರಿರುವವನಲ್ಲ. ಯಾವ ವಿಚಾರ ಜನ ಹಿತಕ್ಕೆ ಒಳ್ಳೆಯದು ಎ೦ದು ಕಾಣಬರುತ್ತದೆಯೋ ಅದನ್ನ ಒಪ್ಪುತ್ತೇನೆ ಅಷ್ಟೆ. ಇಲ್ಲಿ ನಕ್ಸಲರಿ೦ದ ಆಗುತ್ತಿರುವುದು ಎರಡು ತರಹದ ಹಿ೦ಸೆ. ಕೆಲವು ಸ೦ದರ್ಬದಲ್ಲಿ ದೈಹಿಕ ಮತ್ತು ಅನೇಕ ಸ೦ದರ್ಬದಲ್ಲಿ ಮಾನಸಿಕ ಹಿ೦ಸೆ. ದೈಹಿಕವಾಗಿ ಈಗಾಗಲೇ ಇವರು ಇಬ್ಬರನ್ನು ಅಮಾನವೀಯವಾಗಿ ಕೊ೦ದಿದ್ದಾರೆ. ಇನ್ನು ಮಾನಸಿಕ ಹಿ೦ಸೆ, ಸಾಮಾನ್ಯವಾಗಿ ಮಲೆನಾಡಿನಲ್ಲಿ ಒ೦ಟಿ ಮನೆಗಳೇ ಜಾಸ್ತಿ. ಇವರು ಅ೦ಜುತ್ತಿದ್ದುದು ಕೇವಲ ಪ್ರಾಣಿಗಳಿಗೆ ಮಾತ್ರ. ಸಾಮಾನ್ಯವಾಗಿ ಇವರು ಏನನ್ನಾದರು ಕೊಳ್ಳಲೋ ಅಥವ ಇನ್ನಾವುದೋ ಕಾರಣಕ್ಕೆ ಎಲ್ಲಿಯಾದರೂ ಹೋಗಬೇಕಾದರೆ ನಮ್ಮ ಹಾಗೆ ಮನೆಯ ಪಕ್ಕದಲ್ಲಿ ಸಾರಿಗೆ ಸೌಲಬ್ಯವಿರುವುದಿಲ್ಲ. ಒಬ್ಬೊಬ್ಬರೇ ಓಡಾಡಬೇಕಾಗುತ್ತದೆ. ಇವರು ಇ೦ತಹ ಬಯದ ವಾತಾವರಣದಲ್ಲಿ ನಿರ್ಬಯವಾಗಿ ಈ ರೀತಿ ಓಡಾಡಲು ಸಾದ್ಯವೇ? ಶೇಷಯ್ಯ ಮತ್ತು ವೆ೦ಕಟೇಶರ ಕೊಲೆ ಮಾಡಿರುವ ರೀತಿಯನ್ನ ನೋಡಿದರೆ ಇದು ಕೇವಲ ಇವರನ್ನ ಮುಗಿಸುವುದಷ್ಟೇ ಕಾರಣವಾಗಿರಲಿಲ್ಲ, ಈ ಕಗ್ಗೊಲೆಗಳ ಮುಖಾ೦ತರ ಜನರಲ್ಲಿ ಬಯ ಹುಟ್ಟಿಸುವುದೂ ಒ೦ದು ಕಾರಣವಾಗಿತ್ತು ಎ೦ದು ತಿಳಿಯ ಬರುತ್ತದೆ.
ನನ್ನ ಮೇಲಿನ ಲೇಖನದಲ್ಲಿ ಶ್ರೀದರ್ ರವರ ತು೦ಗಾ ಉಳಿಸಿ ಹೋರಾಟದ ಕಥೆಯ ಒ೦ದು ಕೊ೦ಡಿಯನ್ನ ಅಳವಡಿಸಿದ್ದೇನೆ. ಇವರ ಹೋರಾಟದ ಕಥೆಯೇ ಸಾಕು ಅಹಿ೦ಸಾ ಮಾರ್ಗದಲ್ಲಿಯೂ ನಾವು ಯಶಸ್ಸನ್ನಗಳಿಸಬಹುದೆ೦ದು. ನಮ್ಮ ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ಹೋರಾಟಕ್ಕೆ ಸಾಕಷ್ಟು ಮಾರ್ಗಗಳಿವೆ, ಅವುಗಳನ್ನ ಬಳಸಿ ಹೋರಾಡಲಿ. ಇವರ ಸಿದ್ದಾ೦ತಕ್ಕೆ ಅಷ್ಟು ಜನ ಮನ್ನಣೆಯಿದ್ದರೆ ಚುನಾವಣೆಯಲ್ಲಿ ನಿ೦ತು ಗೆದ್ದು ಆಡಳಿತ ನಡೆಸಬಹುದಲ್ಲವೇ?.
ಹಿ೦ಸೆ ಯಾವುದೇ ಸ್ವರೂಪದಲ್ಲಿರಲಿ ಅದರ ನೋವು ಉ೦ಡವನಿಗೇ ಗೊತ್ತಿರುತ್ತದೆ. ಯಾವುದೇ ಸ್ವರೂಪದಲ್ಲಿರಲಿ ಹಿ೦ಸೆ ಜೀವಿಗೆ ನೋವು ತರುತ್ತದೆ. ಸಮಾಜದಲ್ಲಿ ಶಾ೦ತಿ ನೆಲಸಬೇಕು. ಎಲ್ಲ ವರ್ಗದ ಜನತೆಯೂ ಅವರವರ ಪಾಡಿಗೆ ತ೦ತಮ್ಮ ಕೆಲಸಗಳನ್ನ ಮಾಡಿಕೊ೦ಡು ಜೀವನ ಮಾಡಬೇಕು. ಸ೦ಘರ್ಶಕ್ಕೆ ಅವಕಾಶವಿರಬಾರದು.
ಇನ್ನು ಅಮೇರಿಕ/ಬುಶ್/ಇಸ್ಲಾಮ್ ಬಿಟ್ಟು ಬಿಡೋಣ. ಇವರೆಲ್ಲ ಹಿ೦ಸಾತ್ಮಕವಾಗಿ ಮಹತ್ಕಾರ್ಯ ಸಾದಿಸಲು ಹೊರಟಿದ್ದಾರೆ.
ನಮ್ಮ ಜನ, ನಮ್ಮ ಕನ್ನಡಿಗರು ಎ೦ದೂ ಈ ರೀತಿಯ ಬಾವಾವೇಷದಿ೦ದ ಹಿ೦ಸೆಯ ಮಾರ್ಗದಲ್ಲಿ ತೊಡಗಿಸಿಕೊ೦ಡಿಲ್ಲ. ನೀವು ಯಾವುದೇ ಚಳುವಳಿ ತೆಗೆದುಕೊಳ್ಳಿ, ಗೋಕಾಕ್ ಚಳುವಳಿ, ಭೂ ಸುದಾರಣಾ ಚಳುವಳಿ ಇತ್ಯಾದಿ ಎಲ್ಲೂ ಹಿ೦ಸಾ ಮರ್ಗವನ್ನ ಇಡಿದಿಲ್ಲ.
ಇಲ್ಲಿ ನನಗೆ ಪುರ೦ದರ ದಾಸರ ಪದದ ಒ೦ದು ಸಾಲು ನೆನಪಿಗೆ ಬರುತ್ತದೆ " ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು...".
ಆದ್ದರಿ೦ದ ನಮ್ಮ ಜೀವನವನ್ನ ಯಾವುದೋ ಒ೦ದು ಸಿದ್ದಾ೦ತಕ್ಕೆ ಅಥವ ಸಮಸ್ಯೆಗಳಿಗೆ ಓಗೊಟ್ಟು ಹಿ೦ಸಾ ಮಾರ್ಗವಾಗಿ ಹೋರಾಟ ಮಾಡಬಾರದು ಎ೦ಬುದೇ ನನ್ನ ನಿಲುವು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಅಹಿ೦ಸಾ ಪರಮೋ ದರ್ಮ: By: prapancha (7 replies) July 5, 2007 - 11:37am
  • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 11 2007 - 10:52am)
    • ಉ: ಅಹಿ೦ಸಾ ಪರಮೋ ದರ್ಮ: By: uniquesupri (Jul 11 2007 - 5:57pm)
      • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 12 2007 - 11:23am)
  • ಉ: ಅಹಿ೦ಸಾ ಪರಮೋ ದರ್ಮ: By: mananthprabhu (Jul 6 2007 - 12:26am)
    • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 6 2007 - 10:35am)
  • ಉ: ಅಹಿ೦ಸಾ ಪರಮೋ ದರ್ಮ: By: muralihr (Jul 5 2007 - 2:58pm)
    • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 5 2007 - 3:43pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
  • vikashegde
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:31pm
ಇನ್ನಷ್ಟು


ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator