ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ
- ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: honnalichandrashekhar (Jul 8 2007 - 4:35am)
- ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: jaiguruji (Jul 9 2007 - 11:42am)
- ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: ismail (Jul 4 2007 - 5:21pm)
- ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: roshan_netla (Jul 5 2007 - 10:09am)
- ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ By: prapancha (Jul 4 2007 - 11:05am)


RSS:
ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ
ನಾನೂ ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಅನಂತಮೂರ್ತಿ ಅವರು ಬರುವವರೆಗಿನ, ನಂತರದ ಹೋರಾಟವನ್ನು ಹತ್ತಿರದಿಂದ ಕಂಡಿದ್ದೇನೆ. ಅನಂತಮೂರ್ತಿ ಅವರು ಹೋರಾಟಕ್ಕೆ ಧುಮುಕಿದ ನಂತರ ಹೋರಾಟದಲ್ಲಿ ಆದ ದೊಡ್ಡ ಬದಲಾವಣೆಯನ್ನೂ ಗಮನಿಸಿದ್ದೇನೆ. ಶ್ರೀಧರ್ ಅವರು ಎಲ್ಲವನ್ನೂ ವಿವರವಾಗಿ ಬರೆದಿದ್ದಾರೆ.
ತುಂಗಾ ಮೂಲ ಉಳಿಸಿ ಹೋರಾಟ ಒಕ್ಕೂಟ, ನಂತರದ ದಿನಗಳಲ್ಲಿ ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟ ನೀಡಿದ ನೇತೃತ್ವ ಜನರನ್ನು ಈ ದಿಸೆಯಲ್ಲಿ ಜಾಗೃತಿಗೊಳಿಸಿತು. ಜನರ ಒತ್ತಾಸೆಗೆ ಹಾಗೂ ಪ್ರಕೃತಿಯ ಮೇಲಿನ ದೌರ್ಜನ್ಯಕ್ಕೆ ಕೋರ್ಟ್ ಸ್ಪಂದಿಸಿ ಗಣಿಗಾರಿಕೆಗೆ ಕೊನೆ ಹಾಡಿತು.
ಈ ಹೋರಾಟದ ಮುಖ್ಯ ಲಕ್ಷಣ ನಾನು ಗಮನಿಸಿದಂತೆ... ಹೋರಾಟ ಒಕ್ಕೂಟದ ನೇತೃತ್ವದಲ್ಲೇ ಆದರೂ ಕೊನೆಗೆ ಅದು ಜನರ ಹೋರಾಟವಾಯಿತು. ಶಿವಮೊಗ್ಗ ಬಂದ್ ಕರೆಗೆ ಎಲ್ಲರೂ ಓಗೊಟ್ಟರು. ನದಿ ಉಳಿವಿಗಾಗಿ ಅಲ್ಲಿ ಎಡ-ಬಲಗಳ ಪ್ರಶ್ನೆ ಬರಲಿಲ್ಲ. ಶಿವಮೊಗ್ಗ ಬಂದ್ಗಿಂತಲೂ ಮುನ್ನ ದಾವಣಗೆರೆಯಲ್ಲಿ ಕುದುರೆಮುಖ ಗಣಿಗಾರಿಕೆ ವಿರೋಧಿ ಒಕ್ಕೂಟ ಏರ್ಪಡಿಸಿದ್ದ ನದಿ ತೀರದ ಜನರ ಸಮಾವೇಶಕ್ಕೆ ಬಯಲುಸೀಮೆಯ ಜನ ತೀವ್ರವಾಗಿ ಸ್ಪಂದಿಸಿದ್ದರು.
ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಒಂದೆಡೆ ಕ್ರಾಂತಿಯಾಗಿಬಿಡುತ್ತದೆ, ಎಲ್ಲ ಬದಲಾಗಿಬಿಡುತ್ತದೆ ಎನ್ನುವ ಎಡಬಿಡಂಗಿ ಎಡಪಂಥೀಯರು, ಎಲ್ಲವನ್ನೂ ಬಹುಸೂಕ್ಷ್ಮವಾದ ಧರ್ಮದ ಪ್ರಶ್ನೆಯನ್ನಾಗಿ ಮಾಡಿಬಿಡುವ ಬಾಜಾಬಜಂತ್ರಿ ಬಲಪಂಥೀಯರು ಸಾಮಾಜಿಕ ಪರಿಸ್ಥಿತಿಯನ್ನೇ ಕಲುಷಿತಗೊಳಿಸಿದ್ದಾರೆ. ಎಡ-ಬಲ ನಡುವಿನ ಗೆರೆಯನ್ನು ಅತಿ ತೆಳುವಾಗಿ ಮಾಡಿದ್ದು, ಎರಡನ್ನೂ ಎಚ್ಚರದಿಂದ ಗಮನಿಸುವವರಿಗೆ ಬೆಲೆಯೇ ಇಲ್ಲವಾಗಿದೆ. ನೀನು ಎಡಪಂಥೀಯನಾಗು.. ಇಲ್ಲವೇ ಬಲಪಂಥೀಯನಾಗು ಎನ್ನುವ ಒತ್ತಡ ಎಲ್ಲಡೆ ಸೃಷ್ಟಿಯಾಗುತ್ತಿದೆ. ಮಾನವೀಯತೆಯ ಅಂಶಗಳು ಮರೆಮಾಚುತ್ತಿವೆ.
ಯಾರನ್ನೇ ಆಗಲಿ ಎಡಪಂಥೀಯನನ್ನಾಗಿ ಬ್ರಾಂಡ್ ಮಾಡಿದರೆ ಅವರಿಗೆ ಬೈಯಲು ಸುಲಭ. ಬಲಪಂಥೀಯನೆಂದರೆ ಇವರಿಗೆ ಟೀಕಿಸಲು ಸಲೀಸು. ಯಾರಾದರೂ ಮಾತಾಡುವುದನ್ನೇ ಗಮನಿಸುತ್ತಾ ಈತ ಬಳಸಿದ ಯಾವ ಪದದಿಂದ ಇವನನ್ನು ಬ್ರಾಂಡ್ ಮಾಡಬಹುದು ಎಂದು ಕಾಯುವ ವಿಘ್ನಸಂತೋಷಿಗಳೇ ಅಧಿಕವಾಗಿದ್ದಾರೆ.
ಆದರೆ ವಿಶ್ವದ ಇತಿಹಾಸವನ್ನು ಗಮನಿಸಿದರೆ ಎಲ್ಲಿಯೂ ಸಹ ಕ್ರಾಂತಿಯಿಂದಾಗಲಿ.... ರಕ್ತಪಾತದಿಂದಾಗಲಿ.... ಕುರುಡು ಆರಾಧನೆಯಿಂದಾಗಲಿ.... ಸುಖಿ ಸಮಾಜ ಸೃಷ್ಟಿಯಾಗಿದ್ದು ಕಾಣಿಸದು. ಅದು ವಿಕಾಸದಿಂದ ಮಾತ್ರ ಸಾಧ್ಯವಾಗಿದೆ.
ಮನುಷ್ಯನಂತ ಜೀವಿ ಸಹಜೀವಿಗಳ ಪ್ರಾಮಾಣಿಕತೆಯನ್ನು, ವಿಶ್ವಾಸವನ್ನು, ಪ್ರೀತಿಯನ್ನು ನಂಬುವುದೇ ಮಾನವೀಯತೆ. ತಪ್ಪಾದಾಗ ತಿದ್ದಲು ಹಲವು ಮಾರ್ಗಗಳಿವೆ. ‘ಇದೊಂದೇ ದಾರಿ’ ಎಂದು ಹೊರಟಾಗಲೆಲ್ಲಾ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ.
ಆದರೂ ಎಡಬಿಡಂಗಿ ಎಡಪಂಥೀಯ ಕ್ರಾಂತಿಯ ಹುಚ್ಚು, ಬಾಜಾಬಜಂತ್ರಿ ಬಲಪಂಥೀಯ ಭ್ರಾಂತಿಯ ಹುಚ್ಚುಗಳು ಯಾಕೆ ಉಳಿದಿವೆ?
ಹೊನ್ನಾಳಿ ಚಂದ್ರಶೇಖರ್