ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಪೊಲೀಸರ ಮೇಲೆ ಅನುಮಾನ...ಸರೀನಾ?

July 8, 2007 - 7:57pm — ismail

ಉ: ಪೊಲೀಸರ ಮೇಲೆ ಅನುಮಾನ...ಸರೀನಾ?

ismail's picture
ನೀವು ಹೇಳುತ್ತಿರುವುದನ್ನೆಲ್ಲಾ ನಿಜವೆಂದೇ ಒಪ್ಪಿ ಕ್ರಮ ಕೈಗೊಂಡರೂ ನಕ್ಸಲೀಯರನ್ನು ಮಲೆನಾಡಿನಿಂದ ಹೊರಗಟ್ಟಲು ಸಾಧ್ಯವೇ?
 
ಆಂಧ್ರಪ್ರದೇಶ ನೀವು ಹೇಳಿರುವ ಎಲ್ಲಾ ಕೆಲಸಗಳನ್ನೂ ಚಾಚೂ ತಪ್ಪದೆ ಮಾಡಿತು. ಬಹಳಷ್ಟು ಜನರನ್ನು ಪೊಲೀಸರು ಕೊಂದರು. ಪೊಲೀಸರನ್ನು ನಕ್ಸಲೀಯರು ಕೊಂದರು. ಕೊನೆಗೇನಾಯಿತು. ಹಾವು ಸಾಯಲೂ ಇಲ್ಲ ಕೋಲು ಮುರಿಯಲೂ ಇಲ್ಲ. ಹಿಂಸೆ, ಪ್ರತಿಹಿಂಸೆ ಮತ್ತು ಹಿಂಸೆ ಅದಕ್ಕೆ ಪ್ರತಿಹಿಂಸೆ ಎಂಬ ಚಕ್ರವ್ಯೂಹವನ್ನು ಬೇಧಿಸುವ ಒಂದು ಉಪಾಯ ಕಂಡುಕೊಳ್ಳುವ ಅಗತ್ಯವಿದೆ. ಅದಕ್ಕೆ ಸಮಸ್ಯೆಯನ್ನು ಪರಿಹರಿಸ ಹೊರಡುವವರಿಗೆ ಅದರ ಸಮಗ್ರ ಗ್ರಹಿಕೆ ಬೇಕು. ನಮ್ಮ ಸರಕಾರಗಳೆಲ್ಲವೂ ಯುದ್ಧಕಾಲದ ಶಸ್ತ್ರಾಭ್ಯಾಸ ನಡೆಸುವಂಥವು. ರಾಜಕೀಯ ಪಕ್ಷಗಳೂ ಅಷ್ಟೇ. ನಕ್ಸಲ್ ವಾದಕ್ಕೆ ರಾಜಕೀಯವಾದ ಪ್ರತಿಕ್ರಿಯೆಯ ಅಗತ್ಯವೂ ಇದೆ ಎಂದು ಮನಗಾಣದೆ ತಮ್ಮದೇ ಆದ ಭ್ರಷ್ಟಾಚಾರದ ಕೂಪದೊಳಗೆ ಮುಳುಗಿ ಹೋಗಿವೆ. 
 
ಜನರ ಸಹಕಾರ ಬೇಕು ಎಂದು ಹೇಳುವುದು ಸುಲಭ. ಮಲೆನಾಡಿನ ಪೊಲೀಸರನ್ನು ಹೇಗೆ ನಂಬಿಯಾರು? ಸಹಕಾರ ಕೊಟ್ಟವರ ಗತಿ ಏನಾಯಿತು? ಜನ ಸಾಮಾನ್ಯ ಈಗ ರಾಜನ ಭಯ ಮತ್ತು ರಾಜನಿಲ್ಲದ ಭಯ ಎರಡನ್ನೂ ಅನುಭವಿಸಬೇಕಾಗಿದೆ. ಕುದುರೆಮುಖ ಅರಣ್ಯ ಪ್ರದೇಶದ ಹಳ್ಳಿಗಳವರಿಗೆ ಒಂದು ಕಡೆ ನಕ್ಸಲೀಯರ ಭಯ ಮತ್ತೊಂದು ಕಡೆ ಪೊಲೀಸರ ಭಯ. ಈವರೆಗೂ ಅವರಿಗಿದ್ದ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಸ್ಯೆಗಳು ಈ ಬಗೆಯ ತೊಂದರೆಯನ್ನಂತೂ ತಂದಿರಲಿಲ್ಲ. ಮಲೆನಾಡಿನ ತುಂಬಾ ಶೋಷಕರೇ ತುಂಬಿದ್ದಾರೆಂಬ ಅರ್ಥದಲ್ಲಿ ಮಾತನಾಡುವ 'ಕ್ರಾಂತಿಕಾರಿ'ಗಳಲ್ಲಿ ಬಹುತೇಕರಿಗೆ ಮಲೆನಾಡಿನಲ್ಲಿ ಕೇಳಿದಷ್ಟು ಕೂಲಿಕೊಟ್ಟರೂ ಕೆಲಸಕ್ಕೆ ಜನ ಸಿಗದ ಸ್ಥಿತಿ ಇದೆ ಎಂಬುದರ ಅರಿವಿಲ್ಲ. 
 
ಕೀಟನಾಶಕ ಸಿಂಪಡಿಸಿ ಬೆಳೆಗೆ ಹತ್ತಿದ ಕೀಟಗಳನ್ನು ಓಡಿಸುವಂತೆ ನಕ್ಸಲೀಯರನ್ನು ಕೊಂದು ಮುಗಿಸಬೇಕೆಂದು ವಾದಿಸುವವರಿಗೆ ನಕ್ಸಲೀಯರಿಗೆ ಮಲೆನಾಡಿನಲ್ಲಿ ಒಂದು ನೆಲೆ ಕಲ್ಪಿಸಿಕೊಟ್ಟ ಗಿರಿಜನರ ಅಭದ್ರತೆಯ ಅರಿವೂ ಇಲ್ಲ. ರಾಷ್ಟ್ರೀಯ ಉದ್ಯಾನವನ ಯೋಜನೆ ಎಂಬ ಗೌಡ್ಲು ಮತ್ತು ಮಲೆಕುಡಿಯ ಸಮುದಾಯದವರಲ್ಲಿ ಸೃಷ್ಟಿಸಿದ ಅಭದ್ರತೆಯನ್ನು 1995ರಿಂದ 2000ದವರೆಗಿನ ಅವಧಿಯಲ್ಲಿ (ಈ ಅವಧಿಯಲ್ಲಿ ನಾನು ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರದಿಗಾರನಾಗಿದ್ದೆ) ನಾನೇ ಕಣ್ಣಾರೆ ಕಂಡಿದ್ದೇನೆ. ತಾವು ಕೃಷಿ ಮಾಡುತ್ತಿರುವ, ವಾಸಿಸುತ್ತಿರುವ ಭೂಮಿಗೆ ಸಂಬಂಧಿಸಿದಂತೆ ಅವರಲ್ಲಿ ದಾಖಲೆಗಳೇ ಇಲ್ಲ. ಸರಕಾರದ ಪುನರ್ವಸತಿ ಪ್ಯಾಕೇಜ್ ಗಳೆಲ್ಲವೂ ಭೂದಾಖಲೆಗಳನ್ನು ಹೊಂದಿದ್ದವರಿಗೆ ಮಾತ್ರ. ದಾಖಲೆಯೇ ಇಲ್ಲದೆ ಯಾವುದೋ ಕಾಲದಲ್ಲಿ ಯಾರಿಗೋ ಗೇಣಿಕೊಡುತ್ತಿದ್ದೆವು ಎಂದು ಹೇಳಿಕೊಂಡು ಬದುಕು ಕಟ್ಟಿಕೊಂಡಿರುವವರ ಗತಿಯಾದರೂ ಏನು?
 
ಈ ಕಾಡಿನ ಮಕ್ಕಳಿಗಾಗಿ ಸರಕಾರ ಸ್ಥಾಪಿಸಿರುವ ಗಿರಿಜನ ಆಶ್ರಮ ಶಾಲೆಗಳಲ್ಲಿ ಒಂದೆರಡಾದರೂ ಸರಿಯಾಗಿದ್ದಿದ್ದರೆ, ಗಿರಿಜನರ ಮಕ್ಕಳು ಆಧುನಿಕ ವಿದ್ಯಾಭ್ಯಾಸವನ್ನು ಪಡೆಯುವುದನ್ನು ಖಚಿತ ಪಡಿಸಿಕೊಂಡಿದ್ದರೆ ಕಳೆದ ಐವತ್ತು ವರ್ಷಗಳ ಅಭಿವೃದ್ಧಿ ಯಾತ್ರೆಯಲ್ಲಿ ಈ ಗಿರಿಜನರಲ್ಲಿ ಬಹುಪಾಲು ಜನ ಊರಜನರಾಗಿಬಿಡುತ್ತಿದ್ದರು. ಗಿರಿಜನಾಭಿವೃದ್ಧಿ ಯೋಜನೆಗಳೆಲ್ಲಾ ತಾಲೂಕು ಕೇಂದ್ರಗಳಾಚೆಗೆ ಹೋಗದೇ ಉಳಿದದ್ದರ ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ. ಈಗಲೂ ಕಾಲ ಮಿಂಚಿಲ್ಲ. ಕುದುರೆಮುಖ ಅರಣ್ಯ ವ್ಯಾಪ್ತಿಯಲ್ಲಿ ಬರುವ ಪ್ರತೀ ಕುಟುಂಬದ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣವೊಂದನ್ನು ಖಚಿತ ಪಡಿಸಿದರೆ ಸಮಸ್ಯೆಯಲ್ಲಿ ಅರ್ಧದಷ್ಟು ಪರಿಹಾರವಾಗುತ್ತದೆ. ಬದುಕಿನ ಕುರಿತ ಭರವಸೆಯೊಂದಿದ್ದರೆ ಮನುಷ್ಯ ಸುಲಭದಲ್ಲಿ ಬಂದೂಕು ಕೈಗೆತ್ತಿಕೊಳ್ಳುವವರನ್ನು ಒಪ್ಪುವುದಿಲ್ಲ. ಇದರ ಜತೆಗೆ ಕಾನೂನು ಪಾಲನೆಗೆ ಪೊಲೀಸರು ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಅರ್ಥವಿದೆ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.in
  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಪೊಲೀಸರ ಮೇಲೆ ಅನುಮಾನ...ಸರೀನಾ? By: kuchela (3 replies) July 8, 2007 - 3:47am
  • ಉ: ಪೊಲೀಸರ ಮೇಲೆ ಅನುಮಾನ...ಸರೀನಾ? By: ismail (Jul 8 2007 - 7:57pm)
    • ಉ: ಪೊಲೀಸರ ಮೇಲೆ ಅನುಮಾನ...ಸರೀನಾ? By: jaiguruji (Jul 9 2007 - 11:14am)
      • ಉ: ಪೊಲೀಸರ ಮೇಲೆ ಅನುಮಾನ...ಸರೀನಾ? By: jaiguruji (Jul 9 2007 - 11:21am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:40am
  • srinivasps
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:38am
  • pachhu2002
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:33am
  • savithasr
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 8:21am
  • savithasr
    ಉ: ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
    September 8, 2008 - 7:58am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 6:37am
  • Chamaraj
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 6:31am
  • Chamaraj
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 6:25am
ಇನ್ನಷ್ಟು


ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator