ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಅಹಿ೦ಸಾ ಪರಮೋ ದರ್ಮ:

July 12, 2007 - 11:23am — prapancha

ಉ: ಅಹಿ೦ಸಾ ಪರಮೋ ದರ್ಮ:

prapancha's picture

ಬಹುಶಹ ನನ್ನ ಲೇಖನದ ಮೂಲ ಅರ್ಥ ತಾವು ಗ್ರಹಿಸಲಿಲ್ಲ ಎ೦ಬುದು ನನ್ನ ಅಬಿಪ್ರಾಯ. ನಾನು ಪ್ಯಾಲಿಸ್ತೇನ್-ಇಸ್ರೇಲ್ ಕದನದ ಉದಾಹರಣೆಯನ್ನ ತೆಗೆದುಕೊ೦ಡಿದ್ದು ಕೇವಲ ಹಿ೦ಸಾತ್ಮಕ ಹೋರಾಟದಿ೦ದ ಸಾಮಾನ್ಯಜನರು ನಲುಗುತ್ತಾರೆ ಎ೦ದು ನಿರೂಪಿಸಲು ಅಷ್ಟೇ, ಈಗಿನ ಸ್ಥಿತಿಯಲ್ಲಿ ಅಹಿ೦ಸಾತ್ಮಕ ಹೋರಾಟ ಮಾಡಿ ಎ೦ದು ಪ್ಯಾಲಿಸ್ತೇನ್-ಇಸ್ರೇಲಿಗರಿ ಗೆ ಹೇಳಲು ಹೋದರೆ ಅದು ನೀವು ಹೇಳಿದ ಹಾಗೆ ಹಾಸ್ಯಾಸ್ಪದ ಎ೦ದು ನನಗೂ ಅರಿವಿದೆ.
ನಕ್ಸಲರ ಹಿ೦ಸಾತ್ಮಕ ಚಳುವಳಿಯನ್ನ ಪೋಲೀಸ್ ಕಾರ್ಯಾಚರಣೆಯಿ೦ದ ಮಾತ್ರ ಮಟ್ಟ ಹಾಕಲು ಮು೦ದಾದರೆ ನಲುಗುವುದು ಮತ್ತು ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಜನಸಾಮಾನ್ಯರು. ಯಾವುದೇ ಸ್ವರೂಪವಾಗಿರಲಿ ಹಿ೦ಸೆ ಮನುಷ್ಯನಿಗೆ ನೋವು ತರುತ್ತದೆ. ನನಗೆ ಕಾಡಿನ ಸಾಮಾನ್ಯಜನರ ಬದುಕಿನ ಜೊತೆ ಬಾವನಾತ್ಮಕ ಸ೦ಬ೦ದವಿಟ್ಟುಕೊ೦ಡಿದ್ದೇನೆ ಅದಕ್ಕಾಗಿ ನಾನು ಅವಲತ್ತುಕೊಳ್ಳುತ್ತಿರುವುದು. ಹೋಗಲಿ ನಮ್ಮ ಸಾವಿರಾರು ಜನ ಪೋಲೀಸರು ಕೇವಲ ಸುಮಾರು ೫೦ ಜನ ಇರುವ ನಕ್ಸಲರನ್ನ ಇಡಿಯಲು ಅಥವ ಸದೆಬಡಿಯಲು ಈಗಾಗಲೇ ಎಷ್ಟು ವರ್ಷಗಳನ್ನ ತೆಗೆದುಕೊ೦ಡಿದ್ದಾರೆ? ೨ ವರ್ಷಗಳಿ೦ದ ಪೋಲೀಸರು ಕಾರ್ಯಾಚರೆಣೆಯನ್ನ ನಡೆಸುತ್ತಿದ್ದಾರೆ ಆದರೆ ನಕ್ಸಲರ ಸ೦ಖ್ಯೆ ದಿನೇ ದಿನೇ ವೃದ್ದಿಯಾಗಿದೇ ವಿನಹ ಕಡಿಮೆಯಾಗಲಿಲ್ಲ ಯಾಕೆ?
ನನ್ನ ಅಬಿಪ್ರಾಯದ ಪ್ರಕಾರ ಇ೦ದು ನಮ್ಮ ಪೋಲೀಸ್ ವ್ಯವಸ್ಥೆ ಇರುವುದು ಕೇವಲ ಪಿಕ್ ಪಾಕೆಟ್ ಕಳ್ಳರನ್ನ ಇಡಿಯಲು, ರಾಜಕಾರಣಿಗಳ ಬಾಗಿಲು ಕಾಯಲು, ಹಿರಿಯ ಪೋಲೀಸ್ ಅದಿಕಾರಿಗಳ ಮನೆ ಕೆಲಸಕ್ಕೆ ಸರಿಯಾಗಿದೆ!. ಪ್ರಸ್ತುತ ನಮ್ಮ ಪೋಲೀಸರಿ೦ದ ನಕ್ಸಲರ ವಿರುದ್ದ ಹೋರಾಡುವ ಅಥವ ಜಾಗತಿಕ ಬಯೋತ್ಪಾದನೆಯನ್ನ ಹತ್ತಿಕ್ಕುವ ಸಾಮರ್ಥ್ಯವಿಲ್ಲ. ಕೆಲವೇ ಕೆಲವು ನಿಷ್ಟ/ದಷ್ಟ ಪೋಲೀಸರು ಇದ್ದರೂ ಅವರಿಗೆ ಬೇಕಾದ ನೈತಿಕ/ಸ೦ಪನ್ಮೂಲದ ವ್ಯವಸ್ತೆಯಿರುವುದಿಲ್ಲ. ಹೀಗಾಗಿ ನಮ್ಮ ಪೋಲೀಸರಿಗೆ ನಕ್ಸಲರನ್ನ ಮಟ್ಟ ಹಾಕಲು ಬಿಟ್ಟರೆ ೩ ತಿ೦ಗಳಿಗೋ, ೬ ತಿ೦ಗಳಿಗೋ ಒ೦ದು ಎ೦ಕೌ೦ಟರ್ ಮಾಡಿ ೧-೨ ಜನ ಸಾಯಿಸುವುದನ್ನ ಬಿಟ್ಟರೆ ನಕ್ಸಲರನ್ನ ಮಟ್ಟ ಹಾಕುವ ಸಾಮರ್ಥ್ಯವಿಲ್ಲ ಎ೦ಬುದು ನನ್ನ ಅಬಿಪ್ರಾಯ. ಒ೦ದು ವೇಳೆ ಇದ್ದರೂ ಇವರು ತೆಗೆದು ಕೊಳ್ಳುವು ಕಾಲಾವದಿಯು ಊಹಿಸಲೂ ಅಸಾದ್ಯ!. ವೀರಪ್ಪನ್ ಕಾರ್ಯಾಚರಣೆಯನ್ನೇ ತೆಗೆದುಕೊಳ್ಳಿ ಎಷ್ಟು ವರ್ಷಗಳು ತೆಗೆದುಕೊ೦ಡರು? ಅದೂ ಈ ಒನ್ ಮ್ಯಾನ್ ಅರ್ಮಿಯನ್ನ ಸದೆಬಡಿಯಲು ದಶಕಗಳೇ ಉರುಳಿದವು. ಇನ್ನು ಸ್ವಲ್ಪ ಪ್ರಮಾಣದ ಜನ ಬೆ೦ಬಲವಿರುವ ಈ ನಕ್ಸಲರನ್ನ ಸದೆಬಡಿಯಲು ಎಷ್ಟು ವರ್ಷಗಳು ಆಗಬಹುದು? ಈ ಕಾಲಾವದಿಯಲ್ಲಿ ಸಾಮಾನ್ಯಜನರ ಗತಿ ಏನು? ಒ೦ದು ಕಡೆ ನಕ್ಸಲರು ಬೆ೦ಬಲ ನೀಡಲು ಹಿ೦ಸೆ ಇನ್ನೊ೦ದು ಕಡೆ ಪೋಲೀಸರು ಮಾಹಿತಿ ನೀಡಲು ಹಿ೦ಸೆ, ಇವುಗಳ ಮದ್ಯೆ ಅವರ ಬದುಕು ಹೇಗಾಗಬೇಕು?

ಸಾದ್ಯವಾದರೆ ನಮ್ಮ ಪೋಲೀಸರು ತಲೆಕೆಟ್ಟ ಯುವಕರನ್ನ ಹಿಡಿದು ಸದೆ ಬಡಿಯಬೇಕೆ೦ಬ ಆಸೆ ನನಗೂ ಇದೆ. ಆದರೆ ಈ ಸಾಮರ್ಥ್ಯ ನಮ್ಮ ಪೋಲೀಸರಿಗೆ ಇದೆಯೆ? ಬೂತಕಾಲದ ಕೆಲವು ಘಟನೆಗಳನ್ನ ವಿಮರ್ಷಿಸಿದರೆ ಇಲ್ಲ ಎ೦ಬ ಅಬಿಪ್ರಾಯ ಬರುತ್ತದೆ. ಮೇಲೆ ಧೋ ಎ೦ದು ಸುರಿಯುವ ಮಳೆ, ಕೆಳಗೆ ಕಾಲಿಟ್ಟರೆ ಅಮರಿಕೊಳ್ಳುವ ಇ೦ಬಳ, ದಟ್ಟಕಾಡು, ಬೆಟ್ಟ ಗುಡ್ಡ ಇ೦ತಹ ದುರ್ಗಮ ಪ್ರದೇಶದಲ್ಲಿ ಬೆರಳೆಣಿಕೆಯಷ್ಟು ಜನ ಪೋಲೀಸರು ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುವುದು ಹೇಗೆ? ಹಾಗೂ ಪೋಲೀಸರಿಗೆ ನಕ್ಸಲರಿರುವಷ್ಟು ಹೋರಾಟದ ಛಲವಿರುತ್ತದೆಯೇ?
ನಕ್ಸಲರ ಹೋರಾಟ ಕೇವಲ ಮಲೆನಾಡಿನ ಜನತೆಯ ಒಳಿತಿಗಾಗಿ ಅಷ್ಟೇ ಅಲ್ಲ, ಅವರಿಗೆ ನೇಪಾಳದಿ೦ದ ದಕ್ಷ್ಣಿಣ ಬಾರತದ ತುತ್ತ ತುದಿಯತನಕ ಒ೦ದು ರೆಡ್ ಕಾರಿಡಾರ್ ಮಾಡುವ ಹ೦ಬಲವಿದೆ. ಈ ಹ೦ಬಲಕ್ಕೆ ಅವರಿಗೆ ಅಲ್ಪ ಪ್ರಮಾಣದ ಸ್ಥಳೀಯರ ಸಹಾಯವೂ ಇದೆ, ಶತ್ರು ರಾಷ್ಟ್ರಗಳ ಸಹಾಯ ಕೂಡ ಇದೆ ಎ೦ಬ ಗುಮಾನಿಯಿದೆ. ಇ೦ತಹ ಚಳುವಳಿಯನ್ನ ಹತ್ತಿಕ್ಕಲು ನಮ್ಮ ಆಡಳಿತ ವರ್ಗಕ್ಕೆ ಎಷ್ಟು ಕಾಲ ಬೇಕಾಗಬಹುದು? ಈ ಅವದಿಯಲ್ಲಿ ಜನಸಾಮಾನ್ಯರಿಗೆ ಆಗುವ ಹಾನಿಯೆಷ್ಟು? ಈ ದೃಷ್ಟಿಯಿ೦ದ ಇನ್ನೂ ಶೈಷಾವಸ್ಥೆಯಲ್ಲಿರುವ ನಕ್ಸಲ್ ಸಮಸ್ಯೆಯನ್ನ ಮಾತುಕತೆಯ ಮುಖಾ೦ತರ ಬಗೆ ಹರಿಸಿಕೊಳ್ಳುವುದು ಒಳಿತು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಅಹಿ೦ಸಾ ಪರಮೋ ದರ್ಮ: By: prapancha (7 replies) July 5, 2007 - 11:37am
  • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 11 2007 - 10:52am)
    • ಉ: ಅಹಿ೦ಸಾ ಪರಮೋ ದರ್ಮ: By: uniquesupri (Jul 11 2007 - 5:57pm)
      • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 12 2007 - 11:23am)
  • ಉ: ಅಹಿ೦ಸಾ ಪರಮೋ ದರ್ಮ: By: mananthprabhu (Jul 6 2007 - 12:26am)
    • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 6 2007 - 10:35am)
  • ಉ: ಅಹಿ೦ಸಾ ಪರಮೋ ದರ್ಮ: By: muralihr (Jul 5 2007 - 2:58pm)
    • ಉ: ಅಹಿ೦ಸಾ ಪರಮೋ ದರ್ಮ: By: prapancha (Jul 5 2007 - 3:43pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • karaddishivaraj
    ಉ: ವೈದ್ಯನಾರಾಯಣಕಥೆ
    July 6, 2008 - 9:06pm
  • Narayana
    ಉ: ವೈದ್ಯನಾರಾಯಣಕಥೆ
    July 6, 2008 - 8:48pm
  • yuvapremi
    ಉ: ಕನಸಿನ ಕನ್ಯ
    July 6, 2008 - 8:46pm
  • Narayana
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:38pm
  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator