ಎಲ್ಲರಿಗೂ ನಮಸ್ಕಾರ
ನಾನು ದೀಪಕ್ ಧನಂಜಯ .... ಸಹ-ಸದಸ್ಯರಲ್ಲಿ ನನ್ನದೊಂದು ಕೋರಿಕೆ... ಏನಂದರೆ... ನನ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಯುವ ಆಸಕ್ತಿ ಇದೆ.. ಅದ್ರೆ.. ನಾನು ಕನ್ನಡದಲ್ಲಿ ಬರೆದು 6 ವರ್ಷಗಳಾಗಿವೆ.. ಕನ್ನಡ ಚೆನ್ನಾಗಿ ಓದುತ್ತೇನೆ.. ಹಾಗು ಬಹಳ ವಿಷಯಗಳ ಬಗ್ಗೆ ಲೇಖನ ಬರೆಯಬೆಕಂಬ ಅಸಕ್ತಿ.. ಆದ್ದರಿಂದ.. ನನ್ನ ಲೇಖನಗಳಲ್ಲಿ.. ಏನಾದರು ತಪ್ಪು ಇದ್ರೆ.. ನನ್ನನ್ನು ಟೀಕಿಸದೆ.. ಸರಿಪಡಿಸಿಕೊಳೋದಕ್ಕೆ ಸಹಾಯ ಮಾಡಿ ಎಂದು ವಿನಮ್ರತೆಯಿಂದ ವಿನಂತಿಸಿಕೋಳುತ್ತೇನೆ... ದೀಪಕ್

- Login or register to post comments
- 1105 hits
- Email this forum




RSS:
ಸಂಪದಕ್ಕೆ ಸ್ವಾಗತ
ಸಂಪದಕ್ಕೆ ಸ್ವಾಗತ ನಿಮಗೆ ದೀಪಕ್ ರವರೆ. ಈ ತಪ್ಪು ಒಪ್ಪುಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿವೆ. ಇಲ್ಲಿ ಯಾರೂ ಕೂಡ ದೊಡ್ಡವರಲ್ಲ, ಸಣ್ಣವರಲ್ಲ. ನೀವು ಎಷ್ಟು ಸಾಧ್ಯವೋ ಅಷ್ಟು ಬರೆಯಿರಿ, ಓದಿ ಪ್ರತಿಕ್ರಿಯಿಸಲು ಸಂಪದಿಗರೆಲ್ಲರೂ ಇದ್ದೇವೆ.
ಧನ್ಯವಾದ.
ಸಹಸದಸ್ಯ
"ಸಹಸದಸ್ಯ" ಇದು ಒಳ್ಳೆಯ ಪ್ರಯೋಗ.
ತಪ್ಪುಗಳನ್ನು ತಪ್ಪುಗಳೆಂದು ತಿಳಿಯುವುದೂ ಕೂಡ ಒಂದು ರೀತಿಯ ಜ್ಞಾನ.
Tappu galu
Tappugalanu Ondu Ritiyalli Sariyage erutave adanu aretukondu hotare yavudu Tappagadu.
ಇಂದು ಹೊಸಬ; ನಾಳೆ ಹಳಬ !
ದೀಪಕ್, ನಿಮಗೆ 'ಸಂಪದ' ಕ್ಕೆ ಅಹ್ವಾನವನ್ನು ಕೋರುತ್ತೇನೆ. ನಾನು ಹಿಂದೆ ಬಂದಾಗ ಎಲ್ಲಾ ಸದಸ್ಯರೂ ತಮ್ಮ ಪ್ರೀತಿಯ 'ಕಳಕಳೀ' ಸ್ವಭಾವದಿಂದ ಎತ್ತಿಕೊಂಡು ಸಹಾಯಮಾಡಿದರು. ಹೆದರಬೇಡಿ. ಬರೆಯಿರಿ. ಬರೀತಾನೆ ಇರಿ. ಸಿರಿಗನ್ನಡಂ ಗೆಲ್ಗೆ !
ವೆಂ.
ಧನ್ಯವಾದಗಳು...
ನಾನು ಬರೆದ ಮೊದಲ ಲೇಖನಕ್ಕೆ ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, ಬರೆಯಲು ಹಿಂಜರಿಯುತ್ತಿದ್ದೇನೆ!
ನನ್ನ ಮೊದಲ ಲೇಖನದ ಶೀರ್ಶಿಕೆ "ಮನಸ್ಸು" ಎಂದು...
http://sampada.net/article/1624
ಉ:ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, .....ಆ ಕಾರಣಕ್ಕೇ ಬರೆಯಿರಿ!
ದೀಪಕ್ ,
ಆ ಕಾರಣಕ್ಕೇ ಬರೆಯಿರಿ. ಅಂದರೆ ಯಾವ ಪ್ರತಿಕೂಲ ಪ್ರತಿಕ್ರಿಯೆಯೂ ಬಂದಿಲ್ಲವೆಂಬ ಕಾರಣಕ್ಕೇ ಬರೆಯಿರಿ!
ಹೆಚ್ಚು ಹೆಚ್ಚು ಜನ ಕನ್ನಡವನ್ನು ಅಂತರ್ಜಾಲದಲ್ಲೂ ಜನ ಬಳಸಿದಾಗಲೇ ಕನ್ನಡ ಭವಿಷ್ಯದಲ್ಲೂ ಉಳಿಯುವುದು. ನೀವೂ ನಿಮ್ಮ ಪಾಲಿನ ಬಳಕೆ ಮಾಡಿ .
ನಾನಂತೂ ಓದುವಾಗ ಕನ್ನಡಕ್ಕೇ ಇಂಗ್ಲೀಷ್ಗಿಂತ ಆದ್ಯತೆ ಕೊಡುತ್ತೇನೆ. ( ಅಂತರ್ಜಾಲದಲ್ಲಿ ಕೂಡ )
ನಿಮ್ಮ ಲೇಖನವ್ನ್ನು ಈಗಾಗಲೇ ೧೬೬ ಜನ ಓದಿದ್ದಾರೆ ; ಯಾವ ಪ್ರತಿಕೂಲ ಪ್ರತಿಕ್ರಿಯೆಯೂ ಬಂದಿಲ್ಲ; ಇನ್ನೇನು ಬೇಕು? ನಿಮ್ಮ ಬರಹ ಮುಂದುವರೆಸಿ.
ಶ್ರೀಕಾಂತ ಮಿಶ್ರಿಕೋಟಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಧನ್ಯವಾದಗಳು...
ನನಗೆ ಬರೆಯುವ ಅಸಕ್ತಿಯನ್ನು ಹೆಚ್ಚಿಸಿದ್ದಕ್ಕೆ!!