ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಅನ್ವೇಷಣೆ

February 25, 2008 - 10:17pm — sanjeevamurthy
Feb 26 2008 - 9:23am
Asia/Calcutta

ಅನ್ವೇಷಣೆ ಪುಸ್ತಕದಲ್ಲಿ ಏನಿದೆ?

ಪ್ರಕಾಶಕರು ಮತ್ತು ಲೇಖಕರು : ಶ್ರೀ ಸಿ.ಏ. ಸಂಜೀವ ಮೂರ್ತಿ

ಅನ್ವೇಷಣೆ ಎಂದರೆ ಹುಡುಕುವಿಕೆ. ಏನನ್ನು ? ತನ್ನನ್ನು !! ತನ್ನನ್ನು ತಾನು ಹುಡುಕುವದರಲ್ಲಿ ಏನರ್ಥ ? ಕಾಲ ವ್ಯರ್ಥ ಅಲ್ಲವೆ ?
ಖಂಡಿತಾ ಇಲ್ಲ. ನಾವು ಹಿಂದಿನ ಅನೇಕ ಜನ್ಮಗಳಲ್ಲಿ ತಪಸ್ಸು ಮಾಡಿ ಈ ಪ್ರಪಂಚಕ್ಕೆ ಬಂದಿರುವದೇ ನಿಜವಾದ ನಾನಾರೆಂದು ಅನ್ವೇಷಣೆ ಮಾಡಲು.
ಇಲ್ಲವಾದರೆ ಮಾನವ ಜನ್ಮವೇ ವ್ಯರ್ಥ ಎನ್ನುತ್ತದೆ ಉಪನಿಷತ್ತುಗಳು. ಆಯ್ತು, ತನ್ನನ್ನು ತಾನು ತಿಳಿಯುವದರಿಂದ ಏನು ಪ್ರಯೋಜನ ? ಮಾನಸಿಕವಾಗಿ ಸಂಪುರ್ಣ ನೆಮ್ಮದಿ ಖಂಡಿತಾ. ಎಚ್ಚರಿಕೆ, ಇದು ಪವಾಡವಿದ್ಯೆಯಲ್ಲ !! ಹಾಗಾದರೆ..... ? ಇದು ಬ್ರಹ್ಮವಿದ್ಯೆ ಅಥವಾ ಆತ್ಮವಿದ್ಯೆ ಎಂದು ಉಪನಿಷತ್ತುಗಳಲ್ಲಿ ಕೊಂಡಾಡಿದೆ. ಇದು ನಿಜವಾದ ವಿಜ್ಞಾನ, ಬದುಕಿರುವಾಗಲೇ ಸುಖ ಶಾಂತಿ ಕೊಡುವ, ಅವಿದ್ಯೆಯನ್ನು ಬಾಧ ಮಾಡುವ ವಿದ್ಯೆ.
ಉಪನಿಷತ್ತೆಂದರೆ ? ನಾಲ್ಕು ವೇದಗಳು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಪ್ರತೀ ವೇದಗಳಲ್ಲಿ ೪ ಭಾಗಗಳು. ಸಂಹಿತಾ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತು. ಉಪನಿಷತ್ತುಗಳು ಕೊನೆಯ ಭಾಗವಾದ್ದರಿಂದ ಇದಕ್ಕೇ ವೇದಾಂತವೆಂದು ಹೆಸರು.
ಅನ್ವೇಷಣೆ ಈ ಗ್ರಂಥಕ್ಕೆ ಅನ್ವರ್ಥವಾಗಿದೆ. ಸರಳಪದಗಳಿಂದ ಸುಂದರ ವಾಕ್ಯಗಳಿಂದ ಗಹನವಿಷಯಗಳನ್ನು ಸೂತ್ರ ರೂಪದಿಂದ ತಿಳಿಸುವುದೇ ಈ ಅನ್ವೇಷಣೆಯ ಗರಿಮೆ. ಒಂದು ಅಥವಾ ಎರಡೇ ಪುಟಗಳಲ್ಲಿ ಒಂದೊಂದೇ ವಿಷಯವನ್ನು ಸರಳವಾಗಿ ಇಲ್ಲಿ ತಿಳಿಸಲಾಗಿದೆ. ಬಾಲಕರಿಗೂ ಯುವಕರಿಗೂ ವೃದ್ಧರಾದಿಯಾಗಿ, ಪಂಡಿತ ಪಾಮರರಿಗೂ ಲೌಕಿಕರಿಗೂ ಅಧ್ಯಾತ್ಮಸಾಧಕರಿಗೂ ತಿಳಿದುಕೊಳ್ಳಲೇಬೇಕಾಗಿರುವ, ಹೆಚ್ಚು ಪ್ರಯೋಜನಕಾರಿಯಾದ , ಅತ್ಯಂತ ಅಮೂಲ್ಯವಿಷಯಗಳನ್ನು ಸಂಕ್ಷೇಪವಾಗಿ, ತಿಳಿಯಾಗಿ ಹೇಳಿರುವದೇ ಈ ಅನ್ವೇಷಣೆಯ ವಿಶೇಷ.
ಓದುಗರಿಗೆ ಆಯಾಸವಾಗದಂತೆ,ಮನಸ್ಸಿಗೆ ಭಾರವಾಗದಂತೆ ; ಅಲ್ಲಾ, ಓದುತ್ತಾ ಓದುತ್ತಾ ಹೋದರೆ ಕುತೂಹಲವನ್ನು ಕೆರಳಿಸುತ್ತಾ,ಮನಸ್ಸಿಗೆ ಹರ್ಷವನ್ನೂ ಆನಂದವನ್ನೂ ವರ್ಷಿಸುವ ಪುಟ್ಟ ಪುಟಾಣಿ ಲೇಖನಗಳ ಚುಟುಕು ಸಾಹಿತ್ಯ ಮಾಲೆ ಅನ್ವೇಷಣೆ.
ಒಂದೊಂದು ಲೇಖನವೂ ಅದ್ಭುತ,ಅಸಾಧಾರಣ, ಆಶ್ಚರ್ಯ, ರಸಪೂರ್ಣ ಹಾಗೂ ಓದುಗರಿಗೆ ಮೋದಪ್ರಮೋದಗಳನ್ನು ಉಂಟುಮಾಡುವದಲ್ಲದೆ ಅನೇಕ ಹೊಸ ಹೊಸ ವಿಚಾರಧಾರೆಯನ್ನು ಸುರಿಸುತ್ತದೆ. ಇದು ವೇದಾಂತರಸಿಕರಿಗೂ ಹಾಗೂ ಸಕಲ ಮಾನವರಿಗೂ ಹೆಚ್ಚಿನ ಪ್ರಯೋಜನವನ್ನುಂಟು ಮಾಡುವ ವೇದಾಂತದ ಕೈಪಿಡಿಯೆಂದರೆ ತಪ್ಪಾಗದು.
ಈ ಅದ್ಭುತ ಅಪರೂಪ ಶೈಲಿಯ ಕನ್ನಡ ಗ್ರಂಥವನ್ನು ಪ್ರಿಯ , ಆತ್ಮೀಯ ಕನ್ನಡಿಗ ಓದುಗರು ಬರಮಾಡಿಕೊಂಡು ಲೇಖಕರಿಗೆ ಆಶೀರ್ವದಿಸುವರೆಂದು ಆಶಿಸೋಣವೇ ?
ಪುಸ್ತಕ ದೊರಕುವ ಸ್ಥಳ : ನಂ. ೧೩೫, ಸರ್ವೆಯರ್ ರಸ್ತೆ, ಬಸವನಗುಡಿ, ಬೆಂಗಳೂರು- ೫೬೦೦೦೪, ತಂತಿ - ೯೮೮೬೦ ೫೧೨೨೨
Rs. 80-00
ತಮ್ಮವ,
ಕೆ.ಜಿ.ಸುಬ್ರಾಯ ಶರ್ಮಾ, ಎಂ. ಏ.
ರಾಷ್ಟ್ರರತ್ನ ಮತ್ತು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ
ಬೆಂಗಳೂರು- ೫೬೦೦೦೪ , ತಂತಿ.- ೯೮೮೬೨೮೧೬೨೨

~.~
  • 133 hits
  • Calendar
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಿ|| ರಾಶಿ (ಡಾ| ಎಂ ಶಿವರಾಂ) ಜನ್ಮ ಶತಾಬ್ದಿ ಸಮಾರೋಪ ಸಮಾರಂಭ
  • ಈಶ್ವರಚಂದ್ರರ ಸಾಹಿತ್ಯ ಸೇವೆ
  • " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
  • ಸಾಹಿತ್ಯಪ್ರಿಯರ ಅನಿವಾರ್ಯ ಸಂಗಾತಿ
  • ಕಂಬಾರರ ಹೊಸ ಕಾದಂಬರಿ "ಶಿಖರಸೂರ್ಯ" ಬಿಡುಗಡೆ ಸಮಾರಂಭ
Syndicate content

ಲೇಖಕರು

sanjeevamurthy's picture

ಪೂರ್ಣ ಹೆಸರು
sanjeeva murthy

ಪರಿಚಯ

Namaste, i am a civil engineer by proffession. i am a singer of vedaanta songs, writer, publiser. written a book ANVESHANE in kannada - an encyclopedia in vedaanta. my Guru is Veda brahma shree K.G.SUBRAYA SHARMAJI. very much eager to spread Shankaraas Philosophy which is universal & rational to all mankind.
thank u,
sanjeeva murthy

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
  • uniquesupri
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 24, 2008 - 5:23pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
ಇನ್ನಷ್ಟು


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator