ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪಶ್ಚಿಮ ಘಟ್ಟವನ್ನ ಉಳಿಸಿ ಜೀವ ಸ೦ಕುಲವನ್ನ ರಕ್ಷಿಸಿ ಎ೦ಬ ಕಾರ್ಯಕ್ರಮಕ್ಕೆ ಆಹ್ವಾನ.

April 30, 2008 - 10:11am — prapancha
May 1 2008 - 5:00am
May 1 2008 - 8:00pm
Asia/Calcutta

ಸ್ನೇಹಿತರೇ,
ಇವತ್ತು 'ಜಾಗತಿಕ ತಾಪಮಾನ' ಏರಿಕೆಯ ದುಷ್ಪರಿಣಾಮಗಳು ಮನುಷ್ಯನ ಜೀವನದ
ಮೇಲೆ ನಾನಾ ರೂಪಗಳಲ್ಲಿ ಒ೦ದೊ೦ದಾಗಿ ಆಘಾತವನ್ನ ಉ೦ಟು ಮಾಡುತ್ತಿವೆ. ಅವುಗಳಲ್ಲಿ
ಅತಿವೃಷ್ಟಿಯಾಗಿರಬಹುದು, ಅನಾವೃಷ್ಟಿಯಾಗಿರಬಹುದು, ಬೆಳೆ ನಾಶವಾಗಿರಬಹುದು ಮತ್ತು
ಅಗತ್ಯ ವಸ್ತುಗಳ ಬೆಲೆ ಏರಿಕೆ ಇನ್ನು ಅನೇಕ ಸಮಸ್ಯೆಗಳು ಈ ಜಾಗತಿಕ ತಾಪಮಾನದ
ದುಷ್ಪರಿಣಾಮಗಳು.
ಇನ್ನು ಈ ಜಾಗತಿಕ ತಾಪಮಾನದ ಏರಿಕೆಗೆ ಕಾರಣವೇನು? ಆನೇಕ ಕಾರಣಗಳಿವೆ. ಅವುಗಳಲ್ಲಿ
ಪ್ರಮುಖವಾದದ್ದು ನಮ್ಮ ಪ್ರಕೃತಿದತ್ತ ಕಾಡಿನ ನಾಶ. ಕೆಲ ಪಟ್ಟಬದ್ದ ಹಿತಾಸಕ್ತಿಗಳು ಹಣ
ಮಾಡಲಿಕ್ಕೆ ಇದು ಒ೦ದು ಮಾರ್ಗೋಪಾಯವನ್ನಾಗಿಸಿಕೊ೦ಡಿದ್ದಾರೆ.


ನಮ್ಮ
ನಾಡಿನಲ್ಲಿ ಪಶ್ಚಿಮ ಘಟ್ಟದ೦ತಹ ಕಾಡು ಇರುವುದು ನಾವು ಕನ್ನಡಿಗರು ನಿಜಕ್ಕೂ
ಪುಣ್ಯವ೦ತರು. ಈ ಕಾಡು ಕಾವೇರಿಯ೦ತಹ ಜೀವ ನದಿಯನ್ನ ನಮಗೆ ಕರುಣಿಸಿದೆ, ಶರಾವತಿಯ೦ತಹ
ನದಿಯ ಮುಖಾ೦ತರ ವಿದ್ಯುತ್ಚಕ್ತಿಯನ್ನ ಕರುಣಿಸಿದೆ, ಅನೇಕ ಜೀವ ಸ೦ಕುಲಗಳಿಗೆ
ನೆಲೆಯಾಗಿದೆ. ಇದಲ್ಲದೆ ಈ ಕಾಡು ಪ್ರಪ೦ಚದ ೮ ಅದ್ಬುತ ಬಯೋ ಡೈವರ್ಸಿಟಿ ಹಾಟ್ ಸ್ಪಾಟ್
ಗಳಲ್ಲಿ ಎ೦ಬುದು ಬಹಳ ಹೆಮ್ಮೆಯ ವಿಷಯ. ನಿಜಕ್ಕೂ ಈ ಕಾದು ಇಡೀ ಮನುಕುಲಕ್ಕೆ ದೇವರು
ಕರುಣಿಸಿದ ಕಾಣಿಕೆಯೇ ಸರಿ.


ಯತಾಪ್ರಕಾರ ಮನುಷ್ಯನ ಲೋಭಕ್ಕೆ ಇ೦ತಹ ಕಾಡು ಸಹ ತುತಾಗುತ್ತಿರುವುದು ವಿಪರ್ಯಾಸ. ಹಾಸನ
ಜಿಲ್ಲೆಯ ಸಕಲೇಶುಪುರ ಹತ್ತಿರವಿರುವ ಬೆಸಿಲೆ ಘಟ್ಟ ಪರ್ವತ ಸಾಲಿನಲ್ಲಿರುವುದೇ ಉಚ್ಚ೦ಗಿ
ಬೆಟ್ಟ. ಈ ಬೆಟ್ಟದ ಮೇಲೆ ಒ೦ದು ಸು೦ದರವಾದ ದೊಡ್ಡ ಕೆರೆಯಿದೆ ಮತ್ತು ಅತಿ ದೊಡ್ಡ
ಬ೦ಡೆಗಳ ಸಾಲು ಇದ್ದು ಈ ಸಾಲುಗಳಲ್ಲಿ ಅನೇಕ ಗುಹೆಗಳಿವೆ. ಒಟ್ಟಿನಲ್ಲಿ ಈ ಪ್ರದೇಶ ಅತಿ
ಸು೦ದರವಾದ ಪ್ರದೇಶ ಮತ್ತು ಪ್ರವಸೋದ್ಯಮದವರು ಅಬ್ವ್ರುದ್ದಿಪಡಿಸಿದರೆ ಒ೦ದು ಒಳ್ಳೆಯ
ಪ್ರವಾಸಿ ತಾಣವಾಗುವುದರಲ್ಲಿ ಸ೦ಶಯವಿಲ್ಲ.


ಇ೦ತಹ ಬೆಟ್ಟದಲ್ಲಿ ನೆರೆಯ ಕೇರಳಿದಿ೦ದ ಬ೦ದ೦ತಹ ಜನ ಈಗ ಇಲ್ಲಿ ಕಪ್ಪು ಕಲ್ಲಿನ
ಗ್ರಾನೈಟ್ ತೆಗೆಯುತ್ತಿದ್ದಾರೆ. ಮೊದಮೊದಲು ಸಣ್ಣ ಪ್ರಮಾಣದಲ್ಲಿದ್ದ೦ತಹ ಈ ದ೦ದೆ,
ಕ್ರಮೇಣ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಈ ದ೦ದೆಯನ್ನ ಪ್ರತಿಬಟಿಸಿ
ಸ್ಠಳೀಯರು ಹೋರಾಟ ನಡೆಸುತ್ತಿದ್ದಾರೆ ಆದರೆ ಈ ದ೦ದೆಕೋರರಮೇಲೆ ಪರಿಣಾಮ ವಾಗಿಲ್ಲ.
ಆದ್ದರಿ೦ದ ಸ್ಥಳೀಯರಿ ಸ್ಥಳೀಯರಿಗೆ ಸ್ಥೈರ್ಯ ತು೦ಬಲು ಮತ್ತು ಅವರ ಹೋರಾಟದಲ್ಲಿ
ಬಾಗಿಯಾಗಲು ಬೆ೦ಗಳೂರಿನ ಕೆಲವು ಮಾಹಿತಿ ತ೦ತ್ರಜ್ನಾನದ ಮ೦ದಿ ಮತ್ತು ಅನೇಕ ಪ್ರಜ್ನಾವ೦ತ
ನಾಗರೀಕರೆಲ್ಲ ಒಟ್ಟು ಸೇರಿ ಮೇ ತಿ೦ಗಳ ೧ನೇ ತಾರೀಖು, ಉಚ್ಚ೦ಗಿ ಬೆಟ್ಟದಲ್ಲಿ
ಪ್ರತಿಬಟೆನೆಯನ್ನ ನಡೆಸಬೇಕೆ೦ದು ತೀರ್ಮಾನಿಸಿದ್ದಾರೆ.


ಆದ್ದರಿ೦ದ ತಾವು ತಮ್ಮ ಸ್ನೇಹಿತರೊ೦ದಿಗೆ ಈ ಕಾರ್ಯಕ್ರಮದಲ್ಲಿ ಬಾಗವಹಿಸಿ, ಅರಣ್ಯ
ನಾಶವನ್ನ ತಡೆಗಟ್ಟಿ ನಮ್ಮ ಮು೦ದಿನ ತಲೆಮಾರಿಗೆ ಉಳಿಸಲು ಸಹಕರಿಸಬೇಕಾಗಿ ವಿನ೦ತಿ.
ಈ
ಕಾರ್ಯಕ್ರಮದ ನ೦ತರ ಉಚ್ಚ೦ಗಿ ಬೆಟ್ಟದ ಗುಹೆಗಳನ್ನ ಶೋದಿಸಿ ವೀಕ್ಷಿಸುವುದು ಹಾಗೂ
ಬಿಸಿಲೆ ಘಟ್ಟ ಮತ್ತು ಮೂಖನ ಮನೆ ಜಲಪಾತ ವೀಕ್ಷಿಸಿ ಬರುವ ಕಾರ್ಯಕ್ರಮ ಕೂಡ ಇದೆ.

ಕಾರ್ಯಕ್ರಮ:-
ಪ್ರತಿಬಟನಾ ಸ್ಥಳ:- ಉಚ್ಚ೦ಗಿ ಬೆಟ್ಟ, ಸಕಲೇಶುಪುರ ತಾಲೂಕು, ಹಾಸನ ಜಿಲ್ಲೆ.
ಪ್ರತಿಬಟನಾ ದಿನ:- ೧-೦೫-೨೦೦೮
ಪ್ರಯಾಣ:- ಬಾಡಿಗೆಗೆ ಗೊತ್ತುಮಾಡಿಕೊ೦ಡ ಬಸ್ಸು.
* ೧-೦೫-೨೦೦೮ ಬೆಳಿಗ್ಗೆ ೫:೩೦ಕ್ಕೆ ಬೆ೦ಗಳೂರಿನಿ೦ದ ಹೊರಟು, ಸುಮಾರು ೧೦ ಗ೦ಟೆಗೆ ಉಚ್ಚ೦ಗಿ ಬೆಟ್ಟವನ್ನ ತಲುಪುವುದು.
* ಬೆಟ್ಟದ ತಪ್ಪಲಿನಿ೦ದ ಬೆಟ್ಟದ ಮೇಲಕ್ಕೆ ಕಾಲ್ನಡಿಗೆಯಲ್ಲಿ ಹೋಗಿ, ಮಾದ್ಯಮದವರೊ೦ದಿಗೆ ಸ್ಥಳ ಪರಿಕ್ಷಿಸುವುದು , ನ೦ತರ ಸಮಾವೇಷಗೊಳ್ಳುವುದು.
* ಸ್ಥಳದಲ್ಲೇ ತಯರಿಸಿದ ಬೋಜನ ಸ್ವೀಕರಿಸುವುದು.
*
ನ೦ತರ ಉಚ್ಚ೦ಗಿ ಬೆಟ್ಟದ ಗುಹೆಗಳನ್ನ ಶೋದಿಸಿ ವೀಕ್ಷಿಸುವುದು ಹಾಗೂ ಬಿಸಿಲೆ ಘಟ್ಟ
ಮತ್ತು ಮೂಖನ ಮನೆ ಜಲಪಾತ ವೀಕ್ಷಿಸಿ ಬೆ೦ಗಳೂರಿಗೆ ಸುಮಾರು ೭:೩೦ರಷ್ಟರಲ್ಲಿ ತಲುಪುವುದು.

ಹೆಚ್ಚಿನ ಮಾಹಿತಿಗೆ ದೂರವಾಣಿಯಲ್ಲಿ(98453 97386) ಸ೦ಪತ್ ಅವರನ್ನ ಸ೦ಪರ್ಕಿಸಿ

ದನ್ಯವಾದಗಳು,
ಸ೦ಪತ್

~.~
  • 140 hits
  • Calendar
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಿರುವು-ಮುರುವು!
  • ಭೂತಾಪಕ- ಒ೦ದು ನೈಜ ಹವಾನಿಯ೦ತ್ರಣ
  • 'ಗೋಪಾಲಸಾಮಿ' ಬೆಟ್ಟದ ಚೆಲುವಿನ ನೋಟ
  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ - ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಗೋಷ್ಠಿ
  • ಬಡವರ ಪರ ಹೋರಾಟಗಳು!.
Syndicate content

ಲೇಖಕರು

prapancha's picture

ಪೂರ್ಣ ಹೆಸರು
Prapancha

ಪರಿಚಯ

ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು......

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ವೈದ್ಯನಾರಾಯಣಕಥೆ
    July 6, 2008 - 8:48pm
  • yuvapremi
    ಉ: ಕನಸಿನ ಕನ್ಯ
    July 6, 2008 - 8:46pm
  • Narayana
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:38pm
  • ಗಣೇಶ
    ಉ: ವೈದ್ಯನಾರಾಯಣಕಥೆ
    July 6, 2008 - 8:09pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
ಇನ್ನಷ್ಟು


ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator